Skip to main content

Blog number 1639. ಕನ್ನಡಿಗ ಐಪಿಎಸ್ ಶಂಕರ ಬಿದರಿ ಅವರ ಆತ್ಮ ಚರಿತ್ರೆ ಸತ್ಯಮೇವ ಜಯತೇ'

#ಸತ್ಯ_ಮೇವ_ಜಯತೇ

#ಶಂಕರ_ಮಹಾದೇವ_ಬಿದಿರೆಯವರ_ಆತ್ಮ_ಚರಿತ್ರೆ.

#ಭಾರತದೇಶದ_ಇತಿಹಾಸದಲ್ಲಿ_ಅತಿ_ಹೆಚ್ಚು_ಮೊತ್ತದ_ನಗದು_ಬಹುಮಾನ_ಪಡೆದ_ಪೋಲಿಸ್_ಅಧಿಕಾರಿ

#ಕಾಡುಗಳ್ಳ_ವೀರಪ್ಪನ್_ಸಂಗಾತಿಗಳನ್ನು_200ರಿಂದ_5ಕ್ಕೆ_ಇಳಿಸಿದ_ಸಾಹಸಿ.

#ಬೆಂಗಳೂರಿನ_ಕೋಣನಕುಂಟೆಯ_ಮನೆಯಲ್ಲಿ_ಅಡಗಿದ್ದ_ರಾಜೀವ್_ಗಾಂಧಿ_ಹಂತಕ_ಶಿವರಾಸನ್_ಮನೆಗೆ_ಮೊದಲು_ಪ್ರವೇಶಿದ_ದೈರ್ಯವಂತ.

   ವೀರಪ್ಪನ್ ಅಂದರೆ ನನಗೆ ಕಿವಿ ನೆಟ್ಟಗಾಗುತ್ತಿತ್ತು ವೀರಪ್ಪನ್ ಮೊದಲ ಸಂದರ್ಶನ ಇಂಗ್ಲೀಷ್ ಪತ್ರಿಕೆಯಲ್ಲಿ ಸಚಿತ್ರ ವರದಿ ನೋಡಿದ ನಂತರ ಅದು ಜಾಸ್ತಿ ಆಯಿತು,ಚೆನೈನಲ್ಲಿ ನಕ್ಕೀರನ್ ಪತ್ರಿಕೆ ತಪ್ಪದೇ ಖರೀದಿಸಿ ತಮಿಳು ಗೆಳೆಯರಿಂದ ಅನುವಾದಿಸಿ ತಿಳಿದು ಕೊಳ್ಳುತ್ತಿದ್ದೆ.
  ನಂತರ ನಮ್ಮ ವನ್ಯ ಚಿತ್ರ ಗ್ರಾಹಕರಾದ ಕೃಪಕರ- ಸೇನಾನಿ ಅಪಹರಣ, ರಾಜ್ ಅಪಹರಣ, ಮಾಜಿ ಶಾಸಕ ನಾಗಪ್ಪ ಅಪಹರಣ ಹೀಗೆ ವೀರಪ್ಪನ್ ನಿತ್ಯ ಕಥೆಗಳಾಗಿದ್ದು ಇತಿಹಾಸ ಅವೆಲ್ಲವೂ ವೀರಪ್ಪನ್ ಬಗ್ಗೆ ಆಸಕ್ತಿಗೆ ಕಾರಣವಾಯಿತು.
  ಆನೆ ದಂತ - ಶ್ರೀಗಂದ ಜೊತೆಗೆ ಮಾಹಿತಿದಾರರ ಹತ್ಯೆಯ ರಕ್ತಚರಿತೆ ಬಗ್ಗೆ ಅನೇಕರು ಬರೆದದ್ದು ಪುಸ್ತಕವಾಗಿದೆ ಅದೆಲ್ಲದರ ಅನುವಾದ ಓದಿದ್ದೇನೆ,
  ಕೆ.ವಿಜಯಕುಮಾರ್ ಬರೆದ Chasing the Brigand ಪುಸ್ತಕದಲ್ಲಿ ವಿಜಯ ಕುಮಾರ್ ಶಂಕರ್ ಬಿದರಿ 200 ಜನರ ವೀರಪ್ಪನ್ ಸೇನೆ 5ಕ್ಕೆ ಮಿತಿಗೊಳಿಸಿದವರು ಶಂಕರ್ ಬಿದರಿ ಅಂತ ಬರೆದಿದ್ದಾರೆ.
  ಆದ್ದರಿಂದಲೇ ಶಂಕರ್ ಬಿದರಿ ಆತ್ಮಚರಿತ್ರೆ ಅಮೇಜಾನ್ ನಿಂದ ತರಿಸಿದೆ ಸುಮಾರು 600 ಪುಟಗಳ ಅವರ ಆತ್ಮಚರಿತ್ರೆ ಅವರ ಬಾಲ್ಯದಿಂದ ಪ್ರಾರಂಭವಾಗಿ ಟೆಲಿಫೋನ್ ಆಪರೇಟರ್, ಅಸಿಸ್ಟೆಂಟ್ ಕಮಿಷನರ್ ನಂತರ ಐಪಿಎಸ್ ತನಕ ಅವರ ಸಾಹಸಮಯ ಜೀವನ ದಾಖಲಿಸಿದ್ದಾರೆ.
  ಈ ಪುಸ್ತಕದಲ್ಲಿ ಎರಡು ಅಧ್ಯಾಯಗಳಲ್ಲಿ ವೀರಪ್ಪನ್ ಚರಿತ್ರೆ ದಾಖಲಿಸಿದ್ದಾರೆ ಅಧ್ಯಾಯ 28 ಪುಟ ಸಂಖ್ಯೆ 376 ರಿಂದ 441 ರಲ್ಲಿ 1972 ರಲ್ಲಿ ಜಾರಿಗೆ ಬಂದ ಅರಣ್ಯ ಕಾನೂನುಗಳು ವೀರಪ್ಪನ್ ಅಂತವರು ಸೃಷ್ಟಿಗೆ ಕಾರಣವಾದ ಘಟನೆಗಳು ನಂತರ ವೀರಪ್ಪನ್ ಈ ಮಟ್ಟಕ್ಕೆ ಬೆಳೆದದ್ದನ್ನು ಬುದ್ದಿವಂತ ಪೋಲಿಸ್ ಅಧಿಕಾರಿಗೆ ಸರ್ಕಾರದಲ್ಲಿ ದಾಖಲಾಗಿರುವ ದಾಖಲೆ ಮತ್ತು ಅವರದ್ದೇ ದೃಷ್ಟಿಕೋನದಲ್ಲಿ ವಾಸ್ತವ ವಿಚಾರ ದಾಖಲಾಗಿದೆ.
   ಅದ್ಯಾಯ 40 ಪುಟ ಸಂಖ್ಯೆ 600 ರಿಂದ 610ರಲ್ಲೂ ಕೆಲ ವಿಚಾರ ದಾಖಲಾಗಿದೆ ಅಂತಿಮವಾಗಿ ವೀರಪ್ಪನ್ ಮುಗಿಸಿದ ವಿಜಯ ಕುಮಾರ್ ಪೋನ್ ಕಾಲ್ ನಿಂದ ತಮಿಳುನಾಡಿಗೆ ಹೋಗಿ ವೀರಪುನ್ ಮೃತ ದೇಹ ನೋಡಿ ಬರುವುದರ ಜೊತೆಗೆ ಈ ಆತ್ಮಚರಿತ್ರೆ ಮುಕ್ತಾಯವಾಗುತ್ತದೆ.
   ವಿಶೇಷ ಅಂದರೆ ಈ ಆತ್ಮಚರಿತ್ರೆಯನ್ನು ಹೆಡ್ ಕಾನ್ಸ್ಟೇಬಲ್ ಮಾಲ್ವಿ ಹನುಮಂತಪ್ಪ (ಕುಖ್ಯಾತ ಅಪರಾಧಿ ಬೀಮ್ಲಾ ನಾಯಕ್ ಮುಖಾಮುಖಿಯಲ್ಲಿ ಹುತಾತ್ಮರಾದವರು) ಮತ್ತು ಎಂ.ಕೆ.ಪೊನ್ನಪ್ಪ (ಚೆಂಗಡಿ ಅರಣ್ಯದಲ್ಲಿ ವೀರಪ್ಪನ್ ನಿಂದ ಹುತಾತ್ಮರಾದವರು) ಇವರಿಗೆ ಅರ್ಪಿಸಿದ್ದಾರೆ.
  ಈ 600 ಪುಟಗಳ ಪುಸ್ತಕದ ಬೆಲೆ 850 ರೂಪಾಯಿ ಅಮೇಜಾನ್ ನಲ್ಲಿ ಸಿಗುತ್ತದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ