Skip to main content

Blog number 1678. ಸಿದ್ದ ಸಮಾದಿ ಯೋಗ ಸಂಸ್ಥೆ 2008ರಲ್ಲಿ ನೀಡಿದ ತರಬೇತಿ, ಶ್ರಾವಣ ಮಾಸದ ಆಚರಣೆ ಮತ್ತು ಧ್ಯಾನದ ಉಪಯೋಗ

#ಶ್ರಾವಣ_ಮಾಸ_ಬಂದಾಗ.

#ಈ_ವರ್ಷ_ಅಧಿಕ_ಶ್ರಾವಣದ_ಬೋನಸ್‌

#ತೂಕ_ಇಳಿಸುವವರಿಗೆ_ದೇಹ_ಡಿಟಾಕ್ಸ್_ಮಾಡುವವರಿಗೆ_ವರದಾನ.

#ದ್ಯಾನ_ಸರಿಯಾಗಿ_ಗುರು_ಮೂಲಕ_ಕಲಿತು_ಅನುಭವಿಸಿದರೆ_ಮಾತ್ರ_ಅದರ_ಅನುಭವ_ಸಾಧ್ಯ.


  ಪ್ರತಿ ವರ್ಷ ಶ್ರಾವಣ ಮಾಸ ಬಂದಾಗ ನಾನು ನನ್ನ ದೇಹ ಡಿಟಾಕ್ಸ್ ಮಾಡುವ ಕ್ರಮ ಪ್ರಾರಂಬಿಸುತ್ತೇನೆ ಅದಕ್ಕಾಗಿ ಶ್ರಾವಣ ಮಾಸ ಕಾಫಿ ಟೀ ಕೂಡ ಸೇವಿಸುವುದಿಲ್ಲ.
  ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಾಂಸಹಾರಿ ಕುಟುಂಬಗಳು ಮಾಂಸಹಾರ ತ್ಯಜಿಸುವುದು ಆ ಕುಟುಂಬದವರಿಗೆ ಇಂತಹ ಪ್ರಯೋಗ ಮಾಡಲು ಸಹಕಾರಿ.
  ಮಧ್ಯಪಾನ - ದೂಮಪಾನ - ತಂಬಾಕು - ಮಾಂಸಹಾರ ಸೇವನೆ ಶ್ರಾವಣ ಪ್ರಾರಂಭದ ಹಿಂದಿನ ದಿನದ ಭೀಮನ ಅಮಾವಾಸ್ಯೆ ದಿನಕ್ಕೆ ಕೊನೆಯಾಗುತ್ತದೆ ಇದನ್ನು ಮಹಾರಾಷ್ಟ್ರದಲ್ಲಿ ಗಟಾರ ಅಮವಾಸ್ಯೆ ಎಂದು ಹಾಸ್ಯದಿಂದ ಉಲ್ಲೇಖಿಸುತ್ತಾರೆ.
  ಇಡೀ ಶ್ರಾವಣ ಮಾಸ ಮಧ್ಯಪಾನ,ದೂಮಪಾನ ಮತ್ತು ಗುಟ್ಕಾ ಇತ್ಯಾದಿ ರೀತಿಯ ಚಟ ಅಥವ ಅಡಿಕ್ಷನ್ ಸ್ವಯಂ ನಿಯಂತ್ರಣಕ್ಕೆ ಕಾರಣವಾಗಲಿದೆ.
  ಮಹಾರಾಷ್ಟ್ರದಲ್ಲಿ ಶ್ರಾವಣ ಮುಗಿದು ಗಣಪತಿ ಹಬ್ಬದ ತನಕ ಈ ನಿಯಮ ಮುಂದುವರಿಸುತ್ತಾರೆ.
  ನನ್ನ 140 ಕಿಲೋ ದೇಹ ತೂಕ ಇಳಿಸುವ ನಿಟ್ಟಿನಲ್ಲಿ ದಿನದ ಒಂದು ಗಂಟೆ ಬೆಳಗಿನ ನಡಿಗೆ ಜೊತೆ ಸಿದ್ದ ಸಮಾದಿಯೋಗದ   ವ್ಯಾಯಾಮ, ಪ್ರಾಣಯಾಮ, ಕಪಾಲ ಬಾತಿ ಮತ್ತು ಧ್ಯಾನ, ರಾತ್ರಿ ಊಟ ತ್ಯಜಿಸಿದರ ಜೊತೆ ಶ್ರಾವಣ ಮಾಸಾಚಾರಣೆ ನನಗೆ ತುಂಬಾ ಉಪಯುಕ್ತವಾಗಿದೆ.
   ಈ ವರ್ಷದ ಶ್ರಾವಣ ಅಧಿಕ ಮಾಸದ ಶ್ರಾವಣ ಆದ್ದರಿಂದ ಎರಡು ತಿಂಗಳ ಶ್ರಾವಣ ಆಚರಿಸುತ್ತೇನೆ, ಈ ವರ್ಷದ ಶ್ರಾವಣ ಆಚರಣೆಗೆ ಮುನ್ನ ನನ್ನ ತೂಕ 108 ಇದೆ, ಸೊಂಟ ಮತ್ತು ಹೊಟ್ಟೆಯ ಸುತ್ತಳತೆ ತುಂಬಾ ಇಳಿದಿದೆ ಇದು ಸಮಾದಾನಕರ.
   ಹಾಗಂತ ನನ್ನ ತೂಕ ಇನ್ನೂ 30 ಕಿಲೋ ಇಳಿಯ ಬೇಕು ಆದರೆ ಅವಸರ ಇಲ್ಲ ನಿದಾನವಾಗಿ ಜೀವನ ಕ್ರಮದಲ್ಲಿ ಇಳಿಯ ಬೇಕು, ದಿಡೀರ್ ತೂಕ ಇಳಿಸುವುದು ಅನಾರೋಗ್ಯಕ್ಕೆ ಆಹ್ವಾನ ಎಂಬ ಎಚ್ಚರಿಕೆ ವಹಿಸಲೇ ಬೇಕಾಗಿದೆ.
  2008ರಲ್ಲಿ ಸಿದ್ದ ಸಮಾದಿ ಯೋಗ ಕಲಿಯಲು ಗೆಳೆಯ ರೈತ ಹೋರಾಟ ಪತ್ರಿಕೆ ಸಂಪಾದಕರಾದ ವಸಂತ ಕುಮಾರ್ ಕಾರಣರಾದರೆ, ಸಿದ್ಧ ಸಮಾದಿ ಯೋಗ ಗುರುಗಳಾದ ಕುಮಾರ್ ಗುರೂಜಿ ಮತ್ತು ಗಣೇಶ್ ಗುರೂಜಿ ತರಬೇತಿ 15 ವರ್ಷದಿಂದ ನಿರಂತರ ಯೋಗ, ಕಪಾಲ್ ಬಾತಿ, ಪ್ರಾಣಯಾಮ ಮತ್ತು ಧ್ಯಾನಕ್ಕೆ ಕಾರಣರಾಗಿದ್ದಾರೆ.
  ನನಗೆ ಯೋಗಾಸನ 3 - 4 ನೇ ತರಗತಿಯಿಂದಲೇ ಕಲಿತಿದ್ದರೂ ಧ್ಯಾನ ಮಾತ್ರ ಸರಿಯಾಗಿ ಕಲಿತಿರಲಿಲ್ಲ. ಸಿದ್ದ ಸಮಾದಿ ಯೋಗ ತರಬೇತಿಯಲ್ಲಿ ಮಾತಾಜಿ ಓರ್ವರು ತುಂಬಾ ಸುಲಭವಾಗಿ 15 ನಿಮಿಷದ ದ್ಯಾನ ಕಲಿಸಿದ್ದಾರೆ ಅದಕ್ಕೆ ಮಂತ್ರಾಕ್ಷರ ಕೂಡ ದಯಪಾಲಿಸಿದ್ದಾರೆ.
   ಸರಳ ಸಿದ್ಧಾಸನದಲ್ಲಿ ಕುಳಿತು ದೀರ್ಘ ಉಸಿರಾಟ ಮಾಡಿ ಮಂತ್ರಾಕ್ಷರ ಮನಸ್ಸಿನಲ್ಲೇ ಉಚ್ಚಾರಿಸಿ ದ್ಯಾನ ಪ್ರಾರಂಬಿಸಿದರೆ ಕೈ ಬೆರಳು, ಹಸ್ತ, ಅಂಗಾಲು ನಂತರ ಇಡೀ ದೇಹ ಸ್ಪರ್ಷ ಜ್ಞಾನ ಕ್ರಮೇಣ ಕಳೆದುಕೊಂಡು ಬೇರೆಯ ಲೋಕಕ್ಕೆ ಮನಸ್ಸು ತಲುಪಿ ಸರಿಯಾಗಿ 15 ನಿಮಿಷಕ್ಕೆ ಎಚ್ಚರವಾಗಿ ವಾಪಾಸು ಬರುವ ಈ ಧ್ಯಾನದಿಂದ ಏನೇನಲ್ಲ ಉಪಯೋಗ ಅನುಭವಿಸಿಯೇ ತಿಳಿಯಬೇಕು.
   ಈ ಎರೆಡು ತಿಂಗಳು ಸ್ಥೂಲಕಾಯ ನಿವಾರಣೆಗೆ ಪ್ರಯತ್ನಿಸುವವರಿಗೆ ಮತ್ತು ದುಶ್ಚಟ ಸ್ವಯ೦ ನಿಯಂತ್ರಣಕ್ಕೆ ತರುವವರಿಗೆ ಅಧಿಕ ಶ್ರಾವಣ ಒಂದು ಬೋನಸ್ ಅವಧಿ ಆಗಿದೆ.
  ಬೆಳಿಗ್ಗೆ ಮುಂಗಾರು ಮಳೆಯಲ್ಲೇ ಛತ್ರಿಯಲ್ಲಿ ಒಂದು ಗಂಟೆ ವಾಕಿಂಗ್ ನಲ್ಲಿ ನಮ್ಮ ಶಂಭೂರಾಮ ಜೊತೆ ಆಗುತ್ತಾನೆ ಅವನಿಗೆ ಮಳೆ ಅಂದರೆ ತುಂಬಾ ಇಷ್ಟ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...