Skip to main content

Blog number 1648. ಇವತ್ತು ಸಖರಾಯಪಟ್ಟಣದ ಶ್ರೀ ವೆಂಕಟಾಚಲಪತಿ ಅವದೂತರ ಪುಣ್ಯಾರಾಧನೆಯಲ್ಲಿ ಅವರ ದಿವ್ಯ ದರ್ಶನ.


#ಇವತ್ತು_ಸಖರಾಯಪಟ್ಟಣದ_ವೆಂಕಟಾಚಲಪತಿ_ಅವದೂತರ_ಪುಣ್ಯಸ್ಮರಣೆ

#ಸಖರಾಯಪಟ್ಟಣದ_ಅವರ_ಸಮಾದಿ_ದರ್ಶನ_ಸಾಧ್ಯವಾಗಿಲ್ಲ 

#ಆದರೆ_ಅವರ_ದಿವ್ಯ_ದರ್ಶನ_ಆಗುತ್ತಿರುವ_ಈ_ಪರಿಮರೆಯಲುಂಟೆ?

#ಇವತ್ತು_ಜ್ಯೋತಿ_ಮಣ್ಣೂರು_ಅವರ_ಪೋಸ್ಟಿನಿಂದ_ಈ_ನೆನಪು_ಇನ್ನೊಮ್ಮೆ

#ಇದನ್ನ_ಕಾಕತಾಳಿಯ_ಅಥವ_ಟೆಲಿಪತಿ_ಅನ್ನಬಹುದಾ?

#ಜಿಗಳೆಮನೆ_ಗಣಪತಿ_ಭಟ್ಟ_ದಂಪತಿಗಳು_17_ಮಾರ್ಚ್_2019_ರಂದು_ಬಂದಾಗ_ಅವದೂತರ_ಪುಸ್ತಕ_ನೀಡಿದಾಗ

#ಗಣಪತಿಭಟ್ಟರ_ಮನೆಗೆ_ಒಂದು_ದೀಪಾವಳಿ_ಹಬ್ಬದ_ದಿನ_ದಿಡೀರ್_ಆಗಿ_ಅವದೂತರು_ಬಂದ_ನೆನಪು

#ಇವತ್ತು_ಸಖರಾಯಪಟ್ಟಣದ_ಗುರುಕುಲದಿಂದ_ಡಾಕ್ಟರ್_ಸಂತೋಷ್_ಹೆಬ್ಬಾರ್_ಪೋನಾಯಿಸಿದಾಗ_ನೆನಪು_ಮಾಡಿದ_ಘಟನೆ.

  ಇವತ್ತು ಬೆಳಿಗ್ಗೆ ಸಖರಾಯಪಟ್ಟಣದ ಗುರುಕುಲದ ಡಾಕ್ಟರ್ ಸಂತೋಷ್ ಹೆಬ್ಬಾರರು ಗುರುಕುಲದಲ್ಲಿ ವೆಂಕಟಾಚಲಪತಿ ಅವದೂತರ ಹೆಸರಲ್ಲಿ ಗೋಶಾಲೆ ನಿರ್ಮಿಸಲು ಆನಂದಪುರಂನಲ್ಲಿ ಉತ್ತಮ ಗುಣಮಟ್ಟದ ಜಂಬಿಟ್ಟಿಗೆ ಕಲ್ಲು ಸಿಗಬಹುದಾ ಎಂದು ವಿಚಾರಿಸಲು ಪೋನ್ ಮಾಡಿದ್ದರು ಅವರಿಗೆ ನನ್ನ ಸಂಪರ್ಕದ ನಂಬರ್ ನೀಡಿದವರು ಶಿವಮೊಗ್ಗದ ADC ನಾಗೇಂದ್ರ ಹೊನ್ನಾಳಿಯವರು ಇವರೂ ದತ್ತರ ಭಕ್ತರು.
 ಬಹಳ ವರ್ಷದಿಂದ ಸಖರಾಯಪಟ್ಟಣದ ಅವದೂತರ ಸಮಾದಿ ಸಂದರ್ಶಿಸಲು ಸಾಧ್ಯವಾಗಿಲ್ಲ ಆದರೆ ಅವದೂತರು ಈ ರೀತಿ ದರ್ಶನ ನೀಡುತ್ತಿದ್ದಾರೆ, ನಮ್ಮ ಊರಿನ ಜಂಬಿಟ್ಟಿಗೆ ಕಲ್ಲು ಸರಬರಾಜುದಾರರಿಗೆ ವಿನಂತಿ ಮಾಡಿದರೆ ನಾಲ್ಕು ಸಾವಿರ ಕಲ್ಲು ಒಟ್ಟು ಮಾಡಿಕೊಡುವುದು ಕಷ್ಟವಿಲ್ಲ ಆದರೆ ಅವದೂತರಿಗೆ ಸೇವೆಗೆ ಅವರಿಗೆ ಮನಸ್ಸು ಬರಬೇಕಷ್ಟೆ.
  ಅವದೂತರ ಹೆಸರಲ್ಲಿ ಗೋಶಾಲೆ ನಿರ್ಮಿಸಲು ಅಲ್ಲಿಯ ಗುರುಕುಲದಲ್ಲಿ ವ್ಯಾಸಂಗ ಮಾಡಿ ಉದ್ಯೋಗದಲ್ಲಿರುವ ವಿದ್ಯಾರ್ಥಿ ಎರೆಡು ಕೋಟಿ ಮೌಲ್ಯದ ಜಮೀನು ದಾನ ನೀಡಿದ್ದಾರೆ ವಿಶೇಷ ಅಂದರೆ ವಿದ್ಯಾರ್ಥಿ ಮುಸ್ಲಿಂ ದಮಿ೯ಯ ಅಂತೆ.
   ಈ ಸಂದರ್ಭದಲ್ಲಿ ನಮ್ಮ ಮನೆಯಲಿದ್ದ ನನ್ನ ಪತ್ನಿಯ ಅಕ್ಕನ ಕುಟುಂಬ ಅವರು ಎರೆಡು ಬಾರಿ ಅವದೂತರ ಮನೇನಲ್ಲಿ ಅವದೂತರ ದರ್ಶನ ಮಾಡಿದ್ದನ್ನು ನೆನಪಿಸಿಕೊಂಡರು.
    ಇದೇ ಸಂದರ್ಭದಲ್ಲಿ 2019 ರಲ್ಲಿ ನಮ್ಮ ಮನೆಗೆ ಬಂದಿದ್ದ ಶ್ರೀಧರ ಸ್ವಾಮಿಗಳ ಕಟ್ಟಾ ಭಕ್ತರು, ತಪಸ್ವಿಗಳಾದ ಸಜ್ಜನ ಜಿಗಳೇ ಮನೆ ಗಣಪತಿ ಭಟ್ಟರು ಬಂದಾಗ ನಡೆದ ಘಟನೆ ಗುರುಕುಲದ ಡಾಕ್ಟರ್ ಸಂತೋಷ್ ಹೆಬ್ಬಾರರಿಗೆ ಹೇಳಿದೆ
 ಅದೇನೆಂದರೆ.....
 ಅವತ್ತು (17- ಮಾರ್ಚ- 2019) ಜಿಗಳೆಮನೆ ಗಣಪತಿ ಭಟ್ಟ ದ೦ಪತಿಗಳು ಬಂದಿದ್ದರು, ಇವರಿಗೆ 69 ವಷ೯ ಇವರ ಪೇಸ್ ಬುಕ್ ನಲ್ಲಿ ಇವರ #ಸತ್ಯ_ಶೋದ_ಮಿತ್ರ_ಮಂಡಳಿ ಎಂದರೆ ಹವ್ಯಕರಲ್ಲಿ  ಭಾರೀ ಪರ ಮತ್ತು ವಿರೋದಗಳು ಕಾರಣ ಈಗಿನ ಹಾಲಿ ರಾಮಚಂದ್ರಾಪುರ ಮಠದ ಸ್ವಾಮಿಗಳ ವಿರೋದಿಸುವವರಲ್ಲಿ ಇವರು ಮೊದಲಿಗರು.
  ಇವರನ್ನ ಮತ್ತು ವ್ಯಂಗ್ಯ ಚಿತ್ರಕಾರ ಕುಗ್ವೆ ನಿರ೦ಜನರನ್ನು ಮಠದ ಕಡೆಯವರು ಸುಳ್ಳು ಕೇಸಿನಿಂದ ಜೈಲಿಗೆ ಕಳಿಸಿದ್ದರಿಂದ ಯಾವಾಗಲೂ ಶೋಷಣೆಗೆ ಒಳಗಾದವರ ಪರವಹಿಸುವ ನಾನು ಇವರನ್ನ ಬೆಂಬಲಿಸಿದೆ.
   ಇವರು ಸಜ್ಜನ ಗಡದಲ್ಲಿ, ದೀವಿಗೆಯಲ್ಲಿ ಕೆಲವು ವಷ೯ ಅನೂಷ್ಟಾನ ಸಾದನೆ ಮಾಡಿದವರು, ಸಾದು ಸಂತರ, ಸತ್ಸ೦ಗದಲ್ಲಿದ್ದವರು, ವರದಳ್ಳಿ ಶ್ರೀಧರ ಸ್ವಾಮಿಗಳ ಭಕ್ತರು.
     ಹಾಗಾಗಿ ಕಾಫಿ ಜೊತೆಗೆ ಹಣ್ಣಿನ ಸತ್ಕಾರದ ನಂತರ ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವದೂತರ ಚರಿತ್ರೆಯ ಪುಸ್ತಕ ಜಿಗಳೆ ಮನೆ ಗಣಪತಿ ಭಟ್ಟ ದಂಪತಿಗಳು ನನ್ನ ಮನೆಗೆ ಬೇಟಿ ನೀಡಿದ ನೆನಪಿಗಾಗಿ ನೀಡಿದೆ.
  ಆಗ ಗಣಪತಿ ಭಟ್ಟರು ಹೇಳಿದ ನೆನಪು "ಒಮ್ಮೆ ದೀಪಾವಳಿಯoದು ಇದ್ದಕ್ಕಿದ್ದ೦ತೆ ಸಖರಾಯ ಪಟ್ಟಣದ ಅವದೂತರು ವರದಳ್ಳಿಗೆ ಬಂದವರು, ಇವರ ಮನೆಯ ಮುಂಬಾಗಿಲಿಂದ ಪ್ರವೇಶಿಸಿ ಹಿಂಬಾಗಿಲಿಂದ ಹೊರ ಹೋದರಂತೆ, ನಂತರ ಇವರೆಲ್ಲ ಒಳಗೆ ಬರಲು ವಿನಂತಿಸಿದಾಗ ವಾಪಾಸು ಬರುವುದಿಲ್ಲ ಎಂದು ಹಿತ್ತಲಲ್ಲೇ ಕುಳಿತರಂತೆ.
    ಇವರ ಪತ್ನಿ ಹಬ್ಬದ ಹೋಳಿಗೆ ಮಾಡುತ್ತಿದ್ದರಂತೆ, ಆ ಘಟನೆ  ಭಟ್ಟರು ತಮ್ಮ ಆಗಿನ ಕಾಲದ ಕೈಯಲ್ಲೇ ರೀಲ್ ಸುತ್ತುವ ವಿಡಿಯೋ ಕ್ಯಾಮೆರಾದಲ್ಲಿ ಚಿತ್ರಿಕರಿಸಿದ್ದನ್ನು ನೆನಪು ಮಾಡಿದರು.
ಇದನ್ನ ಕಾಕತಾಳಿಯ, ಟೆಲಿಪತಿ ಅಂತಲೂ ಹೇಳಬಹುದು, ಅವದೂತರ ಚರಿತ್ರೆ ಅವದೂತರು ಪ್ರವೇಶ ಮಾಡಿದ ಮನೆಯ ದಂಪತಿಗೆ ಕೊಡುವಂತಾಗಿದ್ದು.
  ಇವತ್ತೂ ಅವದೂತರು ಈ ಎಲ್ಲಾ ನೆನಪಿನ ಪುನರ್ ಮನನದ ಘಟನೆಗಳಿಂದ ದರ್ಶನ ನೀಡಿದ್ದಾರೆ ಎಂದು ಭಾವಿಸಿದ್ದೇನೆ, ಅವದೂತರ ಹೆಸರಿನ ಗೋಶಾಲೆಗೆ ನನ್ನ ಕಿರು ಕಾಣಿಕೆ ಅರ್ಪಿಸುವ ಸಂಕಲ್ಪವೂ ಮಾಡಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ