Skip to main content

Blog number 1672. ನಾಗೇಂದ್ರ ಸಾಗರ್ ಕೃಷಿ ಉದ್ಯಮದಲ್ಲಿ ಯಶಸ್ಸಿನ ಘಟ್ಟ ತಲುಪಲು ಪಟ್ಟ ಕಷ್ಟ ಸಾಮಾನ್ಯವಲ್ಲ ಇದು ಸ್ವಯ೦ ಉದ್ಯೋಗ ಮಾಡುವವರಿಗೆ ಒಂದು ನೀತಿ ಪಾಠ.

#ಪತ್ರಿಕೋದ್ಯಮದಲ್ಲಿ_ಭವಿಷ್ಯ_ಅರಸಿ_ಬೆಂಗಳೂರು_ಸೇರಿದ್ದರು.

#ಪತ್ರಿಕೋದ್ಯಮದ_ಬೀಷ್ಮ_ವಿ_ಎನ್_ಸುಬ್ಬರಾವ್_ಅವರ_ಶಿಷ್ಯರಾದರು

#ರವಿಬೆಳೆಗೆರೆ_ಪ್ರಕಾಶ್_ರೈ_ಪಬ್ಲಿಕ್_ಟೀವಿ_ರಂಗನಾಥ_ಮುಂತಾದವರ_ಜೊತೆಯಾದರು.

#ಅದನ್ನೆಲ್ಲ_ಬಿಟ್ಟು_ಸ್ವಾತಂತ್ರ_ಹೋರಾಟಗಾರರಾದ_ಇವರ_ತಂದೆಯ_ಬರಡು_ಜಮೀನಲ್ಲಿ_ಕೃಷಿ_ಪ್ರಾರಂಬಿಸಿದರು.

#ರೈತರಿಗಾಗಿ_ಅಗ್ರಿ_ಕ್ಲೀನಿಕ್_ಸಾಗರ್_ಅಗ್ರಿಕೋ_ಪ್ರಾರಂಬಿಸಿದರು.

#ಉದ್ಯಮದಲ್ಲಿ_ನಷ್ಟವಾಯಿತು_ತಂದೆಯ_ಜಮೀನು_ಸಹೋದರನ_ಪಾಲಿಗೆ_ಹೋಯಿತು.

#ಮತ್ತೆ_ಬೂದಿಯಿಂದ_ಎದ್ದು_ಬಂದ_ನಾಗೇಂದ್ರಸಾಗರ್

#ಸ್ವಯಂ_ಉದ್ಯೋಗ_ಮಾಡುವವರಿಗೆ_ನೀತಿ_ಪಾಠವಾಗಿದ್ದಾರೆ.


  ನನ್ನ ಕೃಷಿ ಪ್ರಯೋಗದ ಪ್ರಾರಂಭದ ದಿನಗಳಲ್ಲಿ ಕೃಷ್ಣಪ್ಪ ಎಂಬ ಸಜ್ಜನರು ಸಾಗರದ ತೋಟಗಾರಿಕಾ ಇಲಾಖೆ ಮುಖ್ಯಾದಿಕಾರಿ ಆಗಿದ್ದರು ಅವರ ಮಾರ್ಗದರ್ಶನದಲ್ಲಿ ಕೃಷಿ ಪ್ರಾರಂಬಿಸಿದ್ದೆ ಆಗ ಡ್ರಿಪ್ ಇರಿಗೇಷನ್ ಮಾಡಲು ಬೀಮನಕೋಣೆಯ ಪಿ.ಎಲ್.ಡಿ ಬ್ಯಾಂಕಿಗೆ ಹೋದಾಗ ಅಲ್ಲಿ ವ್ಯವಸ್ಥಾಪಕರಾಗಿದ್ದ ಹಂದಿಗೋಳ್ ಸಾಹೇಬರು ನಾಗೇಂದ್ರ ಸಾಗರ್ ಅವರ ಸಾಗರ್ ಅಗ್ರಿಕೋ ತೋರಿಸಿದರು.
   ಅಲ್ಲಿ ನನ್ನ ಸ್ವಭಾವವಾದ ಕೆಲವೇ ಕ್ಷಣದಲ್ಲಿ ವ್ಯವಹಾರ ಮುಗಿಸಿದ್ದೆ ನಂತರ ಉತ್ತುಂಗಕ್ಕೆ ಏರಿದ್ದ ಇವರ ವ್ಯವಹಾರ ನಷ್ಟಕ್ಕೆ ಇಳಿಯಿತು, ಸುಖದಲ್ಲಿ ಸುತ್ತುವರಿದಿದ್ದವರೆಲ್ಲ ಹಾರಿ ನಾಪತ್ತೆ ಆದರು.
   ಬೆಂಗಳೂರಿನ ಚೆಕ್ ಕೇಸಿಗೆ ಜಾಮೀನು ಹಾಕಲು ಒಬ್ಬನೇ ಒಬ್ಬ ಗೆಳೆಯ ಮುಂದೆ ಬರಲಿಲ್ಲ ನಾನೇ ಜಾಮೀನಾದೆ, ಇವರ ಸಂಸ್ಥೆ ಬಾಕಿ ವಸೂಲಿಗೆ ಬೆಂಗಳೂರು ಭೂಗತ ಜಗತ್ತಿಗೆ ವಸೂಲಿ ಮಾಡಲು ಒಬ್ಬ ಮಾರಾಟಗಾರ ವಹಿಸಿದ್ದರು ಪುಣ್ಯಕ್ಕೆ ಭೂಗತ ಜಗತ್ತಿನವರು ನನ್ನ ಅತ್ಯಾಪ್ತ ಗೆಳೆಯರಾದ್ದರಿಂದ ಅದು ಸುಖಾಂತ್ಯವಾಯಿತು.
  ಎರೆ ಹುಳದ ಗೊಬ್ಬರ ತಯಾರಿಗೆ ಸಗಣಿ ಗೊಬ್ಬರ ಸರಬರಾಜು ಮಾಡುವ ಶಿರಾಳಕೊಪ್ಪದ ಟ್ರಾನ್ಸಪೋರ್ಟರ್ ಇವರು ಬೇಡ ಅಂದರೂ ಏಳೆಂಟು ಲೋಡ್ ಕಳಪೆ ಮಣ್ಣು ಮಿಶ್ರಿತ ಕಲಬೆರಕೆ ಸಗಣಿ ಗೊಬ್ಬರ ಇಳಿಸಿ ಹಣ ವಸೂಲಿಗೆ ಇವರ ಮನೆ ಮುಂದೆ ಮುತ್ತಿಗೆ ಹಾಕಿದ್ದರು ಇದನ್ನು ನಾಗೇಂದ್ರ ಸಾಗರ್ ಗೆಳೆಯರೇ "ನಾಗೇಂದ್ರ ಸಾಗರ್ ಕಥೆ ಮುಗಿಯಿತು " ಎಂದು ಗೇಲಿ ಮಾಡುತ್ತಿದ್ದ ಕೇಳಿ ತಕ್ಷಣ ನಾನು ನಾಗೇಂದ್ರ ಸಾಗರರ ತೋಟಕ್ಕೆ ಹೋದಾಗ 20-30 ಜನ ಅಲ್ಲಿದ್ದರು ಇವರ ಹತ್ತಿರ ಜಗಳ ಆಗುತ್ತೆ ಅಂತ ನಾನು ಬೈಕಿಂದ ಇಳಿದಾಗ ಅವರೆಲ್ಲ ನಮಸ್ಕಾರ ಅಂದಾಗ ನನಗೆ ಆಶ್ಚರ್ಯ, ಅವರೆಲ್ಲ ಆಗ ಹತ್ತಿ ವ್ಯಾಪಾರಕ್ಕೆ ಬರುತ್ತಿದ್ದ ಶಿರಾಳಕೊಪ್ಪದ ಹಜರತ್ ಉಮ್ಮರ್ ಸಾಹೇಬರ ಕೆಲಸದವರು ಮತ್ತು ನಮ್ಮ ಊರಲ್ಲಿಗೆ ಬಂದಾಗ ಅವರ ವಾಸ್ತವ್ಯಕ್ಕೆ ಹತ್ತಿ ತುಂಬುವ ಕಲ್ಲಿಗಳು ಇಡಲು ನಮ್ಮ ರೈಸ್ ಮಿಲ್ ಬಳಸುತ್ತಿದ್ದರು ಇದು ನನಗೆ ಅವತ್ತಿನ ಪರಿಸ್ಥಿತಿ ನನ್ನ ನಿಯಂತ್ರಣಕ್ಕೆ ಬಂತು ನಂತರ ಸಮಸ್ಯೆ ಸರಳವಾಗಿ ಬಗೆಹರಿಸಿ ಅವರನ್ನು ವಾಪಾಸ್ ಕಳಿಸಿದ್ದೆ.
  ನಾನು ಜನಪರ ಹೋರಾಟದಿಂದ ಸಾಗರದ ಜೈಲು ಸೇರಿದಾಗ ಸಂಜೆ ಹೊದ್ದು ಹಾಸಲು ಹೊದಿಕೆ ತಂದಿದ್ದವರು ನಾಗೇಂದ್ರ ಸಾಗರ್ ನನಗೆ ಯಾವತ್ತೂ ಇದು ನೆನಪಾಗುತ್ತದೆ.

  ಇದೆಲ್ಲ ಇಲ್ಲಿ ಬರೆದಿದ್ದರಿಂದ ಗೆಳೆಯ ನಾಗೇಂದ್ರ ಸಾಗರ್ ಗೆ ಮುಜುಗುರ ಆಗಬಹುದು ಆದರೆ ಅವರ ಉದ್ಯಮದ ಯಶಸ್ಸಿನ ಹಾದಿ ಅವರೇ ತಿರುಗಿ ನೋಡಿ ನೆನಪು ಮಾಡಿಕೊಂಡಾಗ ಗೆಳೆಯರು ಸಂಬಂದಿಗಳೇ ಹೇಗೆ ಆಪತ್ತಿನ ಕಾಲದಲ್ಲಿ ಇದ್ದರು ಎ೦ಬುದು ನನಗೆ ಹೇಳಲೇ ಬೇಕಾಯಿತು.


"ಇಷ್ಟು ದೊಡ್ಡ ಟ್ರಕ್ ಲೋಡಿನಷ್ಟು ನಮ್ಮ ಸಾವಯವ ಗೊಬ್ಬರವನ್ನು ಕಳಿಸುವುದು ನಮ್ಮ ಬಹು ದಿನದ ಕನಸಾಗಿತ್ತು.. ಈ ಒಂದು ಕನಸು ಸಾಕಾರ ವಾಗಲು ಸುಮಾರು ಇಪ್ಪತ್ತೈದು ವರ್ಷಗಳೇ ಬೇಕಾದವು.. ಇಂದು ಆ ಕನಸು ನನಸಾಗಿದ್ದರ ಬಗ್ಗೆ  ನಮಗೆ ಒಂಥರಾ ಭರಪೂರ ಸಂತಸ.... "
✍️ ನಾಗೇಂದ್ರ ಸಾಗರ್....

  ಇದು ಇವತ್ತಿನ ಬೆಳಗಿನ ಪೇಸ್ ಬುಕ್‌ ಪೋಸ್ಟ್ ಗೆಳೆಯ ನಾಗೇಂದ್ರ ಸಾಗರ್ ಅವರು ಬರೆದದ್ದು ಅದಕ್ಕೆ ನನ್ನ ಪ್ರತಿಕ್ರಿಯೆ ಈ ಕೆಳಕಂಡಂತೆ ಬರೆದೆ
ನಿಮ್ಮ ಎರೆಹುಳ ಗೊಬ್ಬರ ಪ್ರಾರಂಭದ ಹಂತದಿಂದ ನೋಡಿದ್ದೇನೆ, ಬೆಂಗಳೂರಿನ ವಿಶ್ವವಿದ್ಯಾಲದಲ್ಲಿ ಆಗ ಎರೆ ಹುಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರಾದಾ ಕಾಳೆ ಬೇಟಿ ಆಗಿದ್ದು, ನೀವು ದಾರವಾಡದಿಂದ ಎರೆಹುಳ ತರುವಾಗ ಇಡೀ ಜೀಪಿನ ತುಂಬಾ ಎರೆಹುಳ ಹರಿದಾಡಿದ ನಿಮ್ಮ ಅನುಭವ, ಆಗ ಸಣ್ಣ ಕಟ್ಟಡದಲ್ಲಿ ಕಚ್ಚಾ ಟ್ಯಾಂಕ್, ಅಲ್ಲಿಂದ ಎರೆಹುಳ ಗೊಬ್ಬರದಿಂದ ಬೇರ್ಪಡಿಸುವುದು, ಕೈ ಜಾಲರಿಯಲ್ಲಿ ಸಾಣಿಸಿ ಚೀಲದಲ್ಲಿ ತುಂಬಿ ಮಾರುವುದು, ಶಿರಾಳಕೊಪ್ಪದ ಸಗಣಿ ಗೊಬ್ಬರ ಮಾರಾಟಗಾರರ ಮೋಸ ಅವತ್ತಿನ ಪಂಚಾಯಿತಿ ನಾನೇ ಮಾಡುವಂತಾದದ್ದು ಹೀಗೆ... ಪ್ರಾರಂಭದ ಬ್ಯಾಚಿನಿಂದ ಕಳೆದ ವರ್ಷದವರೆಗೂ ನಿಮ್ಮ ಎರೆ ಹುಳದ ಗೊಬ್ಬರದ ಸಣ್ಣ ಖರೀದಿದಾರ ವರ್ಷದಿಂದ ವರ್ಷಕ್ಕೆ ಗುಣಮಟ್ಟ-ಪಲಿತಾಂಶ ಪ್ಯಾಕಿಂಗ್ ಸುದಾರಣೆ ಕಂಡಿದ್ದೇನೆ ಇವತ್ತಿನ ಪೋಸ್ಟ್ ನೋಡಿ ತುಂಬಾ ಖುಷಿಯಾಯಿತು ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಒಂದೊಂದು ಟ್ರಕ್ ಎರೆಹುಳ ದ ಗೊಬ್ಬರ ದೇಶದಾದ್ಯಂತ ರೈತರ ಜಮೀನು ತಲುಪುವಂತಾಗಲಿ ಎಂದು ಹಾರೈಸುತ್ತೇನೆ.
ಇದಕ್ಕೆ ನಾಗೇಂದ್ರ ಸಾಗರ್ ಉತ್ತರಿಸಿದ್ದು...
Arun Prasad ನಿಜ ಅರುಣ್ ಪ್ರಸಾದರೆ.. ನಮ್ಮ ಸಂಘರ್ಷದ ಪ್ರಯಾಣದುದ್ದಕ್ಕೂ ನೀವು ಸಹಕರಿಸಿದ್ದೀರಿ.. ಆ ದಿನಗಳನ್ನು ಹೇಗೆ ತಾನೆ ಮರೆಯುವುದು... ಎಲ್ಲವೂ ಎಣಿಸಿದಂತೆ ಆಗಿದ್ದರೆ ಈ ಸಾಧನೆ ಹತ್ತು ವರ್ಷ ಮೊದಲೇ ಸಾಧ್ಯವಿತ್ತು... ಎಲ್ಲದಕ್ಕೂ ಕಾಲ ಕೂಡಿ ಬರಬೇಕು ನೋಡಿ.. ನಾನು ಅಂತ ಅಲ್ಲ ಹೀಗೆ ಈ ರೀತಿಯ ಪ್ರಯತ್ನಗಳಿಗೆ ಈಗ ದೊಡ್ಡ ಅವಕಾಶಗಳಂತೂ ಇದೆ..
 ನನ್ನ ಉತ್ತರ 
Nagendra Sagar ಸಾವಯುವ ಕೃಷಿಗೆ ಈಗ ಕಾಲ ಬಂದಿದೆ ಜನರಲ್ಲಿ ಜಾಗೃತಿ ಮೂಡಿದೆ ನೀವು ಪ್ರಾರಂಭ ಮಾಡಿದ 1999 ನೆ ಇಸವಿಯಲ್ಲಿ ಸಾವಿರಕ್ಕೆ 10 ಜನರು ಮಾತ್ರ ಸಾವಯುವ ಕೃಷಿ ಬಗ್ಗೆ ಆಸಕ್ತಿ ವಹಿಸುವ ಕಾಲ, ಗಾಡ್ ಫಾದರ್ ಇರದವರಿಗೆ, ಆರ್ಥಿಕ ಬೆಂಬಲ ಇರದವರಿಗೆ ಕಾಲವೇ ಮಾರ್ಗದರ್ಶನ ನೀಡುತ್ತದೆ ದೀರ್ಘ ಕಾಲದ ಹಾದಿ ಸವೆದು ಗುರಿ ಮುಟ್ಟುತ್ತೇವೆ ನಿಮ್ಮ ಕೃಷಿ ಉದ್ಯಮ ಒಂದು ತಪಸ್ಸು ಇದರಲ್ಲಿ ನಿಮಗೆ ಬೆನ್ನಾಗಿ ನಿಂತ ನಿಮ್ಮ ಪತ್ನಿ ಅಭಿನಂದನಾಹ೯ರು ಅವರು ಚಿಪ್ಪಳಿಯ ಈ ಕಲ್ಲು ಗುಡ್ಡಕ್ಕೆ ಬರಲು ನಿರಾಕರಿಸಿದ್ದರೆ ಇದೆಲ್ಲ ಸಾಧ್ಯವಿರಲಿಲ್ಲ.
  ಈ ಹಿಂದೆ ಇವರ ಬಗ್ಗೆ ನಾನು ಬರೆದ ಬ್ಲಾಗ್ ಇಲ್ಲಿ ಕ್ಲಿಕ್ ಮಾಡಿ ಓದಬಹುದು https://arunprasadhombuja.blogspot.com/2018/11/blog-post_6.html
   ನಾಗೇಂದ್ರ ಸಾಗರ್ ಜೀವನ ಸ್ವಯಂ ಉದ್ಯೋಗಿಗಳಿಗೆ ಪ್ರೇರೇಪಣೆ ನೀಡುವ ನೀತಿಪಾಠವಾಗಿದೆ ಅವರು ಬೂದಿಯಿಂದ ಎದ್ದು ಬಂದದ್ದು ನನ್ನ ಕಣ್ಣುಗಳು ನೋಡಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ