Skip to main content

Blog number 1680. ಡಾಕ್ಟರ್ ವಿಘ್ನೇಶರ ಮನದಾಳದ ಮಾತುಗಳು, ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಮುಖ್ಯ ಕಾರಣಕರ್ತರು.

#ಡಾಕ್ಟರ್_ವಿಘ್ನೇಶ್_ಮಂಚಾಲೆ_ಇವರ_ಮನದಾಳದ_ಮಾತುಗಳು .

#ಕ್ಯಾಂಪಸ್_ಭೂಮಿ_ಗುರುತಿಸಿದ_ವಿಶೇಷಾಧಿಕಾರಿ_ಅವರು

#ಈ_ಮಹತ್ಕಾರ್ಯದಲ್ಲಿ_ಅವರಿಗೆ_ಮುಕ್ತವಾಗಿ_ಮತ್ತು_ಬಹಿರಂಗವಾಗಿ_ಬೆಂಬಲಿಸಿದವರ_ನೆನೆಸಿದ್ದಾರೆ.

#ಇಬ್ಬರನ್ನು_ಹೆಸರಿಸಿದ್ದಾರೆ

#ಅದು_ಹಿರಿಯ_ಕಾಂಗ್ರೇಸ್_ಮುಖಂಡರಾದ_ಈಳಿ_ನಾರಾಯಣಪ್ಪನವರು.

#ಇನ್ನೋಬ್ಬರು?

#ನಾನಂತೆ !

#ನನ್ನ_ಕಥಾಸಂಕಲ_ಬಿಲಾಲಿ_ಬಿಲ್ಲಿಯಲ್ಲಿ_ಒಂದು_ಕಥಾ_ನಾಯಕ_ಇವರು.

ಡಾ.ವಿಷ್ನೇಶ್.

ಅರುಣ್ ಪ್ರಸಾದರಿಗೆ ಧನ್ಯವಾದಗಳು...
   ನೀವು ಮಾತ್ರ ಪ್ರತಿ ವರ್ಷ ಕನ್ವೊಕೇಷನ್ ಹಬ್ಬದಲ್ಲಿ ನನ್ನ ನೆನಪು ಮಾಡಿಕೊಳ್ಳುತ್ತಲೇ ಇರುವಿರಿ. ನಾನು ವಿಶೇಷ ಅಧಿಕಾರಿಯಾಗಿ ಇರುವಕ್ಕಿ ಕ್ಯಾಂಪಸ್ ಮಾಡುವುದು ನನ್ನ ವೃತ್ತಿ ಜೀವನದ ಬಹು ದೊಡ್ಡ ಜವಾಬ್ದಾರಿ ಮತ್ತು ಚಾಲೆಂಜ್ ಆಗಿತ್ತು. ವರದ ಪುರದ ಮಹಾ ಯೋಗಿ ಶ್ರೀ ಶ್ರೀಧರ ಸ್ವಾಮಿಗಳ ಆಶೀರ್ವಾದದಿಂದ ಮಾತ್ರ ಇದು ಸಾಕಾರ ಆಯಿತು ಎಂದು ನಂಬಿದವನು. ನಿಮ್ಮ ಸಹಕಾರವೂ ಪ್ರಮುಖ ವಾಗಿತ್ತು. ಇದರ ಸಂಪೂರ್ಣ ದಾಖಲಾತಿಯ ವಿವರ ನಿಮಗೆ ಕೊಡುತ್ತೇನೆ. ಕಿಮ್ಮನೆ ರತ್ನಾಕರ್ ಕೂಡ ಬಹಳ ಸಹಕರಿಸಿದರು. ಮೊದಲಿಗೆ ನಾನು ಗುರುತಿಸಿದ್ದು 1300 ಎಕರೆ ಜಾಗ.ಆದರೆ ಸಿಕ್ಕಿದ್ದು 777 ಎಕರೆ ಮಾತ್ರ. ಈ ಮಹತ್ಕಾರ್ಯದಲ್ಲಿ ನನಗೆ ಮುಕ್ತವಾಗಿ ಮತ್ತು ಬಹಿರಂಗವಾಗಿ ಸಪೋರ್ಟ್ ಮಾಡಿದ್ದು ನೀವು ಮತ್ತು ಶ್ರೀ ದಿವಂಗತ ಇಳಿ ನಾರಣಪ್ಪನವರು. ಸಾಗರ ತಾಲೂಕಿನ ಪ್ರಬಲ ಸಮುದಾಯಕ್ಕೆ ಸೇರಿದವನು ಆದರೂ ಯಾರೂ ಸಪೋರ್ಟ್ ಮಾಡಲಿಲ್ಲ. ಹಾಗಂತ ಅದರ ಬಗ್ಗೆ ಬೇಸರವೂ ಇಲ್ಲ. ಈ ಕಾರ್ಯದಲ್ಲಿ ಯಾವೊಬ್ಬ ರೈತನನ್ನು ಒಕ್ಕಲು ಯೆಬ್ಬಿಸಿಲ್ಲ.  "ಯಾಕೆ ಸಾಗರ ತಾಲೂಕಿನಲ್ಲಿ ಕೃಷಿ ವಿ ವಿ ಬೇಕೆಂದರೆ," ಅಂದಿನ ಕೃಷಿ ಮಂತ್ರಿಯವರಿಗೆ ನಾನು ಹೇಳಿದ್ದು" ಈ ತಾಲೂಕಿನ ಜನರು ತ್ಯಾಗ ಮಾಡಿದವರು. ನಾಡಿನ ಅಭಿವೃದ್ದಿಗಾಗಿ, ಬೆಳಕನ್ನು ಕೊಡಲು ಸಾವಿರಾರು ರೈತರು, ಕಾರ್ಮಿಕರು  ಮನೆ ಆಸ್ತಿ ಕಳೆದುಕೊಂಡು ಬೀದಿ ಪಾಲಾದರು. ಅನೇಕ ಹೋರಾಟ ಚಳುವಳಿಗಳು ನಡೆದಿದೆ. ಆದರೆ ಉದ್ಯೋಗ ಕೊಡುವ ಯಾವ ಸರಕಾರೀ ಸಂಸ್ಥೆಗಳು ಇಲ್ಲಿ ಬರಲಿಲ್ಲ (I I T, medical cillege, ಇತ್ಯಾದಿ). ಈಗ ಕೃಷಿ ವಿ ವಿ ಬರುತ್ತಿದೆ, ದಯವಿಟ್ಟು ಅನುಮೋದಿಸಿ"ಎಂದು ನಿರ್ಣಾಯಕವಾಗಿ ಹೇಳಿದ್ದೆ. ಆಗ ಶ್ರೀ ಕಾಗೋಡು ತಿಮ್ಮಪ್ಪನವರು ಉಪಸ್ಥಿತರಿದ್ದರು. ಆಂತರಿಕವಾಗಿ ವಿರೋಧವಿದ್ದರೂ ನನ್ನ ಈ ಸೈದ್ಧಾಂತಿಕ ಬದ್ಧತೆ ನನಗೆ ಈ ಕಾರ್ಯ ಮಾಡಲು ಪ್ರೇರೇಪಿಸಿತು. ನಿಮ್ಮ ಸಹಕಾರಕ್ಕೆ ಹಾಗೂ ನಿಮ್ಮ ಚಿಂತನೆಯ ಸತ್ವಕ್ಕೆ ನಾನು ಅಭಾರಿ. ನಿಮ್ಮಂತ ವ್ಯಕ್ತಿಗಳು ವಿ ವಿ ಯ ಆಡಳಿತ ಮಂಡಳಿಯ ಸದಸ್ಯರಾದರೆ ವಿ ವಿ ಯ ಹಿತದೃಷ್ಟಿಯಿಂದ ಅನುಕೂಲ. ನಿಮ್ಮ ಅಭಿಮಾನಕ್ಕೆ ಮತೊಮ್ಮೆ ಧನ್ಯವಾದಗಳು.
  ಡಾ.ವಿಷ್ನೇಶ್.
 ಇವರಿಗೆ ನನ್ನ ಉತ್ತರ ...
  ವಿಘ್ನೇಶರೆ ದೀಪದ ಕೆಳಗೆ ಕತ್ತಲು ಎಂಬಂತೆ ನಿಮ್ಮ ಜ್ಞಾನ ಪರಿಶ್ರಮಗಳು ಸ್ಥಳಿಯರಿಗೆ ನಿರ್ಲಕ್ಷ್ಯ ಮತ್ತು ನಿಮ್ಮ ಅಹ೯ತೆಯನ್ನೇ ಅನರ್ಹತೆ ಮಾಡುವ ಹೊಟ್ಟೆಕಿಚ್ಚಿನ ಮಲೆನಾಡಿನ ನಿಮ್ಮ ಸಮಕಾಲಿನವರು ಕಡಿಮೆ ಇಲ್ಲ ಏನೇ ಆಗಲಿ ನಿಮ್ಮ ಸಾದನೆ ಸದಾ ಸ್ಮರಣೀಯ ಮತ್ತು ಸ್ತುತ್ಯಾರ್ಹ ಇದರಿಂದ ನಾನು ಹಿಂದೆ ಸರಿಯಲಾರೆ.
  ಈಗಲೂ ನೀವು ದೇಶಾದ್ಯಂತ ದೊಡ್ಡ ದೊಡ್ಡ ವಿಶ್ವ ವಿದ್ಯಾಲಯದ ಆಹ್ವಾನ ಪಡೆದು ಅಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವೃಂದಕ್ಕೆ ಕೌನ್ಸಿಲಿಂಗ್ ಮಾಡುವುದು ಹೆಮ್ಮೆಯ ವಿಚಾರ.
   ನಾನು ಸಾವ೯ಜನಿಕ ಜೀವನದಿಂದ ರಾಜಕಾರಣದಿಂದ ನಿವೃತ್ತನಾಗಿದ್ದೇನೆ ಆದ್ದರಿಂದ ನನಗೆ ಯಾವುದೆ ಜವಾಬ್ದಾರಿ ಇಷ್ಟವಿಲ್ಲ ಅಂತಹ ಸ್ಥಾನಗಳು ನಿಮ್ಮಂತಹ ಯೋಗ್ಯರು ಅಲಂಕರಿಸಿದರೆ ಆ ಸ್ಥಾನಕ್ಕೆ ಗೌರವ ಕೂಡ.
ಇತಿ 
ಅರುಣ್ ಪ್ರಸಾದ್.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ