Skip to main content

Blog number 1680. ಡಾಕ್ಟರ್ ವಿಘ್ನೇಶರ ಮನದಾಳದ ಮಾತುಗಳು, ಇರುವಕ್ಕಿ ಕೃಷಿ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಮುಖ್ಯ ಕಾರಣಕರ್ತರು.

#ಡಾಕ್ಟರ್_ವಿಘ್ನೇಶ್_ಮಂಚಾಲೆ_ಇವರ_ಮನದಾಳದ_ಮಾತುಗಳು .

#ಕ್ಯಾಂಪಸ್_ಭೂಮಿ_ಗುರುತಿಸಿದ_ವಿಶೇಷಾಧಿಕಾರಿ_ಅವರು

#ಈ_ಮಹತ್ಕಾರ್ಯದಲ್ಲಿ_ಅವರಿಗೆ_ಮುಕ್ತವಾಗಿ_ಮತ್ತು_ಬಹಿರಂಗವಾಗಿ_ಬೆಂಬಲಿಸಿದವರ_ನೆನೆಸಿದ್ದಾರೆ.

#ಇಬ್ಬರನ್ನು_ಹೆಸರಿಸಿದ್ದಾರೆ

#ಅದು_ಹಿರಿಯ_ಕಾಂಗ್ರೇಸ್_ಮುಖಂಡರಾದ_ಈಳಿ_ನಾರಾಯಣಪ್ಪನವರು.

#ಇನ್ನೋಬ್ಬರು?

#ನಾನಂತೆ !

#ನನ್ನ_ಕಥಾಸಂಕಲ_ಬಿಲಾಲಿ_ಬಿಲ್ಲಿಯಲ್ಲಿ_ಒಂದು_ಕಥಾ_ನಾಯಕ_ಇವರು.

ಡಾ.ವಿಷ್ನೇಶ್.

ಅರುಣ್ ಪ್ರಸಾದರಿಗೆ ಧನ್ಯವಾದಗಳು...
   ನೀವು ಮಾತ್ರ ಪ್ರತಿ ವರ್ಷ ಕನ್ವೊಕೇಷನ್ ಹಬ್ಬದಲ್ಲಿ ನನ್ನ ನೆನಪು ಮಾಡಿಕೊಳ್ಳುತ್ತಲೇ ಇರುವಿರಿ. ನಾನು ವಿಶೇಷ ಅಧಿಕಾರಿಯಾಗಿ ಇರುವಕ್ಕಿ ಕ್ಯಾಂಪಸ್ ಮಾಡುವುದು ನನ್ನ ವೃತ್ತಿ ಜೀವನದ ಬಹು ದೊಡ್ಡ ಜವಾಬ್ದಾರಿ ಮತ್ತು ಚಾಲೆಂಜ್ ಆಗಿತ್ತು. ವರದ ಪುರದ ಮಹಾ ಯೋಗಿ ಶ್ರೀ ಶ್ರೀಧರ ಸ್ವಾಮಿಗಳ ಆಶೀರ್ವಾದದಿಂದ ಮಾತ್ರ ಇದು ಸಾಕಾರ ಆಯಿತು ಎಂದು ನಂಬಿದವನು. ನಿಮ್ಮ ಸಹಕಾರವೂ ಪ್ರಮುಖ ವಾಗಿತ್ತು. ಇದರ ಸಂಪೂರ್ಣ ದಾಖಲಾತಿಯ ವಿವರ ನಿಮಗೆ ಕೊಡುತ್ತೇನೆ. ಕಿಮ್ಮನೆ ರತ್ನಾಕರ್ ಕೂಡ ಬಹಳ ಸಹಕರಿಸಿದರು. ಮೊದಲಿಗೆ ನಾನು ಗುರುತಿಸಿದ್ದು 1300 ಎಕರೆ ಜಾಗ.ಆದರೆ ಸಿಕ್ಕಿದ್ದು 777 ಎಕರೆ ಮಾತ್ರ. ಈ ಮಹತ್ಕಾರ್ಯದಲ್ಲಿ ನನಗೆ ಮುಕ್ತವಾಗಿ ಮತ್ತು ಬಹಿರಂಗವಾಗಿ ಸಪೋರ್ಟ್ ಮಾಡಿದ್ದು ನೀವು ಮತ್ತು ಶ್ರೀ ದಿವಂಗತ ಇಳಿ ನಾರಣಪ್ಪನವರು. ಸಾಗರ ತಾಲೂಕಿನ ಪ್ರಬಲ ಸಮುದಾಯಕ್ಕೆ ಸೇರಿದವನು ಆದರೂ ಯಾರೂ ಸಪೋರ್ಟ್ ಮಾಡಲಿಲ್ಲ. ಹಾಗಂತ ಅದರ ಬಗ್ಗೆ ಬೇಸರವೂ ಇಲ್ಲ. ಈ ಕಾರ್ಯದಲ್ಲಿ ಯಾವೊಬ್ಬ ರೈತನನ್ನು ಒಕ್ಕಲು ಯೆಬ್ಬಿಸಿಲ್ಲ.  "ಯಾಕೆ ಸಾಗರ ತಾಲೂಕಿನಲ್ಲಿ ಕೃಷಿ ವಿ ವಿ ಬೇಕೆಂದರೆ," ಅಂದಿನ ಕೃಷಿ ಮಂತ್ರಿಯವರಿಗೆ ನಾನು ಹೇಳಿದ್ದು" ಈ ತಾಲೂಕಿನ ಜನರು ತ್ಯಾಗ ಮಾಡಿದವರು. ನಾಡಿನ ಅಭಿವೃದ್ದಿಗಾಗಿ, ಬೆಳಕನ್ನು ಕೊಡಲು ಸಾವಿರಾರು ರೈತರು, ಕಾರ್ಮಿಕರು  ಮನೆ ಆಸ್ತಿ ಕಳೆದುಕೊಂಡು ಬೀದಿ ಪಾಲಾದರು. ಅನೇಕ ಹೋರಾಟ ಚಳುವಳಿಗಳು ನಡೆದಿದೆ. ಆದರೆ ಉದ್ಯೋಗ ಕೊಡುವ ಯಾವ ಸರಕಾರೀ ಸಂಸ್ಥೆಗಳು ಇಲ್ಲಿ ಬರಲಿಲ್ಲ (I I T, medical cillege, ಇತ್ಯಾದಿ). ಈಗ ಕೃಷಿ ವಿ ವಿ ಬರುತ್ತಿದೆ, ದಯವಿಟ್ಟು ಅನುಮೋದಿಸಿ"ಎಂದು ನಿರ್ಣಾಯಕವಾಗಿ ಹೇಳಿದ್ದೆ. ಆಗ ಶ್ರೀ ಕಾಗೋಡು ತಿಮ್ಮಪ್ಪನವರು ಉಪಸ್ಥಿತರಿದ್ದರು. ಆಂತರಿಕವಾಗಿ ವಿರೋಧವಿದ್ದರೂ ನನ್ನ ಈ ಸೈದ್ಧಾಂತಿಕ ಬದ್ಧತೆ ನನಗೆ ಈ ಕಾರ್ಯ ಮಾಡಲು ಪ್ರೇರೇಪಿಸಿತು. ನಿಮ್ಮ ಸಹಕಾರಕ್ಕೆ ಹಾಗೂ ನಿಮ್ಮ ಚಿಂತನೆಯ ಸತ್ವಕ್ಕೆ ನಾನು ಅಭಾರಿ. ನಿಮ್ಮಂತ ವ್ಯಕ್ತಿಗಳು ವಿ ವಿ ಯ ಆಡಳಿತ ಮಂಡಳಿಯ ಸದಸ್ಯರಾದರೆ ವಿ ವಿ ಯ ಹಿತದೃಷ್ಟಿಯಿಂದ ಅನುಕೂಲ. ನಿಮ್ಮ ಅಭಿಮಾನಕ್ಕೆ ಮತೊಮ್ಮೆ ಧನ್ಯವಾದಗಳು.
  ಡಾ.ವಿಷ್ನೇಶ್.
 ಇವರಿಗೆ ನನ್ನ ಉತ್ತರ ...
  ವಿಘ್ನೇಶರೆ ದೀಪದ ಕೆಳಗೆ ಕತ್ತಲು ಎಂಬಂತೆ ನಿಮ್ಮ ಜ್ಞಾನ ಪರಿಶ್ರಮಗಳು ಸ್ಥಳಿಯರಿಗೆ ನಿರ್ಲಕ್ಷ್ಯ ಮತ್ತು ನಿಮ್ಮ ಅಹ೯ತೆಯನ್ನೇ ಅನರ್ಹತೆ ಮಾಡುವ ಹೊಟ್ಟೆಕಿಚ್ಚಿನ ಮಲೆನಾಡಿನ ನಿಮ್ಮ ಸಮಕಾಲಿನವರು ಕಡಿಮೆ ಇಲ್ಲ ಏನೇ ಆಗಲಿ ನಿಮ್ಮ ಸಾದನೆ ಸದಾ ಸ್ಮರಣೀಯ ಮತ್ತು ಸ್ತುತ್ಯಾರ್ಹ ಇದರಿಂದ ನಾನು ಹಿಂದೆ ಸರಿಯಲಾರೆ.
  ಈಗಲೂ ನೀವು ದೇಶಾದ್ಯಂತ ದೊಡ್ಡ ದೊಡ್ಡ ವಿಶ್ವ ವಿದ್ಯಾಲಯದ ಆಹ್ವಾನ ಪಡೆದು ಅಲ್ಲಿನ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕ ವೃಂದಕ್ಕೆ ಕೌನ್ಸಿಲಿಂಗ್ ಮಾಡುವುದು ಹೆಮ್ಮೆಯ ವಿಚಾರ.
   ನಾನು ಸಾವ೯ಜನಿಕ ಜೀವನದಿಂದ ರಾಜಕಾರಣದಿಂದ ನಿವೃತ್ತನಾಗಿದ್ದೇನೆ ಆದ್ದರಿಂದ ನನಗೆ ಯಾವುದೆ ಜವಾಬ್ದಾರಿ ಇಷ್ಟವಿಲ್ಲ ಅಂತಹ ಸ್ಥಾನಗಳು ನಿಮ್ಮಂತಹ ಯೋಗ್ಯರು ಅಲಂಕರಿಸಿದರೆ ಆ ಸ್ಥಾನಕ್ಕೆ ಗೌರವ ಕೂಡ.
ಇತಿ 
ಅರುಣ್ ಪ್ರಸಾದ್.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...