Skip to main content

Blog number 1646.ಆನಂದಪುರಂ ಇತಿಹಾಸ ಭಾಗ 150. ದೂರದ ಆಂಧ್ರ ಪ್ರದೇಶದಿಂದ ವಲಸೆ ಬಂದು ಆನಂದಪುರಂನಲ್ಲಿ ನೆಲೆಸಿರುವ ಅಲೆಮಾರಿ ಸುಡುಗಾಡು ಸಿದ್ದರು.

#ಆನಂದಪುರಂ_ಇತಿಹಾಸ_ಭಾಗ_150.

#ದೂರದ_ಆಂಧ್ರ_ಮೂಲದ_ಸುಡಗಾಡು_ಸಿದ್ಧರು_ಆನಂದಪುರಂಗೆ_ವಲಸೆ_ಬಂದವರು.

#ತಾವರೇಹಳ್ಳಿ_ಗ್ರಾಮದ_ಜೇಡಿಸರದಲ್ಲಿ_ನೆಲೆಸಿದ್ದಾರೆ.

#ತೆಲಗು_ಭಾಷಿಕರಾದ್ದರಿಂದ_ಇವರ_ಕ್ಯಾಂಪನ್ನು_ರೆಡ್ಡಿ_ಕ್ಯಾಂಪ್_ಎಂದು_ಸ್ಥಳಿಯರು_ಕರೆಯುತ್ತಾರೆ.

#ಈ_ಕ್ಯಾಂಪಿನ_ಹಿರಿಯ_ಗೂರಪ್ಪಣ್ಣ_ಕನ್ನಡ_ಸಾಹಿತ್ಯ_ಪ್ರೇಮಿ.

#ನಾಲ್ಕನೇ_ತರಗತಿವರೆಗೆ_ಓದಿರುವ_ಇವರು_ಓದಿದ_ಕಾದಂಬರಿ_ಎರೆಡು_ಸಾವಿರಕ್ಕೂ_ಮಿಕ್ಕಿದೆ.


  ಇವರು ಆಂದ್ರ ಮಾತೃ ಬಾಷೆಯ ಆಂದ್ರ ಮೂಲದ ಅಲೆಮಾರಿ ಬುಡಕಟ್ಟು ಜನಾಂಗದ ಸುಡುಗಾಡು ಸಿದ್ಧರು ಜಾತಿಯವರು, ಆಂದ್ರದಿಂದ ಚಿತ್ರದುಗ೯ ಅಲ್ಲಿಂದ ಶಿವಮೊಗ್ಗ ಜಿಲ್ಲೆಯ ಹೊಸನಗರ, ಅಲ್ಲಿಂದ ಕೆಂಚನಾಲ ನಂತರ ನಮ್ಮ ಆನಂದಪುರಂನ ಜೇಡಿಸರದಲ್ಲಿ ಬಂದು ನೆಲೆಸಿದ ಇವರ ತಂದೆ ಪರಶುರಾಮಣ್ಣ ತಮ್ಮ ವಂಶಪಾರಂಪರ್ಯ ವೃತ್ತಿ ಆದ ಜೋತಿಷ ಹೇಳುವುದು, ಬಿಕ್ಷೆ ಬೇಡುವುದನ್ನು ಇಷ್ಟ ಪಡದೆ ಕೃಷಿ ಮೇಲೆ ಅವಲಂಬಿತರಾದವರು.
  ಸುಡುಗಾಡ ಸಿದ್ಧರೆಂದರೆ ಶಿವನ ಅನುಯಾಯಿಗಳು, ಶಿವನ ಕೋಪಕ್ಕೆ ತುತ್ತಾಗಿ ಅಲೆಮಾರಿಗಳಾದರೂ ಎಂಬ ಪ್ರತೀತಿ ನಂಬಿಕೆ ಇವರಲ್ಲಿದೆ, ಇವರು ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಬುದ್ಧಿವಂತರು, ಕುಡಿತಕ್ಕೆ ಇವರಲ್ಲಿ ಯಾವುದೇ ನಿರ್ಬಂದವಿಲ್ಲ, ಅತ್ಯಂತ ಬುದ್ದಿವಂತರಾಗಿರುವ ಇವರು ಜಗಳ ಹೊಡೆದಾಟಗಳು ಮಾಡುವುದು ಕಡಿಮೆ, ಸೌಜನ್ಯ ಮತ್ತು ಸಂಸ್ಕಾರ ಈ ಅಲೆಮಾರಿ ಪಂಗಡದಲ್ಲಿ ಬೇರೆ ಅಲೆಮಾರಿ ಬುಡಕಟ್ಟು ಹೋಲಿಸಿದರೆ ಹೆಚ್ಚು.
  ಹೊಸನಗರದಲ್ಲಿ 10 ಎಕರೆ ಗೇಣಿ ಜಮೀನು ಮಾಡಿದ್ದಾರಂತೆ ನಂತರ ಭೂಮಾಲಿಕರು ಜಮೀನು ಬಿಡಿಸಿಕೊಂಡರಂತೆ ಹಾಗಾಗಿ ಹೊಸನಗರ ಬಿಡುತ್ತಾರೆ.
  ಈ ಜನಾಂಗದವರು ಹಸ್ತ ಸಾಮುದ್ರಿಕೆ, ಒಲೆಗರಿಯ (ಚಿಂತಾಮಣಿ) ಕಟ್ಟಿನಲ್ಲಿ ಜೋತಿಷ ಕೇಳುವವ ಕಡ್ಡಿ ಹಾಕಿ ಗುರುತು ಮಾಡಿದ ಒಲೆಗರಿ ತೆಗೆದು ಅದರಲ್ಲಿನ ಚಿತ್ರದ ಪ್ರಖಾರ ಜೋತಿಷ ಹೇಳುವುದು, ಇನ್ನೊಂದು ವಿಧಾನ ಇವರು ಸಾಕುವ ಗಿಳಿ ಪಂಜರದಿಂದ ಬಂದು ಕಚ್ಚಿ ಕೊಡುವ ಒಲೆಗರಿಯ ನೋಡಿ ಹೇಳುವುದು ಇದು ಇವರ ತಲಾತಲಾಂತರದ ವೃತ್ತಿ ಆಗಿತ್ತು, ಆಗ ಇವರು ಕುದುರೆ ಸಾಕುತ್ತಿದ್ದರು ಕುದುರೆ ಅಲೆಮಾರಿ ಜೀವನದ ಸರಕು ಸಾಗಾಣಿಕೆ ಮತ್ತು ಇವರ ಪ್ರಯಾಣಕ್ಕೂ ಬಳಕೆ ಆಗುತ್ತಿದ್ದ ವಾಹನ ಆಗಿತ್ತು ಆ ಕಾಲದಲ್ಲಿ.
  ಪರಶುರಾಮಪ್ಪ ಮತ್ತು ಅಜ್ಜಮ್ಮ (ಮಂಜಮ್ಮ) ದಂಪತಿಗೆ ಈ ದೊಡ್ಡ ಗೂರಪ್ಪ ಮತ್ತು ಲಚ್ಚಿರಾಮ ಎಂಬ ಇಬ್ಬರು ಗಂಡು ಮಕ್ಕಳು, ಪರುಶುರಾಮಪ್ಪರ ಎರಡನೆ ಪತ್ನಿ ಎಲ್ಲಮ್ಮರಿಗೆ ಸಣ್ಣಗೂರಪ್ಪ ಮತ್ತು ಸಿದ್ಧಿ, ಕಮಲಿ ಎಂಬ ಇಬ್ಬರು ಹೆಣ್ಣು ಮಕ್ಕಳು.
   ಈ ದೊಡ್ಡ ಗೂರಪ್ಪರಿಗೆ 73 ವರ್ಷ ಅನ್ನುತ್ತಾರೆ (ಜಾಸ್ತಿಯೂ ಇರಬಹುದು) ಇವರು ಈಗ ವಾಸ ಇರುವ ಜೇಡಿಸರಕ್ಕೆ ಬಂದಾಗ ಹಾಲಿ ಇವರು ಸಾಗು ಮಾಡಿರುವ ಜಮೀನಿನಲ್ಲಿ 320 ದೊಡ್ಡ ಗಾತ್ರದ ಬಿದಿರು ಮೆಳೆಗಳು ಇತ್ತಂತೆ ಆಗ ಆ ಹಳ್ಳಿಯಲ್ಲಿ ಕೃಷ್ಣ ಬಳೆಗಾರರು, ಮುತ್ತು ಬಳೆಗಾರರು, ಇಮಾಂ ಸಾಹೇಬರು, ಸೈಯದ್ ಅಹಮದ್ ಸಾಹೇಬರ ನಾಲ್ಕು ಮನೆಗಳು ಮಾತ್ರ ಇತ್ತಂತೆ, ಸಾಗರದ ಪಂಡರಿ ಹೆಗ್ಗಡೆ ಎಂಬುವವರಿಗೆ ಸೇರಿದ ಖಾತೆ ಜಮೀನು ಈ ಕುಟುಂಬಗಳು ಗೇಣಿ ಮಾಡಿಕೊಂಡಿದ್ದರಂತೆ.
  ಇದು ತಾವರೇಹಳ್ಳಿ ಎಂಬ ರೆವಿನ್ಯೂ ಗ್ರಾಮವಾಗಿದ್ದರೂ ಇಲ್ಲಿನ ಹಳ್ಳದಲ್ಲಿ ಜೇಡಿ ಮಣ್ಣು ಯಥೇಚ್ಛವಾಗಿ ಸಿಗುತ್ತಿದ್ದರಿಂದ ಸುತ್ತಮುತ್ತಲಿನ ಹಳ್ಳಿ ಜನ ಜೇಡಿ ಮಣ್ಣು ಸಂಗ್ರಹಿಸಿ ಪುಟ್ ಬಾಲ್ ನಂತ ಉಂಡೆ ಕಟ್ಟಿ ಒಯ್ಯುತ್ತಿದ್ದರಿಂದ ಈ ಹಳ್ಳಿಗೆ ಜೇಡಿಸರ ಅಂತಾಯಿತಂತೆ.
  ಆಗ ಮನೆಗಳಿಗೆ ಬಣ್ಣ ಬಳಿಯುವ, ಸಿಮೆಂಟ್ ಬಳಕೆ ಇಲ್ಲದ ಕಾಲ ಆದ್ದರಿಂದ ಪ್ರತಿ ಮನೆಗೂ ಜೇಡಿ ಉಂಡೆ, ಕೆಮ್ಮಣ್ಣು ಉಂಡೆ, ನೆಲಕ್ಕೆ ಸಗಣಿ ಜೊತೆ ಸಾರಿಸಲು ಕಬ್ಬಿನ ಸಿಪ್ಪೆ ಸುಟ್ಟು ಮಾಡುತ್ತಿದ್ದ ಕರಿ ಉಂಡೆ ಅದನ್ನು ಸಾರಿಸಲು ಅಡಿಕೆ ಹಾಳೆ, ಗುಡಿಸಲು ತೆಂಗಿನ ಕಡ್ಡಿ ಹಿಡಿ ಇಂತವೆಲ್ಲ ಸಂಗ್ರಹಿಸಬೇಕಾಗಿತ್ತು.
   ಆಗ ಆನಂದಪುರಂ ಕೋಟೆ ಶಿಥಿಲ ಆಗಿರಲಿಲ್ಲವಂತೆ ಅಲ್ಲಿ ಒಂದು ದೊಡ್ಡ ಉಡಾ ಇತ್ತಂತೆ ಅದು ಕೋಟೆ ಗೋಡೆ ಮೇಲೆ ಓಡಾಡುತ್ತಿತ್ತು ಅದರ ಒಂದು ಕಿವಿಗೆ ಬಂಗಾರದ ಕಡಗ ಹಾಕಿದ್ದರಂತೆ ಅದನ್ನು ಗೂರಪ್ಪ ಮತ್ತು ಆ ಕಾಲದ ಎಲ್ಲರೂ ನೋಡಿದಾರೆ ಅಂತಾರೆ.
  ಗೂರಪ್ಪ ನನ್ನ ತಂದೆ ಗೆಳೆಯರು ನನ್ನ ರಬ್ಬರ್ ತೋಟದ ಬಾಜುದಾರರು ಹಾಗಾಗಿ ನನಗೂ ಅವರ ಗೆಳೆತನ ಮುಂದುವರಿದಿದೆ.
 ಇದೆಲ್ಲ ಮಾತಾಡುತ್ತಾ ಹೋದಾಗ ತುಂಬಾ ಆಶ್ಚರ್ಯವಾದ ವಿಚಾರ ತಿಳಿದಿದ್ದೇನೆಂದರೆ ದೊಡ್ಡ ಗೂರಪ್ಪ ಸುಮಾರು 2000 ಕಾದಂಬರಿ ಓದಿದ್ದಾರೆ, ಇವರು ಶಿವರಾಂ ಕಾರಂತರ ಮೂಕಜ್ಜಿ ಕನಸು, ಕುವೆಂಪುರವರ ರಾಮಾಯಣ ದರ್ಶನ೦, ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಮಾಸ್ತಿಯವರ ಸಿದ್ದ ವೀರ ರಾಜೇಂದ್ರ, ದಾರಾ ಬೇಂದ್ರೆಯವರ ನಾಕು ತಂತಿ, ಗುಲ್ಷನ್ ನಂದಾರ ಎಲ್ಲಾ ಕಾದಂಬರಿ, ಯಂಡಮುರಿ .... ಹೀಗೆ ಒಂದೊಂದೆ ತಾವು ಓದಿದ ಕಾದಂಬರಿ ನೆನಪು ಮಾಡಿಕೊಳ್ಳುವುದು ಕೇಳಿ ಆಶ್ಚಯ೯ವೊ ಆಶ್ಚಯ೯.
  ನಿತ್ಯ ಕೂಲಿ ಮಾಡಿ ರಾತ್ರಿ ಸೀಮೆ ಎಣ್ಣೆ ಬುಡ್ಡಿ ದೀಪದಲ್ಲಿ ಕಾದಂಬರಿ ಓದುತ್ತಿದ್ದರೆ ಅವರ ಪತ್ನಿ ಕೇಳುತ್ತಾ ಇದ್ದರಂತೆ.
    ಪುಸ್ತಕ ಓದುಗರಿಗೆ ಪುಸ್ತಕ ತಲುಪಿಸಲು ಮೊದಲಿಗಿಂತ ಈಗ ಕಷ್ಟವಾಗಿದೆ, ಓದದವರ ಎದುರು ಪುಸ್ತಕದ ಮೆರವಣಿಗೆ ಮಾತ್ರ ಮಾಡುತ್ತಿದ್ದೇವೆ ಅನ್ನಿಸುತ್ತಿದೆ ಗೂರಪ್ಪರ ಬೇಟಿ ನಂತರ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ