Skip to main content

Blog number 1664. ಕೊರಾನ ಲಾಕ್ ಡೌನ್ ಡೈರಿ 2020, ಲೆಟರ್ ನಂಬರ್ 53. ನಮ್ಮ ಊರಿನ ಬಸವನ ಬೀದಿ ಸೀಲ್ ಡೌನ್

#ಮೂರು_ವರ್ಷದ_ಹಿಂದಿನ_ನೆನಪು

#ಕೊರಾನಾ_ಮುಂಜಾಗೃತೆ_ವಹಿಸದೆ_ಕೊರಾನಕ್ಕೆ_ಶೆಡ್ಡು_ಹೊಡೆಯುತ್ತಿದ್ದ_ನಮ್ಮ_ಊರ_ಜನರು

#ಕೊರಾನಾ_ಕಾರಣದಿಂದ_ಮೊದಲ_ಬಾರಿಗೆ_ಬಸವನ_ಬೀದಿ_ಸೀಲ್_ಡೌನ್ 

#ಲಾಕ್_ಡೌನ್_ಸೀಲ್_ಡೌನ್_ಕೊರಂಟೈನ್_ಜೊತೆ_ಕೊರಾನ_ಕೂಡ_ಮರೆತುಹೋಗಿದೆ.


   2020 ರ ಮಾರ್ಚ್ ತಿಂಗಳಿನಿಂದ ಭಾರತದಲ್ಲಿ ಕೊರಾನಾ ಮಾಡಿದ ಜೀವ ನಷ್ಟ ಆರ್ಥಿಕ ನಷ್ಟಗಳು ಯಾವ ಕಾರಣಕ್ಕೂ ಮರೆಯಲಾರದ ಇತಿಹಾಸದ ಕಪ್ಪು ಚುಕ್ಕೆ ಆದರೆ ಆಧುನಿಕ ಜಗತ್ತಿನ ವೇಗದಲ್ಲಿ ಕೇವಲ ಮೂರು ವರ್ಷದ ಹಿಂದಿನ ಈ ಕೊರಾನಾ ಅದಕ್ಕೆ ಸಂಬಂದ ಪಟ್ಟ ಲಾಕ್ ಡೌನ್, ಸೀಲ್ ಡೌನ್, ಕೊರಂಟೈನ್ ಎಲ್ಲಾ ಮರೆತೇ ಹೋಗಿದೆ.
  ಆಗಲೂ ಕೊರಾನಾ ಸುಳ್ಳು ಅಂತ, ಮಾಸ್ಕ್ ಹಾಕದೆ ಕೇಸ್ ಹಾಕಿದರೂ ಕೇರೇ ಎನ್ನದೆ ಸ್ಥಳಿಯ ಆಡಳಿತ ಬಂದಿಸಿ ಜೈಲಿಗೆ ಕಳಿಸಿದ ರಿಪ್ಪನ್ ಪೇಟೆಯ ಹೋರಟಗಾರ ಟಿ.ಆರ್.ಕೃಷ್ಣಪ್ಪ ಈಗಲೂ ಆ ಕೇಸಿನ ವಿಚಾರಣೆಗೆ ರಿಪ್ಪನ್ ಪೇಟೆಯಿಂದ ಹೊಸನಗರ ನ್ಯಾಯಾಲಯಕ್ಕೆ 25 ಕಿ.ಮಿ ಸೈಕಲ್ ಸವಾರಿ ಮಾಡುತ್ತಾರೆ.
   ನಮ್ಮ ಊರಿನ ಕೇರಳದ ಬೇಬಿ ಕೂಡ ಕೊರಾನಾಗೆ ಸವಾಲು ಹಾಕಿ ಆರಾಮಾಗಿ ಇದ್ದಾರೆ ಇದರ ನಡುವೆ ಅನೇಕರು ಕೊರಾನದಿಂದ ನಮ್ಮ ಊರಲ್ಲಿ ಜೀವ ಕಳೆದುಕೊಂಡವರಿದ್ದಾರೆ.
   ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹೊರಗಿನವರಾರು ಊರ ಒಳಗೆ ಬರದಂತೆ ಪ್ರಾರಂಭದಲ್ಲಿ ಊರ ಪ್ರವೇಶದ ರಸ್ತೆಗೆ ಬೇಲಿ ಹಾಕಿದರು, ಮರ ಕಡಿದು ರಸ್ತೆ ಬಂದ್ ಮಾಡಿದರು ನಂತರ ಸರ್ಕಾರವೇ ಲಾಕ್ ಡೌನ್ ಘೋಷಿಸಿದಾಗ ಎಲ್ಲ ಚಟುವಟಿಕೆ ಸ್ಥಬ್ದವಾಗಿತ್ತು.
   ಮೂರು ವರ್ಷದ ಹಿಂದೆ ಇದೇ ದಿನ ನಮ್ಮ ಆನಂದಪುರಂನಲ್ಲಿ ಬಸವನ ಬೀದಿ ಎಂಬಲ್ಲಿ ಒಂದೇ ಮನೆಯಲ್ಲಿನ ನಾಲ್ಕು ಜನರಿಗೆ ಕೊರಾನಾ ಪಾಸಿಟಿವ್ ಆಗಿ ಇಡೀ ಬೀದಿ ಸೀಲ್ ಡೌನ್ ಮಾಡಿದ್ದರು ಅವತ್ತಿನ ಘಟನೆ ಇಡೀ ಊರನ್ನು ಭಯಬೀತಗೊಳಿಸಿತ್ತು ಕೊರಾನಾ ಮಹಾ ಮಾರಿಗೆ ನಿರ್ಲಕ್ಷ್ಯ ಮಾಡಿದವರು ತಕ್ಷಣ ಬದಲಾದರು, ಮಕ್ಕಳುಗಳನ್ನು ಹುಡುಕಿ ಹಿಡಿದು ಮನೆ ಒಳಗೆ ಭದ್ರ ಮಾಡಿದರು, ಪರಸ್ಪರ ಗಂಡ ಹೆಂಡತಿ ಬುದ್ದಿ ಹೇಳಿಕೊಂಡರು.
  ನಮ್ಮ ಕೆಲಸದಾಕೆ ಈ ಬೀದಿಯವಳು ಅವಳಿಗೆ ಅವರ ಮಕ್ಕಳೆಲ್ಲ ಇಡೀ ಬೀದಿ ಸೀಲ್ ಡೌನ್ ಮಾಡಿದ ಬಗ್ಗೆ ತಿಳಿಸಿ ಬೇಗ ಬಂದು ಮನೆ ಸೇರಲು ಪೋನ್ ಮಾಡಿದಾಗ ಆಕೆಯ ರೋದನೆ ಅಳು ನಮ್ಮ ಕಣ್ಣಲ್ಲೂ ನೀರು ತರಿಸಿತ್ತು.
  ಎರೆಡು ಸಾವಿರ ಹಣ ನೀಡಿ ಅವಳ ಕುಟುಂಬಕ್ಕೆ ಬೇಕಾದ ಆಹಾರ ಸಾಮಗ್ರಿ ಜೊತೆ ವಿಷಾದದಿಂದ ಅವಳಿಗೆ ಕಳಿಸಿದೆವು, ಅವಳು ಹೋಗುವಾಗ ಈ ಕಾಯಿಲೆ ಅವರ ಬೀದಿಗೆ ತಂದವರ ಮೇಲೆ ಶಾಪ ಹಾಕುತ್ತಾ ಹೋದಳು.
   ಮರುದಿನ ಪೋನ್ ಮಾಡಿದಾಗ ಇಡೀ ಬೀದಿ ಪ್ರವೇಶ ದ್ವಾರ ಪೋಲಿಸರು, ಕಂದಾಯ ಇಲಾಖೆಯವರು, ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ಬಂದ್ ಮಾಡಿ ಯಾರೂ ಈ ಬೀದಿ ಒಳಗೆ ಹೋಗದಂತೆ ಮತ್ತು ಅವರ ಬೀದಿಯವರು ಹೊರ ಬಾರದಂತೆ ಮಾಡಿದ್ದಾಗಿ ಕೆಲವು ದಾನಿಗಳು ಹಾಲು ಇತ್ಯಾದಿ ದಿನಸಿ ಕಿಟ್ ನೀಡಿರುವುದಾಗಿ ತಿಳಿಸಿದಳು ನಾವೆಲ್ಲ ಹೆಚ್ಚು ಜಾಗೃತೆ ವಹಿಸಬೇಕು ಅಂದೆವು.
   ಅದರ ಮರುದಿನ ಕೆಲ ದೂರುಗಳು ಅಂದರೆ ಹಾಲು ,ಕಿಟ್ ಇತ್ಯಾದಿ ತಾರತಮ್ಯಗಳ ಬಗ್ಗೆ ತಿಳಿಸಿದಳು ಈ ಮಧ್ಯೆ ಪತ್ರಿಕೆ ಟೀವಿ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಊರ ಸೀಲ್ ಡೌನ್ ದೊಡ್ಡ ಬ್ರೇಕಿಂಗ್ ನ್ಯೂಸ್ ಆಯಿತು.
 ಅವತ್ತಿನ ನನ್ನ ಬ್ಲಾಗ್ ದಾಖಲೆ ಇಲ್ಲಿ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2023/07/blog-number-1653-2020-52-13-2020.html
   ಮೂರನೆ ದಿನ ಫೋನ್ ರಿಂಗಾದರೂ ಯಾರೂ ರಿಸೀವ್ ಮಾಡಲಿಲ್ಲ ಬಹುಶಃ ಇವಳಿಗೂ ಕೊರಾನಾ ಪಾಸಿಟೀವ್ ಬಂದು ಶಿವಮೊಗ್ಗಕ್ಕೆ ಕೊರೆಂಟೈನ್ ಗೆ ಒಯ್ದರಾ? ಎಂದು ಅನುಮಾನ ಉಂಟಾಗಿತ್ತು.
  ಸಂಜೆ ಕತ್ತಲಾದ ಮೇಲೆ ಅವಳೇ ಪೋನ್ ಮಾಡಿದಳು ... ಯಾಕಮ್ಮಾ ಫೋನ್ ತೆಗೆಯಲಿಲ್ಲ ಅಂದದ್ದಕ್ಕೆ ಅವಳ ಉತ್ತರ ... ಅಣ್ಣಾ ಫೋನ್ ಮನೇಲೆ ಇಟ್ಟು ಗದ್ದೆ ಕಳೆ ಕೆಲಸಕ್ಕೆ ನಮ್ಮ ಕೇರಿಯ ಹೆಂಗಸರ ಜೊತೆ ಗುಂಡಿಬೈಲಿಗೆ ಹೋಗಿದ್ದೆ!! ಅಂದಾಗ ನನಗೆ ಆಶ್ಚರ್ಯವಾಯಿತು, ಅಲ್ಲಮ್ಮ ಇಡೀ ಬೀದಿ ಸೀಲ್ ಡೌನ್ ಮಾಡಿದಾರೆ ನೀವು ಹೆಂಗೆ ಹೊರ ಹೋಗಿದ್ದು ಅಂದದ್ದಕ್ಕೆ ಅವಳ ಉತ್ತರ ... ಬಿಡಣ್ಣ ಇವರೆಲ್ಲ ಬೀದಿ  ಪ್ರಾರಂಭದ ರಸ್ತೆಯಲ್ಲಿ ಗೇಟ್ ಮಾಡಿಕೊಂಡು ಪೋಟೋ ಹೊಡಕೊಂಡು ಮೊಬೈಲ್ ನಲ್ಲಿ ಪೋಸು ಕೊಡುತ್ತಾರೆ ಅಷ್ಟೆ... ನಮ್ಮ ಹೊಟ್ಟಿ ಪಾಡು ನೋಡೋರು ಯಾರು? ಅದಕ್ಕೆ ನಮ್ಮ ಮನೆ ಹಿಂದಿನ ಬೇಲಿ ದಾಟಿ ಮಸೀದಿ ಪಕ್ಕದಲ್ಲಿದ್ದ ರಸ್ತೆ ಮೂಲಕ ಜಮೀನಿಗೆ  ಹೋಗ್ತಿದೀವಿ... ಕತ್ತಲಾದ ಮೇಲೆ ಮನೆಗೆ ವಾಪಾಸು ಬರ್ತೀವಿ... ಅದಕ್ಕೆ ಮನೇಲೆ ಫೋನ್ ಇಟ್ಟು ಹೋಗ್ತೀವಿ (ಬಹುಶಃ ಸರಕಾರದವರಿಗೆ ದಾಖಲೆಗಿರಬಹುದು) ಅಂತ ಹೇಳುವುದು ಕೇಳಿದಾಗ ಮೂರು ದಿನದ ಹಿಂದೆ ಸೀಲ್ ಡೌನ್ ಸುದ್ದಿ ಕೇಳಿ ಅತ್ತೂ ಕರೆದು ಹೋದ ಮಂಜುಳಮ್ಮ ಇವಳೇನಾ ಅನ್ನಿಸಿತ್ತು.
 ಇವತ್ತು ಮೂರನೇ ವರ್ಷ ಹಾಗಂತ ಯಾರಿಗೂ ಅದು ನೆನಪಿಲ್ಲ Mass memories always less ಎಂಬ ಗಾದೆ ಸುಳ್ಳಲ್ಲ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ