Skip to main content

Blog number 1664. ಕೊರಾನ ಲಾಕ್ ಡೌನ್ ಡೈರಿ 2020, ಲೆಟರ್ ನಂಬರ್ 53. ನಮ್ಮ ಊರಿನ ಬಸವನ ಬೀದಿ ಸೀಲ್ ಡೌನ್

#ಮೂರು_ವರ್ಷದ_ಹಿಂದಿನ_ನೆನಪು

#ಕೊರಾನಾ_ಮುಂಜಾಗೃತೆ_ವಹಿಸದೆ_ಕೊರಾನಕ್ಕೆ_ಶೆಡ್ಡು_ಹೊಡೆಯುತ್ತಿದ್ದ_ನಮ್ಮ_ಊರ_ಜನರು

#ಕೊರಾನಾ_ಕಾರಣದಿಂದ_ಮೊದಲ_ಬಾರಿಗೆ_ಬಸವನ_ಬೀದಿ_ಸೀಲ್_ಡೌನ್ 

#ಲಾಕ್_ಡೌನ್_ಸೀಲ್_ಡೌನ್_ಕೊರಂಟೈನ್_ಜೊತೆ_ಕೊರಾನ_ಕೂಡ_ಮರೆತುಹೋಗಿದೆ.


   2020 ರ ಮಾರ್ಚ್ ತಿಂಗಳಿನಿಂದ ಭಾರತದಲ್ಲಿ ಕೊರಾನಾ ಮಾಡಿದ ಜೀವ ನಷ್ಟ ಆರ್ಥಿಕ ನಷ್ಟಗಳು ಯಾವ ಕಾರಣಕ್ಕೂ ಮರೆಯಲಾರದ ಇತಿಹಾಸದ ಕಪ್ಪು ಚುಕ್ಕೆ ಆದರೆ ಆಧುನಿಕ ಜಗತ್ತಿನ ವೇಗದಲ್ಲಿ ಕೇವಲ ಮೂರು ವರ್ಷದ ಹಿಂದಿನ ಈ ಕೊರಾನಾ ಅದಕ್ಕೆ ಸಂಬಂದ ಪಟ್ಟ ಲಾಕ್ ಡೌನ್, ಸೀಲ್ ಡೌನ್, ಕೊರಂಟೈನ್ ಎಲ್ಲಾ ಮರೆತೇ ಹೋಗಿದೆ.
  ಆಗಲೂ ಕೊರಾನಾ ಸುಳ್ಳು ಅಂತ, ಮಾಸ್ಕ್ ಹಾಕದೆ ಕೇಸ್ ಹಾಕಿದರೂ ಕೇರೇ ಎನ್ನದೆ ಸ್ಥಳಿಯ ಆಡಳಿತ ಬಂದಿಸಿ ಜೈಲಿಗೆ ಕಳಿಸಿದ ರಿಪ್ಪನ್ ಪೇಟೆಯ ಹೋರಟಗಾರ ಟಿ.ಆರ್.ಕೃಷ್ಣಪ್ಪ ಈಗಲೂ ಆ ಕೇಸಿನ ವಿಚಾರಣೆಗೆ ರಿಪ್ಪನ್ ಪೇಟೆಯಿಂದ ಹೊಸನಗರ ನ್ಯಾಯಾಲಯಕ್ಕೆ 25 ಕಿ.ಮಿ ಸೈಕಲ್ ಸವಾರಿ ಮಾಡುತ್ತಾರೆ.
   ನಮ್ಮ ಊರಿನ ಕೇರಳದ ಬೇಬಿ ಕೂಡ ಕೊರಾನಾಗೆ ಸವಾಲು ಹಾಕಿ ಆರಾಮಾಗಿ ಇದ್ದಾರೆ ಇದರ ನಡುವೆ ಅನೇಕರು ಕೊರಾನದಿಂದ ನಮ್ಮ ಊರಲ್ಲಿ ಜೀವ ಕಳೆದುಕೊಂಡವರಿದ್ದಾರೆ.
   ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಹೊರಗಿನವರಾರು ಊರ ಒಳಗೆ ಬರದಂತೆ ಪ್ರಾರಂಭದಲ್ಲಿ ಊರ ಪ್ರವೇಶದ ರಸ್ತೆಗೆ ಬೇಲಿ ಹಾಕಿದರು, ಮರ ಕಡಿದು ರಸ್ತೆ ಬಂದ್ ಮಾಡಿದರು ನಂತರ ಸರ್ಕಾರವೇ ಲಾಕ್ ಡೌನ್ ಘೋಷಿಸಿದಾಗ ಎಲ್ಲ ಚಟುವಟಿಕೆ ಸ್ಥಬ್ದವಾಗಿತ್ತು.
   ಮೂರು ವರ್ಷದ ಹಿಂದೆ ಇದೇ ದಿನ ನಮ್ಮ ಆನಂದಪುರಂನಲ್ಲಿ ಬಸವನ ಬೀದಿ ಎಂಬಲ್ಲಿ ಒಂದೇ ಮನೆಯಲ್ಲಿನ ನಾಲ್ಕು ಜನರಿಗೆ ಕೊರಾನಾ ಪಾಸಿಟಿವ್ ಆಗಿ ಇಡೀ ಬೀದಿ ಸೀಲ್ ಡೌನ್ ಮಾಡಿದ್ದರು ಅವತ್ತಿನ ಘಟನೆ ಇಡೀ ಊರನ್ನು ಭಯಬೀತಗೊಳಿಸಿತ್ತು ಕೊರಾನಾ ಮಹಾ ಮಾರಿಗೆ ನಿರ್ಲಕ್ಷ್ಯ ಮಾಡಿದವರು ತಕ್ಷಣ ಬದಲಾದರು, ಮಕ್ಕಳುಗಳನ್ನು ಹುಡುಕಿ ಹಿಡಿದು ಮನೆ ಒಳಗೆ ಭದ್ರ ಮಾಡಿದರು, ಪರಸ್ಪರ ಗಂಡ ಹೆಂಡತಿ ಬುದ್ದಿ ಹೇಳಿಕೊಂಡರು.
  ನಮ್ಮ ಕೆಲಸದಾಕೆ ಈ ಬೀದಿಯವಳು ಅವಳಿಗೆ ಅವರ ಮಕ್ಕಳೆಲ್ಲ ಇಡೀ ಬೀದಿ ಸೀಲ್ ಡೌನ್ ಮಾಡಿದ ಬಗ್ಗೆ ತಿಳಿಸಿ ಬೇಗ ಬಂದು ಮನೆ ಸೇರಲು ಪೋನ್ ಮಾಡಿದಾಗ ಆಕೆಯ ರೋದನೆ ಅಳು ನಮ್ಮ ಕಣ್ಣಲ್ಲೂ ನೀರು ತರಿಸಿತ್ತು.
  ಎರೆಡು ಸಾವಿರ ಹಣ ನೀಡಿ ಅವಳ ಕುಟುಂಬಕ್ಕೆ ಬೇಕಾದ ಆಹಾರ ಸಾಮಗ್ರಿ ಜೊತೆ ವಿಷಾದದಿಂದ ಅವಳಿಗೆ ಕಳಿಸಿದೆವು, ಅವಳು ಹೋಗುವಾಗ ಈ ಕಾಯಿಲೆ ಅವರ ಬೀದಿಗೆ ತಂದವರ ಮೇಲೆ ಶಾಪ ಹಾಕುತ್ತಾ ಹೋದಳು.
   ಮರುದಿನ ಪೋನ್ ಮಾಡಿದಾಗ ಇಡೀ ಬೀದಿ ಪ್ರವೇಶ ದ್ವಾರ ಪೋಲಿಸರು, ಕಂದಾಯ ಇಲಾಖೆಯವರು, ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿ ಬಂದ್ ಮಾಡಿ ಯಾರೂ ಈ ಬೀದಿ ಒಳಗೆ ಹೋಗದಂತೆ ಮತ್ತು ಅವರ ಬೀದಿಯವರು ಹೊರ ಬಾರದಂತೆ ಮಾಡಿದ್ದಾಗಿ ಕೆಲವು ದಾನಿಗಳು ಹಾಲು ಇತ್ಯಾದಿ ದಿನಸಿ ಕಿಟ್ ನೀಡಿರುವುದಾಗಿ ತಿಳಿಸಿದಳು ನಾವೆಲ್ಲ ಹೆಚ್ಚು ಜಾಗೃತೆ ವಹಿಸಬೇಕು ಅಂದೆವು.
   ಅದರ ಮರುದಿನ ಕೆಲ ದೂರುಗಳು ಅಂದರೆ ಹಾಲು ,ಕಿಟ್ ಇತ್ಯಾದಿ ತಾರತಮ್ಯಗಳ ಬಗ್ಗೆ ತಿಳಿಸಿದಳು ಈ ಮಧ್ಯೆ ಪತ್ರಿಕೆ ಟೀವಿ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಊರ ಸೀಲ್ ಡೌನ್ ದೊಡ್ಡ ಬ್ರೇಕಿಂಗ್ ನ್ಯೂಸ್ ಆಯಿತು.
 ಅವತ್ತಿನ ನನ್ನ ಬ್ಲಾಗ್ ದಾಖಲೆ ಇಲ್ಲಿ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2023/07/blog-number-1653-2020-52-13-2020.html
   ಮೂರನೆ ದಿನ ಫೋನ್ ರಿಂಗಾದರೂ ಯಾರೂ ರಿಸೀವ್ ಮಾಡಲಿಲ್ಲ ಬಹುಶಃ ಇವಳಿಗೂ ಕೊರಾನಾ ಪಾಸಿಟೀವ್ ಬಂದು ಶಿವಮೊಗ್ಗಕ್ಕೆ ಕೊರೆಂಟೈನ್ ಗೆ ಒಯ್ದರಾ? ಎಂದು ಅನುಮಾನ ಉಂಟಾಗಿತ್ತು.
  ಸಂಜೆ ಕತ್ತಲಾದ ಮೇಲೆ ಅವಳೇ ಪೋನ್ ಮಾಡಿದಳು ... ಯಾಕಮ್ಮಾ ಫೋನ್ ತೆಗೆಯಲಿಲ್ಲ ಅಂದದ್ದಕ್ಕೆ ಅವಳ ಉತ್ತರ ... ಅಣ್ಣಾ ಫೋನ್ ಮನೇಲೆ ಇಟ್ಟು ಗದ್ದೆ ಕಳೆ ಕೆಲಸಕ್ಕೆ ನಮ್ಮ ಕೇರಿಯ ಹೆಂಗಸರ ಜೊತೆ ಗುಂಡಿಬೈಲಿಗೆ ಹೋಗಿದ್ದೆ!! ಅಂದಾಗ ನನಗೆ ಆಶ್ಚರ್ಯವಾಯಿತು, ಅಲ್ಲಮ್ಮ ಇಡೀ ಬೀದಿ ಸೀಲ್ ಡೌನ್ ಮಾಡಿದಾರೆ ನೀವು ಹೆಂಗೆ ಹೊರ ಹೋಗಿದ್ದು ಅಂದದ್ದಕ್ಕೆ ಅವಳ ಉತ್ತರ ... ಬಿಡಣ್ಣ ಇವರೆಲ್ಲ ಬೀದಿ  ಪ್ರಾರಂಭದ ರಸ್ತೆಯಲ್ಲಿ ಗೇಟ್ ಮಾಡಿಕೊಂಡು ಪೋಟೋ ಹೊಡಕೊಂಡು ಮೊಬೈಲ್ ನಲ್ಲಿ ಪೋಸು ಕೊಡುತ್ತಾರೆ ಅಷ್ಟೆ... ನಮ್ಮ ಹೊಟ್ಟಿ ಪಾಡು ನೋಡೋರು ಯಾರು? ಅದಕ್ಕೆ ನಮ್ಮ ಮನೆ ಹಿಂದಿನ ಬೇಲಿ ದಾಟಿ ಮಸೀದಿ ಪಕ್ಕದಲ್ಲಿದ್ದ ರಸ್ತೆ ಮೂಲಕ ಜಮೀನಿಗೆ  ಹೋಗ್ತಿದೀವಿ... ಕತ್ತಲಾದ ಮೇಲೆ ಮನೆಗೆ ವಾಪಾಸು ಬರ್ತೀವಿ... ಅದಕ್ಕೆ ಮನೇಲೆ ಫೋನ್ ಇಟ್ಟು ಹೋಗ್ತೀವಿ (ಬಹುಶಃ ಸರಕಾರದವರಿಗೆ ದಾಖಲೆಗಿರಬಹುದು) ಅಂತ ಹೇಳುವುದು ಕೇಳಿದಾಗ ಮೂರು ದಿನದ ಹಿಂದೆ ಸೀಲ್ ಡೌನ್ ಸುದ್ದಿ ಕೇಳಿ ಅತ್ತೂ ಕರೆದು ಹೋದ ಮಂಜುಳಮ್ಮ ಇವಳೇನಾ ಅನ್ನಿಸಿತ್ತು.
 ಇವತ್ತು ಮೂರನೇ ವರ್ಷ ಹಾಗಂತ ಯಾರಿಗೂ ಅದು ನೆನಪಿಲ್ಲ Mass memories always less ಎಂಬ ಗಾದೆ ಸುಳ್ಳಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...