Skip to main content

Blog number 1666. ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮಿಶ್ರ ಆಗಿದೆ ಎಂಬ ಅಪಪ್ರಚಾರ ನಿವಾರಣೆ ಆಗಬೇಕಾಗಿದೆ ಹಾಗಾದರೆ ಅಕ್ಕಿ ರೂಪದ ಈ ಕೃತಕ ಅಕ್ಕಿ ಯಾವುದು?

#ಪಡಿತರ_ಅಕ್ಕಿಯಲ್ಲಿ_ಪ್ಲಾಸ್ಟಿಕ್_ಅಕ್ಕಿ_ಮಿಶ್ರಣ_ಎಂಬ_ತಪ್ಪು_ಮಾಹಿತಿ

#ಹಾಗಾದರೆ_ಪಡಿತರ_ಅಕ್ಕಿಯಲ್ಲಿ_ಅಕ್ಕಿ_ಆಕೃತಿಯ_ವಸ್ತು_ಯಾವುದು?

#ಇದು_ಬಡತನ_ರೇಖೆಗಿಂತ_ಕೆಳಗಿನ_ವರ್ಗದವರಿಗೆ_ರಕ್ತಹೀನತೆ_ನಿವಾರಿಸಲು_ಕೇಂದ್ರ_ಸರ್ಕಾರದ_ಬಲವರ್ದಿತ_ಅಕ್ಕಿ

#FRK_Fortified_Rice_Kernel.


  ಎಲ್ಲಾ ದೇಶದ ಸರ್ಕಾರಗಳು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಹೆಚ್ಚು ಶಕ್ತಿ ನೀಡುವ, ಹಸಿವು ನೀಗಿಸುವ ಸಲುವಾಗಿ ಅನೇಕ ಕಾರ್ಯಕಮ ಹಮ್ಮಿಕೊಳ್ಳುತ್ತದೆ ಅದರಂತೆ ನಮ್ಮ ದೇಶದಲ್ಲಿ 2023ರ ಮಾರ್ಚ್ ಅಂತ್ಯದಲ್ಲಿ 291 ಜಿಲ್ಲೆಗಳಲ್ಲಿ ಪಡಿತರ ಅಕ್ಕಿ ಮತ್ತು ಗೋದಿಯಲ್ಲಿ ನಿಗದಿತ ಸೂಕ್ಷ್ಮ ಪೋಷಕಾಂಶಗಳಾದ ಕಬ್ಬಿಣ, ಪೋಲಿಕ್ ಆಮ್ಲ ಮತ್ತು ವಿಟಮಿನ್ ಬಿ- 12 ಬಲವರ್ದಿತ (ಇಂಗ್ಲಿಷ್ ನಲ್ಲಿ Fortified) ಮಿಶ್ರಣದ ಪುಡಿ ಮಿಶ್ರ ಮಾಡಿ ವಿತರಿಸುತ್ತಿದೆ ಈ ಮೂಲಕ ಬಡವರಲ್ಲಿ ರಕ್ತ ಹೀನತೆ ನಿವಾರಿಸುವ ಯೋಜನೆ ಭಾರತ ಸರ್ಕಾರದ್ದು.
  ಸಾರ್ವಜನಿಕರಲ್ಲಿ ಇದು ಪಡಿತರ ಅಕ್ಕಿ ಮತ್ತು ಗೋದಿ ಹಾಳಾಗದಂತೆ ಮಿಶ್ರ ಮಾಡಿದ ಕೀಟನಾಶಕ ಪ್ರಡಿ ಎಂಬ ಅಪಪ್ರಚಾರವಾಗಿತ್ತು.
   ಇದರಿಂದ ಅಕ್ಕಿ ಗೋದಿ ಚೆನ್ನಾಗಿ ತೊಳೆದು ಬೇಯಿಸುವುದರಿಂದ ಬಲವರ್ದಿತ ಪುಡಿ ಜನರ ದೇಹ ಸೇರದೆ ಗಟಾರಕ್ಕೆ ಹರಿದು ಹೋಗಿರುವುದರಿಂದ (ಭಾರತೀಯರು ಅಕ್ಕಿ ತೊಳೆಯದೆ ಅನ್ನ ಮಾಡುವುದಿಲ್ಲ) ಸರ್ಕಾರ ಪಡಿತರ ಅಕ್ಕಿ ಉತ್ಪಾದನೆಯಲ್ಲಿ ಬರುವ ನುಚ್ಚು (Broken Rice) ಹಿಟ್ಟು ಮಾಡಿ ಅದಕ್ಕೆ ವಿಟಮಿನ್ ಮತ್ತು ಖನಿಜಗಳ ಪ್ರಿಮಿಕ್ಸ್ ಅನ್ನು ಸೇರಿಸಿ ಅಕ್ಕಿ ಧಾನ್ಯ ಹೋಲುವ ಬಲವರ್ದಿ ತ ಅಕ್ಕಿ ಕಾಳು (FRK) ಉತ್ಪಾದಿಸಲು ಎಕ್ಸ್ ಟ್ರೂಡರ್ ಯಂತ್ರ ಬಳಸಲಾಗುತ್ತಿದೆ.
  ಕೃತಕ ಅಕ್ಕಿಯಂತೆ ಕಾಣುವ ಈ ಬಲವರ್ದಿತ ಒಂದು ಕಿಲೋ ಅಕ್ಕಿಯಲ್ಲಿ 28 mg ಯಿಂದ 42.5 mg ಕಬ್ಬಿಣಾಂಶ, 75 mg ಯಿಂದ 125 mg ಪೋಲಿಕ್ ಆಮ್ಲ, 0.75 mg ಯಿಂದ 1.25 mg ವಿಟಮಿನ್ B - 12 ಇರುತ್ತದೆ ಇಂತಹ ಒಂದು ಕಿಲೋ ಅಕ್ಕಿ ನೂರು ಕಿಲೋ ಅಕ್ಕಿಗೆ ಮಿಶ್ರ ಮಾಡಿ ಪಡಿತರ ವ್ಯವಸ್ಥೆಯಲ್ಲಿ ವಿತರಿಸುತ್ತಿದ್ದಾರೆ.
   ಪಡಿತರ ಅಕ್ಕಿಯಲ್ಲಿ ಮಿಶ್ರಣ ಮಾಡುವ ಈ ಅಕ್ಕಿ ಬಗ್ಗೆ ಅಪನಂಬಿಕೆ ಉಂಟಾಗಿ ಇದು ಪ್ಲಾಸ್ಟಿಕ್ ಅಕ್ಕಿ ಎಂಬ ಅಪಪ್ರಚಾರವೂ ಪ್ರಾರಂಭ ಆಗಿದೆ.
  ಸರ್ಕಾರಗಳು ಈ ಬಗ್ಗೆ ಸೂಕ್ತ ತಿಳುವಳಿಕೆ ನೀಡುವುದರಲ್ಲಿ ಮುಂದಾಗದಿರುವುದು ಆಶ್ಚರ್ಯದ ಸಂಗತಿ ಆಗಿದೆ.
   ಪಡಿತರ ಅಕ್ಕಿ ವಿತರಣೆಯ ಸೆಣಬಿನ ಚೀಲದ ಮೇಲೆ ('+ F ' ) ಎಂಬ ಲೋಗೋ ಮತ್ತು fortified with Iron,Folic Acid and Vitamin B12 ಅಂತ ನಮೂದಿಸಿರುತ್ತಾರೆ.
  ಸಾರ್ವಜನಿಕರಲ್ಲಿ ಈ ಮಾಹಿತಿ ಹೆಚ್ಚು ಪ್ರಚಾರ ನೀಡಬೇಕಾಗಿದೆ ಈ ಮೂಲಕ ಸರ್ಕಾರದ ಬಡ ಜನರ ರಕ್ತ ಹೀನತೆ ನಿವಾರಿಸುವ ಈ ಬಲವರ್ದಿತ ಅಕ್ಕಿ ರೂಪದ ಪಾರ್ಟಿಪೈಡ್ ರೈಸ್ ಕಾರ್ನಿಲ್ ಗಳನ್ನು ಪ್ಲಾಸ್ಟಿಕ್ ಅಕ್ಕಿ ಎಂದು ತಪ್ಪು ತಿಳಿಯ ಬಾರದೆಂದು ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ.
  

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...