Skip to main content

Blog number 1658. ಗೋವಿನಲ್ಲಿ ಸಿಗುವ ಪ್ರಾಣಿಜನ್ಯ ಅಪರೂಪದ ಆಯುರ್ವೇದ ಗೋರೊಚನದ ಇವತ್ತಿನ ಬೆಲೆ ಕಿಲೋಗೆ 20 ಲಕ್ಷ ರೂಪಾಯಿ!?

#ಗೋರೊಚನ

#ಇದು_ಪ್ರಾಣಿಜನ್ಯ_ಆಯುರ್ವೇದ

#ಶುದ್ದ_ಗೋರೋಚನದ_ಬೆಲೆ_ಗ್ರಾಮಿಗೆ_ಎರೆಡು_ಸಾವಿರ

#ಆನೆ_ಗೋವು_ಮತ್ತು_ಹಿಮಾಲಯದ_ಓಕ್_ನಲ್ಲಿ_ಲಭ್ಯ

#ಔಷದಿಯಾಗಿ_ಸುವಾಸನ_ದ್ರವ್ಯದಲ್ಲಿ_ತಂತ್ರವಿದ್ಯೆಯ_ವಶೀಕರಣದಲ್ಲಿ_ಅದೃಷ್ಟ_ಎಂಬ_ನಂಬಿಕೆಯಲ್ಲಿ_ಬಳಕೆ

#ಮಲೆನಾಡು_ಗಿಡ್ಡ_ತಳಿಯ_ಜಾನುವಾರಲ್ಲಿ_ಹೆಚ್ಚು.

#ಆದುನಿಕ_ವೈದ್ಯಕೀಯ_ಶಸ್ತ್ರಚಿಕಿತ್ಸಾ_ವಿಧಾನ_ಬಳಕೆಯ_ಸಾವಿರಾರು_ವರ್ಷದ_ಹಿಂದೆಯೇ
#ಭಾರತೀಯರಿಗೆ_ಇದೆಲ್ಲದರ_ಅರಿವು_ಬಳಕೆ_ಗೊತ್ತಿರುವುದು_ಸೋಜಿಗ_ವಿಷಯ.

    ಮೊದಲ ದರ್ಜೆಯ ಗೋರೊಚನ ಆನೆಯ ಮೆದುಳಿನಿಂದ ಪಡೆಯುತ್ತಿದ್ದರೆಂದು ಪುರಾತನ ಕಾಲದಿಂದಲೂ ನಂಬಿಕೆ ಇದೆ ಇದನ್ನು ಬಿಟ್ಟರೆ ಗೋವಿನ ಪಿತ್ತ ಕೋಶದಿಂದ ಪಡೆಯುವುದು ಸದ್ಯದ ಬಳಕೆಯ ಮಾರ್ಗವಾಗಿದೆ.
   ಹಿಮಾಲಯ ತಪ್ಪಲಲ್ಲಿ, ನೇಪಾಳದಲ್ಲಿ ಓಕ್ ಪ್ರಾಣಿಯಲ್ಲಿ ಮತ್ತು ಗೋವುಗಳಲ್ಲಿ ಸಿಗುತ್ತದೆ ಆದರೂ ಎಲ್ಲಾ ಗೋವುಗಳಲ್ಲಿ ಇದು ಸಿಗುವುದಿಲ್ಲ.
  ಪಶ್ಚಿಮ ಘಟ್ಟಗಳ ಮಲೆನಾಡು ಗಿಡ್ಡ ತಳಿಯಲ್ಲಿ ಗೋರೋಚನ ಹೆಚ್ಚು ಸಿಗುತ್ತದೆ ಎಂಬ ನಂಬಿಕೆ ಸತ್ತ ಗೋವಿನ ಚರ್ಮ ಸುಲಿಯುವವರಲ್ಲಿ ಮತ್ತು ಅದನ್ನು ಖರೀದಿಸುವರಲ್ಲಿ ಇತ್ತು.
   ಗೋವಿನ ಪಿತ್ತ ಕೋಶದ ಮೇಲೆ ದೊಡ್ಡ ಗಾತ್ರದ ಅಡಿಕೆಯಂತ ಗಂಟುಗಳು ಅಥವ ಕಲ್ಲುಗಳೆ ಗೋರೋಚನ.
  ಹಳದಿ ಮೇಣದ ರೂಪದ ಇದು ಒಣಗಿದ ನಂತರ ಗಟ್ಟಿಯಾಗಿ ಕೆಂಪು ಮತ್ತು ಕಂದು ಬಣ್ಣವಾಗುತ್ತದೆ.
  ಇದು ಭಾರತೀಯ ಪುರಾತನ ಕಾಲದಿಂದಲೂ ಬಳಕೆಯ ಆಯುರ್ವೇದ ಔಷದಿ ಆಗಿದೆ ಮನೋವೈದ್ಯಕೀಯ ಅಸ್ವಸ್ಥತೆಗೆ ಮತ್ತು ವಿಷಕ್ಕೆ ಪ್ರತಿ ವಿಷವಾಗಿ ಬಳಸುತ್ತಿದ್ದರು.
  ಇದನ್ನು ಪರಿಮಳ ದ್ರವ್ಯ ತಯಾರಿಕೆಗೆ ಮತ್ತು ತಂತ್ರ ವಿದ್ಯೆಯಲ್ಲಿ ವಶೀಕರಣಕ್ಕೆ ಬಳಸುತ್ತಿದ್ದರಂತೆ.
   ಇದು ಎಲ್ಲಾ ಗೋವುಗಳಲ್ಲೂ ಸಿಗುವುದಿಲ್ಲ ಎಂಬುದು ಮತ್ತು ಈ ಪ್ರಾಣಿಜನ್ಯ ಆಯುರ್ವೇದ ಅಪರೂಪ ಎಂಬ ಕಾರಣದಿಂದ ಇದಕ್ಕೆ ಹೆಚ್ಚು ಬೆಲೆ ಇದೆ.
  ಗೋರೊಚನ ಇರುವ ಗೋವುಗಳು ನಿದ್ದೆಯಲ್ಲಿ ಗೊರಕೆ ಹೊಡೆಯುತ್ತದೆ, ಅದು ಶ್ರೇಷ್ಠ ಎಂಬ ಭಾವನೆ ಇದೆ ಆದರೆ ಆಧುನಿಕ ವೈದ್ಯಶಾಸ್ತ್ರದಲ್ಲಿ ಯಾವ ಗೋವಿನ ಪಿತ್ತಕೋಶದಲ್ಲಿ ಲಿವರ್ ಸೊರ್ಯಾಸಿಸ್ ಆಗಿರುತ್ತದೆ ಅಲ್ಲಿ ಅದನ್ನು ಗುಣಪಡಿಸಲು ಪ್ರತಿ ಔಷದವಾಗಿ ಗೋರೋಚನದ ಗಡ್ಡೆಗಳು ಉತ್ಪತಿ ಆಗುತ್ತದೆ ಎನ್ನುತ್ತಾರೆ.
  ಶಸ್ತ್ರಚಿಕಿತ್ಸಾ ವಿಧಾನ ಬಳಕೆಗೂ ಮೊದಲೇ ಸಾವಿರಾರು ವರ್ಷಗಳಿಂದ ಭಾರತೀಯರಿಗೆ ಈ ಗೋವಿನ ಪಿತ್ತಕೋಶದ ಗೋರೋಚನದ ಬಳಕೆ ಗೊತ್ತಿರುವುದು ಸೋಜಿಗ ವಿಷಯವೇ ಆಗಿದೆ.
   ಇದನ್ನು ಇಂಗ್ಲೀಷ್ ಭಾಷೆಯಲ್ಲಿ Cowstone/ Axegall ಅಂತ ಕರೆಯುತ್ತಾರೆ ಭಾರತೀಯ ಹಿಂದೂ ಪೂಜಾ ಪದ್ದತಿಯಲ್ಲಿ ಗೋರೊಚನ ಬಳಕೆ ಇದೆ ಹಿಂದೂ ಪುರೋಹಿತರಿಗೆ ಇದರ ಮಾಹಿತಿ ಇದೆ ಮತ್ತು ಭಾರತೀಯ ಆಯುರ್ವೇದದ ವೈದ್ಯರಿಗೆ ಇದರ ಬಳಕೆ ಗೊತ್ತಿದೆ.
  ಗೋರೊಚನ ಮನೆಯಲ್ಲಿದ್ದರೆ ಅದೃಷ್ಟ ಎಂಬ ಭಾವನೆ ಇದೆ, ಶುದ್ಧ ಗೋರೊಚನದ ಇವತ್ತಿನ ಬೆಲೆ ಗ್ರಾಮಿಗೆ ಎರೆಡು ಸಾವಿರ ಅಂದರೆ ಒಂದು ಕಿಲೋ ಗೋರೊಚನದ ಇವತ್ತಿನ ಬೆಲೆ 20 ಲಕ್ಷ !?.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...