Skip to main content

Blog number 1649. ಬಜೆಟ್ ಅರ್ಥವಾಗದ ಪ್ರಕ್ರಿಯೆ

#ಬಜೆಟ್_ಗ್ಲಾನ್ಸ್_ಹೈಲೈಟ್ಸ್_ಇತ್ಯಾದಿ_ಅರ್ಥವಾಗದ_ಉಸಾಬರಿ.

#ಪತ್ರಿಕೆಗಳಿಗೆ_ಪ್ರತಿವರ್ಷ_ನೀಡುತ್ತಿದ್ದ_ಬಜೆಟ್_ಪ್ರತಿಕ್ರಿಯೆ.

#ಆಯಾ_ಪಕ್ಷದವರು_ಸಮರ್ಥಿಸಿಕೊಳ್ಳುವ_ವಿರೋದಪಕ್ಷಗಳು_ವಿರೋದಿಸುವ_ಬಜೆಟ್

#ರೈತರು_ಸುಗ್ಗಿಯಲ್ಲಿ_ಕೈಸೇರುವ_ಪಸಲು_ಅದರ_ಆದಾಯದಿಂದ
#ಕುಟುಂಬ_ಮತ್ತು_ಕೃಷಿ_ವೆಚ್ಚಗಳ_ನಿರ್ವಹಣೆ_ಅಂದಾಜು_ಮಾಡುವಂತೆ.

#ಯಾವತ್ತೂ_ಅಂದಾಜು_ಮಾಡಿದ್ದು_ಸರಿ_ಹೊಂದುವುದಿಲ್ಲ

#ಸಾರ್ವಜನಿಕ_ಹಣ_ಖರ್ಚು_ಮಾಡಲು_ಲೈಸೆನ್ಸ್_ಪಡೆಯುವ_ವ್ಯವಸ್ಥೆ.

  2013 ರ ತನಕ ಪತ್ರಕರ್ತರು ಸರ್ಕಾರಗಳ ಬಜೆಟ್ ಬಗ್ಗೆ ಕೇಳುವುದು ನಾನು ಅವರಿಗೆ ಬಜೆಟ್ ರೈತರ ಪರವಂತಲೋ ಅಥವ ಜನ ವಿರೋದಿ ಅಂತಲೋ ಹೇಳಿಕೆ ನೀಡುವುದು ಮರುದಿನದ ಪತ್ರಿಕೆಯಲ್ಲಿ ನನ್ನ ಹೇಳಿಕೆ ಯಾವ ಯಾವ ಪತ್ರಿಕೆಯಲ್ಲಿ ಬಂತು ಅಂತ ಹುಡುಕುವುದು ಆ ಪತ್ರಿಕೆ ಕಟಿಂಗ್ ಜೋಪಾನ ಮಾಡುವ ಮುರ್ಖತನದ ಕೆಲಸ ನಾನು ಮಾಡುತ್ತಿದ್ದೆ.
 ಕೇಳುವ ಪತ್ರಕರ್ತರೂ ನನಗಿಂತ ಬಿನ್ನವಾಗಿರುತ್ತಿರಲಿಲ್ಲ ಅವರಿಗೂ ಈ ಬಜೆಟ್ ಗೊತ್ತಿರುತ್ತಿರಲಿಲ್ಲ.
  ಈ ಬಜೆಟ್ ಗಳು ಪ್ರಜಾಪ್ರಭುತ್ವದಲ್ಲಿ ರಾಜರ ಸ್ಥಾನದಲ್ಲಿರುವವವರಿಗೆ ವರ್ಷ ವರ್ಷ ಸರಕಾರದ ಬೊಕ್ಕಸದ  ಹಣ ವಿನಿಯೋಗಿಸಲು ಪಡೆಯಬೇಕಾದ ಒಂದು ರೀತಿಯ ಅನುಮತಿ ಮಾತ್ರ.
   ಆಯಾ ಪಕ್ಷಗಳ ಅಭಿರುಚಿಗೆ ತಕ್ಕಂತೆ ತೋರಿಸುವ ಕನ್ನಡಿ ಗಂಟು ಅನ್ನುವುದು ಗೊತ್ತಿದ್ದರೂ ಭಾರೀ ಬುದ್ದಿವಂತರಿಗೆ ಮಾತ್ರ ಅರ್ಥ ಆಗುತ್ತದೆ ಎ೦ಬ ಕವಚದಲ್ಲಿ ಕೆಲ ದಿನ ಚ್ಯೂಯಿಂಗ್ ಗಮ್ ನಂತೆ ಚಾನಲ್ ಗಳು ಎಳೆದಾಡುತ್ತದೆ.
   ಇವತ್ತಿನ ಬಜೆಟ್ ಬಗ್ಗೆ ನನ್ನ ಅನುಭವದಲ್ಲಿ ಗೊತ್ತಾಗಿದ್ದು ...
  APMC ಪುನಃ ಬಂದಿದ್ದರಿಂದ ಶುಂಠಿ ವ್ಯಾಪಾರಿಗಳಿಗೆ ಶೇ. 2 ಹೆಚ್ಚುವರಿ ಹಣ ಪೀಕಬೇಕು ಅಂತ ಶುಂಠಿ ವ್ಯಾಪಾರಿಗಳು ಹೇಳಿದರು.
   ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮದ್ಯ ಸಿಗುತ್ತೆ ಅನ್ನುವ ನಿರೀಕ್ಷೆಯಲ್ಲಿದ್ದವರಿಗೆ ಮಧ್ಯದ ಬೆಲೆ ಜಾಸ್ತಿ ಮಾಡಿದ್ದಾರೆ ಎನ್ನುವ ಬೇಸರ ಕೆಲವರದ್ದು.
  ಆಡಳಿತ ಪಕ್ಷದವರು ಇದು ಸುಂದರ ಬಜೆಟ್ ಅಂದರು ವಿರೋದ ಪಕ್ಷದವರು ಇದು ಜನ ವಿರೋದಿ ಬಜೆಟ್ ಅಂದರು.
ಆದರೆ ಕುವೆಂಪು ಬರೆದ

 "ಕರಿಯರದೋ ಬಿಳಿಯರದೋ ಯಾರಾದದರೇನು..."
  
 "ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ ..."

"ವಿಜಯ ನಗರವೋ? ಮೊಗಲರಾಳ್ವಿಕೆಯೋ? ಇಂಗ್ಲಿಷರೋ?..."

 "ಎಲ್ಲರೂ ಜಿಗಣೆಗಳೇ ನನ್ನ ನೆತ್ತರಿಗೆ ....."

"ಕತ್ತಿ ಪರದೇಶಿಯರದ್ದಾದರೆ ಮಾತ್ರ ನೋವೇ?..."

  "ನಮ್ಮವರೇ ಹದ ಹಾಕಿ ತಿವಿದರದು ಹೂವೇ?..."

  ಎಂಬುದು ಈ ವರ್ಷದ ಬಜೆಟ್ ಗೂ ಮತ್ತು ಮುಂದಿನ ವರ್ಷದ ಬಜೆಟ್ ಗೂ ಅನ್ವಯಿಸುತ್ತದೆ
     ಕುವೆಂಪು ಬರೆದ ಪ್ರಶ್ನೆಗೆ ಉತ್ತರವಿಲ್ಲ ಆದರೆ ಮೂರ್ಖನಾಗಿ ಬಜೆಟ್ ಬಗ್ಗೆ ಹತ್ತು ವರ್ಷದ ಹಿಂದೆ ಪ್ರತಿಕ್ರಿಯಿಸುತ್ತಿದ್ದ ನನ್ನ ಅಜ್ಞಾನದ ಬಗ್ಗೆ ನನಗೆ ನಾಚಿಕೆ ಮತ್ತು ಪಶ್ಚಾತ್ತಾಪ ಹಾಗೇ ಉಳಿದಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...