Skip to main content

Blog number 1654.. ಅವಸಾನದ ಅಂಚಿನ ಭಾರತೀಯ ರಣಹದ್ದುಗಳು ಇದಕ್ಕೆ ಕಾರಣವಾದ ಪಶು ಔಷದಿಯಲ್ಲಿ ಬಳಕೆಯ ನೋವು ನಿವಾರಕ ಡಿಕ್ಲೋಪೆನಾಕ್,

#ರಣ_ಹದ್ದುಗಳು_ಎಲ್ಲಿ_ಹೋದವು

#ಬೃಹತ್_ಗಾತ್ರದ_ಬೋಳು_ಕುತ್ತಿಗೆಯ_ರಣಹದ್ದುಗಳು

#ಹಳ್ಳಿಯಲ್ಲಿ_ಸತ್ತ_ಪ್ರಾಣಿಗಳ_ಊರ_ಹೊರಗೆ_ಎಸೆಯುತ್ತಿದ್ದರು.

#ಒಂದೆರೆಡು_ದಿನದಲ್ಲಿ_ಅವಶೇಷಗಳೂ_ಕಣ್ಮರೆ_ಮಾಡುತ್ತಿದ್ದ_ರಣಹದ್ದು

#ರಣಹದ್ದು_ಶಿಕಾರಿಮಾಡುತ್ತಿದ್ದ_ಮೂಕ 

#ಸತ್ತ_ದನದ_ಪಿತ್ತಕೋಶದಲ್ಲಿ_ಸಿಗುತ್ತಿದ್ದ_ಗೋರೋಚನಕ್ಕೆ_ಬಾರಿ_ಬೆಲೆ_ಇತ್ತು_ಆಗ.


   1960 - 70 ರ ದಶಕದಲ್ಲಿ ನಮ್ಮ ಹಳ್ಳಿಯ ಜನ ಸಂಖ್ಯೆ ಹೆಚ್ಚೆಂದರೆ ನೂರಿನ್ನೂರು ಮತ್ತು ಮನೆ ಸಂಖ್ಯೆ 20 ಇತ್ತು ನಮ್ಮ ಊರು ಶಿವಮೊಗ್ಗ ಮತ್ತು ಸಾಗರ ಮಾರ್ಗದ ಬಿ ಹೆಚ್ (ಬೆಂಗಳೂರು ಹೊನ್ನಾವರ) ರಸ್ತೆಯಲ್ಲಿದೆ.
  ಪ್ರತಿ ವರ್ಷ ಹಕ್ಕಿ ಪಿಕ್ಕಿ ಜನರು ಆಗ ಅವರನ್ನು ಮೇಲು ಶಿಕಾರಿಯವರು ಅಂತ ಕರೆಯುತ್ತಿದ್ದರು ಅವರು ವರ್ಷದಲ್ಲಿ ಬೇರೆ ಬೇರೆ ಗುಂಪಿನಲ್ಲಿ ಕೆಲವು ತಿಂಗಳು ಈಗಿನ ಮಸೀದಿ ಇರುವ ಜಾಗದಲ್ಲಿ ದೊಡ್ಡ ಬಸರಿ ಮರದ ಕೆಳಗೆ ಕ್ಯಾಂಪ್ ಹಾಕುತ್ತಿದ್ದರು.
   ಪ್ರತಿ ಕ್ಯಾಂಪ್ ಬಂದಾಗಲೂ ಅವರನ್ನ ನೋಡಲು ನಾವೆಲ್ಲ ಹೋಗುತ್ತಿದ್ದೆವು ಅಲ್ಲಿ ಅವರ ಹರಕಲು ಬಟ್ಟೆಯ ಟೆಂಟ್, ಚಾಟರ್ ಬಿಲ್ಲು, ಹಕ್ಕಿ -ಕಾಡು ಕೋಳಿ ಹಿಡಿಯುವ ಬಲೆ, ಶಿಕಾರಿಗೆ ಮತ್ತು ಊರಿಂದ ಊರಿಗೆ ಅವರ ಸಾಗಾಣಿಕೆ ಮಾಡಲು ಎತ್ತು ಇತ್ಯಾದಿ ಇರುತ್ತಿತ್ತು.
  ಇವರೆಲ್ಲ ಸುಯೋ೯ದಯಕ್ಕೆ ಮೊದಲೇ ಕಾಡಿಗೆ ಶಿಕಾರಿಗೆ ಹೋಗಿ ಬಿಡುತ್ತಿದ್ದರು ಕ್ಯಾಂಪಿನಲ್ಲಿ ಮಕ್ಕಳು ಮತ್ತು ವಯಸ್ಸಾದವರು ಮಾತ್ರ ಇರುತ್ತಿದ್ದರು ಅವರಲ್ಲಿ ಮಾತು ಬಾರದ ಮೂಕ ಮಾತ್ರ ಮಾಡುತ್ತಿದ್ದ ರಣಹದ್ದು ಶಿಕಾರಿ ಮರೆಯಲು ಸಾಧ್ಯವಿಲ್ಲ.
   ಒಂದು ದಿನ ಬಿರುಬಿಸಲಿನಲ್ಲಿ ನೂರಾರು ರಣ ಹದ್ದುಗಳು ಚಕ್ರಾಕಾರವಾಗಿ ಆಕಾಶದಲ್ಲಿ ತಿರುಗುತ್ತಾ ತಿರುಗುತ್ತಾ ನಮ್ಮ ಹಳ್ಳಿಗೆ ಸಮೀಪಿಸುತ್ತಿದ್ದಾಗ ನಮಗೆಲ್ಲ ಕುತೂಹಲ ಏಕೆಂದರೆ ಆಗೆಲ್ಲ ಊರವರು ಸಾಕಿದ ದನಗಳು ಸತ್ತಾಗ ಅದನ್ನು ಒಯ್ಯಲು ನರಸಣ್ಣನಿಗೆ ಕರೆ ನೀಡುತ್ತಿದ್ದರು, ನರಸಣ್ಣ ಮತ್ತು ಅವರ ಮಕ್ಕಳಾದ ರಾಮಣ್ಣ - ಸಣ್ಣ - ಮಂಜ ಎಲ್ಲಾ ಒಂದಾಗಿ ಬಂದು ಸತ್ತ ದನದ ಜೋಡಿ ಕಾಲುಗಳನ್ನು ಕಟ್ಟಿ ಅದರ ಮಧ್ಯ ಮರದ ಗಟ್ಟಿ ಗೂಟ ಹಾಕಿ ಅದಕ್ಕೆ ಹೆಗಲು ಕೊಟ್ಟು ಊರ ಹೊರಗೆ ಒಯ್ದು ಅಲ್ಲಿ ಅವರ ಹಾತ್ಯಾರಗಳಿಂದ ಚರ್ಮ ಸುಲಿದು ಅದನ್ನು ಚರ್ಮ ಖರೀದಿಸುವ ಮದ್ರಾಸಿನಿಂದ ಬಂದು ಆನಂದಪುರ೦ನಲ್ಲಿ ನೆಲೆಸಿರುವ ಲಬ್ಬೆ ಮುಸ್ಲಿಂರಾದ ಸುತ್ತಾರ್ ಸಾಹೇಬರಿಗೆ ಮಾರುತ್ತಿದ್ದರು.
   ಕೆಲ ಸತ್ತ ದನದಲ್ಲಿ ಗೊರೋಚನ ಎಂಬ ಅಡಿಕೆ ಗಾತ್ರದ ಗಂಟು ದನದ ಪಿತ್ತಕೋಶದಲ್ಲಿ ಸಿಕ್ಕಿದರೆ ಅವರಿಗೆ ಹಬ್ಬ ಅದನ್ನು ಸತ್ತಾರ್ ಸಾಹೇಬರು ಹೆಚ್ಚಿನ ಬೆಲೆಗೆ ಖರೀದಿಸುತ್ತಿದ್ದರು ಅದು ಸುವಾಸನೆ ತಯಾರಿಗೆ ಔಷದಿಗೆ ಹೋಗುತ್ತೆ ಅನ್ನುತ್ತಿದ್ದರು ಈಗ ಅದರ ಮಾರುಕಟ್ಟೆ ಬೆಲೆ ಗ್ರಾಮಿಗೆ ಎರೆಡು ಸಾವಿರ ಇದೆ.
  ಚರ್ಮ ಸುಲಿದ ದನಗಳ ಅವಶೇಷ ಒಂದೆರೆಡು ದಿನದಲ್ಲಿ ರಣ ಹದ್ದುಗಳಿಗೆ ತಿಳಿದು ಅವುಗಳು ನೂರಾರು ಸಂಖ್ಯೆಯಲ್ಲಿ ಬಂದಿಳಿದು ಕ್ಷಣಮಾತ್ರದಲ್ಲಿ ಖಾಲಿ ಮಾಡಿ ಹಳ್ಳಿ ಸ್ಟಚ್ಚ ಮಾಡುತ್ತಿದ್ದವು ಆದರೆ ಅವತ್ತು ಊರಲ್ಲಿ ಯಾವುದೇ ದನ ಸತ್ತಿರಲಿಲ್ಲ ಆದ್ದರಿಂದ ನಮಗೆಲ್ಲ ಅಚ್ಚರಿ ಹಾಗಂತ ನಮ್ಮ ಈ ಸಾಹಸದ ಅನ್ವೇಷಣೆ ದೊಡ್ಡವರಿಗೆ ಹೇಳುವಂತಿಲ್ಲ ಹೇಳಿದರೆ ಪೆಟ್ಟುಗಳ ಬಹುಮಾನ ಗ್ಯಾರಂಟಿ ಈ ಪ್ರದೇಶಗಳಿಗೆ ಮಕ್ಕಳು ಹೋಗ ಕೊಡಬಾರದು ಅಲ್ಲೆಲ್ಲ ರಣಗಳು ಓಡಾಡುತ್ತಿರುತ್ತವೆ ಎಂಬ ನಂಬಿಕೆ ನಮ್ಮ ತಾಯಿ ಅಜ್ಜಿಯಂದಿರದ್ದು.
  ನಾವು ಸಮಾನ ಮನಸ್ಕ ಬಾಲ್ಯದ ಗೆಳೆಯರು ರಣ ಹದ್ದುಗಳ ಗಮ್ಯಸ್ಥಾನ ತಲುಪಿದಾಗ ಅಲ್ಲಿ ನಮ್ಮ ಊರಿನ ಮೇರಿ ಬಾಯಮ್ಮನ ಬಿಡಾಡಿ ನಾಯಿ ಟೋನಿ ಮಟ್ಟಿಯ ಮಧ್ಯ ಸತ್ತು ಬಿದ್ದಿತ್ತು ಅದನ್ನು ತಿನ್ನಲು ಈ ರಣ ಹದ್ದುಗಳು ಬಂದಿತ್ತು.
  ಆಗ ನಮಗೆಲ್ಲ ಅಚರಿ ಈ ರಣ ಹದ್ದುಗೆ ಇದು ಗೊತ್ತಾಗುವುದು ಹೇಗೆ? ಅಂತ.
  ಅಷ್ಟರಲ್ಲಿ ಈ ರಣ ಹದ್ದುಗಳನ್ನ ಹೊಂಚು ಹಾಕಿದ್ದೇ ತಾನು ಎಂಬಂತೆ ಮೇಲು ಶಿಕಾರಿ ಮೂಕ ಸಣ್ಣ ದೊಣ್ಣೆಯೊಂದಿಗೆ ಬಂದವನೇ ಒಂದೊಂದೆ ರಣ ಹದ್ದುಗಳ ತಲೆಗೆ ಬಡೆದು ಸಾಯಿಸಲು ಪ್ರಾರಂಬಿಸಿದ್ಧ .. ಕೆಲ ಕ್ಷಣದಲ್ಲೇ ರಣ ಹದ್ದುಗಳು ಮೂಕನ ಮೇಲೆ ಮುರಿ ಬಿದ್ದು ಮೂಕನನ್ನು ಮೇರಿ ಬಾಯಮ್ಮನ ಟೋನಿ ನಾಯಿಯ ಜೊತೆ ತಿನ್ನುತ್ತದೆ ಎಂಬ ಭಯ ಇದನ್ನೆಲ್ಲ ಮಟ್ಟಿಯ ಇನ್ನೊಂದು ಭಾಗದಲ್ಲಿ ಅಡಗಿ ಕುಳಿತು ನೋಡುತ್ತಿದ್ದ ನಮಗಾಯಿತು ಆದರೆ ರಣಹದ್ದುಗಳು ಸತ್ತು ಬೀಳುವ ತಮ್ಮ ಸಂಗಾತಿ ಬಗ್ಗೆಯಾಗಲಿ ಅಥವ ತಮ್ಮ ಜನಾಂಗದ ಕೊಲೆಗಾರ ಮೂಕನ ಬಗ್ಗೆಯಾಗಲಿ ತಲೆ ಕೆಡಿಸಿಕೊಳ್ಳದೆ ಮೇರಿ ಬಾಯಮ್ಮನ ಮನೆಯ ಟೋನಿಯನ್ನು ತಿನ್ನುವ ಸ್ಪರ್ಧೆಯಲ್ಲಿ ತನ್ಮಯವಾಗಿದ್ದವು.
   ಏಳೆಂಟು ರಣ ಹದ್ದು ಶಿಕಾರಿ ಮಾಡಿದ ಮೂಕ ಅದನ್ನೆಲ್ಲ ತನ್ನ ಕ್ಯಾಂಪಿಗೆ ಸಾಗಿಸಿದ ಒಂದೆರೆಡು ದಿನ ಅವರಿಗೆಲ್ಲ ದೊಡ್ಡ ಹಬ್ಬವಾಯಿತು ಅವರ ಕ್ಯಾಂಪಿನ ನಮ್ಮ ವಯಸ್ಸಿನ ಗೆಳೆಯರು ಹೇಳಿದ್ದು ರಣ ಹದ್ದು ಮಾಂಸ ತುಂಬಾ ರುಚಿಕರ.
   ಮೇರಿ ಬಾಯಮ್ಮನ ನಾಯಿ ಟೋನಿ ಸತ್ತು ಬಿದ್ದ ಸುದ್ದಿ ನಮ್ಮ ಮಾತಿನಿಂದ ಹಳ್ಳಿಗೆಲ್ಲ ಗೊತ್ತಾಯಿತು ಎಲ್ಲರೂ ಆರೋಗ್ಯವಾಗಿದ್ದ ಟೋನಿ ಹೇಗೆ ಸತ್ತಿತು ಅನ್ನುವುದು ಗೊತ್ತಾಗಿದ್ದು ಕೆಲ ವರ್ಷದ ನಂತರ.
   ಮೇಲು ಶಿಕಾರಿಯವರ ಕ್ಯಾಂಪು ಬಂದಾಗ ಊರಿನ ಕೆಲ ನಾಯಿಗಳು ಅವರ ಕ್ಯಾಂಪಿನ ಹತ್ತಿರ ಹೋಗುವಂತೆ ಮೂಕ ಅವುಗಳಿಗೆ ಏನೋ ತಿನ್ನಲು ರುಚಿ ತೋರಿಸಿ ನಂತರ ಅದರಲ್ಲಿ  ಸುಲಭವಾಗಿ ಸಿಗುವ ನಾಯಿ ತಲೆ ಸೀಳಿ ಮಟ್ಟಿಯಲ್ಲಿ ಎಸೆದು ಬಿಡುತ್ತಿದ್ದ ಅದನ್ನು ಹುಡುಕಿ ಬರುವ ರಣ ಹದ್ದುಗಳನ್ನು ಮೂಕ ಸುಲಭವಾಗಿ ಬೇಟೆ ಮಾಡುತ್ತಿದ್ದ ಇದು ಹಳ್ಳಿಗರಲ್ಲಿ ಸಿಟ್ಟಿಗೆ ಕಾರಣವಾಗಿ ಮೇಲು ಶಿಕಾರಿಯವರ ಮೇಲೆ ಜಗಳಕ್ಕೂ ಕಾರಣವಾಯಿತು, ತಾವು ಕೇಳಿದ ಬೆಲೆಗೆ ಕಾಡು ಕೋಳಿ ಮಾರಾಟ ಮಾಡದೆ ಆನಂದಪುರಂನ ಅನುಕೂಲಸ್ಥರಿಗೆ ಮಾರಾಟ ಮಾಡುವ ಮೇಲು ಶಿಕಾರಿಗರ ಮೇಲಿನ ಕೋಪವೂ ಸೇರಿತ್ತು ನಂತರ ರಣ ಹದ್ದು ಶಿಕಾರಿ ನಮ್ಮ ಊರಲ್ಲಿ ನಿಷೇದವೇ ಆಯಿತು.
   ನಂತರ ಕ್ರಮೇಣ ಕಡಿಮೆ ಆಗುತ್ತಾ ಬಂದ ರಣಹದ್ದುಗಳು ಈಗ ಇಲ್ಲವೇ ಇಲ್ಲ ಹಾಗಾದರೆ ರಣ ಹದ್ದು ಹೋದದ್ದಾದರೂ ಎಲ್ಲಿಗೆ?... 10 ರಿಂದ 30 ವರ್ಷ ಬದುಕುವ, ಸತ್ತ ಪ್ರಾಣಿ ತಿನ್ನುವ ಸುಮಾರು ಒಂದೂವರೆ ಕಿಲೋ ದಿಂದ ಎರೆಡು ಕಿಲೋ ಬಾರವಿರುವ ಬೋಳು ಕೊರಳಿನ ರಣಹದ್ದುಗಳು 1990 ರಿಂದ ಅವುಗಳ ಸಂತಾನ ಸಂಪೂರ್ಣ ನಿರ್ನಾಮ ಹಂತಕ್ಕೆ ತಲುಪಿದೆ.
  ಇದಕ್ಕೆ ಕಾರಣ ಪಶು ವೈದ್ಯಕೀಯ ಔಷದಿಯಲ್ಲಿ ಬಳಸುತ್ತಿದ್ದ  #ಡಿಕ್ಲೋಪೆನಾಕ್ ಎಂಬ ಸ್ನಾಯುಗಳ ನೋವು ನಿವಾರಕ ನಾನ್ ಸ್ಟೆರಾಯಿಡ್ ಔಷದಿಯ ಅಂಶಗಳು (ರೆಸ್ಯೂಡಿಸ್) ಸತ್ತ ಪಶುವಿನಲ್ಲಿ ಉಳಿಯುತ್ತಿದ್ದು ಅದನ್ನು ತಿನ್ನುವ ರಣಹದ್ದುಗಳ ವಂಶ ನಿರ್ನಾಮಕ್ಕೆ ಕಾರಣ ಎಂಬ ವಿದೇಶಿ ವಿಜ್ಞಾನಿಗಳ ಸಂಶೋದನೆಗೆ ಭಾರತದ ಸರ್ಕಾರ ನಿರ್ಲಕ್ಷಿಸಿತ್ತು ಈಗ ಅದನ್ನು ಭಾರತದ ಪಶು ವೈದ್ಯಕೀಯ ಔಷದಿಯನ್ನು ನಿಷೇದಿಸಿದೆ ಆದರೆ ಈಗಾಗಲೇ ಭಾರತದ ಈ ರಣ ಹದ್ದು ಹೆಚ್ಚು ಕಡಿಮೆ ಸಂಪೂರ್ಣ ನಿರ್ನಾಮವಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ