# ಪರಿಸರ ಉಳಿಸುವುದರಲ್ಲೂ ಎಡ ಮತ್ತು ಬಲ ಸರಿ ಅಲ್ಲ#
ಕಳೆದ ವಷ೯ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ ಜೋಗ ಅಭಿವೃದ್ಧಿ ಯೋಜನೆಯಲ್ಲಿ ಜೋಗ ಜಲಪಾತ ಸವ೯ರುತುವಿನ ಜಲಪಾತಕ್ಕಾಗಿ ನೀರು ಮರು ಪೂರಣ ಯೋಜನೆಗೆ ಸಾಗರದ ನಾ.ಡಿಸೋಜರಾದಿಯಾಗಿ ಅನೇಕರು ವಿರೋದ ಮಾಡಿದರು ಆದರೆ ಅನಂತ ಹೆಗಡೆ ಅಶೀಸರ ಈ ಬಗ್ಗೆ ವಿರೋದಿಸಲಿಲ್ಲ.
ಈಗ ಶರಾವತಿ ಕಣಿವೆಯಲ್ಲಿ ಭೂಗಭ೯ ವಿದ್ಯುತ್ ಯೋಜನೆ ಒಂದು (ವರಾಹಿ ಯೋಜನೆಯಂತೆ) ಪ್ರಾರಂಭವಾಗಲಿದ್ದು ಇದಕ್ಕೆ ಅನಂತ ಹೆಗಡೆ ಅಶೀಸರರ ನೇತೃತ್ವದ ಸಂಘಟನೆ ವಿರೋದಿಸುತ್ತಿದೆ ಆದರೆ ನಾ.ಡಿಸೋಜರ ಒಡನಾಡಿಗಳು ವಿರೋದಿಸುತ್ತಿಲ್ಲ.
ಇದೇ ರೀತಿ ಅರಣ್ಯ ಭೂಮಿ ಸಕ್ರಮದಲ್ಲಿ ಕೂಡ ಎರೆಡು ಗುಂಪಾಗಿದ್ದು ಒಂದು ಪರ ಇನ್ನೊಂದು ವಿರೋದ.
ಒಂದೊಂದು ರಾಜಕೀಯ ಪಕ್ಷಗಳ ಪರಿಸರ ಹೋರಾಟದ ದಿಕ್ಕು ಒಂದೊಂದು ಕಡೆ ಮುಖ ಮಾಡಿದೆ ಇದರಿ೦ದ ರಾಜಕೀಯ ಪಕ್ಷಕ್ಕೆ ಲಾಭವಾಗಬಹುದೇ ಹೊರತು ಪರಿಸರಕ್ಕಲ್ಲ.
ಪಶ್ಚಿಮ ಘಟ್ಟದ ಪರಿಸರ ಉಳಿವಿಗೆ ಎಲ್ಲರ ಕಾಳಜಿ ಸ್ವಾಗತೀಯ ಆದರೆ ಪಕ್ಷ, ದಮ೯ಗಳ ಆಧಾರದಲ್ಲಿ ಪರಿಸರ ಹೋರಾಟ ವಿಭಜನೆಯಾಗಿ ಸಾಗುತ್ತಿರುವುದು ಬೇಸರದ ಸಂಗತಿ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
ಸ್ಪಷ್ಟನೆ:
ReplyDeleteಇದು ತಪ್ಪು ಅರುಣ್ ಪ್ರಸಾದ್ ಜೀ. ನಾ.ಡಿಯವರ ಗಮನಕ್ಕೆ ತರಲಾಗಿದ್ದು, ಅವರೂ ಕೂಡಾ ಇದರ ವಿರೋಧವಿದ್ದಾರೆ. ಪಶ್ಚಿಮಘಟ್ಟದಲ್ಲಿ ಯಾವುದೇ ಯೋಜನೆಗಳೇ ಬೇಡ ಎಂದು ಹೇಳಿದ್ದಾರೆ. ಈ ಯೋಜನೆಯ ವಿರುದ್ಧವಾಗಿ ಮೊದಲು ಧ್ವನಿ ಎತ್ತಿದ್ದೇ ನಾನು ಮತ್ತು ಸಂಗಡಿಗರು. ಇದರ ವಿರುದ್ಧ ಮಾತನಾಡಿದ ವರದಿ "ದ ಹಿಂದೂ" ಪತ್ರಿಕೆಯ ಎಲ್ಲಾ ಆವೃತ್ತಿಯಲ್ಲೂ ಬಂದಿತ್ತು. ಇದಕ್ಕೆ ಕೆ.ಪಿ.ಸಿ. ಎಂ.ಡಿ.ಯವರು ಜನರ ವಿರೋಧ ಇದ್ದಲ್ಲಿ ಯೋಜನೆಯನ್ನು ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದರು. ಈ ಹೆಗಡೆಯವರು ಮತ್ತೆ ಸುದ್ಧಿಯೆತ್ತಿದ್ದಾರೆ ಅಷ್ಟೆ.