Skip to main content

Blog number 1076. ಕೆ.ವಿ.ಸುಬ್ಬಣ್ಣ ಸ್ಮರಣೆಯ ದಿನಾಂಕ 16- ಜುಲೈ -2013ರ ಕಾಯ೯ಕ್ರಮ ಸಂಚಿ ಪೌಂಡೇಶನ್ ಮೂಲಕ ಡಿಜಲೀಕರಣ ಆಗಿದ್ದು ಈ ಡಿಜಿಟಲ್ ಆವೃತ್ತಿ ಅತ್ಯುತ್ತಮ ಮಾಹಿತಿಯಾಗಿದೆ.

#ಕೆ_ವಿ_ಸುಬ್ಬಣ್ಣ_ಸ್ಮರಣೆ_16_ಜುಲೈ_2013.

#ಸಂಚಿ_ಪೌಂಡೇಶನ್_ಡಿಜಿಟಲ್_ಆವೃತ್ತಿಯಲ್ಲಿ_ಲಭ್ಯ.

#ಈ_ಕಾಯ೯ಕ್ರಮ_ಉದ್ಘಾಟಿಸಿದವರು_ತೀರ್ಥಹಳ್ಳಿಯ_ಕಲ್ಲಹಳ್ಳಿ_ಗಂಗಾದರ್

#ಸಹಕಾರ_ಚಳವಳಿಯ_ಉಪನ್ಯಾಸ_ಐಐಟಿ_ಡಾ_ಎಂ_ಎಸ್_ಶ್ರೀರಾಮು.

#ಕೆ_ವಿ_ಸುಬ್ಬಣ್ಣರ_ಶಿಕ್ಷಣದ_ಕಾಲ_ಮೊದಲ_ಪ್ರಕಟನೆ_ಮಾರಾಟ

#ನಂದಿನಿ_ಅಮುಲ್_ಹೆರಿಟೇಜ್_ಸಹಕಾರಿ_ಚಳವಳಿ_ಮಾಹಿತಿ_ಆಮೂಲ್ಯ

   ತೀರ್ಥಹಳ್ಳಿಯ ಶ್ರೀಧರ ಕಲ್ಲಹಳ್ಳ ಗಂಗಾದರ್ ಖ್ಯಾತ ವಿನ್ಯಾಸಗಾರರು, ಒಮ್ಮೆ ಆಮ್ ಆದ್ಮಿ ಪಾರ್ಟಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ದೆ ಮಾಡಿದವರು.
  ಇವತ್ತು ಒಂದು ಪೋಸ್ಟ್ ಹಾಕಿದ್ದರು ಅದು ದಿನಾಂಕ 16 ಜುಲೈ 2013 ರಲ್ಲಿ ಹೆಗ್ಗೋಡಿನ ನಿನಾಸಂ ಏರ್ಪಡಿಸಿದ್ದ ಕೆ.ವಿ.ಸುಬ್ಬಣ್ಣ ಸ್ಮರಣೆಯ ಕಾರ್ಯಕ್ರಮ ಇವರ ತಂದೆ ಉದ್ಘಾಟಿಸಿದ ವಿಡಿಯೋ ಮದ್ಯ ಪ್ರದೇಶದ ಸಂಚಿ ಪೌಂಡೇಶನ್ ಮಾಡಿರುವ ಡಿಜಿಟಲ್ ಆವೃತ್ತಿ.
 ಅವರ ತಂದೆ ಮತ್ತು ಕೆ.ವಿ.ಸುಬ್ಬಣ್ಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಒಟ್ಟಿಗೆ ವಿದ್ಯಾಬ್ಯಾಸ ಮಾಡಿದವರು ಹಾಸ್ಟೆಲ್ ನ ಒಂದೇ ಕೋಣೆಯಲ್ಲಿ ವಾಸ್ತವ್ಯ ಮಾಡಿದವರು ಜೊತೆಗೆ ಯು.ಆರ್.ಅನಂತಮೂರ್ತಿ ಕೂಡ ಇವರಿಬ್ಬರ ಒಡನಾಡಿ ಈ ಮೂವರೂ ಈಗ ಇಲ್ಲ.
   ಕೆ .ವಿ . ಸುಬ್ಬಣ್ಣನವರ ವ್ಯಾಸಂಗದ ದಿನಗಳು ಅವರ ಅಕ್ಷರ ಪ್ರಕಾಶನದ ಮೊದಲ ಪುಸ್ತಕ ಮಾರಾಟ ಮುಂತಾದ ಅನೇಕ ಸ್ವಾರಸ್ಯ ಘಟನೆಗಳು ಅವರ ಉದ್ಘಾಟನಾ ಬಾಷಣದಲ್ಲಿ ಕೇಳುವುದೇ ಸ್ವಾರಸ್ಯವಾಗಿದೆ.
  ಇನ್ನೊಂದು ವಿಶೇಷ ಉಪನ್ಯಾಸ ನೀಡಿದ ಐಐಟಿ ಬೆಂಗಳೂರು ಮತ್ತು ಉದಯಪುರ ವಿಸಿಟಿಂಗ್ ಪ್ರೋಪೆಸರ್ ಡಾ.ಎಂ.ಎಸ್.ಶ್ರೀರಾಮು ಅವರ ಉಪನ್ಯಾಸ ಎಲ್ಲಾ ಆಸಕ್ತ ರಾಜಕಾರಣಿಗಳು, ಸಹಕಾರಿ ದುರೀಣರು, ಸ್ವಯಂ ಉದ್ಯೋಗಾಸಕ್ತರು ತಪ್ಪದೇ ನೋಡಬೇಕಾದದ್ದು.
  ನೀನಾಸಂನ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ಸ೦ಚಿ ಪೌ೦ಡೇಶನ್ ಗಾಗಿ  ಡಿಜಲೀಕರಣ ಮಾಡುತ್ತಿರುವವರು ಅಶೋಕ್ ವದ೯ನರ ಪುತ್ರ ಚಲನಚಿತ್ರ ನಿಧೇ೯ಶಕರೂ ಆದ ಅಭಯರು ಅಂತ ಕೇಳಿದ್ದೇನೆ.
https://youtu.be/LzlWOr4eAXs
 ಅವರ ತಂದೆ ಮತ್ತು ಕೆ.ವಿ.ಸುಬ್ಬಣ್ಣ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಒಟ್ಟಿಗೆ ವಿದ್ಯಾಬ್ಯಾಸ ಮಾಡಿದವರು ಹಾಸ್ಟೆಲ್ ನ ಒಂದೇ ಕೋಣೆಯಲ್ಲಿ ವಾಸ್ತವ್ಯ ಮಾಡಿದವರು ಜೊತೆಗೆ ಯು.ಆರ್.ಅನಂತಮೂರ್ತಿ ಕೂಡ ಇವರಿಬ್ಬರ ಒಡನಾಡಿ ಈ ಮೂವರೂ ಈಗ ಇಲ್ಲ.
   ಕೆ .ವಿ . ಸುಬ್ಬಣ್ಣನವರ ವ್ಯಾಸಂಗದ ದಿನಗಳು ಅವರ ಅಕ್ಷರ ಪ್ರಕಾಶನದ ಮೊದಲ ಪುಸ್ತಕ ಮಾರಾಟ ಮುಂತಾದ ಅನೇಕ ಸ್ವಾರಸ್ಯ ಘಟನೆಗಳು ಅವರ ಉದ್ಘಾಟನಾ ಬಾಷಣದಲ್ಲಿ ಕೇಳುವುದೇ ಸ್ವಾರಸ್ಯವಾಗಿದೆ.
  ಇನ್ನೊಂದು ವಿಶೇಷ ಉಪನ್ಯಾಸ ನೀಡಿದ ಐಐಟಿ ಬೆಂಗಳೂರು ಮತ್ತು ಉದಯಪುರ ವಿಸಿಟಿಂಗ್ ಪ್ರೋಪೆಸರ್ ಡಾ.ಎಂ.ಎಸ್.ಶ್ರೀರಾಮು ಅವರ ಉಪನ್ಯಾಸ ಎಲ್ಲಾ ಆಸಕ್ತ ರಾಜಕಾರಣಿಗಳು, ಸಹಕಾರಿ ದುರೀಣರು, ಸ್ವಯಂ ಉದ್ಯೋಗಾಸಕ್ತರು ತಪ್ಪದೇ ನೋಡಬೇಕಾದದ್ದು.
  ನೀನಾಸಂನ ಎಲ್ಲಾ ಉಪಯುಕ್ತ ಮಾಹಿತಿಗಳನ್ನು ಸ೦ಚಿ ಪೌ೦ಡೇಶನ್ ಗಾಗಿ  ಡಿಜಲೀಕರಣ ಮಾಡುತ್ತಿರುವವರು ಅಶೋಕ್ ವದ೯ನರ ಪುತ್ರ ಚಲನಚಿತ್ರ ನಿಧೇ೯ಶಕರೂ ಆದ ಅಭಯ ಸಿಂಹ ಅಂತ ಕೇಳಿದ್ದೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...