Skip to main content

Blog number 1059. ಸ್ವಾಮಿ ಶಿವಾನಂದರ ಬ್ರಹ್ಮಚರ್ಯವೇ ಜೀವನ ವೀರ್ಯ ನಾಶವೇ ಮೃತ್ಯು ಎಂಬ ಪುಸ್ತಕ ಯೌವನ ಪೂರ್ವದಲ್ಲಿ ಓದಿದರೆ ಜೀವನವೇ ಬದಲಾಗುವುದು ಶಥ ಸಿದ್ದ.

#ಈ_ಪುಸ್ತಕ_ಓದಿದ್ದೀರಾ ?

#ಕನ್ನಡದಲ್ಲಿ_ಹನ್ನೊಂದು_ಸಾರಿ_ಮರುಮುದ್ರಣಗೊಂಡಿದೆ

#ಈ_ಪುಸ್ತಕ_ಪ್ರಭಾವದಿಂದ_ನಾನೂ_ನನ್ನ_ಗೆಳೆಯ_ಸಂನ್ಯಾಸಿ_ಆಗಲು_ಹೊರಟಿದ್ದೆವು

#ಕುಂದಾಪುರಕ್ಕೆ_ಹೋಗಿ_ಅಲ್ಲಿಂದ_ಅರಬ್ಬೀ_ಸಮುದ್ರದ_ತಟದಲ್ಲೇ_ನಡೆಯುತ್ತಾ_ಕನ್ಯಾಕುಮಾರಿ_ತಲುಪುವುದು

#ಬ್ರಹ್ಮಚರ್ಯವೇ_ಜೀವನ_ವೀಯ೯_ನಾಶವೇ_ಮೃತ್ಯು_ಪುಸ್ತಕದ_ಪ್ರಭಾವ.

#ಸ್ವಾಮಿ_ಶಿವಾನಂದರ_ಈ_ಪುಸ್ತಕ_ಓದಿದವರ_ಜೀವನ_ಕ್ರಮವೇ_ಬೇರೆ.

     ಐದನೇ ತರಗತಿಯಿಂದಲೇ ಯೋಗಾಸನ, ಈಜು, ಸೈಕಲ್ ಜೊತೆಗೆ ಸೂಯೋ೯ದಯಕ್ಕಿಂತ ಮೊದಲೇ ರನ್ನಿಂಗ್ ಶುರುವಾಗಿತ್ತು ಜೊತೆಗೆ ಸಮಾನ ಮನಸ್ಕ ನನಗಿಂತ ನಾಲ್ಕೈದು ವರ್ಷ ದೊಡ್ಡವನಾದ ಬಾಲ್ಯ ಗೆಳೆಯ ಪುಪ್ಪಾ ಆಲಿಯಾಸ್ ಸಿಲ್ವೆಸ್ಟರ್ ಡಿಕಾಸ್ಟ್.
    ಅವನೋ ಪುಸ್ತಕದ ಹುಳು, ಯಾವುದೇ ಪುಸ್ತಕ ಸಿಕ್ಕರೂ ಅದರ ಕೊನೆಯವರೆಗೆ ಓದದೇ ಕೈಬಿಡದವ, ಊಟ ತಿಂಡಿ ಕೂಡ ಅವನಿಗೆ ಪುಸ್ತಕದ ನಂತರದ ಅಧ್ಯತೆ.
   ನಾನು ಏಳನೆ ತರಗತಿಗೆ ಬರುವುದರಲ್ಲಿ ರಾಮಾಯಣ, ಮಹಾಭಾರತ ನಮ್ಮ ತಂದೆ ವೇದನಾರಾಯಣ ಭಟ್ಟರಿಂದ (ದ್ವಾರಕಾ ಸಂಶೋದಿಸಿದ S.R. ರಾವ್ ಇವರ ಮನೆಯಲ್ಲೆ ಜನಿಸಿದ್ದು) ತಂದು ಕೊಟ್ಟಿದ್ದರಿಂದ ಓದಿದ್ದೆ.
  ಇದರ ಮದ್ಯದಲ್ಲಿ ಈ ಪುಸ್ತಕ ಅದು ಹೇಗೋ ನಮಗೆ ಸಿಕ್ಕಿತ್ತು, ಇದನ್ನು ಎಷ್ಟು ಸಾರಿ ಓದಿದೆವು ಗೊತ್ತಿಲ್ಲ ಆದರೆ ಈ ಪುಸ್ತಕದ ಪ್ರಭಾವ ಇವತ್ತಿಗೂ ನನ್ನ ಜೀವನ ಮಾರ್ಗದ ಮಾರ್ಗದರ್ಶಿ ಆಗಿದೆ.
  ತಣ್ಣೀರು ಸ್ನಾನ, ಬರೀ ಚಾಪೆ ಮೇಲೆ ಮಲಗುವುದು, ಒದ್ದೆ ಮಾಡಿದ ಹನುಮಾನ್ ಕೌಪೀನ ದರಿಸುವುದು, ಮರದ ಪಾದುಕೆ ದರಿಸಿ ಓಡಾಡುವುದು, ಮೂತ್ರ ಮಾಡಿದಾಗ ನೀರು ಬಳಸಿ ತೊಳೆದುಕೊಳ್ಳುವುದು ಈ ಮೂಲಕ ಬ್ರಹ್ಮಚರ್ಯವೇ ಜೀವನ ಎಂಬ ತೀರ್ಮಾನಕ್ಕೆ ಬಂದಾಗಿತ್ತು.
  ಇಬ್ಬರೂ ಒಂದು ನಿರ್ದಾರಕ್ಕೆ ಬಂದಾಗಿತ್ತು ಅದೇನೆಂದರೆ ಕನ್ಯಾಕುಮಾರಿಗೆ ತಲುಪಿ ಅಲ್ಲಿನ ರಾಮಕೃಷ್ಣಾಶ್ರಮದಲ್ಲಿ ಸನ್ಯಾಸಿ ಆಗಿ ಬಿಡುವುದು ಇದು ಈಗ ನೆನಪಿಸಿಕೊಂಡರೆ ತಮಾಷೆ ಅನ್ನಿಸಿದರು ಅವತ್ತಿಗೆ ನಮ್ಮ ಜೀವನದ ಬಹುದೊಡ್ಡ ಗುರಿ ಆಗಿತ್ತು.
   ಗೆಳೆಯ ಇದಕ್ಕಾಗಿ ಕನ್ಯಾಕುಮಾರಿ ತಲುಪಲು ಶಾಲೆಯ ಭೂಪಟ ಅಭ್ಯಯಿಸಿ ನಕ್ಷೆ ತಯಾರಿಸಿದ್ದ, ನಮ್ಮ ಆನಂದಪುರಂನಿಂದ ಮಧ್ಯಾಹ್ನ ಒಂದು ಗಂಟೆಗೆ ಶಿಕಾರಿಪುರದಿಂದ ಹೊಸನಗರ ಹೋಗುವ ಗಜಾನನ ಬಸ್ಸಿನಲ್ಲಿ ಹೊಸನಗರ ತಲುಪುವುದು ಅಲ್ಲಿಂದ ಬೇರೆ ಬಸ್ಸಲ್ಲಿ ಕುಂದಾಪುರ ತಲುಪಿ ಅಲ್ಲಿನ ಸಮುದ್ರ ದಂಡೆಯಲ್ಲೇ ನಡೆಯುತ್ತಾ ಕನ್ಯಾಕುಮಾರಿ ತಲುಪುವುದು!.
  ದಾರಿಯ ಮೇಲೆ ಒ0ದೊತ್ತು ಮಾತ್ರ ಗಂಜಿ ಸೇವಿಸುವುದು, ಸ್ನಾನ ನಿದ್ದೆ ಕಡಲ ತೀರದಲ್ಲೇ ಅಂತ ತೀರ್ಮಾನಿಸಿ ಒಂದು ಗೋಣಿ ಚೀಲದಲ್ಲಿ ಅಕ್ಕಿ ಉಪ್ಪು ಮತ್ತು ಗಂಜಿ ಮಾಡಲು ಒಂದು ಪಾತ್ರೆ, ಗಂಜಿ ಬಡಿಸಿಕೊಳ್ಳುವ ಚಮಚ, ಎರೆಡು ತಟ್ಟೆ, ನೀರಿನ ಲೋಟ, ಚಾಪೆ ಮತ್ತು ನಮ್ಮಿಬ್ಬರ ಬಟ್ಟೆ ಮತ್ತು ಕೆಲವು ಪುಸ್ತಕ ಗೋಣಿ ಚೀಲದಲ್ಲಿ ಹಾಕಿ ಊರಿನ ಮುಸ್ಲಿಂ ಸ್ಮಶಾನದಲ್ಲಿ ಅಡಿಗಿಸಿಟ್ಟಿದ್ದೆವು.
   ಕುಂದಾಪುರ ತಲುಪಲು ಬೇಕಾದ 20 ರೂಪಾಯಿ ಒಟ್ಟು ಮಾಡಿಕೊಂಡು ನಿಶ್ಚಿತ ಜಾಗದಲ್ಲಿ ಕಾದು ನಿಂತರೆ ಅಲ್ಲಿಗೆ ಗೋಣಿ ಚೀಲದ ಜೊತೆ ಬರಬೇಕಾದ ಪುಪ್ಪಾ ಬರಲೇ ಇಲ್ಲ... ಗಜಾನನ ಬಸ್ಸು ಹೋದ ನಂತರ ಬಂದವ ತನ್ನ ತಾಯಿ ಬಿಟ್ಟು ಬರಲಾರದ ಅಸಹಾಯಕತೆ ಹೇಳಿಕೊಂಡ ನನಗೋ ನನ್ನ ಬಾಲ್ಯದಲ್ಲೇ ತಾಯಿ ಕಳೆದುಕೊಂಡಿದ್ದೆ.
  ನಂತರ ಗೋಣಿ ಚೀಲ ಸ್ವಸ್ಥಾನ ತಲುಪಿತು ಹೀಗೆ ಪ್ರಭಾವ ಬೀರಿದ ಪುಸ್ತಕವೆ ಸ್ವಾಮಿ ಶಿವಾನಂದರು ಬರೆದ #ಬ್ರಹ್ಮಚಾರ್ಯವೇ_ಜೀವನ_ವೀರ್ಯ_ನಾಶವೇ_ಮೃತ್ಯು ಎಂಬ ಪುಸ್ತಕ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಈಶ್ವರ ಸಣಕಲ್ಲ ರಬಕವಿ, ಇದನ್ನು ಪ್ರಕಟಿಸಿದವರು ಸಮಾಜ ಪುಸ್ತಕಾಲಯ ಶಿವಾಜಿ ಬೀದಿ ದಾರವಾಡ.
  ಇಂಗ್ಲೀಷ್ ನಲ್ಲಿ Chastity is life, sensuality is death ಮತ್ತು ಹಿಂದಿಯಲ್ಲಿ ಬ್ರಹ್ಮಚರ್ಯ ಹೈ ಜೀವನ್ - ವೀರ್ಯನಾಶಿಸೆ ಮೃತ್ಯು ಹೈ ಎಂಬ ಪುಸ್ತಕಗಳು ಪ್ರಸಿದ್ದಿ ಪಡೆದಿದೆ.
  177 ಪುಟಗಳ ಈ ಪುಸ್ತಕ ಕನ್ನಡದಲ್ಲಿ 1931 ರಲ್ಲಿ ಮೊದಲ ಮುದ್ರಣವಾಗಿ 2003ರ ವರೆಗೆ ಹನ್ನೊಂದು ಮುದ್ರಣವಾಗಿದೆ.
   ಈ ಪುಸ್ತಕದ ರೀತಿ ಸನ್ಯಾಸ ಜೀವನ ನಿಜವಾಗಿ ಆಚರಿಸುವವರು ಜೈನ ಮುನಿಗಳು ಮಾತ್ರ, ಈ ಪುಸ್ತಕ ಒಮ್ಮೆ ಓದಿದ ಹದಿಹರೆಯದ ಬಾಲಕ ತುಂಬಾ ಬದಲಾವಣೆ ಕಂಡುಕೊಳ್ಳುತ್ತಾನೆ, ಕನಿಷ್ಟ ಏಕ ಪತ್ನಿ ವೃತಸ್ಥ ಆಗೇ ಆಗುತ್ತಾನೆ, ರೋಡ್ ರೋಮಿಯೋ ಅತ್ಯಾಚಾರಿ ಆಗಲು ಸಾಧ್ಯವೇ ಇಲ್ಲ.
    ಈ ಪುಸ್ತಕ ಸನ್ಯಾಸದ ಹೆಸರಲ್ಲಿ ಮಠಾದೀಶರಾಗಿ ಅತ್ಯಾಚಾರ ಅನಾಚಾರದಿಂದ ಜೈಲು ಸೇರುವ ಸ್ವಾಮಿಗಳಿಗೆ ಸನ್ಯಾಸಾಶ್ರಮ ಸ್ವೀಕಾರಕ್ಕೆ ಮೊದಲೇ ಓದಲು ಕೊಟ್ಟಿದ್ದರೆ ಖಂಡಿತಾ ಅವರು ಸಚ್ಚಾರಿತ್ಯದಲ್ಲಿ ಇರುತ್ತಿದ್ದರೆಂದು ನನ್ನ ಅನಿಸಿಕೆ.
   ಈ ಪುಸ್ತಕದ ಪ್ರಭಾವ ಹೊಂದಿದ ಅನೇಕರು ಅವರ ಜೀವನ ಶೈಲಿ ಮಾದರಿಯಾಗಿ ಇರುವುದು ನಾನು ನೋಡಿದ್ದೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ