Skip to main content

Blog number 1047. ಕೆಳದಿ ರಾಜ ವೆಂಕಟಪ್ಪ ನಾಯಕರು ಮತ್ತು ರಂಗೋಲಿ ಪ್ರವೀಣೆ ಚಂಪಕಾಳ ದುರಂತ ಪ್ರೇಮದ ಸ್ಮಾರಕ ತಾಜ್ ಮಹಲ್ ಗೂ ಮೊದಲೇ ನಿರ್ಮಿಸಿದ ಚಂಪಕ ಸರಸ್ಸು ನಾಲ್ಕುನೂರನೆ ವರ್ಷಾಚಾರಣೆಯ ಹೊಸ್ತಿಲಲ್ಲಿ ಸಂಸದರು ಶಾಸಕರಿಂದ ಈ ಸ್ಮಾರಕ ಪ್ರವಾಸಿ ತಾಣ ಮಾಡುವ ಶಪಥ ಅಭಿನಂದನೀಯ.

#ಪ್ರವಾಸೋದ್ಯಮ_ತಾಣ_ಮಾಡುವ_ಪಣ_ತೊಟ್ಟ_ಶಿವಮೊಗ್ಗ_ಸಂಸದ_ರಾಘವೇ೦ದ್ರ_ಮತ್ತು_ಶಾಸಕ_ಹರತಾಳು_ಹಾಲಪ್ಪರಿಗೆ
#ಅಭಿನಂದನೆಗಳು.

#ನಿರ್ಮಾಣವಾಗಿ_ನಾಲ್ಕು_ನೂರು_ವರ್ಷಕ್ಕೆ_ಜನರ_ಗಮನ_ಸೆಳೆಯಿತು

#ಡಿಸೆಂಬರ್_24ಕ್ಕೆ_2024ಕ್ಕೆ_ನಾಲ್ಕುನೂರನೇ_ವಷಾ೯ಚಾರಣೆ

#ಉದ್ದೇಶ_ಪೂರ್ವಕವಾಗಿ_ಮುಚ್ಚಲ್ಪಟ್ಟ_ಕೆಳದಿ_ರಾಜ_ವೆಂಕಟಪ್ಪ_ನಾಯಕರು_ನಿರ್ಮಿಸಿದ_ಸ್ಮಾರಕ

#ನಾನು_ಬರೆದು_ಪ್ರಕಟಿಸಿದ_ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ
#ಬೆಸ್ತರ_ರಾಣಿ_ಚಂಪಕಾ_ಕಾದಂಬರಿ_ಸ್ಮಾರಕದ_ಅಭಿವೃದ್ದಿ_ಸಂಶೋದನೆಗೆ_ಕಾರಣವಾಗುತ್ತಿರುವುದು_ಆಶ್ಚಯ೯

    ಒಂದು ಪುಸ್ತಕ ಇಷ್ಟೆಲ್ಲ ಪರಿಣಾಮ ಬೀರಬಲ್ಲದಾ? ಗೊತ್ತಿಲ್ಲ, ಸರ್ಕಾರ ಜನರ ನಿರ್ಲಕ್ಷ್ಯದಿಂದ ಆತ್ಮಹತ್ಯಾ ತಾಣ, ಬೂತ ಪ್ರೇತ ಇದೆ ಎಂಬ ಭಯ ಹುಟ್ಟಿಸಿದ್ದ, ಚಂಪಕಾ ಎಂಬ ಸೂಳೆಗಾಗಿ ರಾಜ ನಿರ್ಮಿಸಿದ್ದಾರೆ ಎಂಬ ಜನರ ಬಾಯಲ್ಲಿ ಬರುತ್ತಿದ್ದ ಚಂಪಕಾ ಸರಸ್ಸು ನಿಮಿ೯ಸಿದ್ದಾದರು ಏಕೆ?.
   ನಾನು ಸ್ಥಳಿಯ ಜನಪದದಲ್ಲಿ ಇದ್ದ ಕಥೆಯ ಎಳೆ ಹಿಡಿದು ನಂತರ ಈಗ ಅಳಿಸಿ ಹೋದ ಲಾವಣಿಯಲ್ಲಿ ಕೇಳಿ, ಇಟಲಿ ಪ್ರವಾಸಿ ಡೊಲ್ಲಾ ವಲ್ಲೆ 1624 ರ ನವೆಂಬರ್ 8ಕ್ಕೆ ಕೆಳದಿ ರಾಜ ವೆಂಕಟಪ್ಪರ ಬೇಟಿ ಇಕ್ಕೇರಿಯಲ್ಲಿ ಮಾಡಿದಾಗ ನಮೂದಿಸಿದ ಪತ್ರ, ಇತಿಹಾಸಕಾರ ಹೆಚ್.ಎಲ್.ನಾಗೇಗೌಡರ ಸಂಪಾದಕತ್ವದ ಪ್ರವಾಸಿ ಕಂಡ ಇಂಡಿಯಾ ಮತ್ತು ಗೆಜೆಟಿಯರ್ ಮೂಲಗಳನ್ನು ಆದರಿಸಿ ಈ ಪುಸ್ತಕ ಬರೆದಿದ್ದೆ.
   ಇದು ಇತಿಹಾಸವನ್ನು ಆಧರಿಸಿದ ಕಾಲ್ಪನಿಕ ಕಾದಂಬರಿ ಆದರೆ ಕಣ್ಣೆದುರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ ಸುಂದರ ಸ್ಮಾರಕ ಅದನ್ನು ಸ್ವಾತಂತ್ರ್ಯ ಬಂದರೂ ಪುರಾತತ್ವ ಇಲಾಖೆಗೆ ಸೇರಿಲ್ಲ !?.
  ಪುರಾತತ್ವ ಇಲಾಖೆಗೆ ಸೇರಿಸಿ ಎಂಬ ದಾವೆ ಉಚ್ಚ ನ್ಯಾಯಾಲಯದಲ್ಲಿದೆ.
   ಈ ಪುಸ್ತಕವನ್ನು ನಾಲ್ಕು ವ್ಯಕ್ತಿ ಮತ್ತು ಸಂಸ್ಥೆಗೆ ಅಪ೯ಣೆ ಮಾಡಿದ್ದು ಪುಸ್ತಕದ ಮೂರನೆ ಪುಟದಲ್ಲಿ ಅಚ್ಚಿಸಿದ್ದೇನೆ
  * ಕೆಳದಿ ಸಮಗ್ರ ಅಧ್ಯಯನ ಎಂಬ ಸಂಶೋದನಾ ಗ್ರಂಥ ಪ್ರಕಟಿಸಿರುವ ಶ್ರೀಮದ್ ನಿರಂಜನ ಜಗದ್ಗುರು ಶ್ರೀಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳಿಗೆ 
* ಆನಂದಪುರಂ ಇತಿಹಾಸ ಪುಸ್ತಕ ತನ್ನ ಬೆಳ್ಳಿಹಬ್ಬಕ್ಕೆ ಪ್ರಕಟಿಸಿದ ಆನಂದಪುರಂನ ಪ್ರತಿಷ್ಟಿತ ಕನ್ನಡ ಸಂಘಕ್ಕೆ 
* ಚಂಪಕ ಸರಸ್ಸು ಪ್ರತಿ ವರ್ಷ ಸ್ಟಚ್ಚಗೊಳಿಸಿ ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಿರಂತರ ನಡೆಸಿಕೊಂಡು ಬರುತ್ತಿರುವ ಆನಂದಪುರಂ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಗೆ 
* ನಿರ೦ತರವಾಗಿ ಚಂಪಕ ಸರಸ್ಸುವಿನಲ್ಲಿ ಈಜು ಕಲಿಸುವ ಈಜು ಮಿತ್ರರ ಬಳಗಕ್ಕೆ ಅರ್ಪಿಸಲಾಗಿದೆ.
  ಮತ್ತು ನಾಲ್ಕನೆ ಪುಟದಲ್ಲಿ ನನ್ನ ಆಶಯ ಕೂಡ ದಾಖಲಿಸಿದ್ದೇನೆ ಅದೇನೆಂದರೆ... ಖ್ಯಾತ ಚಲನಚಿತ್ರ ನಟ ಯಶ್ ರಿಂದ ಪ್ರಾಥಮಿಕ ಅಭಿವೃದ್ಧಿ ಕೆಲಸವಾಯಿತು ಈಗ ಶಿವಮೊಗ್ಗ ಜಿಲ್ಲಾ ಸಂಸದರು ಸಾಗರ ವಿಧಾನಸಭಾ ಸದಸ್ಯರು ಹಂತ ಹಂತವಾಗಿ ಈ ಸ್ಮಾರಕದ ಅಭಿವೃದ್ದಿ ಮಾಡುವ ಭರವಸೆ ನೀಡಿದ್ದಾರೆ ಮತ್ತು ಮುರುಘ ರಾಜೇಂದ್ರ ಸ್ವಾಮಿಗಳು ಅವರನ್ನೆಲ್ಲ ಹುರಿದುಂಬಿಸಿದ್ದಾರೆ ಇದೇ ರೀತಿ ಎಲ್ಲರೂ ಸೇರಿ ನಾಲ್ಕುನೂರನೇ ವರ್ಷಾಚಾರಣೆಯೂ ನಡೆಸಲಿ ಎಂದು ಆಶಿಸುತ್ತೇನೆ.
   ಇದರಿಂದ ತಾಜ್ ಮಹಲಿಗಿಂತ ಮೊದಲೇ ನಿರ್ಮಾಣವಾದ ಈ ಪ್ರೇಮ ಸೌಧ ಮತ್ತು ಅದಕ್ಕೆ ಕಾರಣವಾಗಿರುವ  ಚಂಪಕಾಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ.
  ಸ್ಥಳಿಯ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು  ಚಂಪಕ ಸರಸ್ಸುವಿನಲ್ಲಿ ಹೆಚ್ಚು ಹೆಚ್ಚು ಕಾಯ೯ಕ್ರಮ ನಡೆಸುವುದರಿಂದ ಈ ಸ್ಮಾರಕ ಹೆಚ್ಚು ಜನಪ್ರಿಯವೂ ಆಗಿ ಜನರ ಗಮನವೂ ಸೆಳೆಯುತ್ತದೆ.
  ಇಡೀ ಕಾರ್ಯಕ್ರಮವನ್ನು ಪ್ರಜಾವಾಣಿ ಸ್ಥಳಿಯ ವರದಿಗಾರ ಮಲ್ಲಿಕಾರ್ಜುನ್ ಅತ್ಯುತ್ತಮವಾಗಿ ವರದಿ ಮಾಡಿ YouTube ನಲ್ಲಿ ಪ್ರಕಟಿಸಿದ್ದಾರೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ