Skip to main content

Blog number 1073. ನಿಜ ಭಾರತ ದರ್ಶನ ಭಾರತೀಯ ರೈಲಿನ ಸೆಕೆಂಡ್ ಕ್ಲಾಸ್ ಪ್ರಯಾಣದಲ್ಲಿ, ನಾನು ಮತ್ತು ನನ್ನ ಗೆಳೆಯರು ಬೆಂಗಳೂರಿಂದ ದೆಹಲಿಗೆ ಇಂತಹ ಪ್ರಯಾಣ ಮಾಡಿದ ಅನುಭವ.

#ಎರಡನೆ_ದರ್ಜೆ_ರೈಲು_ಪ್ರಯಾಣ.

#ನಿಜ_ಭಾರತ_ದೇಶದ_ದರ್ಶನ

#ಕಾಶ್ಮೀರದಿಂದ_ಕನ್ಯಾಕುಮಾರಿ_3573_ಕಿಮಿ_585_ರೂಪಾಯಿ.

#ಗಾಂಧೀಜಿ_ಭಾರತ_ದರ್ಶನ_ಮೂರನೆ_ದರ್ಜೆ_ರೈಲು_ಪ್ರಯಾಣದಲ್ಲಿ.

#ನನ್ನ_ಎರೆಡು_ಬಾರಿಯ_ದೆಹಲಿ_ಪ್ರಯಾಣ_ಎರಡನೆ_ದರ್ಜೆ_ರೈಲು_ಬೋಗಿಯ_ಪ್ರಯಾಣ.

  ಒಮ್ಮೆ ದೆಹಲಿಗೆ ಹೋಗಿ ಬರುವ ಕಾಯ೯ಕ್ರಮ ಇತ್ತು, ಕೆಲವರು ಪ್ರಥಮ ದರ್ಜೆ, ಸ್ಲೀಪಿಂಗ್ ಕೋಚ್ ಇತ್ಯಾದಿ ಮುಂಗಡ ಕಾಯ್ದಿರಿಸಿದ್ದರು ನಾನು ಮತ್ತು ಅನೇಕ ಗೆಳೆಯರು ಸೆಕೆಂಡ್ ಕ್ಲಾಸ್ ನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ತೀರ್ಮಾನ ಮಾಡಿದೆವು.
  ಇದಕ್ಕೆ ಕಾರಣ ಗಾಂಧಿ ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೇಸ್ ಅಧ್ಯಕ್ಷರಾಗಬೇಕೆಂಬ ತೀರ್ಮಾನದ ನಂತರದಲ್ಲಿ ಭಾರತ ದರ್ಶನ ಮಾಡಬೇಕೆಂಬುದಾಗಿತ್ತು.
  ಆಗ ಬ್ರಿಟೀಶ್ ಆಡಳಿತದಲ್ಲಿ ಥರ್ಡ್ ಕ್ಲಾಸ್ ಎಂಬ ದರ್ಜೆ ಬೋಗಿಗಳಿತ್ತು ಅದರಲ್ಲಿಯೇ ಅವರು ಪ್ರಯಾಣಿಸುತ್ತಾರೆ ನಿಜವಾದ ಭಾರತ ದರ್ಶನ ಗೊತ್ತಾಗಬೇಕಾದರೆ ಈ ಮೂರನೆ ದರ್ಜೆಯಲ್ಲಿ ಪ್ರಯಾಣಿಸಬೇಕು ಎಂದು ಬರೆದಿದ್ದಾರೆ.
  ನಾವು ಎರಡನೆ ದರ್ಜೆ ಸಾಮಾನ್ಯ ಬೋಗಿಯಲ್ಲಿ (ಸ್ವಾತಂತ್ರ ನಂತರ ಮೂರನೆ ದರ್ಜೆ ಎಂಬ ಹೆಸರು ರದ್ದಾಗಿದೆ) ಪ್ರಯಾಣಿಸುವುದು ಕೇಳಿ ಅನುಭವಿ ಹಿರಿಯರು ಬುದ್ದಿ ಹೇಳಿದರು ಸುಮಾರು 40 ಗಂಟೆಯ ಎರಡು ರಾತ್ರಿಯ ದೆಹಲಿ ಪ್ರಯಾಣ ಈ ಬೋಗಿಯಲ್ಲಿ ಕಷ್ಟದಾಯಕ ಅಂದರೂ ನನ್ನ ತೀರ್ಮಾನ ಅಚಲವಾಗಿತ್ತು.
  ಮಹಾರಾಷ್ಟ್ರ ದಾಟಿದ ನಂತರ ಅದರ ಅನುಭವ ಆಗಲು ಪ್ರಾರಂಭ ಆಯಿತು, ಇಡೀ ಬೋಗಿಯಲ್ಲಿ ಕಾಲಿಡಲು ಜಾಗವಿಲ್ಲ, ಸೀಟಿನ ಕೆಳಗೂ ನಿದ್ದೆ ಮಾಡುವ ಜನ, ಮುಂದಿನ ನಿಲ್ದಾಣದಲ್ಲಿ ಬೇರಾರು ಈ ಬೋಗಿಗೆ ಹತ್ತದಂತೆ ಒಳಗೆ ಇರುವ ಇವರ ಜಗಳ, ಪ್ರಯಾಣ ಮಾಡಲೇ ಬೇಕಾದ ನಿಲ್ದಾಣದಲ್ಲಿ ಕಾಯುವ ಆ ಜನರೂ ಮಾಡುವ ಗಲಾಟೆ ನಂತರ ಸುಖಾಂತ್ಯ.
  ಆದರೆ ಮತ್ತೆ ಮುಂದಿನ ನಿಲ್ದಾಣದಲ್ಲಿ ಬೇರಾರು ಈ ಬೋಗಿಗೆ ಹತ್ತಬಾರದೆಂದು ಜಗಳ ಮಾಡುವವರು ಹಿಂದಿನ ನಿಲ್ದಾಣದಲ್ಲಿ ಜಗಳ ಮಾಡಿ ಹತ್ತಿದವರೇ!!.
  ಶ್ರಮ ಜೀವಿಗಳ ಬೆವರಿನ -ಬೀಡಿ ತಂಬಾಕಿನ - ತಲೆಗೆ ಹಾಕುವ ಸಾಸಿವೆ ಎಣ್ಣೆ ವಾಸನೆಗಳಿಂದ, ಜನದಟ್ಟಣೆಯ ಬಿಸಿಯಿಂದ, ಅವರವರ ಬಾಷೆಯ ಮಾತು ಕಥೆ, ಜಗಳಗಳಿಂದ ಇಡೀ ಬೋಗಿಯೇ ಒಂದು ಮಿನಿ ಭಾರತವಾಗಿರುತ್ತಿತ್ತು.
  ಇದರ ಮಧ್ಯ ಪ್ರಯಾಣಿಕರ ಮನರಂಜಿಸಲು ಬರುವ ಹಾಡುಗಾರರು, ತೃತಿಯ ಲಿಂಗಿಗಳು, ಭಜನಾ ಕಾರರಿಗೆ ಟಿಕೇಟ್ ಇಲ್ಲದೆ ಪ್ರಯಾಣಿಸುವ ಈ ಬಡ ಕೂಲಿ ಕಾರ್ಮಿಕರು ಕೈಯಲಾದ ಕಾಸು ಭಕ್ಷೀಸು ನೀಡುವುದು ವಿಶೇಷವೇ.
   ಪ್ರಯಾಣದ ಪ್ರಾರಂಭದಲ್ಲಿ ನಮ್ಮ ವೇಷ ಭೂಷಣ, ಪತ್ರಿಕೆ ಪುಸ್ತಕ ಓದುವುದು ನೋಡಿ ಅಂತರ ಕಾಪಾಡಿಕೊಂಡ ಅವರೆಲ್ಲ ನಂತರ ನಾವೆಲ್ಲ ಅವರಿಗೆ ಅವರ ಮಕ್ಕಳಿಗೆ ತಿಂಡಿ ತೀರ್ಥ ಕೊಡಿಸಿದಾಗ ಅವರನ್ನೂ ನಮ್ಮವರಂತೆ ಕಂಡಾಗ ಅವರೆಲ್ಲ ನಮಗೆ ಸಹಕರಿಸುತ್ತಿದ್ದರು.
  ಅವರ ಪ್ರಯಾಣದ ಉದ್ದೇಶ ಒಂದೇ ಕೂಲಿಗಾಗಿ ಊರಿಂದ ಇನ್ನೊಂದು ಪಟ್ಟಣಕ್ಕೆ ಅಥವ ವರ್ಷ ಪೂರ್ತಿ ದುಡಿದು ಗಳಿಸಿ ಊರಿಗೆ ಮರು ಪ್ರಯಾಣ ಅವರದ್ದು.
   ಅವರ ಬಾಯಲ್ಲಿ ಈ ರೀತಿ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಕ್ಕೆ ಅವರು ಕರೆಯುವುದು ಚಾಲೂ ಬೋಗಿ ಅಂತ ಹೆಚ್ಚಿನವರು ಟಿಕೇಟ್ ಖರೀದಿಸುವುದಿಲ್ಲ ಇವರನ್ನೆಲ್ಲ ಟೀಟಿ ತಪಾಸಣಿ ಮಾಡುವುದೂ ತ್ರಾಸದಾಯಕವೇ.
  ತಂಬಾಕುವಿನ ವಿವಿದ ಪ್ರಕಾರಗಳು ಇವರ ಚಟವಾಗಿದೆ ಹೆಚ್ಚಿನವರು ಪ್ರಯಾಣದಲ್ಲಿ ಉಪವಾಸವೇ ಅಭ್ಯಾಸ.
  ಇದೇ ರೀತಿ ಇನ್ನೊಮ್ಮೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಹೋರಾಟಕ್ಕೆ ದೆಹಲಿಗೆ ಸುಮಾರು 35 ಜನ ಎರಡನೆ ದಜೆ೯ಯಲ್ಲೇ ಪ್ರಯಾಣ ಮಾಡಿದ್ದೆವು, ಬೋಗಿಗೆ ನಮ್ಮ ಬ್ಯಾನರ್ (ನಾವು ಹೆಚ್ಚು ಜನ ಇದ್ದಿದ್ದರಿಂದ 😀) ನೋಡಿ ಭಾರತದ ಜನ ಸಾಮಾನ್ಯ ರೈಲು ಪ್ರಯಾಣಿಕರು ಗೌರವದಿಂದ ಸಹಕಾರವೂ ನೀಡಿದರು.
  ಆಗಿನ 20 ವರ್ಷದ ಹಿಂದಿನ ರೈಲ್ವೆ ವ್ಯವಸ್ಥೆ ತುಂಬಾ ಬದಲಾಗಿದೆ ಇನ್ನೂ ಹೆಚ್ಚಿನ ಸುಧಾರಣೆಯೂ ಆಗಬೇಕು.
  ನಿಜಕ್ಕೂ ಈ ರೀತಿ ಎರಡನೆ ದರ್ಜೆ ರೈಲು ಪ್ರಯಾಣದಿಂದ ನಿಜ ಭಾರತ ದರ್ಶನ ಆಗುತ್ತದೆ ಆದರೆ ಇದನ್ನೆಲ್ಲ ಅನುಭವಿಸಲು ತಾಳ್ಮೆ ಬೇಕು, ಅತ್ಯಂತ ಕಡಿಮೆ ಹಣದಲ್ಲಿ ದೇಶದ ಒಂದು ಮೂಲೆಯಿಂದ ಪ್ರಯಾಣ ಮಾಡುವುದೆಂದರೆ ದೊಡ್ಡ ವಿಸ್ಮಯವೆ ಆಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ