Skip to main content

Blog number 1073. ನಿಜ ಭಾರತ ದರ್ಶನ ಭಾರತೀಯ ರೈಲಿನ ಸೆಕೆಂಡ್ ಕ್ಲಾಸ್ ಪ್ರಯಾಣದಲ್ಲಿ, ನಾನು ಮತ್ತು ನನ್ನ ಗೆಳೆಯರು ಬೆಂಗಳೂರಿಂದ ದೆಹಲಿಗೆ ಇಂತಹ ಪ್ರಯಾಣ ಮಾಡಿದ ಅನುಭವ.

#ಎರಡನೆ_ದರ್ಜೆ_ರೈಲು_ಪ್ರಯಾಣ.

#ನಿಜ_ಭಾರತ_ದೇಶದ_ದರ್ಶನ

#ಕಾಶ್ಮೀರದಿಂದ_ಕನ್ಯಾಕುಮಾರಿ_3573_ಕಿಮಿ_585_ರೂಪಾಯಿ.

#ಗಾಂಧೀಜಿ_ಭಾರತ_ದರ್ಶನ_ಮೂರನೆ_ದರ್ಜೆ_ರೈಲು_ಪ್ರಯಾಣದಲ್ಲಿ.

#ನನ್ನ_ಎರೆಡು_ಬಾರಿಯ_ದೆಹಲಿ_ಪ್ರಯಾಣ_ಎರಡನೆ_ದರ್ಜೆ_ರೈಲು_ಬೋಗಿಯ_ಪ್ರಯಾಣ.

  ಒಮ್ಮೆ ದೆಹಲಿಗೆ ಹೋಗಿ ಬರುವ ಕಾಯ೯ಕ್ರಮ ಇತ್ತು, ಕೆಲವರು ಪ್ರಥಮ ದರ್ಜೆ, ಸ್ಲೀಪಿಂಗ್ ಕೋಚ್ ಇತ್ಯಾದಿ ಮುಂಗಡ ಕಾಯ್ದಿರಿಸಿದ್ದರು ನಾನು ಮತ್ತು ಅನೇಕ ಗೆಳೆಯರು ಸೆಕೆಂಡ್ ಕ್ಲಾಸ್ ನಲ್ಲಿ ಜನರಲ್ ಬೋಗಿಯಲ್ಲಿ ಪ್ರಯಾಣಿಸುವ ತೀರ್ಮಾನ ಮಾಡಿದೆವು.
  ಇದಕ್ಕೆ ಕಾರಣ ಗಾಂಧಿ ಅವರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೇಸ್ ಅಧ್ಯಕ್ಷರಾಗಬೇಕೆಂಬ ತೀರ್ಮಾನದ ನಂತರದಲ್ಲಿ ಭಾರತ ದರ್ಶನ ಮಾಡಬೇಕೆಂಬುದಾಗಿತ್ತು.
  ಆಗ ಬ್ರಿಟೀಶ್ ಆಡಳಿತದಲ್ಲಿ ಥರ್ಡ್ ಕ್ಲಾಸ್ ಎಂಬ ದರ್ಜೆ ಬೋಗಿಗಳಿತ್ತು ಅದರಲ್ಲಿಯೇ ಅವರು ಪ್ರಯಾಣಿಸುತ್ತಾರೆ ನಿಜವಾದ ಭಾರತ ದರ್ಶನ ಗೊತ್ತಾಗಬೇಕಾದರೆ ಈ ಮೂರನೆ ದರ್ಜೆಯಲ್ಲಿ ಪ್ರಯಾಣಿಸಬೇಕು ಎಂದು ಬರೆದಿದ್ದಾರೆ.
  ನಾವು ಎರಡನೆ ದರ್ಜೆ ಸಾಮಾನ್ಯ ಬೋಗಿಯಲ್ಲಿ (ಸ್ವಾತಂತ್ರ ನಂತರ ಮೂರನೆ ದರ್ಜೆ ಎಂಬ ಹೆಸರು ರದ್ದಾಗಿದೆ) ಪ್ರಯಾಣಿಸುವುದು ಕೇಳಿ ಅನುಭವಿ ಹಿರಿಯರು ಬುದ್ದಿ ಹೇಳಿದರು ಸುಮಾರು 40 ಗಂಟೆಯ ಎರಡು ರಾತ್ರಿಯ ದೆಹಲಿ ಪ್ರಯಾಣ ಈ ಬೋಗಿಯಲ್ಲಿ ಕಷ್ಟದಾಯಕ ಅಂದರೂ ನನ್ನ ತೀರ್ಮಾನ ಅಚಲವಾಗಿತ್ತು.
  ಮಹಾರಾಷ್ಟ್ರ ದಾಟಿದ ನಂತರ ಅದರ ಅನುಭವ ಆಗಲು ಪ್ರಾರಂಭ ಆಯಿತು, ಇಡೀ ಬೋಗಿಯಲ್ಲಿ ಕಾಲಿಡಲು ಜಾಗವಿಲ್ಲ, ಸೀಟಿನ ಕೆಳಗೂ ನಿದ್ದೆ ಮಾಡುವ ಜನ, ಮುಂದಿನ ನಿಲ್ದಾಣದಲ್ಲಿ ಬೇರಾರು ಈ ಬೋಗಿಗೆ ಹತ್ತದಂತೆ ಒಳಗೆ ಇರುವ ಇವರ ಜಗಳ, ಪ್ರಯಾಣ ಮಾಡಲೇ ಬೇಕಾದ ನಿಲ್ದಾಣದಲ್ಲಿ ಕಾಯುವ ಆ ಜನರೂ ಮಾಡುವ ಗಲಾಟೆ ನಂತರ ಸುಖಾಂತ್ಯ.
  ಆದರೆ ಮತ್ತೆ ಮುಂದಿನ ನಿಲ್ದಾಣದಲ್ಲಿ ಬೇರಾರು ಈ ಬೋಗಿಗೆ ಹತ್ತಬಾರದೆಂದು ಜಗಳ ಮಾಡುವವರು ಹಿಂದಿನ ನಿಲ್ದಾಣದಲ್ಲಿ ಜಗಳ ಮಾಡಿ ಹತ್ತಿದವರೇ!!.
  ಶ್ರಮ ಜೀವಿಗಳ ಬೆವರಿನ -ಬೀಡಿ ತಂಬಾಕಿನ - ತಲೆಗೆ ಹಾಕುವ ಸಾಸಿವೆ ಎಣ್ಣೆ ವಾಸನೆಗಳಿಂದ, ಜನದಟ್ಟಣೆಯ ಬಿಸಿಯಿಂದ, ಅವರವರ ಬಾಷೆಯ ಮಾತು ಕಥೆ, ಜಗಳಗಳಿಂದ ಇಡೀ ಬೋಗಿಯೇ ಒಂದು ಮಿನಿ ಭಾರತವಾಗಿರುತ್ತಿತ್ತು.
  ಇದರ ಮಧ್ಯ ಪ್ರಯಾಣಿಕರ ಮನರಂಜಿಸಲು ಬರುವ ಹಾಡುಗಾರರು, ತೃತಿಯ ಲಿಂಗಿಗಳು, ಭಜನಾ ಕಾರರಿಗೆ ಟಿಕೇಟ್ ಇಲ್ಲದೆ ಪ್ರಯಾಣಿಸುವ ಈ ಬಡ ಕೂಲಿ ಕಾರ್ಮಿಕರು ಕೈಯಲಾದ ಕಾಸು ಭಕ್ಷೀಸು ನೀಡುವುದು ವಿಶೇಷವೇ.
   ಪ್ರಯಾಣದ ಪ್ರಾರಂಭದಲ್ಲಿ ನಮ್ಮ ವೇಷ ಭೂಷಣ, ಪತ್ರಿಕೆ ಪುಸ್ತಕ ಓದುವುದು ನೋಡಿ ಅಂತರ ಕಾಪಾಡಿಕೊಂಡ ಅವರೆಲ್ಲ ನಂತರ ನಾವೆಲ್ಲ ಅವರಿಗೆ ಅವರ ಮಕ್ಕಳಿಗೆ ತಿಂಡಿ ತೀರ್ಥ ಕೊಡಿಸಿದಾಗ ಅವರನ್ನೂ ನಮ್ಮವರಂತೆ ಕಂಡಾಗ ಅವರೆಲ್ಲ ನಮಗೆ ಸಹಕರಿಸುತ್ತಿದ್ದರು.
  ಅವರ ಪ್ರಯಾಣದ ಉದ್ದೇಶ ಒಂದೇ ಕೂಲಿಗಾಗಿ ಊರಿಂದ ಇನ್ನೊಂದು ಪಟ್ಟಣಕ್ಕೆ ಅಥವ ವರ್ಷ ಪೂರ್ತಿ ದುಡಿದು ಗಳಿಸಿ ಊರಿಗೆ ಮರು ಪ್ರಯಾಣ ಅವರದ್ದು.
   ಅವರ ಬಾಯಲ್ಲಿ ಈ ರೀತಿ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಕ್ಕೆ ಅವರು ಕರೆಯುವುದು ಚಾಲೂ ಬೋಗಿ ಅಂತ ಹೆಚ್ಚಿನವರು ಟಿಕೇಟ್ ಖರೀದಿಸುವುದಿಲ್ಲ ಇವರನ್ನೆಲ್ಲ ಟೀಟಿ ತಪಾಸಣಿ ಮಾಡುವುದೂ ತ್ರಾಸದಾಯಕವೇ.
  ತಂಬಾಕುವಿನ ವಿವಿದ ಪ್ರಕಾರಗಳು ಇವರ ಚಟವಾಗಿದೆ ಹೆಚ್ಚಿನವರು ಪ್ರಯಾಣದಲ್ಲಿ ಉಪವಾಸವೇ ಅಭ್ಯಾಸ.
  ಇದೇ ರೀತಿ ಇನ್ನೊಮ್ಮೆ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ಹೋರಾಟಕ್ಕೆ ದೆಹಲಿಗೆ ಸುಮಾರು 35 ಜನ ಎರಡನೆ ದಜೆ೯ಯಲ್ಲೇ ಪ್ರಯಾಣ ಮಾಡಿದ್ದೆವು, ಬೋಗಿಗೆ ನಮ್ಮ ಬ್ಯಾನರ್ (ನಾವು ಹೆಚ್ಚು ಜನ ಇದ್ದಿದ್ದರಿಂದ 😀) ನೋಡಿ ಭಾರತದ ಜನ ಸಾಮಾನ್ಯ ರೈಲು ಪ್ರಯಾಣಿಕರು ಗೌರವದಿಂದ ಸಹಕಾರವೂ ನೀಡಿದರು.
  ಆಗಿನ 20 ವರ್ಷದ ಹಿಂದಿನ ರೈಲ್ವೆ ವ್ಯವಸ್ಥೆ ತುಂಬಾ ಬದಲಾಗಿದೆ ಇನ್ನೂ ಹೆಚ್ಚಿನ ಸುಧಾರಣೆಯೂ ಆಗಬೇಕು.
  ನಿಜಕ್ಕೂ ಈ ರೀತಿ ಎರಡನೆ ದರ್ಜೆ ರೈಲು ಪ್ರಯಾಣದಿಂದ ನಿಜ ಭಾರತ ದರ್ಶನ ಆಗುತ್ತದೆ ಆದರೆ ಇದನ್ನೆಲ್ಲ ಅನುಭವಿಸಲು ತಾಳ್ಮೆ ಬೇಕು, ಅತ್ಯಂತ ಕಡಿಮೆ ಹಣದಲ್ಲಿ ದೇಶದ ಒಂದು ಮೂಲೆಯಿಂದ ಪ್ರಯಾಣ ಮಾಡುವುದೆಂದರೆ ದೊಡ್ಡ ವಿಸ್ಮಯವೆ ಆಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...