Skip to main content

Blog number 1065. ಕೇರಳದ ಆಗಿನ ಮುಖ್ಯಮಂತ್ರಿ ಕೆ.ಕರುಣಾಕರನ್ ರವರು ಗುರುವಾಯನೂರು ಶ್ರೀಕೃಷ್ಣ ದೇವಾಲಯಕ್ಕೆ ಆನೆ ನೀಡುವ ಹರಕೆಯ ಶೀಘ್ರ ಈಡೇರಿಸಲು ಅವರ ವಿದಾನ ಸಭಾ ಕ್ಷೇತ್ರದ ಪ್ರಮುಖ ಪಣಿಕರ್ ಗೆ ಶಿವಮೊಗ್ಗದ ಸಕ್ರೆಬೈಲು ಆನೆ ಖರೀದಿಸಲು ನಾನು ನೆರವಾದ 1995ರ ಘಟನೆ ನೆನಪಾಯಿತು.

#ಆನೆ_ಯಾರಿಗೆ_ಇಷ್ಟ_ಇಲ್ಲ_ಹೇಳಿ

#ಆನೆ_ಎಂದರೆ_ಎಲ್ಲರಿಗೂ_ಪ್ರೀತಿ_ಪಾತ್ರ_ಪ್ರಾಣಿ

#ಕನಸಲ್ಲಿ_ಯಾವಾಗಲೂ_ಆನೆಗಳೇ_ಕಾಣುವ_ನನಗೆ_ಆನೆ_ಸಾಕುವ_ಆಸೆ_ಬಾಲ್ಯದಿಂದ

#ಅಮರ_ಸುಳ್ಯ_ಹೋರಾಟದ_ಮನೆತನದ_ಅರೆಬಾಸೆಯ_ಲೇಖಕ_ಕೃಷಿಕ_ತೇಜ್_ಕುಮಾರರು_ಆನೆ_ಕೊಡುತ್ತಾರಂತೆ😀

#ಹೀಗಾಗಿ_ಇದು_ಅನೇ_ವೃತ್ತಾಂತದ_ಪೋಸ್ಟ್

#ಆನೆ_ಜೊತೆಗೆ_ಮಾಹುತರನ್ನು_ಸಾಕಬೇಕು.

   ಕೇರಳದ ಮುಖ್ಯಮಂತ್ರಿ ಕೆ.ಕರುಣಾಕರನ್ ಗುರುವಾಯೂರು ಕೃಷ್ಣ ದೇವಾಲಯಕ್ಕೆ ಆನೆ ನೀಡುವ ಹರಕೆ ತೀರಿಸಲು ರಾಜ್ಯ ಸರಕಾರಕ್ಕೆ ಆನೆಗಾಗಿ ಅರ್ಜಿ ಸಲ್ಲಿಸಿದ್ದರು, ಅಂತಿಮವಾಗಿ ನಮ್ಮ ಶಿವಮೊಗ್ಗ ಜಿಲ್ಲೆಯ ಸಕ್ಕರೆಬೈಲು ಆನೆ ಸಫಾರಿಯಿಂದ 65 ಸಾವಿರ ಡಿಡಿ ಪಾವತಿಸಿಕೊಂಡು ಆನೆ ನೀಡಲು ಆಗಿನ ಜನತಾ ದಳದ ಸರ್ಕಾರ ಆದೇಶಿಸಿತ್ತು.
  ಆದರೆ ಕರುಣಾಕರನ್ ಕ್ಷೇತ್ರ ಮಾಲಾದ ಚುನಾವಣಾ ಉಸ್ತುವಾರಿ ಪಣಿಕರ್ ಶಿವಮೊಗ್ಗಕ್ಕೆ DD ಜೊತೆ ಬಂದು ಎಷ್ಟೇ ಪ್ರಯತ್ನಿಸಿದರೂ ಆನೆ ವಿತರಣೆ ಕೆಲಸ ವಿಳಂಭ ಆಗುತ್ತಿತ್ತು ಕಾರಣ ಕರ್ನಾಟಕ ರಾಜ್ಯದಲ್ಲಿ ಜನತಾ ದಳ ಸರ್ಕಾರ ಕೇರಳ ಕಾಂಗ್ರೇಸ್ ಗೆ ಸಹಕರಿಸುತ್ತಿರಲಿಲ್ಲವಂತೆ.
   ಆಗ ಶಿವಮೊಗ್ಗದ ಜಿಲ್ಲಾ ಪಂಚಾಯತ್ ನಲ್ಲಿ ನನ್ನದೇ ಆದ ಹೋರಾಟಗಳಿಂದ ನಾನು ಪ್ರಸಿದ್ದಿ ಪಡೆದಿದ್ದರಿಂದ ಪಣಿಕರ್ ನನ್ನ ಸಹಾಯ ಕೇಳಿದರು, ಆಗಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಬಲ್ಕೀಷ್ ಬಾನು ಅವರು ಜನತಾ ದಳದವರು ಮತ್ತು ಜೆ.ಹೆಚ್.ಪಟೇಲರ ಅನುಯಾಯಿಗಳು.
     ವಿರೋದ ಪಕ್ಷದ ನನ್ನ ಹೋರಾಟ ಸದಾ ಬೆಂಬಲಿಸುವ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ನೀಡುವ ವಿದ್ಯಾವಂತ ಮುಸ್ಲಿಂ ಮಹಿಳೆ ಆದ್ದರಿಂದ ಅವರ ಸಹಾಯ ಕೇಳಿದೆವು ತಕ್ಷಣ ಅವತ್ತೇ ಸಂಜೆ ಆನೆ ಲಾರಿ ಏರಿ ಕೇರಳದ ಗುರುವಾಯೂರು ದೇವಸ್ಥಾನದ ಕಡೆ ಹೊರಟಿತು.
   ಪಣಿಕರ್ ಕೇರಳಕ್ಕೆ ಆಹ್ವಾನಿಸಿದರು, ಕರುಣಾಕರ್ ಬೇಟಿಗೂ ವ್ಯವಸ್ಥೆ ಮಾಡಿದರು ಆದರೆ ಸಮಯ ಕೂಡಿ ಬರಲಿಲ್ಲ, 1996ರ ಚುನಾವಣೆಯಲ್ಲಿ ಅವರು ಸೋತರು ಪಣಿಕ್ಕರ್ ಇದಾರೋ ಇಲ್ಲ ಗೊತ್ತಿಲ್ಲ.
    ಆದರೆ ಕೇರಳದ ಮುಖ್ಯಮಂತ್ರಿ ಕೆ.ಕರುಣಾಕರ್ ಅವರ ಹರಕೆಯ ಆನೆ ಸಲ್ಲಿಸುವ ಕೆಲಸದಲ್ಲಿ ನನ್ನ ತೃಣ ಮಾತ್ರದ ಸಹಕಾರ ಗುರುವಾಯೂರು ಶ್ರೀಕೃಷ್ಣನಿಗೆ ತಲುಪಿದೆ ಎಂಬ ಭಾವನೆ ನನ್ನದು.
   ಗುಂಡೂರಾವ್ ಸರ್ಕಾರದ ಪತನದ ನಂತರ ಅನೇಕ ವರ್ಷಗಳ ನಂತರ 1989 ರಲ್ಲಿ ಸಾಗರ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಗೋಡು ತಿಮ್ಮಪ್ಪರ ವಿಜಯೋತ್ಸವಕ್ಕೆ ಆನೆ ತರಿಸಿದ್ದೆ.
  ಊರಿಗೆ ಬರುವ ಆನೆಗೆ ಮತ್ತು ಮಾಹುತರಿಗೆ ಕಪ್ಪ ಕಾಣಿಕೆ ಸಲ್ಲಿಸಿ ಸಂತೋಷ ಪಡುವುದು ನನ್ನ ಅಭ್ಯಾಸ, ನನ್ನ ಮತ್ತು ಆನೆ ಸಂಬಂದ ನೋಡಿದ ಗೆಳೆಯರಾದ ತರಕಾರಿ ವ್ಯಾಪಾರಿ ನ್ಯಾಮತಿ ಉಮೇಶರು, ಯಾವುದೋ ಒಂದು ಮಠದ ಆನೆ ಒಂದು ತಿಂಗಳು ಸಾಕಲು ನನ್ನ ಸುಪರ್ದಿಗೆ ಬಿಡುವ ಮಾತು ಕಥೆ ಆಗಿತ್ತು ಅಷ್ಟರಲ್ಲಿ ಅವರಿಗೆ ಪಾರ್ಶ್ವವಾಯು ಆಗಿದ್ದರಿಂದ ಕಾರ್ಯರೂಪಕ್ಕೆ ಬರಲಿಲ್ಲ.
   ಅಮರ ಸುಳ್ಯ ಸ್ವಾತಂತ್ರ ಹೋರಾಟದ ಮನೆತನದ ಅರೆ ಬಾಸೆಯ ಖ್ಯಾತ ಬರಹಗಾರ ಮತ್ತು ಕೃಷಿಕ ಕೆ.ಆರ್. ತೇಜ್ ಕುಮಾರ್ ಆನೆ ಸಾಕಲು ಕೊಡಿಸುವುದಾಗಿ (ತಮಾಷೆಗಾಗಿ ಇರಬಹುದು) ಪೇಸ್ ಬುಕ್ ನಲ್ಲಿ ಬರೆದಾಗ ಇದೆಲ್ಲ ನೆನಪಾಯಿತು.
  ಕೆ.ಆರ್. ತೇಜ್ ಕುಮಾರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://arunprasadhombuja.blogspot.com/2022/09/blog-number-972_18.html
   ನನ್ನ ಜೀವನದಲ್ಲಿ ಆನೆ ಸಾಕುವ ಮತ್ತು ಈಜು ಕೊಳ ನಿರ್ಮಿಸುವ ಆಸೆ ಇನ್ನೂ ನನಸಾಗಿಲ್ಲ ಆದ್ದರಿಂದ ಮುಂದಿನ ದಿನದಲ್ಲಿ ಆ ಕನಸು ನನಸು ಮಾಡುವ ಪ್ರಯತ್ನ ಮಾಡಬೇಕಾಗಿದೆ.
  ಆನೆನಾದರೂ ಸಾಕಬಹುದು ಮಾಹುತರನ್ನು ಸಾಕುವುದು ಕಷ್ಟ ಅನ್ನುತ್ತಾರೆ!?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...