Skip to main content

Blog number 1065. ಕೇರಳದ ಆಗಿನ ಮುಖ್ಯಮಂತ್ರಿ ಕೆ.ಕರುಣಾಕರನ್ ರವರು ಗುರುವಾಯನೂರು ಶ್ರೀಕೃಷ್ಣ ದೇವಾಲಯಕ್ಕೆ ಆನೆ ನೀಡುವ ಹರಕೆಯ ಶೀಘ್ರ ಈಡೇರಿಸಲು ಅವರ ವಿದಾನ ಸಭಾ ಕ್ಷೇತ್ರದ ಪ್ರಮುಖ ಪಣಿಕರ್ ಗೆ ಶಿವಮೊಗ್ಗದ ಸಕ್ರೆಬೈಲು ಆನೆ ಖರೀದಿಸಲು ನಾನು ನೆರವಾದ 1995ರ ಘಟನೆ ನೆನಪಾಯಿತು.

#ಆನೆ_ಯಾರಿಗೆ_ಇಷ್ಟ_ಇಲ್ಲ_ಹೇಳಿ

#ಆನೆ_ಎಂದರೆ_ಎಲ್ಲರಿಗೂ_ಪ್ರೀತಿ_ಪಾತ್ರ_ಪ್ರಾಣಿ

#ಕನಸಲ್ಲಿ_ಯಾವಾಗಲೂ_ಆನೆಗಳೇ_ಕಾಣುವ_ನನಗೆ_ಆನೆ_ಸಾಕುವ_ಆಸೆ_ಬಾಲ್ಯದಿಂದ

#ಅಮರ_ಸುಳ್ಯ_ಹೋರಾಟದ_ಮನೆತನದ_ಅರೆಬಾಸೆಯ_ಲೇಖಕ_ಕೃಷಿಕ_ತೇಜ್_ಕುಮಾರರು_ಆನೆ_ಕೊಡುತ್ತಾರಂತೆ😀

#ಹೀಗಾಗಿ_ಇದು_ಅನೇ_ವೃತ್ತಾಂತದ_ಪೋಸ್ಟ್

#ಆನೆ_ಜೊತೆಗೆ_ಮಾಹುತರನ್ನು_ಸಾಕಬೇಕು.

   ಕೇರಳದ ಮುಖ್ಯಮಂತ್ರಿ ಕೆ.ಕರುಣಾಕರನ್ ಗುರುವಾಯೂರು ಕೃಷ್ಣ ದೇವಾಲಯಕ್ಕೆ ಆನೆ ನೀಡುವ ಹರಕೆ ತೀರಿಸಲು ರಾಜ್ಯ ಸರಕಾರಕ್ಕೆ ಆನೆಗಾಗಿ ಅರ್ಜಿ ಸಲ್ಲಿಸಿದ್ದರು, ಅಂತಿಮವಾಗಿ ನಮ್ಮ ಶಿವಮೊಗ್ಗ ಜಿಲ್ಲೆಯ ಸಕ್ಕರೆಬೈಲು ಆನೆ ಸಫಾರಿಯಿಂದ 65 ಸಾವಿರ ಡಿಡಿ ಪಾವತಿಸಿಕೊಂಡು ಆನೆ ನೀಡಲು ಆಗಿನ ಜನತಾ ದಳದ ಸರ್ಕಾರ ಆದೇಶಿಸಿತ್ತು.
  ಆದರೆ ಕರುಣಾಕರನ್ ಕ್ಷೇತ್ರ ಮಾಲಾದ ಚುನಾವಣಾ ಉಸ್ತುವಾರಿ ಪಣಿಕರ್ ಶಿವಮೊಗ್ಗಕ್ಕೆ DD ಜೊತೆ ಬಂದು ಎಷ್ಟೇ ಪ್ರಯತ್ನಿಸಿದರೂ ಆನೆ ವಿತರಣೆ ಕೆಲಸ ವಿಳಂಭ ಆಗುತ್ತಿತ್ತು ಕಾರಣ ಕರ್ನಾಟಕ ರಾಜ್ಯದಲ್ಲಿ ಜನತಾ ದಳ ಸರ್ಕಾರ ಕೇರಳ ಕಾಂಗ್ರೇಸ್ ಗೆ ಸಹಕರಿಸುತ್ತಿರಲಿಲ್ಲವಂತೆ.
   ಆಗ ಶಿವಮೊಗ್ಗದ ಜಿಲ್ಲಾ ಪಂಚಾಯತ್ ನಲ್ಲಿ ನನ್ನದೇ ಆದ ಹೋರಾಟಗಳಿಂದ ನಾನು ಪ್ರಸಿದ್ದಿ ಪಡೆದಿದ್ದರಿಂದ ಪಣಿಕರ್ ನನ್ನ ಸಹಾಯ ಕೇಳಿದರು, ಆಗಿನ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಬಲ್ಕೀಷ್ ಬಾನು ಅವರು ಜನತಾ ದಳದವರು ಮತ್ತು ಜೆ.ಹೆಚ್.ಪಟೇಲರ ಅನುಯಾಯಿಗಳು.
     ವಿರೋದ ಪಕ್ಷದ ನನ್ನ ಹೋರಾಟ ಸದಾ ಬೆಂಬಲಿಸುವ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ನೀಡುವ ವಿದ್ಯಾವಂತ ಮುಸ್ಲಿಂ ಮಹಿಳೆ ಆದ್ದರಿಂದ ಅವರ ಸಹಾಯ ಕೇಳಿದೆವು ತಕ್ಷಣ ಅವತ್ತೇ ಸಂಜೆ ಆನೆ ಲಾರಿ ಏರಿ ಕೇರಳದ ಗುರುವಾಯೂರು ದೇವಸ್ಥಾನದ ಕಡೆ ಹೊರಟಿತು.
   ಪಣಿಕರ್ ಕೇರಳಕ್ಕೆ ಆಹ್ವಾನಿಸಿದರು, ಕರುಣಾಕರ್ ಬೇಟಿಗೂ ವ್ಯವಸ್ಥೆ ಮಾಡಿದರು ಆದರೆ ಸಮಯ ಕೂಡಿ ಬರಲಿಲ್ಲ, 1996ರ ಚುನಾವಣೆಯಲ್ಲಿ ಅವರು ಸೋತರು ಪಣಿಕ್ಕರ್ ಇದಾರೋ ಇಲ್ಲ ಗೊತ್ತಿಲ್ಲ.
    ಆದರೆ ಕೇರಳದ ಮುಖ್ಯಮಂತ್ರಿ ಕೆ.ಕರುಣಾಕರ್ ಅವರ ಹರಕೆಯ ಆನೆ ಸಲ್ಲಿಸುವ ಕೆಲಸದಲ್ಲಿ ನನ್ನ ತೃಣ ಮಾತ್ರದ ಸಹಕಾರ ಗುರುವಾಯೂರು ಶ್ರೀಕೃಷ್ಣನಿಗೆ ತಲುಪಿದೆ ಎಂಬ ಭಾವನೆ ನನ್ನದು.
   ಗುಂಡೂರಾವ್ ಸರ್ಕಾರದ ಪತನದ ನಂತರ ಅನೇಕ ವರ್ಷಗಳ ನಂತರ 1989 ರಲ್ಲಿ ಸಾಗರ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಗೋಡು ತಿಮ್ಮಪ್ಪರ ವಿಜಯೋತ್ಸವಕ್ಕೆ ಆನೆ ತರಿಸಿದ್ದೆ.
  ಊರಿಗೆ ಬರುವ ಆನೆಗೆ ಮತ್ತು ಮಾಹುತರಿಗೆ ಕಪ್ಪ ಕಾಣಿಕೆ ಸಲ್ಲಿಸಿ ಸಂತೋಷ ಪಡುವುದು ನನ್ನ ಅಭ್ಯಾಸ, ನನ್ನ ಮತ್ತು ಆನೆ ಸಂಬಂದ ನೋಡಿದ ಗೆಳೆಯರಾದ ತರಕಾರಿ ವ್ಯಾಪಾರಿ ನ್ಯಾಮತಿ ಉಮೇಶರು, ಯಾವುದೋ ಒಂದು ಮಠದ ಆನೆ ಒಂದು ತಿಂಗಳು ಸಾಕಲು ನನ್ನ ಸುಪರ್ದಿಗೆ ಬಿಡುವ ಮಾತು ಕಥೆ ಆಗಿತ್ತು ಅಷ್ಟರಲ್ಲಿ ಅವರಿಗೆ ಪಾರ್ಶ್ವವಾಯು ಆಗಿದ್ದರಿಂದ ಕಾರ್ಯರೂಪಕ್ಕೆ ಬರಲಿಲ್ಲ.
   ಅಮರ ಸುಳ್ಯ ಸ್ವಾತಂತ್ರ ಹೋರಾಟದ ಮನೆತನದ ಅರೆ ಬಾಸೆಯ ಖ್ಯಾತ ಬರಹಗಾರ ಮತ್ತು ಕೃಷಿಕ ಕೆ.ಆರ್. ತೇಜ್ ಕುಮಾರ್ ಆನೆ ಸಾಕಲು ಕೊಡಿಸುವುದಾಗಿ (ತಮಾಷೆಗಾಗಿ ಇರಬಹುದು) ಪೇಸ್ ಬುಕ್ ನಲ್ಲಿ ಬರೆದಾಗ ಇದೆಲ್ಲ ನೆನಪಾಯಿತು.
  ಕೆ.ಆರ್. ತೇಜ್ ಕುಮಾರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ https://arunprasadhombuja.blogspot.com/2022/09/blog-number-972_18.html
   ನನ್ನ ಜೀವನದಲ್ಲಿ ಆನೆ ಸಾಕುವ ಮತ್ತು ಈಜು ಕೊಳ ನಿರ್ಮಿಸುವ ಆಸೆ ಇನ್ನೂ ನನಸಾಗಿಲ್ಲ ಆದ್ದರಿಂದ ಮುಂದಿನ ದಿನದಲ್ಲಿ ಆ ಕನಸು ನನಸು ಮಾಡುವ ಪ್ರಯತ್ನ ಮಾಡಬೇಕಾಗಿದೆ.
  ಆನೆನಾದರೂ ಸಾಕಬಹುದು ಮಾಹುತರನ್ನು ಸಾಕುವುದು ಕಷ್ಟ ಅನ್ನುತ್ತಾರೆ!?

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ