Skip to main content

Blog number 1072. ಪಡಿತರ ಅಕ್ಕಿ ಮತ್ತು ಗೋದಿ ಸಾರಯುಕ್ತ ಮಿಶ್ರಣ ಮಾಡುವ ಮೂಲಕ ಭಾರತ ದೇಶದ ಬಡತನ ರೇಖೆಗಿಂತ ಕೆಳಗಿನ ಬಡವರ ಮಕ್ಕಳಿಗೆ ಪೌಷ್ಟಿಕತೆ ವೃದ್ಧಿ ಮಾಡುವ ಪ್ರದಾನ ಮಂತ್ರಿ ಮೋದಿಯವರ ಘೋಷಣೆಯ ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕರಲ್ಲಿ ಪಡಿತರ ಅಕ್ಕಿಯಲ್ಲಿರುವ ಬಿಳಿಪುಡಿ ಬಗ್ಗೆ ತಪ್ಪು ತಿಳುವಳಿಕೆ ಪ್ರಚಾರದಲ್ಲಿದೆ.

ಅನ್ನ_ಬಾಗ್ಯ_ಅಕ್ಕಿಯಲ್ಲಿರುವ_ಬಿಳಿಪುಡಿ_ಏನು?

#ಪಡಿತರ_ಅಕ್ಕಿ_ಹುಳ_ಹಿಡಿಯ_ಬಾರದೆಂಬ_ರಾಸಾಯನಿಕವಾ?

#ಅದರಿಂದ_ಆರೋಗ್ಯಕ್ಕೆ_ಹಾನಿಯಾ ?

#ಇಂತಹ_ನೂರಾರು_ಪ್ರಶ್ನೆಗಳಿದೆ_ಆದರೆ_ಇದು_ಅಪೌಷ್ಟಿಕತೆಗಾಗಿ_ಕೇಂದ್ರ_ಸಕಾ೯ರ_
#ಸಾರವರ್ದನೆ_ಮಾಡುವ_ಮೈಕ್ರೋನ್ಯೂಟ್ರಿಯಂಟ್.

#ಪ್ರದಾನಮಂತ್ರಿ_74ನೇ_ಸ್ವಾತಂತ್ರೋತ್ಸವದಲ್ಲಿ_ಘೋಷಿಸಿದ_ಯೋಜನೆ.

   ಪಡಿತರ ಅಕ್ಕಿ ವಿತರಣೆಯ ಉದ್ದೇಶ ಬಡತನ ರೇಖೆಗಿಂತ ಕೆಳಗಿರುವ ಬಡ ಕುಟುಂಬಕ್ಕೆ ಆಹಾರ ಭದ್ರತೆ ಒಂದು ಕಾರಣವಾಗಿದೆ.
  ಇದರ ಮಧ್ಯ ರಾಷ್ಟ್ತ್ರೀಯ ಆರೋಗ್ಯ ಸರ್ವೆ ಪ್ರಕಾರ ದೇಶದ ಬಡತನ ರೇಖೆಯ ಕೆಳಗಿನ ಕುಟುಂಬಗಳ ಶೇಕಡಾ 78.7% ಮಕ್ಕಳು ದೇಶದ ಶೇಕಡಾ 75 ಜಿಲ್ಲೆಗಳಲ್ಲಿ ಪೌಷ್ಟಿಕ ಆಹಾರ ಕೊರತೆಯಿಂದ ಬಳಲುತ್ತಿದೆ ಎಂದಿರುವುದರಿಂದ ಪಡಿತರ ಅಕ್ಕಿ ಮತ್ತು ಗೋದಿಗೆ ಮೈಕ್ರೋನ್ಯೂಟ್ರಿಯಂಟ್ ಪುಡಿ 1 : I 00 ಅಂದರೆ ನೂರು ಕೇಜಿ ಗೋದಿ ಅಥವ ಅಕ್ಕಿಗೆ ಐರನ್ - ಪೊಲಿಕ್ ಆಸಿಡ್ - ಬಿ ಕಾಂಪ್ಲೆಕ್ಸ್ - ವಿಟಮಿನ್ A - ಜಿಂಕ್ ಬೆರೆಸುವ ಮೂಲಕ ಸಾರ ವರ್ದನೆ (Fortification) ಮಾಡುತ್ತಿದೆ.
   ಆಹಾರ ಸಾರವರ್ದನೆ ಮೊದಲಿಗೆ 1940 ರಲ್ಲಿ ಪಿಲಿಪೈನ್ಸ್ ನ ವಿಜ್ಞಾನಿ ಡಾ. R. F. ವಿಲಿಯಂಸ್ ಸಂಶೋದಿಸಿದರು ಇದು 1950 ರಿಂದ ವೆಜಿಟೇಬಲ್ ಆಯಿಲ್ ಮತ್ತು ಉಪ್ಪು ಐಯೋಡೈಸ್ ಮಾಡುವ ಮೂಲಕ ವಿಶ್ವದಾದ್ಯಂತ ಸಾರ ವರ್ದನೆ ಬಳಕೆ ಪ್ರಾರಂಭವಾದರೂ 60 ವಷ೯ದ ನಂತರ ಅಂದರೆ 2000 ನೇ ಇಸವಿಯಿಂದ ಅಕ್ಕಿ ಗೋದಿಯಲ್ಲಿ ಸಾರ ವರ್ದನೆ ಪ್ರಾರಂಭ ಆಯಿತು.
  2018ರಿಂದ ಭಾರತೀಯ FSSAI ಪುಡ್ ಸೇಫ್ಟಿ ಸ್ಟಾ೦ಡರ್ಡ್ ಶೇಕಡಾ 1% ಭಾರತ ದೇಶದ ಪಡಿತರ ವಿತರಣೆಯ ಅಕ್ಕಿ ಮತ್ತು ಗೋದಿಯಲ್ಲಿ ಸಾರವರ್ದನೆಯ ಮೈಕ್ರೋನ್ಯೂಟ್ರಿಂಟ್ ಬಳಸಲು ಕಾನೂನಾತ್ಮಕ ಅನುಮತಿ ನೀಡಿದೆ.
  15- ಆಗಸ್ಟ್ -2021 ರಲ್ಲಿ ಪ್ರದಾನ ಮಂತ್ರಿ ಮೋದಿಯವರು ತಮ್ಮ ಭಾಷಣದಲ್ಲಿ ಭಾರತದ ಬಡತನ ರೇಖೆ ಕೆಳಗಿನ ಬಡವರಿಗಾಗಿ ಪೌಷ್ಟಿಕ ಮಿಶ್ರಣ ಮಾಡಿದ ಸಾರಯುಕ್ತ ಪಡಿತರ ಅಕ್ಕಿ ಮತ್ತು ಗೋದಿ ದೇಶದ 24 ರಾಜ್ಯದ 151 ಜಿಲ್ಲೆಗಳಲ್ಲಿ ನೀಡುವ ಘೋಷಣೆ ಮಾಡಿದರು ಮುಂದುವರಿದು 2024 ರಿಂದ ದೇಶದಾದ್ಯಂತ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ತಿಳಿಸಿದ್ದಾರೆ.
  ಒ0ದು ಕೇಜಿ ಮೈಕ್ರೋನ್ಯೂಟ್ರಿಯಂಟ್ ಬೆಲೆ ರೂ 200 ರಿಂದ 400 ಇದೆ.
  ಪಡಿತರ ಅಕ್ಕಿ ವಿಪರೀತವಾಗಿ ನೀರಲ್ಲಿ ತೊಳೆದರೆ, ಪುನಃ ಪಾಲೀಶ್ ಮಾಡಿದರೆ ಸರ್ಕಾರದ ಸದುದ್ದೇಶದ ಮೈಕ್ರೋನ್ಯೂಟ್ರಿಯಂಟ್ ನಷ್ಟವಾಗಲಿದೆ.
 ಈ ಮಾಹಿತಿ ಸರ್ಕಾರ ಸಾರ್ವಜನಿಕರಿಗೆ ತಲುಪಿಸುವ ಕೆಲಸವನ್ನು ಸರಿಯಾಗಿ ಮಾಡದಿದ್ದರಿಂದ ಪಡಿತರ ಅಕ್ಕಿ ಬಗ್ಗೆ ಸಾರ್ವಜನಿಕವಾಗಿ ತಪ್ಪು ಕಲ್ಪನೆ ಇದೆ.
  ಇದನ್ನು ಪಡಿತರ ವಿತರಿಸುವ ನ್ಯಾಯಬೆಲೆ ಅಂಗಡಿ, ಜಿಲ್ಲಾ ಮತ್ತು ತಾಲ್ಲೂಕ್ ಆಡಳಿತ ಪಡಿತರ ಬಳಕೆದಾರರಿಗೆ ಹೆಚ್ಚಿನ ಮಾಹಿತಿ ನೀಡಿದರೆ ಅನ್ನ ಬಾಗ್ಯದ ಅಕ್ಕಿ ಬಗ್ಗೆ ಇರುವ ತಪ್ಪು ಗ್ರಹಿಕೆ ಬದಲಾಗಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...