Skip to main content

Blog number 1069. ಶಿಶುನಾಳ ಷರೀಪರ 5 ನೇ ವಂಶಸ್ಥರು ಅಲ್ಲಿದ್ದಾರೆ, ಶಿಶುನಾಳರು ತಮ್ಮ ತಂದೆ ತಾಯಿ ಸಮಾದಿ ಮೇಲೆ ನಿತ್ಯ ಮಲ್ಲಿಗೆ ಹೂವು ಬೀಳಲಿ ಎಂದು ಹಾಕಿದ ಮಲ್ಲಿಗೆ ಬಳ್ಳಿಯ ಹೂವು ಈಗ ಶಿಶುನಾಳರಿಗೂ ಅರ್ಪಣೆ ಆಗುತ್ತಿದೆ, ಸಮಾದಿಗಳ ಮೇಲೆ ಶಿಶುನಾಳ ಷರೀಪರ ಮತ್ತು ಗುರುಗೋವಿಂದ ಭಟ್ಟರ ಅಮೃತ ಶಿಲಾ ವಿಗ್ರಹ ಮತ್ತು ಮಧ್ಯದಲ್ಲಿ ಕೃಷ್ಣ ಶಿಲೆಯ ಬಸವಣ್ಣರ ಮೂರ್ತಿ ಸ್ಥಾಪಿಸಲಾಗಿದೆ.

# ಶಿಶುನಾಳ ಷರೀಪರ 5ನೇ ತಲೆಮಾರು#
  2019 - ನವೆಂಬರ್ - 11ನೇ ತಾರೀಖು ಮದುವೆ ಮಾಡಿಕೊಟ್ಟ ಮಗಳು ಅಳಿಯನನ್ನ ಹುಬ್ಬಳ್ಳಿಯಿ೦ದ ಕರೆ ತರುವಾಗ ಶಿಶುನಾಳದ ಬೇಟಿ ಕಾಯ೯ಕ್ರಮ ನಿಗದಿ ಮಾಡಿದ್ದೆ, ಅಲ್ಲಿಗೆ ತಲುಪುವಾಗ ರಾತ್ರಿ 8 ಆಗಿತ್ತು ಷರೀಪರ ಸಮಾದಿ ಸುತ್ತ ಅಲ್ಲಲ್ಲಿ ಅಲ್ಲಿನ ವಿದ್ಯಾಥಿ೯ ನಿಲಯದ ವಿದ್ಯಾಥಿ೯ಗಳು ತಮ್ಮ ಓದು ಬರಹದಲ್ಲಿ ನಿರತರಾಗಿದ್ದರು.
  ಅಲ್ಲಿನ ಪದ್ದತಿ ಪ್ರಕಾರ ಸಕ್ಕರೆ ಸಮಪಿ೯ಸಿದೆ ಅಲ್ಲಿದ್ದ ಒವ೯ರು ಪ್ರಾಥ೯ನೆ ಮಾಡಿದರು, ಬೇರಾರು ಇರಲಿಲ್ಲವಾದ್ದರಿಂದ ಅವರನ್ನ ಮಾತಿಗೆ ಎಳೆದೆ, ಷರೀಪರ ವಂಶದವರು ಇದ್ದಾರ ಅಂದಾಗ "ನಾನು ಷರೀಪರ 5ನೇ ತಲೇ ಮಾರು" ಅಂದಾಗ ನಮ್ಮ ಮುಂದಿನ ಮಾತುಕತೆ ವಿಡಿಯೋದಲ್ಲಿದೆ.
  ಷರೀಪರು ತಮ್ಮ ತಂದೆ ತಾಯಿ ಸಮಾದಿ ಅಕ್ಕಪಕ್ಕ ನಿಮಿ೯ಸಿ ಎರೆಡು ಬೇವಿನಮರ ನಡುತ್ತಾರೆ ಒಂದು ಮಲ್ಲಿಗೆ ಬಳ್ಳಿ ನಡುತ್ತಾರೆ ಪ್ರತಿ ದಿನ ಒಂದು ಮಲ್ಲಿಗೆ ಹೂವಾದರೂ ಅವರ ತಂದೆ ತಾಯಿ ಸಮಾದಿ ಮೇಲೆ ಬೀಳಬೇಕೆಂಬ ಅವರ ಅಭಿಲಾಷೆ ಈಡೇರಿದೆ, ಎರೆಡು ಬೇವಿನಮರ ಈಗ ಸೇರಿ ಒಂದಾಗಿದೆ ಅವರ ತಂದೆ ತಾಯಿ ಸಮಾದಿ ಪಕ್ಕದಲ್ಲೇ ಷರೀಫರ ಸಮಾದಿಯೂ ಆಗಿ ಒಂದೇ ಸ್ಮಾರಕವಾಗಿದೆ.
  ಇವರು ಮೂವರ ಸಮಾದಿ ಮೇಲೆ ಷರೀಪರ , ಗುರು ಗೋವೀ೦ದ ಭಟ್ಟರ ವಿಗ್ರಹ ಮಧ್ಯ ಬಸವೇಶ್ವರ ಪ್ರತಿಮೆ ಪ್ರತಿಷ್ಟಾಪಿಸಿದ್ದಾರೆ.
  ಷರೀಪರ 22 ಎಕರೆ ಜಮೀನಿನಲ್ಲಿ 2 ಎಕರೆ ಸಮಾದಿಗಾಗಿ ಸ್ಮಾರಕಕ್ಕಾಗಿ ಉಪಯೋಗಿಸಲಾಗಿದೆ ಉಳಿದ 20 ಎಕರೆ ವಂಶಸ್ಥರು ಸಾಗುವಳಿ ಮಾಡುತ್ತಿದ್ದಾರೆ.
  8 ಕುಟುಂಬಗಳಿಗೆ ವಷ೯ಕ್ಕೆ ಒಂದಾವತಿ೯ಯOತೆ ಸಮಾದಿ ಪೂಜೆವಹಿಸಿಕೊಂಡಿದ್ದಾರೆ.
  ಶಿಶುನಾಳ ಷರೀಪರ ಸ್ಮಾರಕದ ಅಭಿವೃದ್ಧಿ , ವಿಸ್ತರಣೆ ಟ್ರಸ್ಟ್ ಮೂಲಕ ನಿವ೯ಹಿಸಲಾಗುತ್ತಿದೆ ನಾನು ಸಕಾ೯ರದಿಂದ ಇದೆಲ್ಲ ಅಭಿವೃದ್ದಿ ಆಗಿದೆ ಅಂತ ತಪ್ಪು ಗ್ರಹಿಸಿದ್ದೇ.
 ಷರೀಪರ 4ನೇ ತಲೆಮಾರಿನವರ ಹೆಸರು ಷರೀಪರOತೆ ಅವರನ್ನ ಬೇಟಿ ಮಾಡಲು ಆಗಲಿಲ್ಲ ಅವರಿಗೆ ಷರೀಪರOತೆ ಹಾಡು ಮಾತುಗಳು ಒಲಿದಿದೆ ಅಂತ ಹೇಳುತ್ತಾರೆ ಮುಂದಿನ ಸಾರಿ ಹೋದಾಗ ಅವರನ್ನ ಬೇಟಿ ಮಾಡಬೇಕು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...