Skip to main content

Blog number 1066. ಕಲಾವಿದ ಕಲೆಯನ್ನೆ ಅವಲಂಬಿಸದೆ ಸ್ವಯಂ ಉದ್ಯೋಗದ ಜೊತೆ ಕಲಾ ಸೇವೆ ಮಾಡುವ ಹಾಸ್ಯ ಕಲಾವಿದ ಎಸ್.ಸಿ. ಸೈದೂರು ಕಲಾವಿದರಿಗೆ ರೋಲ್ ಮಾಡೆಲ್ ಆಗಿದ್ದಾರೆ, ಕೊರಾನಾ ಕಾಲದಲ್ಲಿ ಅವರು ಕಂಡುಕೊಂಡ ದಾರಿ.

#ಅವಕಾಶ_ಹುಡುಕುತ್ತಾ_ಮುಪ್ಪಾಗುವ_ಕಲಾವಿದರ_ಮದ್ಯೆ_ಇವರು_ವಿಭಿನ್ನ

#ಎಸ್_ಸಿ_ಸೈದೂರ್_ಎಂದೇ_ಪ್ರಖಾತರಾದ_ಶಿವಕುಮಾರ್_ಸೈದೂರು

#ಹಾಡು_ಹಾಸ್ಯ_ನೃತ್ಯ_ಮಿಮಿಕ್ರಿ_ರಸಮಂಜರಿಗಳ_ಕಲಾವೈವಿಧ್ಯ_ಸಾಂಸ್ಕೃತಿಕ_ಸಂಸ್ಥೆ

#ಜೀವನೋಪಾಯಕ್ಕಾಗಿ_ಸಂಜೆ_ಸಾಗರದ_ಜೋಗ್_ರಸ್ತೆಯಲ್ಲಿ_ಇವರ_ಒಮಿನಿ_ಚಾಟ್ಸ್_ಕೌಂಟರ್_ಆಗಿ_ಬದಲಾಗುತ್ತದೆ.

#ಕೊರಾನಾ_ಕಾಲದಲ್ಲಿ_ಕಂಡುಕೊಂಡ_ಹೊಸಮಾರ್ಗ.

    ಸಾಗರ ತಾಲ್ಲೂಕಿನ ಮತ್ತು ಸಿದ್ದಾಪುರ ತಾಲ್ಲೂಕಿನ ಗಡಿ ಪ್ರದೇಶ ಸೈದೂರು ಸಾಗರ ತಾಲ್ಲೂಕಿಗೆ ಸೇರಿದೆ ವಿಧಾನ ಸಭಾ ವ್ಯಾಪ್ತಿ ಸೊರಬಕ್ಕೆ ಸೇರಿದೆ, ಇಲ್ಲಿನ ಕೃಷಿ ಕುಟುಂಬದ 12 ಜನ ಮಕ್ಕಳಲ್ಲಿ ಶಿವಕುಮಾರ್ ಸಣ್ಣವರು.
    ತಂದೆಯ ಸುಮಾರು 60 ಎಕರೆ ಕೃಷಿ ಭೂಮಿಯಲ್ಲಿ ಇವರಿಗೆ 2 ಎಕರೆ ಕೃಷಿ ಭೂಮಿ ಪಾಲು ಇವರಿಗೆ ಬಂದಿದೆ.
  ಪದವಿ ವಿದ್ಯಾಭ್ಯಾಸ ಸಾಗರದಲ್ಲಿ ಲಾಲ್ ಬಹದ್ದೂರು ಕಾಲೇಜಿನಲ್ಲಿ ಮಾಡುತ್ತಲೇ ಪಾರ್ಟ್ ಟೈಂ ಆಗಿ ಸಾಗರದ ಪ್ರಸಿದ್ಧ ಔಷದಿ ಮಾರಾಟ ಸಂಸ್ಥೆ ಮಹಾಲಕ್ಷ್ಮೀ ಮೆಡಿಕಲ್ಸ್ ನಲ್ಲಿ ಕೆಲಸ ಮಾಡುತ್ತಾ ವಿದ್ಯಾಬ್ಯಾಸ ಪೂಣ೯ ಮಾಡಿ ನಂತರ ಸಾಗರ ಪಟ್ಟಣದಲ್ಲಿ ಕಲಾವಿದರಾಗಿ ತಮ್ಮ ಜೀವನ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರು.
  ಸಾಮಾನ್ಯವಾಗಿ ಕಲಾವಿದರು ಅವಕಾಶ ಸಿಕ್ಕಾಗ ಮೃಷ್ಟಾನ ಬೋಜನ ಇಲ್ಲದಿದ್ದಾಗ ಉಪವಾಸ ಮಾಡುತ್ತಾ ಅವಕಾಶ ಹುಡುಕಿ ಹುಡುಕಿ ಮುಪ್ಪಾಗಿ ಬಿಡುತ್ತಾರೆ ಆದರೆ ಶಿವಕುಮಾರ್ ಮಾತ್ರ ಬಿನ್ನವಾಗಿದ್ದರು.
  ಉಪ್ಪಿನಕಾಯಿ ಹಪ್ಪಳದ ಉದ್ಯಮ ಮಾಡಿಕೊಂಡು ಅದನ್ನು ತಮ್ಮ M-80 ಬೈಕ್ ನಲ್ಲಿ ಸಾಗರದ ಪಟ್ಟಣದ ಮೂಲೆ ಮೂಲೆಯಲ್ಲಿ ಅದನ್ನು ಮಾರಿ ಜೀವನ ಮಾಡುತ್ತಾ ನಂತರ ಮಾರುತಿ ವ್ಯಾನಿನಲ್ಲಿ ಸುಮಾರು 80 ಗೃಹ ಬಳಕೆಯ ಸಾಂಬಾರು ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾ ಗ್ರಾಹಕರ ತೃಪ್ತಿಗಳಿಸಿದ್ದರು.
  ಜೊತೆ ಜೊತೆಗೆ ಇವರ ಹಾಡು - ಹಾಸ್ಯ, ಕಲಾ ವೈವಿಧ್ಯ ಸಂಸ್ಥೆಗಳ ಮೂಲಕ ಎಸ್.ಸಿ.. ಸೈದೂರ್ ಎಂದೇ ಹೆಸರು ಮಾಡಿದ್ದರು, ಇವರು ಇವರ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಜೊತೆ ಯಾವುದೇ ಸಮಾರಂಭ ಜಾತ್ರೆಗಳಲ್ಲಿ ಕಾರ್ಯಕ್ರಮದ ಆಯೋಜಕರ ಬಡ್ಜೆಟ್ ಗೆ ಅನುಗುಣವಾಗಿ ಸಭಿಕರಿಗೆ ಮನ ತೃಪ್ತಿ ಮಾಡುವ ವಿಶೇಷ ಕಲಾವಿದರು ಇವರು.
   ನಾನು ನಮ್ಮ ಊರಿನ ವರಸಿದ್ದಿ ವಿನಾಯಕ ದೇವರ ಜಾತ್ರೆಯಲ್ಲಿ ಇವರ ಮತ್ತು ಇವರ ಮಗಳು ಕು.ಶ್ರೀಗೌರಿ ಸೈದೂರು ಸೇರಿ ನಡೆಸಿ ಕೊಟ್ಟ ಅದ್ಬುತ ಕಾರ್ಯಕ್ರಮ ಸ್ವತಃ ನೋಡಿದ್ದೇನೆ. 
   ಈಗ ಮಗಳು ಆಳ್ವಾಸ್ ಕಾಲೇಜಿನಲ್ಲಿ ಮೆರಿಟ್ ನಲ್ಲಿ ಪದವಿ ವ್ಯಾಸಂಗದ ಜೊತೆ ಅಲ್ಲಿ ಕಲಾವಿದೆ ಆಗಿಯೂ ಹೆಸರು ಗಳಿಸಿದ್ದಾಳೆ.
   ಕೊರಾನಾದ ಎರೆಡು ವರ್ಷ ಈ ಕುಟುಂಬ ಸಾಂಸ್ಕೃತಿಕ ಕಾರ್ಯಕ್ರಮವೂ ಇಲ್ಲದೆ ಮತ್ತು ತಮ್ಮ ಗೃಹ ಕೈಗಾರಿಕೆಯಾದ ಉಪ್ಪಿನಕಾಯಿ, ಹಪ್ಪಳ ಇತ್ಯಾದಿ ತಯಾರಿಕೆ ಮತ್ತು ಮಾರಾಟವಿಲ್ಲದೆ ತತ್ತರಿಸಿತ್ತು.
    ಮೊನ್ನೆ ನಮ್ಮಲ್ಲಿಗೆ ಬಂದಾಗ ನಾನು ಇದನ್ನೆ ಕೇಳಿದ್ದು ಕೊರಾನ ಹೇಗೆ ಎದುರಿಸಿದಿರಿ? ಅಂತ.
   ಪಿತ್ರಾಜಿ೯ತವಾಗಿ ಬಂದ ಜಮೀನಲ್ಲಿ ಅಡಿಕೆ ತೋಟ ಮಾಡಿದರಂತೆ ನಂತರ ಲಾಕ್ ಡೌನ್ ಮುಗಿದಾಗ ತಮ್ಮದೇ ಮಾರುತಿ ವ್ಯಾನ್ ಗೆ ಸ್ವಲ್ಪ ಆಲ್ಟರೇಷನ್ ಮಾಡಿ ಸಾಗರದ ಜೋಗ್ ರಸ್ತೆಯ ಪ್ರಗತಿ ಶಾಲೆ ಹತ್ತಿರ ದಿನಾ ಸಂಜೆ ವೈವಿಧ್ಯಮಯವಾದ ವಿಭಿನ್ನವಾದ ಮಸಾಲೆ ಮಂಡಕ್ಕಿ, ಚಾಟ್ಸ್ ಗಳು, ಲಿಂಬೂ ಸೋಡ ಮಾರಾಟ ಪ್ರಾರಂಬಿಸಿ ಈಗ ಇವರ ಎಸ್.ಸಿ. ಸೈದೂರ್ ಮಸಾಲಾ ಮಂಡಕ್ಕಿ ಪ್ರಸಿದ್ಧಿ ಆಗಿದೆ.
   ಕಲಾವಿದರಾಗಿ ಪ್ರೇಕ್ಷಕರಿಗೆ ಮನರಂಜನೆ ನೀಡಿ ರಸದೌತಣ ಬಡಿಸುವುದರ ಜೊತೆ ಇವರ ಈ ಚಾಟ್ಸ್ ಮೊಬೈಲ್ ಅಂಗಡಿ ಮೂಲಕವೂ ಆಹಾರ ಪ್ರಿಯರಿಗೆ ತೃಪ್ತಿ ನೀಡುತ್ತಿದ್ದಾರೆ.
  ಈ ಮೂಲಕ ಇವರು ಕಲಾವಿದರಿಗೆ ಪ್ರೇರಕರಾಗಿದ್ದಾರೆ, ರೋಲ್ ಮಾಡಲ್ ಆಗಿದ್ದಾರೆ ಕೇವಲ ಕಲೆಯನ್ನೆ ನಂಬಿ ತಮ್ಮ ನಂಬಿದ ಕುಟುಂಬವನ್ನು ಉಪವಾಸಕ್ಕೆ ಕೆಡುವಬೇಡಿ, ಕಲಾ ಸೇವೆಯ ಜೊತೆ ಕುಟುಂಬ ಸೇವೆಗಾಗಿ ಏನಾದರೂ ಉದ್ಯೋಗ ಮಾಡಿ ಆ ಮೂಲಕ ಅನ್ನಕ್ಕೆ ದಾರಿ ಕಂಡು ಹಿಡಿದುಕೊಳ್ಳಿ ಎಂಬ ಸಂದೇಶ್ S.C. ಸೈದೂರರ ಜೀವನಕ್ರಮದಲ್ಲಿ ಅಳವಡಿಸಿಕೊಂಡಿದ್ದಾರೆ.
  ಅವರ ಕಾರ್ಯಕ್ರಮ ಇರುವ ಊರಲ್ಲಿ ಈ ಮಸಾಲೆ ವೈವಿಧ್ಯ ಮಂಡಕ್ಕಿ ಮತ್ತು ಸೋಡಾ ಅಂಗಡಿಯೂ ಆ ದಿನ ಅಲ್ಲಿ ಸೇರಿದ ಸಭಿಕರ ರುಚಿಗೆ ಲಭ್ಯ ಮತ್ತೊಂದು ವಿಶೇಷ ಅಂದರೆ ಇವರು ವಿದ್ಯಾರ್ಥಿಗಳಿಗೆ ಇವರು ಮಾರಾಟ ಮಾಡುವ ಆಹಾರ ತಿನಿಸು ಮಾತ್ರ ಅರ್ದ ಬೆಲೆಗೆ.
    ಕೆಲವು ವರ್ಷದಲ್ಲಿ ಉತ್ತಮ ಅಡಿಕೆ ಫಸಲು ಗಳಿಸುತ್ತೀರಾ ಮತ್ತು ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ಅತ್ಯುತ್ತಮ ವಿಧ್ಯೆ ಗಳಿಸಿ ಒಳ್ಳೆಯ ಅಳಿಯ೦ದಿರೂ ದೊರೆಯಲಿ ಅಲ್ಲಿವರೆಗೆ ನಿಮ್ಮ ಕಲೆ ಮತ್ತು ಕಾಯಕ ಮುಂದುವರಿಯಲಿ ಎಂದು ಹಾರೈಸಿದೆ.
  ನೀವು ಸಾಗರದಿಂದ ಜೋಗ ಮಾರ್ಗದಲ್ಲಿ ಪ್ರಗತಿ ಶಾಲೆ ಪಕ್ಕದಲ್ಲಿ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 10 ರವರೆಗೆ ಇವರು ತಯಾರಿಸುವ ವೈವಿದ್ಯಮಯ ಮಸಾಲೆ ಮಂಡಕ್ಕಿ ರುಚಿ ನೋಡಬಹುದು.
   ಇವರ ಕಾಯ೯ಕ್ರಮ ಬೇಕಾದವರು ಸಂಪರ್ಕಿಸಲು ವಿವರ ವಿಸಿಟಿಂಗ್ ಕಾರ್ಡ್ ಹಾಕಿದೆ ಮತ್ತು ಸ್ವಯಂ ಉದ್ಯೋಗದ ಜೊತೆ ಕಲಾ ಸೇವೆಯೂ ಮಾಡುತ್ತಿರುವ ಸ್ವಾಭಿಮಾನಿ ಎಸ್.ಸಿ.. ಸೈದೂರರಿಗೆ ನೀವು ಪೋನ್ ಮಾಡಿ ಅಭಿನಂದಿಸಲು ಅವರ ಪೋನ್ ನಂಬರ್ 9480289724.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ