Skip to main content

Blog number 1070. ಅಡಿಕೆ ಎಲೆ ಚುಕ್ಕೆ ರೋಗ ತಂದಿದೆ ಮಲೆನಾಡಿಗೆ ಗಂಡಾಂತರ, ಈ ಹಂತದಲ್ಲಿ ಸಂಶೋದನೆ ಹಾಳು ಮೂಳು ಅಂತ ಸರ್ಕಾರ ಹಣ ಬಿಡುಗಡೆಗಿಂತ ಮೊದಲು ಕೇಂದ್ರ ಸರ್ಕಾರದ ಆರ್ಥಿಕ ಮಂತ್ರಾಲಯ ಅಡಿಕೆ ಬೆಳೆಗಾರರ ಸಾಲದ ಮರುಪಾವತಿಗೆ ಹತ್ತು ವರ್ಷ ಕಾಲಾವಕಾಶ ನೀಡಿದರೆ ಅಡಿಕೆ ಬೆಳೆಗಾರರು ಜೀವ ಉಳಿಸಿ ಕೊಳ್ಳಬಹುದು,ಹೊಸನಗರ ತಾಲ್ಲೂಕಿನ ದೊಂಬೆಕೊಪ್ಪದ ಹೊಸಮನೆ ಗುರುಪಾದಪ್ಪ ಗೌಡರು ನನ್ನ ತಂದೆ ಗೆಳೆಯರು.

#ದೊಂಬೆಕೊಪ್ಪದ_ಹೊಸಮನೆ_ಗುರುಪಾದಪ್ಪ_ಗೌಡರು

#ನನ್ನ_ತಂದೆಯ_ಜಿಗಣಿ_ದೋಸ್ತರು

#ಮಗ_ಸಾರಾ_ಸಂಸ್ಥೆ_ಕಟ್ಟಿರುವ_ಕಲಾವಿದ_ದೆಹಲಿ_ನಿವಾಸಿ

#ಭೂಸುದಾರಣೆ_ಕಾಯ್ದೆಯಿಂದ_ಜಮೀನು_ಕಳೆದುಕೊಂಡು_ಹತಾಷರಾಗಿದ್ದ_ಕಾಲದ_ನೆನಪು

#ಅಡಿಕೆಗೆ_ಬಂದಿರುವ_ಎಲೆಚುಕ್ಕೆ_ರೋಗ_ರೈತರ_ಆತಂಕಕ್ಕೆ_ಕಾರಣವಾಗುತ್ತಿದೆ.

#ಭಾರತೀಯ_ರಿಸರ್ವ್_ಬ್ಯಾಂಕ್_ಕೇಂದ್ರದ_ಆರ್ಥಿಕ_ಮಂತ್ರಾಲಯ_ಎಚ್ಚೆತ್ತು_ಕೊಳ್ಳುವುದು_ಅನುಮಾನ

#ರೈತರ_ಮಕ್ಕಳು_ಈ_ಗಂಡಾಂತರದ_ಅರಿವೇ_ಇಲ್ಲದೆ_ಬರಲಿರುವ_ಚುನಾವಣೆ_ಬಗ್ಗೆ_ಆಸಕ್ತರಾಗಿದ್ದಾರೆ.

  ಈಗಷ್ಟೆ ಪೇಸ್ ಬುಕ್ ನಲ್ಲಿ ಒಂದು ಪೋಸ್ಟ್ ನೋಡಿ ನನ್ನ ಜೀವವೇ ತತ್ತರಿಸಿತು ಕಾರಣ ಶೃಂಗೇರಿಯ ಶ್ರೀನಿವಾಸಮೂರ್ತಿ ಬಾಲ್ಯದಿಂದ ಬಡತನವೇ ಹಾಸಿ ಹೊದ್ದು ಚಿಕ್ಕ ವಯಸ್ಸಲ್ಲೇ ಅನಾಥರಾಗಿ ಬುದ್ದಿವಂತ ಸಹೋದರಿಯ ದೈರ್ಯದಿಂದ ಈಗ ಕೃಷಿಯಲ್ಲಿ ಒಂದು ಜೀವನ ಮಟ್ಟ ಕಂಡಿದ್ದಾರೆ.
   ಮಕ್ಕಳು ಪ್ರೌಡ ಶಿಕ್ಷಣ ಮುಗಿಸಿ ಮುಂದಿನ ಶಿಕ್ಷಣದ ಹಂತದಲ್ಲಿದ್ದಾರೆ ಈಗ ಶೃಂಗೇರಿಯಲ್ಲಿ ಅಡಿಕೆಗೆ ಬಂದಿರುವ ಎಲೆ ಚುಕ್ಕೆ ರೋಗದಿಂದ ಅವರ ತೋಟ ಹಾಳಾಗುತ್ತಿರುವ ಸಂದರ್ಭದಲ್ಲಿ ಹಾಳಾಗುತ್ತಿರುವ ಅಡಿಕೆ ತೋಟದ ಚಿತ್ರದ ಜೊತೆ "ಕ್ಷಮಿಸಿ ಬರೆಯಲು ಏನೂ ಉಳಿದಿಲ್ಲ,ಪ್ರಕೃತಿ ಸಹಕರಿಸುತ್ತಿಲ್ಲ, ಎಲ್ಲಾ ಪ್ರಯೋಗ ಮತ್ತು ಪ್ರಯತ್ನ ವಿಫಲವಾಗುತ್ತಿದೆ" ಎಂಬ ಪೋಸ್ಟ್ ನೋಡಿ ಹೃದಯ ಹಿಂಡಿತು, ತಕ್ಷಣ ಅವರಿಗೆ ಪ್ರತಿಕ್ರಿಯಿಸಿ ದೈಯ೯ವಾಗಿರಲು ವಿನಂತಿಸಿದೆ ತಕ್ಷಣ ಅವರು ತಾವು ದೃತಿಗೆಡುತ್ತಿಲ್ಲ ಕಾಫಿ ಬೆಳೆ ಕೂಡ ಮಾಡಿದ್ದೇನೆ ಆದರೆ ಅನೇಕರು ಕೇವಲ ಅಡಿಕೆ ಮೇಲೆ ಅವಲಂಬಿತರು ಅವರ ಪರಿಸ್ಥಿತಿ ಕಷ್ಟ ಅಂತ ಉತ್ತರಿಸಿದ್ದು ನೋಡಿ ಉಸಿರಾಟ ನಿರಾಳವಾಯಿತು ಕಾರಣ ಸಾಮಾಜಿಕ ಜಾಲ ತಾಣದಲ್ಲಿ (ಪರಸ್ಪರ ಮುಖಃತ ಬೇಟಿ ಆಗದಿದ್ದರೂ) ನನಗೆ ಅವರು ಆಪ್ತರನ್ನಿಸಿ ಬಿಟ್ಟಿದ್ದಾರೆ.
    ಅಡಿಕೆ ತೋಟದ ಕಾಯಿಲೆ ಶೃಂಗೇರಿಯಿಂದ, ತೀರ್ಥಹಳ್ಳಿ ದಾಟಿ, ಹೊಸನಗರ ತಾಲ್ಲೂಕ್ ಹಾದು ಸಾಗರ ತಾಲ್ಲೂಕಿನ ಕಡೆ ಮುಖ ಮಾಡಿದೆ ಮುಂದೆ ಯಾವಾಗ ಗಡಿ ತಾಲ್ಲೂಕುಗಳಾದ ಉತ್ತರ ಕನ್ನಡ ಜಿಲ್ಲೆಗೆ ಆವರಿಸುತ್ತೊ ಎ೦ಬ ಭಯ ಅಡಿಕೆ ಬೆಳೆಗಾರರಲ್ಲಿ ಇದೆ ಇದಕ್ಕೆ ಸರ್ಕಾರವೂ ಕೈ ಚೆಲ್ಲಿ ದೇವರಲ್ಲಿ ಪ್ರಾರ್ಥನೆ - ಮಂತ್ರ ಪಠನ ಮಾಡುತ್ತಿದೆ ಅಂದರೆ ಪರಿಸ್ಥಿತಿ ಅರಿವಾದೀತು.
  ಇದರ ಮಧ್ಯ ರೈತರ ಮಕ್ಕಳು ಬರುವ ಚುನಾವಣೆಗಳ ಬಗ್ಗೆ ಉತ್ಸುಕರಾಗಿದ್ದಾರೆ,ಕುಟುಂಬದ ಯಜಮಾನ ಆರ್ಥಿಕ ಆದಾಯದ ಮೂಲ ಸಾಯುತ್ತಿರುವುದರಿಂದ ಡಿಪ್ರೆಶನ್ ಗೆ ಒಳಗಾಗುತ್ತಿರುವುದರಿಂದ ಮುಂದಿನ ಪರಿಣಾಮ ಏನು? ಅಂತ ಉಹಿಸಲು ಭಯ ಆಗುತ್ತಿದೆ, ಸದ್ಯದ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರದ ಆರ್ಥಿಕ ಮಂತ್ರಾಲಯ ಎಚ್ಚೆತ್ತುಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಇದರಿಂದ ಮುಂದೇನು?... ಗೊತ್ತಿಲ್ಲ !!.
  ಈ ಸಂದಭ೯ದಲ್ಲಿ ಈ ಘಟನೆ ನೆನಪಾಯಿತು ದೈರ್ಯದಿಂದ ಜೀವನ ಎದುರಿಸಿದ ಕುಟುಂಬದ ಯಜಮಾನರು ಇಲ್ಲಿ ಉದಾಹರಣೆಯಾಗಿ ನೆನಪಾದರು.
  ಸುಮಾರು 45 ವರ್ಷದ ಹಿಂದಿನ ನನ್ನ ತಂದೆಯ ಆತ್ಮೀಯ ಗೆಳೆಯರೊಬ್ಬರು ತಮ್ಮ ಕೃಷಿ ಜಮೀನುಗಳು ಭೂ ಸುದಾರಣೆ ಕಾನೂನಿನಲ್ಲಿ ಕಳೆದುಕೊಂಡು ಬದುಕುವುದು ಅಸಾಧ್ಯ ಎಂದು ಆಳವಾದ ಡಿಪ್ರೆಶನ್ ಗೆ ಒಳಗಾಗಿ ಆತ್ಮಹತ್ಯೆಯ ಪ್ರಯತ್ನದಲ್ಲಿದ್ದಾಗ ಅವರಿಗೆ ನಮ್ಮ ತಂದೆ ಅದೆಷ್ಟು ದೈರ್ಯ ನೀಡುತ್ತಿದ್ದರೆಂದು ನಾನು ಬಾಲ್ಯದಲ್ಲಿ ನೋಡಿದ್ದೆ.
   ಸಮೀಪದ ಹೊಸನಗರ ತಾಲ್ಲೂಕಿನ ದೊಂಬೆಕೊಪ್ಪದ ಹೊಸಮನೆ ಗುರುಪಾದಪ್ಪ ಗೌಡರು ನನ್ನ ತಂದೆಯ ಜಿಗಣಿ ದೋಸ್ತರಾಗಿದ್ದರು.
   ಮುಖ ಕ್ಷೌರ ಮಾಡದೆ, ತಮ್ಮ ದುರಾದೃಷ್ಟದಿಂದ ಭವಿಷ್ಯದ ದಾರಿ ಕತ್ತಲಾದ ಬಗ್ಗೆ ಮತ್ತು ಮುಂದಿನ ಸಂಸಾರ ನಡೆಸುವ ಆರ್ಥಿಕ ಮೂಲ ಇಲ್ಲದ್ದರಿಂದ ಚಿಕ್ಕ ಚಿಕ್ಕ ಮಕ್ಕಳ ಭವಿಷ್ಯವನ್ನು ಯೋಚಿಸಿ ಯೋಚಿಸಿ ಅದೀರರಾಗಿದ್ದರು ಹಾಗಂತ ಅವರು ತುಂಬಾ ತಿಳುವಳಿಕೆಯ ಓದು ಬಲ್ಲ ವಿವೇಕ ಇರುವ ವ್ಯಕ್ತಿಯೆ ಆಗಿದ್ದರು,ನಾನು ನನ್ನ ತಂದೆ ಮತ್ತು ಇವರ ಸಂಭಾಷಣೆ ಕೇಳಿಸುಕೊಳ್ಳುತ್ತಿದ್ದೆ ನಂತರ ಮನೆಯಲ್ಲಿ ನನ್ನ ತಂದೆ ತಾಯಿ ಮಾತಾಡುವುದು ಕೇಳಿ ಅಳುತ್ತಿದ್ದೆ.
   ಪುಣ್ಯವಶಾತ್ ಗುರುಪಾದಪ್ಪ ಗೌಡರು ತುಂಬಾ ಕಷ್ಟ ಪಟ್ಟು ಆ ಕೆಟ್ಟ ದಿನ ಎದುರಿಸಿದರು, ಮೌನಿಗಳಾಗಿ ಶ್ರಮದಿಂದ ಜೀವನ ಸಾಗಿಸಿದರು, ಉಳಿದ ಖಾಲೀ ಜಮೀನುಗಳನ್ನು ಅಭಿವೃದ್ದಿ ಮಾಡುತ್ತಾ, ಮಕ್ಕಳನ್ನು ವಿದ್ಯಾವಂತರಾಗಿಸಿದರು ಈ ಹಂತದಲ್ಲೂ ಸಮಾಜದ ಅಂಕು ಡೊಂಕು ತಿದ್ದುತ್ತಾ, ರೈತ ಸಂಘದಲ್ಲಿ ಪ್ರೋಪೆಸರ್ ನಂಜುಂಡಸ್ವಾಮಿಗಳ ಪ್ರಭಾವದಿಂದ ರೈತ ಹೋರಾಟಗಳಲ್ಲೂ ಭಾಗವಹಿಸುತ್ತಾ ಬಂದಿದ್ದಾರೆ.
   ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದ ಭಕ್ತರೂ ಆದ ಅವರು ದೇವಾಲಯದ ಆಡಳಿತ ಮಂಡಳಿಯ ಸಲಹೆಗಾರರೂ ಆಗಿದ್ದಾರೆ.
   ಕಳೆದ ಜನವರಿ ತಿಂಗಳಲ್ಲಿ ನಡೆದ ರಥೋತ್ಸವದ ಸಂದರ್ಭದಲ್ಲಿ ಗುರುಪಾದಪ್ಪ ಗೌಡರು ಮತ್ತು ನನ್ನ ಸಿದ್ಧ ಸಮಾದಿ ಯೋಗದ ಗುರುಗಳು ಖ್ಯಾತ ಭಜನಗಾರರು ಆದ ಸಾಗರದ ಗಣೇಶ್ ಗುರೂಜಿ ಜೊತೆ ನನಗೆ ಸೇರುವ ಅವಕಾಶ ದೊರೆತಾಗ ನನ್ನ ತಂದೆ ಮತ್ತು ಅವರ ಗೆಳೆತನ ಮತ್ತು ಆ ದಿನದ ಸಂಕಷ್ಟಗಳ ವಿಷಯಗಳು ಮಾತಾಡಿದರು.
  ಈಗ ಗುರುಪಾದಪ್ಪ ಗೌಡರ ಎರಡನೆ ಮಗ ದೆಹಲಿಯಲ್ಲಿ ಸಂಸಾರದೊಂದಿಗೆ ನೆಲೆಸಿ ದೊಡ್ಡ ಚಿತ್ರ ಮತ್ತು ಶಿಲ್ಪ ಕಲಾವಿದರು ಆಗಿದ್ದಾರೆ ಅವರು ತಮ್ಮ ಊರಾದ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಸಮೀಪದ ದೊಂಬೆಕೊಪ್ಪ ಗ್ರಾಮದಲ್ಲಿ ಸಾರಾ ಸಂಸ್ಥೆ ಹುಟ್ಟುಹಾಕಿ ನಾಡಿನ ನೆಲ-ಜಲ- ಸಂಸ್ಕೃತಿ-ಪರಿಸರದ ಬಗ್ಗೆ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹುಟ್ಟುಹಾಕಿದ್ದಾರೆ ದೆಹಲಿಯ ಅವರ ಸಂಪರ್ಕದಿಂದ ಅನೇಕ ಪ್ರಸಿದ್ಧರು ಇಲ್ಲಿಗೆ ಬರುತ್ತಾರೆ ಮುಂದಿನ ದಿನದಲ್ಲಿ ಇದು ಇನ್ನೊಂದು ಕೆ.ವಿ.ಸುಬ್ಬಣ್ಣರ ಹೆಗ್ಗೋಡಿನಂತೆ ಆದೀತು ಅವರೇ ಸಾರಾ ಸಂಸ್ಥೆ ಅರುಣ ಕುಮಾರ್ ಇವರ ಪತ್ನಿ ತಂದೆ ದೇಶದ ಸುಪ್ರಸಿದ್ದ ಆರ್ಟಿಸ್ಟ್ ರಾಮೇಶ್ವರ ಬ್ರೂಟಾ.
   ದೊಡ್ಡ ಮಗ ಸತೀಶ್ ತಂದೆ ಜೊತೆ ಕೃಷಿ ಮಾಡುತ್ತಾ ತಮ್ಮನ ಕನಸಿನ ಸಾರಾ ಸಂಸ್ಥೆ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಇನ್ನೊಬ್ಬ ಮಗ ಸೊರಬ ತಾಲ್ಲೂಕಿನಲ್ಲಿ ನೆಲೆಸಿದ್ದಾರೆ ಕೆಲ ತಿಂಗಳ ಹಿಂದೆ ಇವರ ಪತ್ನಿ ಇಹಲೋಕ ತ್ಯಜಿಸಿದ್ದಾರೆ.
  45 ವಷ೯ದ ಹಿಂದೆ ಗುರುಪಾದಪ್ಪ ಗೌಡರೇನಾದರು ಹತಾಷೆಯಿಂದ ಜೀವನ ಎದುರಿಸದೆ ಬೇರೊಂದು ತೀರ್ಮಾನಕ್ಕೆ ದುಮುಕಿದ್ದರೆ? ಇದೆಲ್ಲಾ ಸಾಧ್ಯವಿತ್ತಾ? ಅನ್ನಿಸಿತು.
   ಬಂದಿದ್ದೆಲ್ಲಾ ಬರಲಿ ಗೋವಿಂದನ (ದೇವರ) ದಯೆ ಒಂದಿರಲಿ ಎಂದು ದೈರ್ಯದಿಂದ ಹತಾಷರಾಗದೆ ಈಗ ಬರುತ್ತಿರುವ ಅಡಿಕೆ ಬೆಳೆಯ ರೋಗದಿಂದ ನಮ್ಮ ರೈತರು ದೃತಿಗೆಡದೆ ಬದಲಿ ಬೆಳೆ ಅಥವ ಬೇರೆ ವ್ಯವಹಾರಕ್ಕೆ ಬದಲಾಗುವ ಪ್ರಯತ್ನ ಮಾಡಲಿ ಈಗ ಬಂದಿರುವ ಅಡಿಕೆಯ ರೋಗ ಆದಷ್ಟು ಬೇಗ ಹೋಗಲಿ, ಬೆಳೆಗಾರರಿಗೆ ಮೊದಲಿನಂತ ಸುಬಿಕ್ಷದ ದಿನ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ