Skip to main content

Blog number 1053. ಕಾಮಗಾರಿ ಎಸ್ಪಿಮೇಟ್ ಗೆ ಗ್ರಾಮಸ್ಥರು ಕೈ ಹಾಕಿದರೆ ಗುಣಮಟ್ಟದ ಕಾಮಗಾರಿ ಸಾಧ್ಯವಿದೆ, ಗುದ್ದಲಿ ಪೂಜೆ ಗುಣಮಟ್ಟದ ಕಾಮಗಾರಿಯ ಜನಜಾಗೃತಿ ವೇದಿಕೆ ಆಗಲಿ

#ಸಮಸ್ಯೆ_ಪರಿಹಾರ_ಮಾರ್ಗ_ಯೋಚಿಸಬೇಕು.

#ಸರ್ಕಾರಿ_ಕಾಮಗಾರಿ_ಗುಣಮಟ್ಟ_ಕಾಪಾಡುವ_ಸುಲಭ_ಉಪಾಯವಿದೆ

#ಪ್ರತಿ_ಸರ್ಕಾರಿ_ಕಾಮಗಾರಿ_ಎಸ್ಟಿಮೇಟ್_ಗ್ರಾಮಸ್ಥರಿಗೆ_ನೀಡುವುದು

#ಗುದ್ದಲಿ_ಪೂಜೆ_ಕೈಬಿಟ್ಟು_ಕಾಮಗಾರಿ_ಎಸ್ಟಿಮೇಟ್_ಗ್ರಾಮಸ್ಥರ_ಕೈಗಿಡುವ_ಮೂಲಕ_ಕಾಮಗಾರಿ_ಉಧ್ಘಾಟನೆ.

#ಮಾಹಿತಿ_ಹಕ್ಕಿನಲ್ಲಿ_ಎಸ್ಟಿಮೇಟ್_ಪಡೆಯ_ಬಹುದು.

#ನನ್ನ_ಜಿಲ್ಲಾಪಂಚಾಯಿತಿ_ಆವದಿಯಲ್ಲಿ_14_ಇಂಜಿನಿಯರ್_ನನ್ನ_ಕ್ಷೇತ್ರದಿಂದ_ಹೊರಹೋಗಿದ್ದರು.

#ಕಳಪೆ_ಕಾಮಗಾರಿ_ಮಾಡುವ_ದುರಾಸೆಯ_ಗುತ್ತಿಗೆದಾರರು_ನನ್ನ_ವಿರುದ್ಧ_ಕತ್ತಿ_ಮಸೆಯುತ್ತಿದ್ದರು. '

#ರಾಜಕಾರಣಿ_ಕಂ_ಗುತ್ತಿಗೆದಾರರು_ಆಗಿನ_ಮಂತ್ರಿ_ಕಾಗೋಡು_ತಿಮ್ಮಪ್ಪರಿಗೆ_ದೂರು_ನೀಡಿದ್ದರು.

  ಜನಪ್ರತಿನಿದಿಗಳು ಆಯ್ಕೆ ಆಗಿ ಶಾಸನ ಸಭೆಯಲ್ಲಿ ಶಾಸನ ಮಾಡುವ ಕಾಲ ಈಗಿಲ್ಲ, ವಿವಿದ ಯೋಜನೆಗಳಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರಕ್ಕೆ ಹೆಚ್ಚು ಕಾಮಗಾರಿ ಮಾಡಿಸಬೇಕು ಇದಕ್ಕಾಗಿ ಹೆಚ್ಚು ಅನುದಾನ ತರಬೇಕು ಈ ಮೂಲಕ ತಮ್ಮ ಜನಪ್ರಿಯತೆ ಉಳಿಸಿಕೊಳ್ಳುವ ಪ್ರಯತ್ನ ಈಗಿನ ಎಲ್ಲಾ ಜನಪ್ರತಿನಿದಿಗಳದ್ದು.
   ಹೆಚ್ಚಾಗಿ ತಮ್ಮ ಪರವಾಗಿ ಚುನಾವಣೆಯಲ್ಲಿ ಸಹಾಯ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಾಮಗಾರಿ ಗುತ್ತಿಗೆ ಕೊಡಿಸುತ್ತಾರೆ.
  ಹೆಚ್ಚು ಲಾಭದ ನಿರೀಕ್ಷೆಯಲ್ಲಿ ಮತ್ತು ಮದ್ಯವರ್ತಿಗಳ ಕಮೀಷನ್ ಗಳು, ರಾಜಕೀಯ ಪಕ್ಷದ ಸ್ಥಳಿಯರಿಗೆ ದೇಣಿಗೆ ಇತ್ಯಾದಿಗಳು ನೀಡಬೇಕಾದ್ದರಿಂದ ಕಾಮಗಾರಿ ಕಳಪೆ ಅನ್ನುತ್ತಾರೆ.
  ಆದರೆ ಕಾಮಗಾರಿಗೆ ಹಣ ತರುವುದು ಜನಪ್ರತಿನಿದಿ ಆದರೆ ಅನೂಷ್ಟಾನ ಮಾಡುವ ಇಲಾಖೆ ಇಂಜಿನಿಯರ್ ವಿಭಾಗ ಗುಣಮಟ್ಟದ ಕಾಮಗಾರಿ ಮಾಡಿಸಬೇಕು ಆದರೆ ಕಡಿಮೆ ಇಲಾಖಾ ಸಿಬ್ಬಂದಿ ಮಿತಿ ಮೀರಿದ ಕಾಮಗಾರಿಗಳ ಸಂಖ್ಯೆಯಿಂದ ಅಪರಾತಪರಾಗಳು ಆಗುತ್ತದೆ.
  ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಕಳಪೆ ಕಾಮಗಾರಿ ನಿವಾರಿಸಲು ಕಂಡುಕೊಂಡ ಮಾರ್ಗ ಪ್ರತಿ ಕಾಮಗಾರಿ ಎಸ್ಟಿಮೇಟ್ ನಕಲು ಗ್ರಾಮಸ್ಥರ ಕೈಗೆ ನೀಡುವುದು ಇದರಿಂದ ನನ್ನ ಕ್ಷೇತ್ರದಲ್ಲಿ ಕಾಮಗಾರಿ ಗುಣಮಟ್ಟ ಕಾಪಾಡಿಕೊಂಡಿದ್ದರಿಂದ 22 ವರ್ಷ ಆದರೂ ಆಗಿನ ಕಾಮಗಾರಿ ಈಗಲೂ ಇದೆ.
   ಎರೆಡು ಘಟನೆಗಳು ಇಲ್ಲಿ ನಮೂದಿಸಿದ್ದೇನೆ ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದ ಎಲ್ಲಾ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಡಾಂಬರಿಕರಣ ಮಾಡುವಾಗ ಗುತ್ತಿಗೆದಾರರೂ ಮತ್ತು ಇಂಜಿನಿಯರ್ ಗಳಿಗೆ ಪರಿಶಿಷ್ಟ ಕಾಲೋನಿಯಲ್ಲಿ ಹೇಗಾದರೂ ಕಾಮಗಾರಿ ಮಾಡಿದರಾಯಿತೆಂಬ ಅಸಡ್ಡೆ ಇತ್ತು.
   ನಾನು ಎಲ್ಲಾ ಇಂತಹ ಕಾಲೋನಿಯ ಅಕ್ಷರ ಜ್ಞಾನ ಪಡೆದ ಯುವಕರ ಕೈಗೆ ಎಸ್ಟಿಮೇಟ್ ನೀಡಿ ಅವರ ಕಾಲೋನಿ ರಸ್ತೆ ಕಾಮಗಾರಿ ಪರಿಶೀಲನೆಗೆ ತಯಾರು ಮಾಡಿದ್ದು ಗುತ್ತಿಗೆದಾರರಿಗೆ ಇಂಜಿನಿಯರ್ ಗೆ ಇದು ಗೊತ್ತಿರಲಿಲ್ಲ.
  ಆಚಾಪುರದ ಪರಿಶಿಷ್ಟ ಕಾಲೋನಿ ರಸ್ತೆಗೆ ಕಾಟಾಚಾರಕ್ಕೆ ಡಾಂಬಾರು ಮಾಡಿ ಸಾಗರಕ್ಕೆ ಹೋಗಿದ್ದ ಗುತ್ತಿಗೆದಾರ ಮರುದಿನ ಇಂಜಿನಿಯರ್ ಜೊತೆ ಬಿಲ್ ಬರೆಸಲು ಬಂದಾಗ ಕಾಲೋನಿಯ ಇಡಿ ರಸ್ತೆಯ ಡಾಂಬಾರು ಪದರ ಕಾಲೋನಿಯವರು ಚಾಪೆಯಂತೆ ಸುತ್ತಿ ಮಡಚಿ ಇಟ್ಟಿದ್ದರು!!.
  ಗೇರುಬೀಸಿನಲ್ಲಿ ಸಣ್ಣ ಪಿಕ್ ಅಪ್ ಕಾಮಗಾರಿಗೆ ಕಾಂಕ್ರಿಟ್ ಪ್ರೋಪಷನ್ ಬೇಕಾಬಿಟ್ಟಿ ಮಾಡಲು ಗುತ್ತಿಗೆದಾರರು ಪ್ರಯತ್ನಿಸಿದಾಗ ಊರವರೆಲ್ಲ ಸೇರಿ ಎಸ್ಟಿಮೇಟ್ ತೋರಿಸಿದಾಗ ಗುತ್ತಿಗೆದಾರ ಕಂಗಾಲು!!.
    ಇದರಿಂದ ಇಂಜಿನಿಯರ್ ಗಳು 5 ವಷ೯ದಲ್ಲಿ 14 ಜನ ಓಡಿ ಹೋದರು, ಗುತ್ತಿಗೆದಾರ ಕಂ ರಾಜಕೀಯ ಕಾರ್ಯಕರ್ತರು ನನ್ನ ಮೇಲೆ ಸಿಟ್ಟಾದರು ಇದೆಲ್ಲ ಆಗ ಮಂತ್ರಿಗಳಾಗಿದ್ದ ಸಾಗರದ ವಿದಾನ ಸಭಾ ಕ್ಷೇತ್ರದ ಕಾಗೋಡು ತಿಮ್ಮಪ್ಪರ ಹತ್ತಿರ ಅವರ ದೂರಿಗೆ ಕಾಲು ಬಾಲು ಸೇರಿಸಿ ದೂರಿದರು.
     ಕಾಗೋಡು ಇಂಜಿನಿಯರ್ ನ್ನು ಕರೆಸಿ ಪ್ರತ್ಯೇಕವಾಗಿ ನನ್ನ ಬಗ್ಗೆ ವಿಚಾರಿಸಿದರಂತೆ ಆಗ ಅವರಿಗೆ ಪರ್ಸೆಂಟೇಜ್ ತೆಗೆದುಕೊಳ್ಳದ ಜಿಲ್ಲಾ ಪಂಚಾಯತ್ ಸದಸ್ಯ ಅನ್ನುವುದು ಮನವರಿಕೆ ಆದ್ದರಿಂದ ನನ್ನ ಕ್ಷೇತ್ರದ ಗುಣಮಟ್ಟದ ಕಾಮಗಾರಿಗೆ ಅವರೂ ಬೆಂಬಲಿಸಿದರು.
  ನಂತರ ನಾನು ಕಾಮಗಾರಿ ಪರಿಶೀಲನೆಗೆ ಹೋದಾಗ ಗುತ್ತಿಗೆದಾರರು ಭಯ ಬೀಳುತ್ತಿದ್ದರು ಆದರೆ ಪ್ರಾಮಾಣಿಕ ಗುತ್ತಿಗೆದಾರರಾಗಿದ್ದ ಸಾಗರದ ಬೇಬಿ ಕಂಟ್ರಾಕ್ಟರ್, ಇಕ್ಕೇರಿ ನಾರಾಯಣ ಶರ್ಮ ಇಂಜಿನಿಯರ್ ಗಳ ಹತ್ತಿರ ತಮ್ಮ ಬಿಲ್ಗಾಗಿ ಜಗಳ ಮಾಡುವಂತ ವ್ಯವಸ್ಥೆ ಉಂಟಾಗಿತ್ತು.
   ಗುಣಮಟ್ಟದ ಕಾಮಗಾರಿಗೆ ಜಿಲ್ಲೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರದ ಕುಮಾರ್ ಬಂಗಾರಪ್ಪ ಹೆಚ್ಚು ಗಮನ ನೀಡುತ್ತಾರೆ, ಪ್ರತಿ ಕಾಮಗಾರಿಯನ್ನು ಎಸ್ಟಿಮೇಟ್ ಹಿಡಿದುಕೊಂಡೆ ಪರಿಶೀಲನೆ ಮಾಡುತ್ತಾರೆ, ಗುಣಮಟ್ಟ ಕಳಪೆ ಆದರೆ ಕಾಮಗಾರಿ ಉದ್ಘಾಟನೆ ಮಾಡದೆ ವಾಪಾಸ್ ಹೋಗುತ್ತಾರೆ ಇದರಿಂದ ಅವರದೇ ಪಕ್ಷದ ಗುತ್ತಿಗೆದಾರರು ಅವರ ವಿರುದ್ದ ಸಮರ ಸಾದಿಸುತ್ತಿದ್ದಾರೆ.
  ಪ್ರತಿಯೊಬ್ಬ ಶಾಸಕ, ಜನಪ್ರತಿನಿದಿಗಳಿಗೆ ಗುಣಮಟ್ಟದ ಕಾಮಗಾರಿ ಮಾಡಿಸುವುದು ದೊಡ್ಡ ಸವಾಲು ಕೂಡ.
  ಕಳಪೆ ಕಾಮಗಾರಿ ಆದರೆ 40% ಕಮಿಷನ್ ಎಂಬ ಟ್ರೋಲ್ ಕೂಡ ಆಗುವುದು ರಾಜಕಾರಣಿಗಳ ಜನಪ್ರಿಯತೆಗೆ ಕುಂದೂ ಕೂಡ.
  ಇದನ್ನು ಸುಲಭವಾಗಿ ಪರಿಹರಿಸುವ ದಾರಿ ಸದರಿ ಕಾಮಗಾರಿ ಎಸ್ಟಿಮೇಟ್ ನಕಲು ಆಯಾ ಗ್ರಾಮದವರಿಗೆ ಕಾಮಗಾರಿ ಪ್ರಾರಂಬಿಸುವ ದಿನ ನೀಡುವ ಪಾರದರ್ಶಕ ಕ್ರಮ ಅಳವಡಿಸಿಕೊಳ್ಳಬೇಕು.
   ಫಲಾನುಭವಿ ಗ್ರಾಮಸ್ಥರೂ ಎಸ್ಟಿಮೇಟ್ ನಕಲು ನೀಡದಿದ್ದರೆ ಕಾಮಗಾರಿ ಪ್ರಾರಂಬಿಸಲು ಬಿಡಬಾರದು ಅಷ್ಟಕ್ಕೂ ಎಸ್ಟಿಮೇಟ್ ನೀಡದಿದ್ದರೆ RTI ಅಂದರೆ ಮಾಹಿತಿ ಹಕ್ಕಿನಲ್ಲಿ ಅರ್ಜಿ ನೀಡಿ ಎಸ್ಟಿಮೇಟ್ ಪಡೆಯಬಹುದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ