Skip to main content

Blog number 1090. ಉದಯೋನ್ಮುಖ ಚಲನ ಚಿತ್ರ ನಿಧೇ೯ಶಕ ಮತ್ತು ಕದಂಬ ಪಿಲಂ ಇನ್ಸ್ಟಿಟ್ಯೂಟ್ ಸ್ಥಾಪಕರಾದ ಟಿ.ಎನ್. ನಾಗೇಶ್ ನಿನ್ನೆ ನನ್ನ ಅತಿಥಿ. (26- ನವೆಂಬರ್ -2022)

#ಕನ್ನಡ_ಉದಯೋನ್ಮುಖ_ನಿಧೇ೯ಶಕ_ಟಿ_ಎನ್_ನಾಗೇಶ್_ನನ್ನ_ಅತಿಥಿ

#ಇಪ್ಪತ್ತೆರೆಡು_ವಷ೯ದ_ಗೆಳೆತನ,

#ಇವರ_ನಿಧೇ೯ಶನದಲ್ಲಿ_ಆರು_ಚಲನಚಿತ್ರ_ಬಂದಿದೆ

#ಹದಿಮೂರು_ಮೆಗಾ_ಸಿರಿಯಲ್_ಮಾಡಿದ್ದಾರೆ

#ಇಪ್ಪತ್ತು_ಚಲನ_ಚಿತ್ರಗಳಿಗೆ_ಅಸಿಸ್ಟೆಂಟ್_ಡೈರೆಕ್ಟರ್

#ಇವರದ್ದೇ_ಸ್ವಂತ_ಕದಂಬ_ಪಿಲಂ_ಇನ್ಸ್ಟಿಟ್ಯೂಟ್_ಕೂಡ_ಇದೆ

     ಒಂದು ಕಾಲದಲ್ಲಿ ಬೆಂಗಳೂರಿನ ಹೈಲ್ಯಾಂಡ್ ಹೋಟೆಲ್ ಚಲನ ಚಿತ್ರ ಉಧ್ಯಮಿಗಳ ಕೇಂದ್ರವೇ ಆಗಿತ್ತು ಅಲ್ಲಿನ ಮ್ಯಾನೇಜರ್ ಚಂದ್ರು ಅವರು ಹೈಲ್ಯಾಂಡ್ಸ್ ಚಂದ್ರು ಅಂತಾನೆ ಪ್ರಸಿದ್ದಿ ಪಡೆದಿದ್ದರು ಅವರು ಶಿವಮೊಗ್ಗ ಜಿಲ್ಲೆಯ ಮೂಲದ ತೀರ್ಥಹಳ್ಳಿಯ ಕನ್ನಂಗಿಯವರು.
   90 ರ ದಶಕದಲ್ಲಿ ಇವರೆಲ್ಲ ಬೆಂಗಳೂರಿನ ಬಂಗಾರಪ್ಪನವರ ಅಭಿಮಾನಿಗಳು, ಬಂಗಾರಪ್ಪನವರು ಕಾಂಗ್ರೇಸ್ ನಿಂದ ಸಿಡಿದು KCP ಎಂಬ ಬೇರೆ ಪಕ್ಷ ಕಟ್ಟಿದಾಗ ಚ೦ದ್ರು ಬೆಂಗಳೂರಿನ ಗಾಂಧಿ ನಗರ ವಿದಾನ ಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಿದ್ದರು.
   ಹೀಗೆ ಹೈಲ್ಯಾಂಡ್ ಚಂದ್ರುರವರ ಗೆಳೆಯರಾಗಿದ್ದ ಟಿ.ಎನ್. ನಾಗೇಶ್ 1997 ರಿಂದ ನನಗೂ ಗೆಳೆಯರಾಗಿದ್ದು.
  ಟಿ.ಎನ್. ನಾಗೇಶ್ ತುಂಬಾ ತಾಳ್ಮೆ ಸ್ವಬಾವದವರು ಮತ್ತು ಮೆದು ಮಾತಿನವರು, ಕನ್ನಡ ಸಾಹಿತ್ಯ ಇತಿಹಾಸದ ಬಗ್ಗೆ ತುಂಬಾ ಓದಿದ್ದಾರೆ, ತಮ್ಮ ಕೆಲಸದಲ್ಲಿ ಹೆಚ್ಚು ಕಲಿಯಬೇಕೆಂಬ ತುಡಿತವೇ ಈಗ ಇವರು ಈ ಸ್ಥಾನಕ್ಕೆ ಏರಲು ಕಾರಣವಾಗಿದೆ.
  ಸುಮಾರು 20 ಚಲನಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ಹದಿಮೂರು ಮೆಗಾ ಸೀರಿಯಲ್ (ಸರೋಜಿನಿ- ಚಂದ್ರಿಕಾ ಇತ್ಯಾದಿ) ಸ್ಪತಂತ್ರ ನಿದೇ೯ಶಕರಾಗಿ, ಆರು ಚಲನಚಿತ್ರಗಳನ್ನು ಇವರೇ ನಿರ್ದೇಶಿಸಿ ಯಶಸ್ವಿ ಆಗಿದ್ದಾರೆ.
   ಒಲವೆ ವಿಸ್ಮಯ, ಪಂಚಾಮೃತ, ಗೌಡ v/s ರೆಡ್ಡಿ, ದೂ೦ - ದೂಂ, ರಾಮದಾನ್ಯ ಮತ್ತು ಖಡಕ್.
   ಅನಂತ್ ಕುಮಾರ್ - ಶಶಿಕುಮಾರ್ - ದೇವರಾಜ್ - ಶ್ರೀನಗರ ಕಿಟ್ಟಿ - ಅಚ್ಯುತ್ -ರಂಗಾಯಣ ರಘು ಅವರೆಲ್ಲರ ತಾರಗಣದಲ್ಲಿ ಇವರು ಸಿನಿಮಾ ನಿರ್ದೇಶಿಸಿದ್ದಾರೆ.
  ಪಂಚಾಮೃತ 5 ಕಥೆಗಳ ಕಥಾ ಸಂಗಮ ಪುಟ್ಟಣ್ಣನವರ ನಂತರ ಪ್ರಥಮ ಬಾರಿಗೆ ಇವರು ನಿಧೇ೯ಶಿಸಿದ್ದಾರೆ.
  ಕನಕದಾಸರು ರಚಿಸಿದ ಕಿರು ಕಾವ್ಯವಾದ ರಾಮ ದ್ಯಾನ ಭತ್ತ ಮತ್ತು ಅಕ್ಕಿಯಲ್ಲಿ ಶ್ರೇಷ್ಟರಾರೆಂದು ತರ್ಕದಲ್ಲಿ ಶ್ರೀ ರಾಮ ರಾಗಿಯೇ ಎಂದು ನೀಡಿದ ತೀರ್ಪಿನ ಕಾವ್ಯವನ್ನು ಅತ್ಯುತ್ತಮವಾಗಿ ಸಿನಿಮಾ ಮಾಡಿದ್ದಾರೆ ಇದು ಹಿಂದಿಯಲ್ಲೂ ಡಬ್ ಆಗಿ ಯಶಸ್ಸು ಪಡೆಯಿತು.
  ಕೊರಾನಾ ಕಾಲದಲ್ಲಿ ಹಿಂದಿಯ ಮಹಾಬಾರತ ಸೀರಿಯಲ್ ಕನ್ನಡಕ್ಕೆ ಬಾಷಾಂತರಿಸಿ ಅನೇಕ ಕಲಾವಿದರಿಗೆ ಆ ಸಂಕಷ್ಟ ಕಾಲದಲ್ಲಿ ಚಿತ್ರರಂಗಕ್ಕೆ ದೊಡ್ಡ ಸಹಾಯವಾಗಿತ್ತು.
  ಚಲನ ಚಿತ್ರದ ಅಭಿನಯ, ನಿರ್ದೇಶನ, ಕ್ಯಾಮೆರಾ, ವಿನ್ಯಾಸ ಇತ್ಯಾದಿ ತರಬೇತಿ ನೀಡುವ ಇವರದ್ದೇ ಸ್ವಂತದ್ದಾದ ತರಬೇತಿ ಸಂಸ್ಥೆ ಕದಂಬ ಪಿಲಂ ಇನ್ಸ್ಟಿಟ್ಯೂಟ್ ಕೂಡ ನಡೆಯುತ್ತಿದೆ.
 ಸುಮಾರು 20 ವರ್ಷ ಪರಸ್ಪರ ಬೇಟಿ ಆಗಿರಲಿಲ್ಲ ಆದರೆ ಪೋನ್ ಸಂಪರ್ಕದಲ್ಲಿದ್ದೆವು, ನನ್ನ ಪೇಸ್ ಬುಕ್ ಬರಹಗಳಿಗೆ  ಪ್ರತಿಕ್ರಿಯಿಸುತ್ತಿದ್ದರು ಮತ್ತು ನನ್ನ ಎರೆಡೂ ಪುಸ್ತಕ ಓದಿದ್ದಾರೆ.
  ಅವರಿಗೆ ಬೆಸ್ತರ ರಾಣಿ ಚಂಪಕ ಕಾದಂಬರಿ ತುಂಬಾ ಹಿಡಿಸಿದೆ, ಕಳೆದು ಹೋಗಿದ್ದ ಹೈಲ್ಯಾಂಡ್ಸ್ ಚಂದ್ರು ಸಂಪರ್ಕ ಪುನಃ ಇವರಿಂದ ಜೋಡನೆ ಆಗಿ ಈಗಷ್ಟೆ ಚಂದ್ರು ಜೊತೆ ಮಾತಾಡಲು ಸಾಧ್ಯವಾಯಿತು.
   ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಇನ್ನೂ ಹೆಚ್ಚಿನ ಸಾದನೆ ಮಾಡಲಿ ಮತ್ತು ಎಲ್ಲಾ ಯಶಸ್ಸುಗಳು ಟಿ.ಎನ್.ನಾಗೇಶ್ ಗೆ ಸಿಗಲಿ ಎ೦ದು ಹಾರೈಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...