Skip to main content

Blog number 1064. ರವಿ ಬೆಳೆಗೆರೆ ಅಸ್ತಂಗತರಾಗಿದ್ದಾರೆ ಆದರೆ ಅವರು ಪತ್ರಿಕೊದ್ಯಮ, ಟೆಲಿವಿಷನ್ ಮಾಧ್ಯಮ ಮತ್ತು ಸಾಹಿತ್ಯ ಲೋಕದಲ್ಲಿ ಮಾಡಿರುವ ಸಾದನೆ ಅಸಮಾನ್ಯ, ಅವರ ಅಭಿಮಾನಿ ಆಗಿ ಅವರಿಗೆ ಅತಿಥ್ಯ ನೀಡುವ ಕೆಲವು ಅವಕಾಶ ನನಗೆ ದೊರಕಿತ್ತು ಎಂಬುದು ಜೀವಮಾನ ಪೂರ್ತಿ ನೆನಪಿನಲ್ಲಿ ಉಳಿಯುವುದು.

ರವಿಬೆಳೆಗೆರೆ_ಹಾಯ್_ಬೆಂಗಳೂರು
#ರವಿ ಬೆಳೆಗೆರೆ ಅಸ್ತoಗತರಾಗಿ ಇವತ್ತಿಗೆ ಎರೆಡು ವರ್ಷ.

    ಅವತ್ತು ಅಂದರೆ 2020ರ ನವೆಂಬರ್ 13ರ ಮಧ್ಯ ರಾತ್ರಿ ಪ್ರಜಾವಾಣಿ ವಿಭಾಗೀಯ ಪ್ರಸರಾಣಾಧಿಕಾರಿ ಸಂಗಣ್ಣ ಪ್ರಕಾಶ್ ವಾಟ್ಸ್ ಪ್ ನಲ್ಲಿ ರವಿ ಬೆಳೆಗೆರೆ ಅಸ್ತಂಗತ ಅಂತ ಸುದ್ದಿ ಕಳಿಸಿದ್ದು ನೋಡಿ ನನ್ನ ಮನಸ್ಸು ಸೂತಕದ ಮನೆ ಅಂತಾಯಿತು.
 ಮೊದಲ ಪ್ರತಿ ಹಾಯ್ ಬೆಂಗಳೂರಿಂದ ಇವತ್ತಿನ ಸಾವಿರದ ಇನ್ನೂರು ದಾಟಿದ ಪ್ರತಿ ಪತ್ರಿಕೆ, ಅವರು ಬರೆದ ಅನುವಾದಿಸಿದ ಎಲ್ಲಾ ಪುಸ್ತಕ ಓದಿದ್ದೇನೆ.
  ನನ್ನ ಜೀವನದ ಎಲ್ಲಾ ಏಳು ಬೀಳಿನಲ್ಲಿ ರವಿ ಬೆಳೆಗೆರೆಯ ಬರಹಗಳು ಅವರ ಜೀವನದ ಅನುಭವ ನನಗೆ ವಿಪರೀತ ಪ್ರಭಾವ ಉಂಟು ಮಾಡಿತ್ತು.
  ಇವರ ನನ್ನ ಮೊದಲ ಬೇಟಿ ಹೇಗಾಯಿತೆ೦ದರೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕೋಟ್ಯಾಂತರ ರೂಪಾಯಿ ಹಣ ಕಳಪೆ ಔಷದಿ ಖರೀದಿಸಿ ಲಕ್ಷಾಂತರ ರೂಪಾಯಿ ಹೊಡೆದು ತಿಂದ ಕಥೆ ಅವತ್ತಿನ ಜಿಲ್ಲಾ ಸಜ೯ನ್ ರಹಸ್ಯವಾಗಿ ತಿಳಿಸಿದ್ದನ್ನ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಂಡಿಸಿ ತನಿಖೆಗೆ ಒತ್ತಾಯಿಸಿದ್ದರಿಂದ ಅವತ್ತು ರಾತ್ರಿಯೇ ಈ ಔಷದಿ ಗೋದಾಮ ವಿದ್ಯುತ್ ಅವಘಡದಿಂದ ಸುಟ್ಟು ಹೋಯಿತೆಂದು ಮಾಡಿ ಇದನ್ನು ಪ್ರತಿಭಟಿಸಿದ ನನ್ನ ಮೇಲೆ ಸುಳ್ಳು ಕೇಸ್ ಮಾಡಿ ಜೈಲಿಗೆ ಕಳಿಸಿದ ಪ್ರಕರಣದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಅಧಿಕಾರ ಹೊಂದಿದ್ದ ಎಲ್ಲಾ ರಾಜಕಾರಣಿಗಳು ಪಾಲುದಾರರಾಗಿದ್ದಾಗ ನಾನು ಒಬ್ಬಂಟಿ ಆಗಿದ್ದೆ.
 ಆ ಸಂದಭ೯ದಲ್ಲಿ ಹಾಯ್ ಬೆಂಗಳೂರು ನನ್ನ ಪರವಾಗಿ ಪ್ರಕಟಿಸಿದ ವರದಿ ನನಗೆ ನನ್ನ ಹೋರಾಟದ ನೈತಿಕತೆಗೆ ಹೆಚ್ಚಿನ ಬಲ ಮತ್ತು ಆತ್ಮವಿಶ್ವಾಸ ಉಂಟು ಮಾಡಿತ್ತು ಇದಕ್ಕೆ ಧನ್ಯವಾದ ಹೇಳಲು ರವಿ ಬೆಳೆಗೆರೆಗೆ ಪೋನ್ ಮಾಡಿದಾಗ ಸ್ವತಃ ಬಂದು ಧನ್ಯವಾದ ಹೇಳಿ ಅಂದಿದ್ದರು ಹಾಗಾಗಿ ಬೆಂಗಳೂರಿನ ಅವರ ಕಛೇರಿಗೆ ಹೋಗಿ ಬೇಟಿ ಮಾಡಿದ್ದೆ " ಏನ್ರಿ ಒಂದು ಒಳ್ಳೇ ಪೋಟೋ ಕೊಡೋಕೆ ಆಗಿಲ್ಲೇನ್ರಿ? ಕ್ರಿಮಿನಲ್ ಗಳೇ ಸೂಟು ಬೂಟು ಹಾಕಿ ಪತ್ರಿಕೆಗೆ ಪೋಟೊ ಕೊಡುತ್ತಾರೆ " ಅಂತ ತಮಾಷೆ ಮಾಡಿದ್ದರು.
 ಇದಕ್ಕೆ ಕಾರಣ ನನ್ನ ಬಗ್ಗೆ ವರದಿ ಮಾಡಿದ ಶೃಂಗೇಶರಿಗೆ ಅವತ್ತು ನನ್ನ ಪರಿಚಯ ಇರಲಿಲ್ಲ ಮತ್ತು ಸರಿಯಾದ ಪೋಟೊ ಅವರಿಗೆ ಸಿಕ್ಕಿರಲಿಲ್ಲ.
 ನಂತರ ನನ್ನ ಬಗ್ಗೆ ಅನೇಕ ಲೇಖನಗಳು ಬಂದಿದೆ, ಬಹಿರಂಗ ಸಭೆಯಲ್ಲಿ ರವಿ ಬೆಳೆಗೆರೆ ನನ್ನ ಬಗ್ಗೆ ಮಾತಾಡಿದ್ದು ಎಲ್ಲಾ ಈಗ ನೆನಪು.
 ನಮ್ಮ ಮಲ್ಲಿಕಾ ವೆಜ್ ನ ಇಡ್ಲಿ ವಡಾ ಸಾಂಬಾರು ಮತ್ತು ಕೊಥಾಸ್ ಪಿಲ್ಟರ್ ಕಾಫಿ ಅವರಿಗೆ ತುಂಬಾ ಇಷ್ಟ ಹಾಗೆಯೇ ನಮ್ಮ ಚಂಪಕಾ ಪ್ಯಾರಾಡೈಸ್ ನ ಮಡಿಕೆ ದಮ್ ಬಿರಿಯಾನಿಗೆ ಅವರು ಪಿದಾ ಆಗಿದ್ದರು ಅವರು ಅದನ್ನು ಪೇಸ್ ಬುಕ್ ನಲ್ಲೂ ಬರೆದಿದ್ದರು.
   ಅವರ ನನ್ನ ಕೊನೆಯ ಭೇಟಿ ಲಾಕ್ ಡೌನ್ ಗೆ ಕೆಲ ದಿನ ಮೊದಲು 21 ಜನವರಿ 2020 ರಂದು ಈ ಮಾಗ೯ದಲ್ಲಿ ಬಂದಾಗ ಶೃಂಗೇಶ್ ಬೆಳಗಿನ ಉಪಹಾರಕ್ಕೆ ನಮ್ಮಲ್ಲಿ ಕರೆತಂದಿದ್ದರು ಇಂತಹ ಇಡ್ಲಿ ಸಾಂಬಾರು ಚಟ್ನಿ ಸ್ಟಾರ್ ಹೋಟಲ್ ಲ್ಲಿ ಸಿಗೋದಿಲ್ಲ ಅಂದಿದ್ದರು.
 ನನ್ನ ಗೆಳೆಯರು ಮತ್ತು ನನ್ನ ಸಿಬ್ಬಂದಿಗಳ ಜೊತೆ ಪೋಟೊ ತೆಗೆಸಿಕೊಂಡರು ಅವರನ್ನ ನನ್ನ ಗೆಳೆಯರು ಅವರ ಕ್ರೈಂಡೈರಿ ಬಗ್ಗೆ ನೆನಪಿಸಿದಾಗ ಅವರು ಆ ಬಗ್ಗೆ ಮಾತಾಡಿದ ವಿಡಿಯೋ ತುಣುಕು ಲಗತ್ತಿಸಿದ್ದೇನೆ.
  ಅವತ್ತು ಅವರಿಗಾಗಿ 2 ಬಿರಿಯಾನಿ ಅವರ ಡ್ರೈವರ್ ಗೆ ಒ0ದ ಮೊಟ್ಟೆ ಬಿರಿಯಾನಿ ಕೇಳಿದ್ದರು ಅದನ್ನು ಸಾಗರಕ್ಕೆ ಅವರ ಕೋಟ್೯ ಕಲಾಪ ಮುಗಿಸುವ ಮೊದಲೇ ಅವರಿಗೆ ತಲುಪಿಸಿದ್ದೆ ಅಲ್ಲಿಂದ ಅವರು ಜೋಯಿಡಾ ಹೋದರು ಮುಂದಿನ ಸಾರಿ ಪುನಃ ಬರುವುದಾಗಿ ಹೋದವರು ರಾತ್ರಿ ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ಹೋಗಿದ್ದು ವಿಷಾದನೀಯ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...