Skip to main content

Blog number 1078. ಆನಂದಪುರಂ ಇತಿಹಾಸ ಸಂಖ್ಯೆ - 85. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆನಂದಪುರಂನ ಬೆಸ್ತರ ಗಂಗಾ ಮಠವಿತ್ತು ಈ ಮಠದಲ್ಲಿ ಸಭಾ ಭವನ ನಿಮಿ೯ಸಲು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಶಂಕುಸ್ಥಾಪನೆ ಮಾಡಿದರೂ ನಿಮಾ೯ಣವಾಗಲಿಲ್ಲ ಬೆಸ್ತರ ಸಮೂದಾಯದ ಇಚ್ಚಾಶಕ್ತಿ ಕೊರತೆ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರ೦ತ ಪ್ರೇಮ ಕಥೆಯ ಜಾತಿ ಕಾರಣದ ಮುಂದಿನ ಭಾಗವಾಗಿದೆ

#ಆನಂದಪುರಂ_ಇತಿಹಾಸ_ಸಂಖ್ಯೆ_85.

#ಆನಂದಪುರಂಗೂ_ಬಂಗಾರಪ್ಪರಿಗೂ_ಇದ್ದ_ನಂಟು

#ಮದ್ಯಕಣ್ಣೂರಿಂದ_ಸೈಕಲ್_ಮೇಲೆ_ಯಡೇಹಳ್ಳಿ_ಪ್ರವಾಸಿಮಂದಿರದಲ್ಲಿ_ನಡೆಯುತ್ತಿದ್ದ
#ಶರಾವತಿ_ಮುಳುಗಡೆ_ವಿಶೇಷ_ಕೋರ್ಟಗೆ_ಬರುತ್ತಿದ್ದರು

#ಬೆಸ್ತರ_ಸಮುದಾಯದ_ಅಭಿವೃದ್ಧಿಗಾಗಿ_ಶ್ರಮಿಸುತ್ತಿದ್ದ_ಕೋರ್ಟ್_ಹಾಲಪ್ಪನವರು.

#ಐತಿಹಾಸಿಕ_ಗಂಗಾಮಠದ_ಅಭಿವೃದ್ದಿಗೆ_ಅಡೆ_ತಡೆ

#ಬಂಗಾರಪ್ಪರ_ಬಾಷಣ_ಅಜಿ೯_ಹಾಕಿ_ಯಾರೂ_ಇಂತಹ_ಜಾತಿಯಲ್ಲಿ_ಹುಟ್ಟಲು_ಸಾಧ್ಯವಿಲ್ಲ.

   ಸಾರೇಕೊಪ್ಪದ ಬಂಗಾರಪ್ಪನವರೆಂದರೆ ಕಲರ್ ಪುಲ್ ರಾಜಕಾರಣಿ ಎಂದೇ ಅಘೋಷಿತ ಬಿರುದು ಅದಕ್ಕೆ ಕಾರಣ ಅವರ ಆಕರ್ಷಕ ದಿರಿಸು,ಕೂಲಿಂಗ್ ಗ್ಲಾಸ್, ಲಗ್ಜುರಿ ಕಾರ್, ಅವರ ಭಾಷಣ, ರಾಜಕಾರಣದ ತಂತ್ರಗಾರಿಕೆಗಳು.
  ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದೆ ಕಾಯ೯ಕ್ರಮ ಉದ್ಘಾಟಿಸಿದ ನಂತರ ರಾತ್ರಿ ಊಟ ನಮ್ಮ ಮನೆ ಸಮೀಪದ ಪ್ರವಾಸಿ ಮಂದಿರದಲ್ಲಿ (ಒಂದು ಕಾಲದ ಬ್ರಿಟೀಷ್ ಬಂಗ್ಲೆ ).
   ಜಿಲ್ಲಾ ಮಟ್ಟದ ಯುವಜನ ಮೇಳದ ಸ್ಪರ್ದಾಳುಗಳ ಜೊತೆ ಸ್ಥಳಿಯರೂ ಸೇರಿ ಸುಮಾರು 10 ಸಾವಿರ ಜನ ಸೇರಿದ ಯಶಸ್ವಿ ಸಭೆ ಬಂಗಾರಪ್ಪರಿಗೆ ಹುರುಪು ನೀಡಿತ್ತು.
  ಪ್ರವಾಸಿ ಮಂದಿರದಲ್ಲಿ ಊಟ ಮಾಡುವಾಗ ಅವರಿಗೆ ಈ ಬ್ರಿಟೀಶ್ ಬಂಗಲೆಯಲ್ಲಿ ಅವರ ವಕೀಲಿ ವೃತ್ತಿಯ ಪ್ರಾರಂಭದಲ್ಲಿ ಕೋರ್ಟ್ ಕಲಾಪದಲ್ಲಿ ಭಾಗವಹಿಸಿದ ನೆನಪಾಯಿತು ....
    ಶರಾವತಿ ಮುಳುಗಡೆಯ ವಿಶೇಷ ನ್ಯಾಯಾಲಯ ನಮ್ಮ ಊರಿನ ಈಗಿನ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿರುವಾಗ ಯುವ ವಕೀಲರಾದ ಬಂಗಾರಪ್ಪನವರು ಅವರ ಕಕ್ಷಿದಾರರ ಪರವಾಗಿ ಇಲ್ಲಿ ಭಾಗವಹಿಸುತ್ತಿದ್ದರೆಂದು,ಆಗ ಅವರ ವಾಸ್ತವ್ಯ ಮಧ್ಯಕಣ್ಣೂರಿನ ಅಡುಗೆ ಮನೆಯವರಲ್ಲಿ, ಶಿವಮೊಗ್ಗ ಜಿಲ್ಲೆಯ ದೀವರ ಜನಾಂಗದ ಮೊದಲ ವೈದ್ಯರು ಈ ಕುಟುಂಬದ ಡಾಕ್ಟರ್ ಬೋರಪ್ಪನವರು.
  ಆ ಕುಟುಂಬದ ಹೊಸ ರ್ಯಾಲಿ ಸೈಕಲ್ ನಲ್ಲಿ ಬಂಗಾರಪ್ಪನವರು ವಕೀಲರ ಕೋಟ್ ಧರಿಸಿ ಮದ್ಯಕಣ್ಣೂರುನಿಂದ ಈ ಕೋರ್ಟ್ ನಡೆಯುವ ಪ್ರವಾಸಿ ಮಂದಿರಕ್ಕೆ ವಾರಗಟ್ಟಲೇ ಬರುತ್ತಿದ್ದರಂತೆ.
   ಹೀಗೆ ಬಂಗಾರಪ್ಪನವರಿಗೆ ಆನಂದಪುರಂನ ನಂಟು ಇತ್ತು, ನಂತರ ಬಂಗಾರಪ್ಪನವರು ಪಾರ್ಲಿಮೆಂಟ್ ಚುನಾವಣೆಗೆ ಅವರದೇ ಪಕ್ಷದಿಂದ ಸ್ಪರ್ಧಿಸಿದಾಗ ನಾವೆಲ್ಲ ಪಕ್ಷಾತೀತವಾಗಿ ಅವರನ್ನು ಬೆಂಬಲಿಸಿ ಆನಂದಪುರಂನ ಬಸ್ ಸ್ಟಾಂಡ್ ನಲ್ಲಿ ದೊಡ್ಡ ಸಾರ್ವಜನಿಕ ಸಭೆ ನಡೆಸಿದ್ದೆವು ಚುನಾವಣೆಯಲ್ಲಿ ವಿಜಯರಾದ ನಂತರ ಆನಂದಪುರಂ ಮತ್ತು ಮುರುಘಾ ಮಠದಲ್ಲಿ ಸಭೆ ನಡೆಸಿದ್ದೆವು.
   ಆನಂದಪುರಂನ ಗಂಗಾ ಮಠಕ್ಕೆ ಸಮುದಾಯ ಭವನ ಪಾರ್ಲಿಮೆಂಟ್ ಸದಸ್ಯರ ನಿಧಿಯಲ್ಲಿ ಮಂಜೂರು ಮಾಡಿ ಅದರ ಶಂಕುಸ್ಥಾಪನೆಗೆ ಬಂದಾಗ ಗುತ್ಯಮ್ಮ ದೇವಸ್ಥಾನದಿಂದ ಗಂಗಾಮಠದ ತನಕ ತೆರೆದ ಜೀಪಲ್ಲಿ ಮೆರವಣಿಗೆಯನ್ನು ಗಂಗಾ ಮತ ಸಮೂದಾಯದ ಮುಖಂಡರು, ವಿದ್ಯಾವಂತ ಮತ್ತು ಸರ್ಕಾರಿ ಅಧಿಕಾರಿಗಳಾಗಿದ್ದ ಕೋರ್ಟ್ ಹಾಲಪ್ಪನವರು ವ್ಯವಸ್ಥೆ ಮಾಡಿದ್ದರು.
    ಕೋಟ್೯ ಹಾಲಪ್ಪನವರು ಒಬ್ಬ ಪ್ರಾಮಾಣಿಕ ಸಂಪನ್ನ ವ್ಯಕ್ತಿಯಾಗಿ ಅವರ ಸಮುದಾಯದ ಅಭಿವೃದ್ದಿಗಾಗಿ ತಮ್ಮ ಜೀವನ ಪಯ೯೦ತ ಶ್ರಮಿಸಿದವರು, ಗುತ್ತಮ್ಮ ದೇವಸ್ಥಾನದ ಅಭಿವೃದ್ಧಿಗೆ ಮತ್ತು ಪುರಾತನ ಗಂಗಾಮಠದ ಜಾಗ ಉಳಿಸುಕೊಳ್ಳಲು ತುಂಬಾ ಕಷ್ಟ ಪಟ್ಟಿದ್ದರು ಹಾಗಾಗಿ ಬಂಗಾರಪ್ಪರ ಜೊತೆ ಅವರನ್ನು ತೆರೆದ ಜೀಪಲ್ಲಿ ಮೆರವಣಿಗೆ ಮಾಡುವ ಉದ್ದೇಶವಾಗಿತ್ತು, ಬಂಗಾರಪ್ಪನವರು ನನ್ನನ್ನು ಒತ್ತಾಯದಿಂದ ಅವರ ಜೊತೆ ಜೀಪಲ್ಲಿ ಮೆರವಣಿಗೆಗೆ ಕರೆದುಕೊಂಡರು.
   ಈ ಕಾಯ೯ಕ್ರಮಕ್ಕೆ ಕೆಲ ದಿನ ಮೊದಲು ನಿಗದಿ ಆದ ಕಾಯ೯ಕ್ರಮ ನಡೆಯದಂತೆ ತಡೆಯಲು ಕೆಲವರು ನಮ್ಮ ಊರಿನವರು ಪ್ರಯತ್ನಿಸಿದ್ದರು.
   ಬಂಗಾರಪ್ಪನವರು ಈ ಕಾರ್ಯಕ್ರಮಕ್ಕೆ ಬರದಂತೆ ತಡೆಯಲು ಹೋಗಿದ್ದರು ಆಗ ಬಂಗಾರಪ್ಪನವರು ಅವರ ಎದುರೇ ನನಗೆ ಪೋನಾಯಿಸಿ ಕೇಳಿದ್ದರು ನಾನು ಈ ಗಂಗಾ ಮಠದ ಪ್ರಾಚೀನತೆ ಬಗ್ಗೆ ಪ್ರಸ್ತುತ ಸಂದರ್ಭದಲ್ಲಿ ಅಡೆತಡೆ ಮಾಡುವವರು ಕೆಳದಿ ರಾಜ ವೆಂಕಟಪ್ಪ ನಾಯಕರ ಅಂತರ್ಜಾತಿ ವಿವಾಹ ಚಂಪಕಳ ಜೊತೆ ಆದನಂತರ ಜಾತಿ ಕಾರಣದಿಂದ ಆ ಕಾಲದಿಂದ ಈವರೆಗೆ ಕಾಡುತ್ತಾರೆ ಅಂದಾಗ ಅವರು ಯಾವ ಕಾರಣಕ್ಕೂ ಕಾರ್ಯಕ್ರಮ ನಿಲ್ಲುವುದಿಲ್ಲ ಎಂದು ತಡೆಯಲು ಬಂದವರಿಗೆ ಜಾಡಿಸಿದ್ದರು.
   ಅವರಿಗೆ ನಾನು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಳ ದುರಂತ ಪ್ರೇಮ ಕಥೆ, ರಂಗೋಲಿಯಿಂದ ಆದ ಪ್ರೇಮಾಂಕುರ ಜಾತಿ ಕಾರಣದಿಂದ ಚಂಪಕ ಜೀವ ತ್ಯಾಗದಿಂದ ಚಂಪಕ ಸರಸ್ಸು ಸ್ಮಾರಕ ನಿಮಾ೯ಣವಾದ ಬಗ್ಗೆ ತಿಳಿಸಿದ್ದೆ ಆದ್ದರಿಂದ ಅವತ್ತು ಆ ಕಾರ್ಯಕ್ರಮದಲ್ಲಿ ಅವರು ವಿಶೇಷವಾಗಿ ಜಾತಿ ಆಚರಣೆಯ ಬಗ್ಗೆ ಹೆಚ್ಚು ಮಾತಾಡಿದರು.
  ಜಾತಿ ಹೇಗೆ ಬಂತು? ಅಸ್ಪಷ್ಯ ಆಚರಣೆ ಯಾಕೆ? ಮಡಿ ಮೈಲಿಗೆ ಹೆಸರಲ್ಲಿ ಸಾರ್ವಜನಿಕವಾಗಿ ಅವಮಾನ ಮಾಡುವುದು ಸರಿಯೆ?ಎಂಬ ವಿಚಾರಕ್ಕೆ ಒತ್ತುಕೊಟ್ಟು  ಮಾತಾಡಿದರು,ಮೇಲ್ಜಾತಿಯಲ್ಲಿ ಹುಟ್ಟುವವರು ಜಾತಿ ಶ್ರೇಷ್ಟತೆಯ ಗೀಳು, ಕೆಳಜಾತಿಗಳಲ್ಲಿ ಹುಟ್ಟುವವರ ಅಸಹಾಯಕತೆಗ ಅವರದ್ದೇ ಶೈಲಿಯಲ್ಲಿ ಬಾಗವಹಿಸಿದವರ ಹೃದಯಕ್ಕೆ ತಟ್ಟುವಂತೆ ಮಾಡಿದ ಭಾಷಣದ ಕೊನೆಯಲ್ಲಿ ಯಾರೂ ಅರ್ಜಿ ಹಾಕಿ ಇಂತಹದ್ದೇ ಜಾತಿಯಲ್ಲಿ ಹುಟ್ಟುವುದಿಲ್ಲ ಆದರೆ ಹುಟ್ಟಿದ ನಂತರ ಈ ಜಾತಿಶ್ರೇಷ್ಟತೆ ಗೀಳಿಗೆ ಒಳಗಾಗಿ ಅಸ್ಪೃಶ್ಯತೆ ಆಚರಿಸುವುದು, ಮಡಿ ಮೈಲಿಗೆ ಹೆಸರಲ್ಲಿ ಪಂಕ್ತಿಬೇದ ಇತ್ಯಾದಿ ಅವಮಾನಕರವಾಗಿ ನಡೆಸುವುದು ಸಲ್ಲದೆಂದು ಪ್ರತಿಪಾದಿಸಿದ್ದರು.
   ಈ ಸಭಾಭವನ ನಿರ್ಮಾಣಕ್ಕೆ ಬಂಗಾರಪ್ಪರನ್ನು ಒಪ್ಪಿಸಿದ್ದ ಬಂಗಾರಪ್ಪರ ಸಂಬಂದಿ ಸಾಗರದ ಈಶ್ವರಪ್ಪ ಇಂಜಿನಿಯರ್ ಈ ಕಾರ್ಯಕ್ರಮ ನಡೆಸಲು ಪ್ರಮುಖ ಕಾರಣಕರ್ತರಾಗಿದ್ದರು ಆದರೆ ಸಭಾ ಭವನ ನಿಮಾ೯ಣವಾಗಲೇ ಇಲ್ಲ.
   ರಾಜ ವೆಂಕಟಪ್ಪ ನಾಯಕರ ಅಂತರ್ಜಾತಿ ವಿವಾಹ ಸಹಿಸದ ಆ ಕಾಲದ ಜಾತಿವಾದಿಗಳ ಪಳಯುಳಿಕೆಗಳು ಗಂಗಾಮಠದ ಅಭಿವೃದ್ದಿಗೆ ತಡೆಯಾದದ್ದು ವಿಪರ್ಯಾಸವೇ ಆಗಿದೆ.
  ಅವತ್ತಿನ ತೆರದ ಜೀಪಿನ ಮೆರವಣಿಗೆ ಮತ್ತು ಸಭಾ ಕಾಯ೯ಕ್ರಮದ ಪೋಟೋಗಳು ಅವತ್ತಿನ ಬಂಗಾರಪ್ಪರ ಒಡನಾಟ ಮತ್ತು ಅವರ ಸದಾ ನೆನಪಿನಲ್ಲಿ ಉಳಿಯುವ ಭಾಷಣಕ್ಕೆ ಸಾಕ್ಷಿ ಆಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ