Skip to main content

Blog number 1078. ಆನಂದಪುರಂ ಇತಿಹಾಸ ಸಂಖ್ಯೆ - 85. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆನಂದಪುರಂನ ಬೆಸ್ತರ ಗಂಗಾ ಮಠವಿತ್ತು ಈ ಮಠದಲ್ಲಿ ಸಭಾ ಭವನ ನಿಮಿ೯ಸಲು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಶಂಕುಸ್ಥಾಪನೆ ಮಾಡಿದರೂ ನಿಮಾ೯ಣವಾಗಲಿಲ್ಲ ಬೆಸ್ತರ ಸಮೂದಾಯದ ಇಚ್ಚಾಶಕ್ತಿ ಕೊರತೆ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾಳ ದುರ೦ತ ಪ್ರೇಮ ಕಥೆಯ ಜಾತಿ ಕಾರಣದ ಮುಂದಿನ ಭಾಗವಾಗಿದೆ

#ಆನಂದಪುರಂ_ಇತಿಹಾಸ_ಸಂಖ್ಯೆ_85.

#ಆನಂದಪುರಂಗೂ_ಬಂಗಾರಪ್ಪರಿಗೂ_ಇದ್ದ_ನಂಟು

#ಮದ್ಯಕಣ್ಣೂರಿಂದ_ಸೈಕಲ್_ಮೇಲೆ_ಯಡೇಹಳ್ಳಿ_ಪ್ರವಾಸಿಮಂದಿರದಲ್ಲಿ_ನಡೆಯುತ್ತಿದ್ದ
#ಶರಾವತಿ_ಮುಳುಗಡೆ_ವಿಶೇಷ_ಕೋರ್ಟಗೆ_ಬರುತ್ತಿದ್ದರು

#ಬೆಸ್ತರ_ಸಮುದಾಯದ_ಅಭಿವೃದ್ಧಿಗಾಗಿ_ಶ್ರಮಿಸುತ್ತಿದ್ದ_ಕೋರ್ಟ್_ಹಾಲಪ್ಪನವರು.

#ಐತಿಹಾಸಿಕ_ಗಂಗಾಮಠದ_ಅಭಿವೃದ್ದಿಗೆ_ಅಡೆ_ತಡೆ

#ಬಂಗಾರಪ್ಪರ_ಬಾಷಣ_ಅಜಿ೯_ಹಾಕಿ_ಯಾರೂ_ಇಂತಹ_ಜಾತಿಯಲ್ಲಿ_ಹುಟ್ಟಲು_ಸಾಧ್ಯವಿಲ್ಲ.

   ಸಾರೇಕೊಪ್ಪದ ಬಂಗಾರಪ್ಪನವರೆಂದರೆ ಕಲರ್ ಪುಲ್ ರಾಜಕಾರಣಿ ಎಂದೇ ಅಘೋಷಿತ ಬಿರುದು ಅದಕ್ಕೆ ಕಾರಣ ಅವರ ಆಕರ್ಷಕ ದಿರಿಸು,ಕೂಲಿಂಗ್ ಗ್ಲಾಸ್, ಲಗ್ಜುರಿ ಕಾರ್, ಅವರ ಭಾಷಣ, ರಾಜಕಾರಣದ ತಂತ್ರಗಾರಿಕೆಗಳು.
  ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳದ ಉದ್ಘಾಟನೆಗೆ ಅವರನ್ನು ಆಹ್ವಾನಿಸಿದ್ದೆ ಕಾಯ೯ಕ್ರಮ ಉದ್ಘಾಟಿಸಿದ ನಂತರ ರಾತ್ರಿ ಊಟ ನಮ್ಮ ಮನೆ ಸಮೀಪದ ಪ್ರವಾಸಿ ಮಂದಿರದಲ್ಲಿ (ಒಂದು ಕಾಲದ ಬ್ರಿಟೀಷ್ ಬಂಗ್ಲೆ ).
   ಜಿಲ್ಲಾ ಮಟ್ಟದ ಯುವಜನ ಮೇಳದ ಸ್ಪರ್ದಾಳುಗಳ ಜೊತೆ ಸ್ಥಳಿಯರೂ ಸೇರಿ ಸುಮಾರು 10 ಸಾವಿರ ಜನ ಸೇರಿದ ಯಶಸ್ವಿ ಸಭೆ ಬಂಗಾರಪ್ಪರಿಗೆ ಹುರುಪು ನೀಡಿತ್ತು.
  ಪ್ರವಾಸಿ ಮಂದಿರದಲ್ಲಿ ಊಟ ಮಾಡುವಾಗ ಅವರಿಗೆ ಈ ಬ್ರಿಟೀಶ್ ಬಂಗಲೆಯಲ್ಲಿ ಅವರ ವಕೀಲಿ ವೃತ್ತಿಯ ಪ್ರಾರಂಭದಲ್ಲಿ ಕೋರ್ಟ್ ಕಲಾಪದಲ್ಲಿ ಭಾಗವಹಿಸಿದ ನೆನಪಾಯಿತು ....
    ಶರಾವತಿ ಮುಳುಗಡೆಯ ವಿಶೇಷ ನ್ಯಾಯಾಲಯ ನಮ್ಮ ಊರಿನ ಈಗಿನ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿರುವಾಗ ಯುವ ವಕೀಲರಾದ ಬಂಗಾರಪ್ಪನವರು ಅವರ ಕಕ್ಷಿದಾರರ ಪರವಾಗಿ ಇಲ್ಲಿ ಭಾಗವಹಿಸುತ್ತಿದ್ದರೆಂದು,ಆಗ ಅವರ ವಾಸ್ತವ್ಯ ಮಧ್ಯಕಣ್ಣೂರಿನ ಅಡುಗೆ ಮನೆಯವರಲ್ಲಿ, ಶಿವಮೊಗ್ಗ ಜಿಲ್ಲೆಯ ದೀವರ ಜನಾಂಗದ ಮೊದಲ ವೈದ್ಯರು ಈ ಕುಟುಂಬದ ಡಾಕ್ಟರ್ ಬೋರಪ್ಪನವರು.
  ಆ ಕುಟುಂಬದ ಹೊಸ ರ್ಯಾಲಿ ಸೈಕಲ್ ನಲ್ಲಿ ಬಂಗಾರಪ್ಪನವರು ವಕೀಲರ ಕೋಟ್ ಧರಿಸಿ ಮದ್ಯಕಣ್ಣೂರುನಿಂದ ಈ ಕೋರ್ಟ್ ನಡೆಯುವ ಪ್ರವಾಸಿ ಮಂದಿರಕ್ಕೆ ವಾರಗಟ್ಟಲೇ ಬರುತ್ತಿದ್ದರಂತೆ.
   ಹೀಗೆ ಬಂಗಾರಪ್ಪನವರಿಗೆ ಆನಂದಪುರಂನ ನಂಟು ಇತ್ತು, ನಂತರ ಬಂಗಾರಪ್ಪನವರು ಪಾರ್ಲಿಮೆಂಟ್ ಚುನಾವಣೆಗೆ ಅವರದೇ ಪಕ್ಷದಿಂದ ಸ್ಪರ್ಧಿಸಿದಾಗ ನಾವೆಲ್ಲ ಪಕ್ಷಾತೀತವಾಗಿ ಅವರನ್ನು ಬೆಂಬಲಿಸಿ ಆನಂದಪುರಂನ ಬಸ್ ಸ್ಟಾಂಡ್ ನಲ್ಲಿ ದೊಡ್ಡ ಸಾರ್ವಜನಿಕ ಸಭೆ ನಡೆಸಿದ್ದೆವು ಚುನಾವಣೆಯಲ್ಲಿ ವಿಜಯರಾದ ನಂತರ ಆನಂದಪುರಂ ಮತ್ತು ಮುರುಘಾ ಮಠದಲ್ಲಿ ಸಭೆ ನಡೆಸಿದ್ದೆವು.
   ಆನಂದಪುರಂನ ಗಂಗಾ ಮಠಕ್ಕೆ ಸಮುದಾಯ ಭವನ ಪಾರ್ಲಿಮೆಂಟ್ ಸದಸ್ಯರ ನಿಧಿಯಲ್ಲಿ ಮಂಜೂರು ಮಾಡಿ ಅದರ ಶಂಕುಸ್ಥಾಪನೆಗೆ ಬಂದಾಗ ಗುತ್ಯಮ್ಮ ದೇವಸ್ಥಾನದಿಂದ ಗಂಗಾಮಠದ ತನಕ ತೆರೆದ ಜೀಪಲ್ಲಿ ಮೆರವಣಿಗೆಯನ್ನು ಗಂಗಾ ಮತ ಸಮೂದಾಯದ ಮುಖಂಡರು, ವಿದ್ಯಾವಂತ ಮತ್ತು ಸರ್ಕಾರಿ ಅಧಿಕಾರಿಗಳಾಗಿದ್ದ ಕೋರ್ಟ್ ಹಾಲಪ್ಪನವರು ವ್ಯವಸ್ಥೆ ಮಾಡಿದ್ದರು.
    ಕೋಟ್೯ ಹಾಲಪ್ಪನವರು ಒಬ್ಬ ಪ್ರಾಮಾಣಿಕ ಸಂಪನ್ನ ವ್ಯಕ್ತಿಯಾಗಿ ಅವರ ಸಮುದಾಯದ ಅಭಿವೃದ್ದಿಗಾಗಿ ತಮ್ಮ ಜೀವನ ಪಯ೯೦ತ ಶ್ರಮಿಸಿದವರು, ಗುತ್ತಮ್ಮ ದೇವಸ್ಥಾನದ ಅಭಿವೃದ್ಧಿಗೆ ಮತ್ತು ಪುರಾತನ ಗಂಗಾಮಠದ ಜಾಗ ಉಳಿಸುಕೊಳ್ಳಲು ತುಂಬಾ ಕಷ್ಟ ಪಟ್ಟಿದ್ದರು ಹಾಗಾಗಿ ಬಂಗಾರಪ್ಪರ ಜೊತೆ ಅವರನ್ನು ತೆರೆದ ಜೀಪಲ್ಲಿ ಮೆರವಣಿಗೆ ಮಾಡುವ ಉದ್ದೇಶವಾಗಿತ್ತು, ಬಂಗಾರಪ್ಪನವರು ನನ್ನನ್ನು ಒತ್ತಾಯದಿಂದ ಅವರ ಜೊತೆ ಜೀಪಲ್ಲಿ ಮೆರವಣಿಗೆಗೆ ಕರೆದುಕೊಂಡರು.
   ಈ ಕಾಯ೯ಕ್ರಮಕ್ಕೆ ಕೆಲ ದಿನ ಮೊದಲು ನಿಗದಿ ಆದ ಕಾಯ೯ಕ್ರಮ ನಡೆಯದಂತೆ ತಡೆಯಲು ಕೆಲವರು ನಮ್ಮ ಊರಿನವರು ಪ್ರಯತ್ನಿಸಿದ್ದರು.
   ಬಂಗಾರಪ್ಪನವರು ಈ ಕಾರ್ಯಕ್ರಮಕ್ಕೆ ಬರದಂತೆ ತಡೆಯಲು ಹೋಗಿದ್ದರು ಆಗ ಬಂಗಾರಪ್ಪನವರು ಅವರ ಎದುರೇ ನನಗೆ ಪೋನಾಯಿಸಿ ಕೇಳಿದ್ದರು ನಾನು ಈ ಗಂಗಾ ಮಠದ ಪ್ರಾಚೀನತೆ ಬಗ್ಗೆ ಪ್ರಸ್ತುತ ಸಂದರ್ಭದಲ್ಲಿ ಅಡೆತಡೆ ಮಾಡುವವರು ಕೆಳದಿ ರಾಜ ವೆಂಕಟಪ್ಪ ನಾಯಕರ ಅಂತರ್ಜಾತಿ ವಿವಾಹ ಚಂಪಕಳ ಜೊತೆ ಆದನಂತರ ಜಾತಿ ಕಾರಣದಿಂದ ಆ ಕಾಲದಿಂದ ಈವರೆಗೆ ಕಾಡುತ್ತಾರೆ ಅಂದಾಗ ಅವರು ಯಾವ ಕಾರಣಕ್ಕೂ ಕಾರ್ಯಕ್ರಮ ನಿಲ್ಲುವುದಿಲ್ಲ ಎಂದು ತಡೆಯಲು ಬಂದವರಿಗೆ ಜಾಡಿಸಿದ್ದರು.
   ಅವರಿಗೆ ನಾನು ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಳ ದುರಂತ ಪ್ರೇಮ ಕಥೆ, ರಂಗೋಲಿಯಿಂದ ಆದ ಪ್ರೇಮಾಂಕುರ ಜಾತಿ ಕಾರಣದಿಂದ ಚಂಪಕ ಜೀವ ತ್ಯಾಗದಿಂದ ಚಂಪಕ ಸರಸ್ಸು ಸ್ಮಾರಕ ನಿಮಾ೯ಣವಾದ ಬಗ್ಗೆ ತಿಳಿಸಿದ್ದೆ ಆದ್ದರಿಂದ ಅವತ್ತು ಆ ಕಾರ್ಯಕ್ರಮದಲ್ಲಿ ಅವರು ವಿಶೇಷವಾಗಿ ಜಾತಿ ಆಚರಣೆಯ ಬಗ್ಗೆ ಹೆಚ್ಚು ಮಾತಾಡಿದರು.
  ಜಾತಿ ಹೇಗೆ ಬಂತು? ಅಸ್ಪಷ್ಯ ಆಚರಣೆ ಯಾಕೆ? ಮಡಿ ಮೈಲಿಗೆ ಹೆಸರಲ್ಲಿ ಸಾರ್ವಜನಿಕವಾಗಿ ಅವಮಾನ ಮಾಡುವುದು ಸರಿಯೆ?ಎಂಬ ವಿಚಾರಕ್ಕೆ ಒತ್ತುಕೊಟ್ಟು  ಮಾತಾಡಿದರು,ಮೇಲ್ಜಾತಿಯಲ್ಲಿ ಹುಟ್ಟುವವರು ಜಾತಿ ಶ್ರೇಷ್ಟತೆಯ ಗೀಳು, ಕೆಳಜಾತಿಗಳಲ್ಲಿ ಹುಟ್ಟುವವರ ಅಸಹಾಯಕತೆಗ ಅವರದ್ದೇ ಶೈಲಿಯಲ್ಲಿ ಬಾಗವಹಿಸಿದವರ ಹೃದಯಕ್ಕೆ ತಟ್ಟುವಂತೆ ಮಾಡಿದ ಭಾಷಣದ ಕೊನೆಯಲ್ಲಿ ಯಾರೂ ಅರ್ಜಿ ಹಾಕಿ ಇಂತಹದ್ದೇ ಜಾತಿಯಲ್ಲಿ ಹುಟ್ಟುವುದಿಲ್ಲ ಆದರೆ ಹುಟ್ಟಿದ ನಂತರ ಈ ಜಾತಿಶ್ರೇಷ್ಟತೆ ಗೀಳಿಗೆ ಒಳಗಾಗಿ ಅಸ್ಪೃಶ್ಯತೆ ಆಚರಿಸುವುದು, ಮಡಿ ಮೈಲಿಗೆ ಹೆಸರಲ್ಲಿ ಪಂಕ್ತಿಬೇದ ಇತ್ಯಾದಿ ಅವಮಾನಕರವಾಗಿ ನಡೆಸುವುದು ಸಲ್ಲದೆಂದು ಪ್ರತಿಪಾದಿಸಿದ್ದರು.
   ಈ ಸಭಾಭವನ ನಿರ್ಮಾಣಕ್ಕೆ ಬಂಗಾರಪ್ಪರನ್ನು ಒಪ್ಪಿಸಿದ್ದ ಬಂಗಾರಪ್ಪರ ಸಂಬಂದಿ ಸಾಗರದ ಈಶ್ವರಪ್ಪ ಇಂಜಿನಿಯರ್ ಈ ಕಾರ್ಯಕ್ರಮ ನಡೆಸಲು ಪ್ರಮುಖ ಕಾರಣಕರ್ತರಾಗಿದ್ದರು ಆದರೆ ಸಭಾ ಭವನ ನಿಮಾ೯ಣವಾಗಲೇ ಇಲ್ಲ.
   ರಾಜ ವೆಂಕಟಪ್ಪ ನಾಯಕರ ಅಂತರ್ಜಾತಿ ವಿವಾಹ ಸಹಿಸದ ಆ ಕಾಲದ ಜಾತಿವಾದಿಗಳ ಪಳಯುಳಿಕೆಗಳು ಗಂಗಾಮಠದ ಅಭಿವೃದ್ದಿಗೆ ತಡೆಯಾದದ್ದು ವಿಪರ್ಯಾಸವೇ ಆಗಿದೆ.
  ಅವತ್ತಿನ ತೆರದ ಜೀಪಿನ ಮೆರವಣಿಗೆ ಮತ್ತು ಸಭಾ ಕಾಯ೯ಕ್ರಮದ ಪೋಟೋಗಳು ಅವತ್ತಿನ ಬಂಗಾರಪ್ಪರ ಒಡನಾಟ ಮತ್ತು ಅವರ ಸದಾ ನೆನಪಿನಲ್ಲಿ ಉಳಿಯುವ ಭಾಷಣಕ್ಕೆ ಸಾಕ್ಷಿ ಆಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...