Skip to main content

Blog number 1097. ಆನಂದಪುರಂ ಇತಿಹಾಸ ಸಂಖ್ಯೆ 87. ಬಂಗಿ ನೈವೆದ್ಯದ ಬಂಗಿ ಬೂತಪ್ಪ ದೇವಸ್ಥಾನ ಇರುವಕ್ಕಿ ಕೃಷಿ ವಿಶ್ವವಿದ್ಯಾಲಯದ ಸಮೀಪವಿದೆ, ಇಲ್ಲೇ ಕಲ್ಯಾಣಿ ಬಸವನ ಹೊಂಡ ಕೂಡಾ ಇದೆ.ಶಿವನಿಗೂ ಗಾಂಜಾಕ್ಕೂ ಇರುವ ಪೌರಾಣಿಕ ಹಿನ್ನೆಲೆ, ನಾಥ ಸಂಪ್ರದಾಯಿಗಳ ಅಗ್ಗಿಷ್ಟಿಕೆ ಸ್ಥಳ ಇದಾಗಿತ್ತಾ?

ಆನಂದಪುರಂ_ಇತಿಹಾಸ_ಸಂಖ್ಯೆ_87.

#ಆನಂದಪುರಂನಿಂದ_ಹೊಸನಗರ_ಮಾರ್ಗದಲ್ಲಿರುವ_ವಿಶೇಷ_ದೇವಸ್ಥಾನ

#ನೂತನ_ಕೃಷಿ_ವಿಶ್ವವಿದ್ಯಾಲಯ_ಇಲ್ಲಿಂದಲೇ_ಪ್ರಾರಂಭವಾಗುತ್ತದೆ

#ಬಂಗಿ_ಬೂತಪ್ಪ_ದೇವಸ್ಥಾನ

#ಬಂಗಿ_ಸಿಗರೇಟು_ಬೀಡಿಯೇ_ನೈವೇದ್ಯ.

#ಪಕ್ಕದಲ್ಲಿರುವ_ಕಲ್ಯಾಣಿ_ಶಿಥಿಲಾವಸ್ಥೆಯಲ್ಲಿದೆ

#ಸ್ಥಳಿಯರು_ಬಸವನಹೊಂಡ_ಎನ್ನುತ್ತಾರೆ.

#ನಾಥ_ಸಂಪ್ರದಾಯದ_ಮಹಂತರ_ಸದಾ_ಉರಿಯುತ್ತಿದ್ದ_ಜೂಲ_ಇಲ್ಲಿತ್ತು.

#ಹೊಸನಗರಕ್ಕೆ_ಹಿಂದಿನ_ಹೆಸರು_ಕಲ್ಲೂರಶೆಟ್ಟಿಕೊಪ್ಪ 

    18ನೆ ಶತಮಾನದವರೆಗೆ ಈ ರಸ್ತೆಗೆ ಆನಂದಪುರಂ ಕಲ್ಲೂರ ಶೆಟ್ಟಿ ಕೊಪ್ಪ ರಸ್ತೆ ಎಂಬ ಹೆಸರಿತ್ತು ಕಾರಣ ಹೊಸನಗರದ ಮೂಲ ಹೆಸರು ಕಲ್ಲೂರ ಶೆಟ್ಟಿ ಕೊಪ್ಪ ಅಂತ ಇತ್ತು ನಂತರ ಹೊಸನಗರ ಎಂದು ನಾಮಕರಣವಾಗಿರಬೇಕು, ಇದು ಕೆಳದಿ ಅರಸರ ಕಾಲದಲ್ಲಿ ಆನಂದಪುರಂ ಕೋಟೆಯಿಂದ ಅವರ ರಾಜದಾನಿ ಬಿದನೂರಿಗೆ ಹೋಗುವ ರಾಜ ಮಾರ್ಗವೂ ಆಗಿತ್ತು.
  ಆನಂದಪುರಂ ನಿಂದ ಈಗಿನ ಹೊಸನಗರ ರಸ್ತೆಯಲ್ಲಿ ಈಗ ನೂತನವಾಗಿ ನಿರ್ಮಿಸಿರುವ ಕೃಷಿ ವಿಶ್ವವಿದ್ಯಾಲಯದ ಪ್ರಾರಂಭದಲ್ಲೇ ರಸ್ತೆಯ ಎಡಬದಿಗೆ ದೊಡ್ಡ ಆಲದ ಮರ ಇತ್ತು ಅದರ ಕೆಳಗೆ ಸಣ್ಣದಾದ 3X3 ಅಡಿಯ ಕಲ್ಲಿನ ಚಪ್ಪಡಿಯ ಗುಡಿ ಇತ್ತು ಇಲ್ಲಿ ಅಸ೦ಖ್ಯ ವಿವಿದ ಗಾತ್ರದ ತ್ರಿಶೂಲಗಳು ಇತ್ತು. 
  ಸದಾ ಅಲ್ಲಿ ಬಂಗಿಯ ದೂಮದ ಘಮ ಇರುತ್ತಿತ್ತು, ನಂತರ ಅದು ಸಿಗರೇಟು ಹಚ್ಚಿ ಸಮರ್ಪಿಸುವಲ್ಲಿಗೆ ಬದಲಾಗಿದೆ.
   ಈ ಮಾರ್ಗದಲ್ಲಿ  ಪ್ರಯಾಣಿಸುತ್ತಿದ್ದ ಆ ಕಾಲದ ಪಾದಚಾರಿಗಳು ಮತ್ತು ಎತ್ತಿನಗಾಡಿಗಳು ರಸ್ತೆಯ ಇನ್ನೊಂದು ಬಾಗದಲ್ಲಿರುವ ಬಸವನ ಹೊಂಡ ಎಂಬ ಸ್ಥಳಿಯ ಜಂಬಿಟ್ಟಿಗೆಯ ಕಲ್ಲಿನಲ್ಲಿ ಚೌಕಾಕಾರವಾಗಿ ಕಟ್ಟಿರುವ ಕಲ್ಯಾಣಿಯಲ್ಲಿ ಅವರ ಮತ್ತು ಅವರ ಗಾಡಿಯ ಎತ್ತುಗಳ ಬಾಯಾರಿಕೆ ನೀಗಿಸಿ ಕೈ ಕಾಲು ತೊಳೆದುಕೊಂಡು ಬಂಗಿ ಬೂತಪ್ಪನಿಗೆ ಬಂಗಿಯ ಬತ್ತಿ ಮಾಡಿ ಅದನ್ನು ಹಚ್ಚುವ ನೈವೇಧ್ಯದ ಪದ್ಧತಿ ಆಗಿತ್ತು.
   ಗುಜರಾತಿನ ಸೂರತ್ ನಗರದ ಸಮೀಪ ಇಂತಹ ದೂಮ ದೇವ ದೇವಸ್ಥಾನವಿದೆ ಅಲ್ಲಿ ದೇವರ ಹುಂಡಿಗೆ ಸಿಗರೇಟು ಸಮರ್ಪಿಸುವ ಕ್ರಮವಿದೆ.
   ಬಸವನ ಹೊಂಡದ ಬಂಗಿ ಬೂತಪ್ಪನ ಸ್ಥಳದಲ್ಲಿ 10 ನೇ ಶತಮಾನದಲ್ಲಿ ಉತ್ತರ ಪ್ರದೇಶದ ಗೋರಕ ಪುರದ ಗೋರಕನಾಥ ಮಠಕ್ಕೆ ಸೇರಿದ್ದ ನಾಥ ಸಂಪ್ರದಾಯದ ಮಹಂತರುಗಳು ಇದ್ದರೆಂದು, ಈ ಭಾಗದಲ್ಲಿ ದೊಡ್ಡ ಜನ ವಸತಿಯಿರುವ ಕುರುಹಾಗಿ ಸಣ್ಣ ಸಣ್ಣ ತೆರೆದ ಬಾವಿ ಮತ್ತು ಮನೆಗಳ ಅಡಿಪಾಯವಿದೆ.
  ಜನವಸತಿ ಕೇಂದ್ರಕ್ಕಾಗಿ ಈ ಕಲ್ಯಾಣಿಯೂ ನಿರ್ಮಾಣವಾಗಿತ್ತು, ಅಲ್ಲಿ ಸದಾ ಉರಿಯುತ್ತಿದ್ದ ಜೂಲ (ಅಗ್ನಿಕುಂಡ ) ಇರುತ್ತಿತ್ತು ಆಗ ಈ ಮಾರ್ಗದಲ್ಲಿ ಸಂಚರಿಸುವ ಜನ ಸಂತರಿಗೆ ಬಂಗಿ ಸಮರ್ಪಿಸುತ್ತಿದ್ದರಂತೆ.
  ಕಾಲಾಂತರದಲ್ಲಿ 16ನೇ ಶತಮಾನದ ಅರ್ಧದಲ್ಲೇ ನಾಥ ಸಂಪ್ರದಾಯದ ಈ ಮಹಂತರುಗಳು ಬೇರೆ ಸ್ಥಳಕ್ಕೆ ಸ್ಥಳಾಂತರವಾಗಿರಬೇಕು ಆದರೆ ಇಲ್ಲಿಗೆ ಭಕ್ತಿಯಿಂದ ಬಂಗಿ ಸಮರ್ಪಣೆ ಮಾಡುವ ಕಾಯ೯ ಮುಂದುವರಿದು ಈಗಿನ ಕಾಲಕ್ಕೆ ಸಿಗರೇಟು ಸಮರ್ಪಣೆಗೆ ಬದಲಾಗಿದೆ.
   ಸಂತರ ಜೂಲವೇ (ಅಗ್ನಿಕುಂಡ) ಬಂಗಿ ಬೂತಪ್ಪನಾದ ಎಂಬ ಸ್ಥಳ ಚರಿತ್ರೆ ಇಲ್ಲಿ ಶರಾವತಿ ನದಿ ಮುಳುಗಡೆಯಿಂದ ಸ್ಥಳಾಂತರವಾದ ಅನೇಕ ಕುಟುಂಬಗಳಲ್ಲಿ ಒಂದಾದ ವರದಾಮೂಲದ ಕನ್ನ ನಾಯಕರು ಹೇಳುತ್ತಿದ್ದರು.
  ಈ ರೀತಿ ಬಂಗಿಗೆ ಪೂಜ್ಯ ಸ್ಥಾನ ಸಿಗಲು ಕಾರಣ ಪುರಾಣದಲ್ಲಿ ಶಿವ ಕಾಡಿನಲ್ಲಿ ಅಲೆದು ಬಳಲಿದಾಗ ಮರದ ನೆರಳಲ್ಲಿ ವಿಶ್ರಮಿಸಿ ಎದ್ದಾಗ ಹಸಿವಿನಿಂದ ಪಕ್ಕದಲ್ಲಿ ಬೆಳೆದಿದ್ದ ಕಾಡಿನ ಗಾಂಜಾ ಗಿಡದ ಎಲೆ ತಿನ್ನುತ್ತಾನೆ ಅದು ಶಿವನಿಗೆ ತಾಜಾತನ ಉತ್ಸಾಹ ನೀಡಿತ್ತು ಎಂದು.
   ಇನ್ನೊಂದು ಕಥೆ ಸಮುದ್ರ ಮಥನದಲ್ಲಿ ವಿಷ ಸೇವಿಸಿ ವಿಷಕಂಠನಾದಾಗ ಶಿವನನ್ನು ಶಾಂತಗೊಳಿಸಲು ದೇವತೆಗಳು ಅವನಿಗೆ ಬಂಗಿ ನೀಡುತ್ತಾರೆ ಇದರಿಂದ ಶಿವ ಶಾಂತನಾಗುತ್ತಾನೆ ಅಂದಿನಿಂದ ಬಂಗಿ ಶಿವನಿಗೆ ಇಷ್ಟವಾದ ಪಾನಿಯ ಆಯಿತು ಈಗಲೂ ನೇಪಾಳದ ಪಶುಪತಿ ದೇವಾಲಯದಲ್ಲಿ ಮಹಾಲಯದಲ್ಲಿ ಗಾಂಜಾ ಸೇವಿಸುವ ಪದ್ದತಿ ಇದೆ.
  ಹೋಳಿ ಹಬ್ಬದಲ್ಲಿ ಬಂಗಿ ಹೊಗೆ ರೂಪದಲ್ಲಿ ಪಾನಿಯ ರೂಪದಲ್ಲೂ ಭಕ್ತರು ಸೇವಿಸುತ್ತಾರೆ ಈ ರೀತಿ ಶಿವನಿಗೂ ಬಂಗಿಗೂ ಇರುವ ಸಂಬಂದವೇ ಸಾದು ಸಂತರುಗಳಿಗೆ ಬಂಗಿ ಸೇವನೆ ಮತ್ತು ಅದು ಪವಿತ್ರ ಎಂಬ ಭಾವನೆಗೆ ಕಾರಣವಾಗಿದೆ.
   ಬಂಗಿಯಿಂದ ತೀವ್ರ, ಮದ್ಯಮ ಮತ್ತು ಸಾಮಾನು ಅಮಲಿನ ಮೂರು ವಿದವಿದೆ.
   ಈ ಬಂಗಿ ಎಂಬ ಸಸ್ಯದಿಂದ ಬಲತಿರುವ ಹೆಣ್ಣು ಗಿಡಗಳ ಗೊಂದಿನಿಂದ ತೀವ್ರವಾದ ಅಮಲು ನೀಡುವ ಚರಸ್ ಅಥವ ಹಶೀಶ್ ತಯಾರಿಸುತ್ತಾರೆ ಇದು ಮೊದಲ ವಿದ.
  ಬೆಳೆಸಿದ ಈ ಗಿಡಗಳ ಹೂವು ಎಲೆಯ ಕುಡಿಗಳನ್ನು ಗಾಂಜಾ ಎನ್ನುತ್ತಾರೆ ಇದು ಚರಸ್ ಗಿಂತ ಕಡಿಮೆ ಅಮಲು ಇದು ಮಧ್ಯಮ ವಿದ.
  ಕಾಡಿನಲ್ಲಿ ಬೆಳೆಯುವ ಬಂಗಿ ಗಿಡಗಳ ಒಣ ಎಲೆ, ಹೂವಿರುವ ಕೊಂಬೆಗಳಿಂದ ಮೂರನೆ ವಿದದ ಸೌಮ್ಯ ಅಮಲಿನ ಬಾಂಗ್ ತಯಾರಾಗುತ್ತದೆ.
  ಅಮೆರಿಕಾದಲ್ಲಿ ಮ್ಯಾರವಾನ ಎಂದು ಕರೆಯುವ ಇದನ್ನು ವಿಶ್ವದಾದ್ಯಂತ ವೀಡ್, ಪಾಟ್,ಸ್ಟಪ್, ಗ್ರಾಸ್, ಇಂಡಿಯನ್ ಹೇ, ಟೀ, ಮೇರಿ ಜಾನ್ ಎಂದು ಮತ್ತು ಚುಟ್ಟಾದಲ್ಲಿ ಸೇದುವುದಕ್ಕೆ ರಿಪೆಕ್ಸ್ ಅಥವ ಜಾಯಿಂಟ್ ಎಂದು ಕರೆಯುತ್ತಾರೆ.
  ಕ್ರಿ.ಪೂ.2800 ರಲ್ಲಿ ಈ ಗಿಡದ ನಾರಿನ ಬಳಕೆಯಲ್ಲಿ ಚೀನಿಯರು ಮುಂದಿದ್ದರು ನಾರಿಗಾಗಿಯೇ ಕೃಷಿ ಮಾಡುತ್ತಿದ್ದರು ಎಂಬ ದಾಖಲೆ ಇದೆ.
   ಭಾರತೀಯ ಹಿಂದೂ ದಮಿ೯ಯರಲ್ಲಿ ಬಾಂಗ್ ಬಳಸುವುದು ನಿಶಿದ್ದವಲ್ಲ ಮತ್ತು ಬಾಂಗ್ ಮಿಶ್ರಿತ ಪಾನಿಯಕ್ಕೆ ರಾಮ ರಸ ಎಂಬ ಹೆಸರೇ ಇದೆ.
  ಬೇರಾವ ಮಾದಕ ವಸ್ತು ಚಟವಾದರೆ ಅದನ್ನು ಬಿಡಲು ಸಾಧ್ಯವಾಗುವುದಿಲ್ಲ ಆದರೆ ಬಂಗಿ ಸೇವಿಸುವ ಅಭ್ಯಾಸ ಮಾಡಿದವರು ಸುಲಭವಾಗಿ ಈ ಚಟ ಬಿಡಬಹುದು.
  ಇತ್ತೀಚೆಗೆ ಆನಂದಪುರಂ ಭಾಗದಲ್ಲಿ ಬಂಗಿ ಬೆಳೆಯುವ ಮಾರಾಟ ಮಾಡುವ ಮತ್ತು ಬಂಗಿ ಸೇವಿಸುವವರ ಸಂಖ್ಯೆ ಹೆಚ್ಚಾಗಿದ್ದು ಕಾನೂನು ಸುವ್ಯವಸ್ಥೆಗೆ ಸಮಸ್ಯೆ ತಂದಿದೆ.
  ಈ ಸ್ಥಳದಲ್ಲೇ ಬಂಗಿ ಬೂತಪ್ಪ ದೇವಸ್ಥಾನ ಕೂಡ ಪ್ರಸಿದ್ಧಿ ಪಡೆದಿರುವುದು ವಿಶೇಷ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ