Skip to main content

Blog number 1055. ಈಳಿ ಎಸ್.ವಿ.ನಾರಾಯಣಪ್ಪ ಸಾಗರದ ಏಕೈಕ ಹವ್ಯಕ ಬ್ರಾಹ್ಮಣ ಕಾಂಗ್ರೇಸ್ ನಿಷ್ಠಾವಂತ ನಾಯಕರ 94 ವಷ೯ಗಳ ಸಾರ್ಥಕ ಬದುಕಿನ ನೆನಪುಗಳ ಸಂಪುಟ ಶ್ವೇತಚಿತ್ತ.

#ಕಾಂಗ್ರೇಸ್_ಪಕ್ಷ_ನಿಷ್ಟ_ಈಳಿನಾರಾಯಣಪ್ಪನವರು.

#ತೊಂಬತ್ನಾಲ್ಕು_ವಷ೯ದ_ಸಾರ್ಥಕ_ಜೀವನ

#ರೀತಿ_ನೀತಿ_ಮಾತು_ಕೃತಿ_ವೇಷದಲ್ಲಿ_ಶಿಸ್ತಿನ_ಸಿಪಾಯಿ

#ಈಳಿ_ನಾರಾಯಣಪ್ಪನವರು_1957ರಿಂದ_ಕಾಂಗ್ರೇಸ್_ನಿಷ್ಟಾವಂತರು.

#ಶ್ವೇತಚಿತ್ತ_ಹೆಸರಿನ_ಅವರ_ಸಾರ್ಥಕ_ಬದುಕಿನ_ನೆನಪುಗಳ_ಸಂಪುಟ.

#ಶೈಲೇಂದ್ರಬ೦ದಗದ್ದೆ_ಬೇದೂರುವೆಂಕಟಗಿರಿ_ಸಂಪಾದಕತ್ವದಲ್ಲಿ.

    ಕೃಷಿ ತಜ್ಞರಾದ ಡಾ.ವಿಷ್ನೇಷ್ ಮಂಚಾಲೆಯವರು ಪೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಈಳಿ S. V. ನಾರಾಯಣಪ್ಪರ ಬದುಕಿನ ನೆನಪುಗಳ ಸಂಪುಟ ಬಿಡುಗಡೆಯ ಕಾರ್ಯಕ್ರಮದ ವಿವರ ನೋಡಿ ಈ ಪುಸ್ತಕ ಖರೀದಿಸಲು ಪ್ರಯತ್ನಿಸಿದ್ದೆ ಆದರೆ ಇದು ಮಾರಾಟಕ್ಕೆ ಇಲ್ಲದ ಅವರ ಕುಟುಂಬ ಮತ್ತು ಆಪ್ತರಿಗೆ ಮಾತ್ರ ಪ್ರಕಟವಾಗಿದೆ ಮತ್ತು ಅವರ ಕುಟುಂಬದವರೇ ಪ್ರಕಟಿಸಿದ್ದಾರೆ ಅನ್ನುವ ಸುದ್ದಿ ಮತ್ತು ಇದನ್ನು ಸಂಪಾದಿಸಿದ ಸಂಪಾದಕರು ಶೈಲೇಂದ್ರ ಬಂದಗದ್ದೆ ಮತ್ತು ಮಲೆನಾಡು ಮಲ್ಲಿಗೆ ಪತ್ರಿಕೆ ಸಂಪಾದಕರಾದ ಕೆ.ಎನ್.ವೆಂಕಟಗಿರಿ ಬೇದೂರು ಅಂತ ಗೊತ್ತಾಯಿತು.
   ಬೇದೂರು ವೆಂಕಟಗಿರಿಯವರಿಗೆ ಸತತ ಪೋನ್ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ, ಈ ಪುಸ್ತಕ ಬಿಡುಗಡೆ ಮಾಡಿದ ಕೆಲವೇ ದಿನದಲ್ಲಿ 94 ವರ್ಷ ಸಾರ್ಥಕ ಬದುಕು ನಡೆಸಿದ ಈಳಿ ನಾರಾಯಣಪ್ಪನವರು ಇಹಲೋಕ ತ್ಯಜಿಸಿದ ಸುದ್ದಿಯೂ ಬಂದಿತು.
   ಶೈಲೇಂದ್ರ ಬಂದಗದ್ದೆಗೆ ಪೋನಾಯಿಸಿದರೆ ಅವರು ಅವರ ತೋಟದಲ್ಲಿದ್ದಾರೆಂದು ಅವರ ಶ್ರೀಮತಿ ತಿಳಿಸಿದರು ಅವತ್ತೆ ಸಂಜೆ ಶೈಲೇಂದ್ರ ವಾಪಾಸು ಪೋನು ಮಾಡಿದಾಗ ಅವರೂ ಈ ಪುಸ್ತಕ ಮಾರಾಟಕ್ಕೆ ಸಿಗುವುದಿಲ್ಲ ಎಂದಿದ್ದರು.
   ನಿನ್ನೆ ಅಂಚೆಯಲ್ಲಿ ಅವರೇ ಈಳಿ ನಾರಾಯಣಪ್ಪರ ನೆನಪುಗಳ ಸಂಪುಟ #ಶ್ವೇತಚಿತ್ತ ಕಳಿಸಿದ್ದಾರೆ ಓದಿದೆ ಅನೇಕ ಅವರ ಒಡನಾಟದ ಅವರ ಬಂದುಗಳು, ಗೆಳೆಯರು ಬರೆದ ಲೇಖನಗಳು ಓದಿದೆ.
    ಈ ಪುಸ್ತಕದಲ್ಲಿ ಕಾಂಗ್ರೇಸ್ ನಿಂದ ಸಾಗರ ವಿದಾನಸಭಾ ಕ್ಷೇತ್ರದಿಂದ ಶಾಸಕರಾಗಿ ಹಾಲಿ ಜೀವಂತ ಇರುವ ಕೆ.ಹೆಚ್.ಶ್ರೀನಿವಾಸ್ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ಮತ್ತು ಕಾಗೋಡು ತಿಮ್ಮಪ್ಪರ ಲೇಖನ ಇಲ್ಲದಿರುವುದು ಕೊರತೆ ಅನ್ನಿಸಿತು.
   1989 ರಿಂದ 2000 ಇಸವಿ ತನಕ 11 ವರ್ಷ ನನ್ನ ಕಾಂಗ್ರೇಸ್ ಪಕ್ಷದ ಒಡನಾಟದ ಸಂದರ್ಭದಲ್ಲಿ ಈಳಿ ನಾರಾಯಣಪ್ಪರ ಒಡನಾಟ ನನ್ನದು.
   ನಾನು ಕಂಡಂತೆ ಮತ್ತು ನಾನು ಅರ್ಥ ಮಾಡಿಕೊಂಡ೦ತೆ ಈಳಿ ನಾರಾಯಣಪ್ಪನವರು ಮಿತ ಬಾಷಿಗಳು, ಯಾರೊಡನೆಯೂ ಸಂಬಂದ ಕಳೆದುಕೊಳ್ಳದೆ ಸ್ಥಿತಪ್ರಜ್ಞರಾಗಿರುತ್ತಿದ್ದವರು.
    ಈಳಿ ನಾರಾಯಣಪ್ಪನವರು ತಮ್ಮ 60 ರಿಂದ 70 ನೆ ವಯಸ್ಸಿನಲ್ಲೂ ಸುಂದರ ವದನದವರು, ಅವರು ಉಡುತ್ತಿದ್ದ ಕಚ್ಚೆ ಪಂಜೆ ಶೈಲಿಯೇ ವಿಬಿನ್ನ ಅದಕ್ಕೊಪ್ಪುವ ನೀಳ ಜುಬ್ಬ,ಕ್ಲೀನ್ ಶೇವ್ ನಲ್ಲಿ ಕಾಂಗ್ರೇಸ್ ಪಕ್ಷದ ಕಛೇರಿ ಗಾಂಧಿ ಮಂದಿರದಲ್ಲಿ ಈಳಿ ನಾರಾಯಣಪ್ಪನವರು ಆಕಷ೯ಕರಾಗಿರುತ್ತಿದ್ದರು.
   ಇಡೀ ವಿಧಾನ ಸಭಾ ಕ್ಷೇತ್ರದ ಕಾಯ೯ ಕರ್ತರು, ಜನಪ್ರತಿನಿಧಿಗಳು, ನಾಯಕರು ಇವರಿಗೆ ಗೌರವ ನೀಡುತ್ತಿದ್ದರು. ಆಹ್ಮದ್ ಆಲೀಖಾನ್ ಸಾಹೇಬರು, ಪುತ್ತುರಾಯರೂ, ಕುರಿ ಲಿಂಗಪ್ಪನವರು ಮತ್ತು ಕಾಗೋಡು ತಿಮ್ಮಪ್ಪನವರು ನಡೆಸುತ್ತಿದ್ದ ರಹಸ್ಯ ಸಭೆಯಲ್ಲಿ ಈಳಿ ನಾರಾಯಣಪ್ಪರು ಇರಲೇಬೇಕು ಆದರೆ ಆ ಯಾವುದೇ ತೀರ್ಮಾನ ಬಹಿರಂಗ ಮಾಡದೇ ಕೃತಿಗಿಳಿಸುವ ಮ್ಯಾನ್ ಆಫ್ ಆಕ್ಷನ್ ಈಳಿ ನಾರಾಯಣಪ್ಪನವರು.
  ಕಾಗೋಡು ತಿಮ್ಮಪ್ಪನವವರು ಈಳಿ ನಾರಾಯಣಪ್ಪರ ಸಮೀಕ್ಷೆ ಮತ್ತು ವರದಿಗಳನ್ನು ಪಕ್ಷದ ಸಂಘಟನೆಗಳಲ್ಲಿ ನಂಬುತ್ತಿದ್ದರು.
  ಇದಕ್ಕೆ ಉಧಾಹರಣೆ 1995ರಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕ್ ಪಂಚಾಯತ್ ಚುನಾವಣೆಯಲ್ಲಿ ನಾನು ಕಾಂಗ್ರೇಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಅಭ್ಯರ್ಥಿ ಆಗಲು ಬಯಸಿದ್ದೆ ಆದರೆ ಕಾಂಗ್ರೇಸ್ ಪಕ್ಷದ ಅನೇಕ ಮುಖಂಡರು ನನ್ನ ವಿರೋದಿಸಲು ಪ್ರಾರಂಬಿಸಿದ್ದರಿಂದ ಆಗ ಬಂಗಾರಪ್ಪರ ಪಕ್ಷದಿಂದ ಸ್ಪರ್ದಿಸಲು ಗುಟ್ಟಾಗಿ ತೀರ್ಮಾನಿಸಿದ್ದೆ ಜೊತೆಗೆ ಈ ವ್ಯಾಪ್ತಿಯ ನಾಲ್ಕು ತಾಲ್ಲೂಕ್ ಪಂಚಾಯಿತಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಎಲ್ಲಾ ತಯಾರಿ ಮಾಡಿಕೊಂಡಿದ್ದೆ ಬಂಗಾರಪ್ಪನವರೂ ಕೊನೆ ಕ್ಷಣದಲ್ಲಿ ಬಂದರೂ ಬಿಪಾರ೦ ನೀಡಲು ಅವರ ಪಕ್ಷದವರಿಗೆ ಆದೇಶಿಸಿದ್ದರು.
   ಆಗಲೇ ಕಾಗೋಡು ತಿಮ್ಮಪ್ಪನವರು ಈಳಿ ನಾರಾಯಣಪ್ಪರಿಗೆ ರಹಸ್ಯವಾಗಿ ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರದ ಸಮೀಕ್ಷೆ ಮಾಡಲು ನೇಮಿಸಿದ್ದರಂತೆ ಅವರ ವರದಿ ನನಗೆ ಮತ್ತು ನನ್ನ ಒಪ್ಪಿಗೆಯ ತಾಲ್ಲೂಕ್ ಪಂಚಾಯತ್ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿದರೆ ಎಲ್ಲರೂ ಗೆಲ್ಲುವ ಹವಾ ಇದೆ ಅಂದಿದ್ದರಿಂದ ಕಾಗೋಡು ಒಪ್ಪಿದರ೦ತೆ ಆದರೆ ಈಳಿ ನಾರಾಯಣಪ್ಪನವರು ಕೊನೆಯವರೆಗೂ ನನಗೆ ಇದನ್ನು ತಿಳಿಸಲಿಲ್ಲ.
   ಈಳಿ ನಾರಾಯಣಪ್ಪನವರು ಕಾಂಗ್ರೇಸ್ ಸಿದ್ದಾಂತಕ್ಕೆ ಬದ್ದರಾಗಿ ಕಾಂಗ್ರೇಸ್ ಪಕ್ಷಕ್ಕೆ ನಿಷ್ಟಾವಂತರಾಗಿದ್ದರು ಯಾವುದೇ ಕಾರಣಕ್ಕೂ ವ್ಯಕ್ತಿ ನಿಷ್ಟೆ, ಬಹು ಪರಾಕ್ ಸಂಸ್ಕೃತಿಗೆ ಬಲು ದೂರವಾಗಿದ್ದರು.
   ಇವರಿಗೆ ಪದೇ ಪದೇ ದ್ವನಿ ಬಿದ್ದು ಹೋಗುವ ಸಮಸ್ಯೆ ಉಂಟಾಗುತ್ತಿತ್ತು ಆದ್ದರಿಂದ ಅನೇಕ ದೊಡ್ಡ ಸಭೆಯಲ್ಲಿ ವೇದಿಕೆಯಲ್ಲಿ ಇದ್ದರೂ ಭಾಷಣದಿಂದ ದೂರವಿರುತ್ತಿದ್ದರು.
  1928ರಿಂದ 2022 ರವರೆಗಿನ 94 ವರ್ಷದ ಅವರ ಜೀವನ ರಾಜಕೀಯ -ಸಾಮಾಜಿಕ- ಮತ್ತು ಕೌಟುಂಬಿಕವಾಗಿ ಸಾರ್ಥಕ ಬದುಕಾಗಿದೆ ಅದರ ನೆನಪಿನ ಈ ಸಂಪುಟ ತಡವಾದರೂ ಪ್ರಕಟವಾಗಿದ್ದು ಸಂತೋಷ ತರಿಸಿದೆ.
  ಬಹುಶಃ ಕಾಂಗ್ರೇಸ್ ಪಕ್ಷದಲ್ಲೇ ರಾಜಕೀಯ ಪ್ರಾರಂಬಿಸಿ ತಮ್ಮ ಜೀವಿತಾವದಿ ಪೂರ್ಣ ಕಾಂಗ್ರೇಸ್ ಪಕ್ಷದಲ್ಲೇ ಉಳಿದ ಏಕೈಕ ಹವ್ಯಕ ಬ್ರಾಹ್ಮಣ ಮುಖಂಡರು ಈಳಿ ನಾರಾಯಣಪ್ಪನವರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ