Skip to main content

Blog number 1049.ಹಿಸ್ಸೆ ಪಂಚಾಯಿತಿ ಬರಖಾಸ್ತು ಮಾಡಿದ ಭಂಗಿ ಬೆಲ್ಲ..... ಜೀವಮಾನದಲ್ಲೇ ಮರೆಯದ ಘಟನೆ.

#ಸಸ್ಯಗಳಲ್ಲಿ_ಏನಿದೆ_ಏನಿಲ್ಲ.

#ಪ್ರಾಚೀನ_ಭಾರತದಲ್ಲಿ_ತಂಬಾಕು_ಇರಲಿಲ್ಲ

#ಭಂಗಿ_ಸೊಪ್ಪು_ಮಾತ್ರ_ಬಳಕೆಯಲ್ಲಿತ್ತು.

#ಚಿಲುಮೆ_ಸೇದುವ_ರಾಮರಸ_ಕುಡಿಯುವ_ಪದ್ಧತಿ_ಇತ್ತು.

#ಮಲೆನಾಡಿನಲ್ಲಿ_ಆಲೆಮನೆಯಲ್ಲಿ_ಭಂಗಿ_ಸೊಪ್ಪಿನ_ಬೆಲ್ಲ_ಮಾಡುವ_ಪದ್ದತಿಯೂ_ಇತ್ತು.

#ಹಿಸ್ಸಪಂಚಾಯಿತಿಯಲ್ಲಿ_ಭಂಗಿ_ಬೆಲ್ಲ_ತಿಂದ_ನನ್ನ_ಪಜೀತಿ_ಪ್ರಸಂಗ.

   ಮುಸ್ಲಿಂ ಸಹೋದರರ ಆಸ್ತಿ ಹಿಸ್ಸೆಯ ಪಂಚಾಯ್ತಿಗೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯನಾದ ನಾನು ಮುಖ್ಯ ಪ೦ಚಾಯಿತಿದಾರನಾಗಿ ಸಹೃದಯದ ಆ ಕುಟುಂಬದವರು ಆಹ್ವಾನಿಸಿದ್ದರು.
  ಇವರಿಗೂ ಇವರ ತಾಯಿಗೂ ನನ್ನ ಮೇಲೆ ಆ ಕಾಲದಲ್ಲಿ ನಂಬಿಕೆ ಇತ್ತು.
   ಈ ಕುಟುಂಬದ ಇವರ ತಂದೆ ಮತ್ತು ಸಹೋದರರ ಹಿಸ್ಸೆ ಪಂಚಾಯತಿ ನಾನೇ ಮಾಡಿದ್ದೆ ಆ ನಂತರ ಈ ಪಂಚಾಯಿತಿ ಆದ್ದರಿಂದ ಇವರ ಆಸ್ತಿ ಮತ್ತು ಈ ಸಹೋದರರ ಮನಸ್ಥಿತಿ ನನಗೆ ಚೆನ್ನಾಗಿ ಗೊತ್ತಿದ್ದರಿಂದ ನನಗೆ ಈ ಹಿಸ್ಸೆ ಪ೦ಚಾಯತನಲ್ಲಿ ಪ್ರಮುಖ ಸ್ಥಾನವಾಗಿತ್ತು.
   ಬಿದನೂರು ನಗರದ ಬುಡನ್ ಸಾಹೇಬರ ಕುಟುಂಬ ಆನಂದಪುರಂಗೆ ಬಂದಿದ್ದು ಟಿಪ್ಪು ಸುಲ್ತಾನ್ ಕೆಳದಿ ಸಾಮ್ರಾಜ್ಯ ವಶ ಪಡಿಸಿಕೊಂಡಾಗ ಆನಂದಪುರಂ ಕೋಟೆಯ ನಿರ್ವಹಣೆಗೆ ಬಂದ ಯೋದರ ಕುಟುಂಬ ಇವರದ್ದು ಬಿದನೂರು ನಗರದ ದುಬಾರಪೇಟೆ ಇವರ ಮೂಲ.
  ನಗರದ ಬುಡನ್ ಸಾಬರು ಆ ಕಾಲದಲ್ಲಿ ದೊಡ್ಡ ಜಮೀನ್ದಾರರು ಅವರಿಗೆ ಶೇಖ್ ಹಸನ್ ಸಾಬ್, ಶೇಖ್ ಮೈದೀನ್ ಸಾಬ್ ಮತ್ತು ಶೇಖ್ ಮಹಮದ್ ಗೌಸ್‌ ಮತ್ತು ಇಬ್ಬರು ಹೆಣ್ಣು ಮಕ್ಕಳು.
  ದೊಡ್ಡ ಮಗ ಶೇಖ್ ಹಸನ್ ಸಾಹೇಬರ ಆರು ಗಂಡು ಮಕ್ಕಳ ಆಸ್ತಿ ಹಿಸ್ಸೆ ಪಂಚಾಯಿತಿ ಅವರ ಮೂರನೆ ಮಗ ಅಮೀರ್ ಸಾಹೇಬರ ಮನೆಯಲ್ಲಿ ಅಲ್ಲಿ ಎಲ್ಲರೂ ಸೇರಿದ್ದೆವು.
   ಇವರ ಕುಟುಂಬದ ಒಟ್ಟು ಆಸ್ತಿ ಮತ್ತು ಈಗಾಗಲೇ ಹಿಸ್ಸೆಗಿ೦ತ ಮೊದಲೇ ಅಲ್ಲಲ್ಲಿ ಅವರವರ ಮೌಕಿಕ ಒಪ್ಪಿಗೆಯಲ್ಲಿ ಅನುಭವದಲ್ಲಿರುವ ಮನೆ ಜಮೀನು ಸೇರಿ ಹಿಸ್ಸೆ ಮಾಡಿಸುವ ಕ್ಲಿಷ್ಟವಾದ ಕೆಲಸ ನನ್ನದಾಗಿತ್ತು.
   ವಾದ ವಿವಾದಗಳು ತರ್ಕಗಳ ಮದ್ಯದಲ್ಲಿ ಎಲ್ಲರೂ ಇರುವಾಗಲೇ ನನ್ನ ಶಿಷ್ಯ ಹೆಬ್ಬೋಡಿ ರಾಮಸ್ವಾಮಿ ತನ್ನ ಆಲೆಮನೆ ಮುಗಿಸಿ ತಂದ ಅಚ್ಚು ಬೆಲ್ಲ ತಂದು ಕೊಟ್ಟ.
  ಅದನ್ನು ತಟ್ಟೆಯಲ್ಲಿ ಹಾಕಿ ಪಂಚಾಯಿತಿದಾರರ ಮದ್ಯ ಇಟ್ಟರು, ಮಲೆನಾಡಿನ ದೇಸಿ ಕಬ್ಬಿನ ಆಲೆಮನೆ ಬೆಲ್ಲ ಅಪರೂಪವಾದ್ದರಿಂದ ಎಲ್ಲರೂ ಜಾಸ್ತಿ ಜಾಸ್ತಿಯೇ ತಿಂದಿದ್ದರು.
  ಪಂಚಾಯಿತಿ ಅಂತಿಮ ಘಟ್ಟ ತಲುಪಿತ್ತು, ಆಸ್ತಿ ವಿಬಾಗದ ತಕ್ಕಡಿಯಲ್ಲಿ ತೂಗುವ ಸಂದರ್ಭದಲ್ಲಿ ನನಗೆ ಯಾಕೋ ಕಸಿವಿಸಿ ಮತ್ತು ಭಯ ಪ್ರಾರಂಭವಾಯಿತು !!?.
  ಪಂಚಾಯಿತಿ ಪ್ರಾರಂಭದಲ್ಲಿದ್ದ ನನ್ನ ನೆನಪಿನ ಶಕ್ತಿ ಪಂಚಾಯಿತಿ ಅಂತಿಮ ಘಟ್ಟದಲ್ಲಿ ಯಾಕೋ ದುರ್ಬಲ ಅನ್ನಿಸಲು ಪ್ರಾರಂಭ ಆಯಿತು.
  ಸಾಧ್ಯವೇ ಇಲ್ಲ... ಪಂಚಾಯಿತಿ ಬೇಡವೇ ಬೇಡ ಅನ್ನಿಸಿತು, ಮಲಗಬೇಕು ಅನ್ನಿಸಿತು, ವಿಪರೀತ ಭಯ ಆವರಿಸಿತು ಆಗಲೆ ನನಗೆ ಇದು ಹಾರ್ಟ್ ಅಟ್ಯಾಕ್ ಲಕ್ಷಣ ಅನ್ನಿಸಲು ಪ್ರಾರಂಭ ಆಯಿತು.
   ನನ್ನನ್ನು ತಕ್ಷಣ ವ್ಯೆದ್ಯರ ಬಳಿ ಕರೆದುಕೊಂಡು ಹೋಗಿ ಅಂತ ಹೇಳಿ ಅಲ್ಲೇ ಮಲಗಿದೆ... ಆಗಲೇ ಶಿಷ್ಯ ತಣ್ಣಗೆ ಉಸುರಿದ ಎಂತದೂ ಆಗಲ್ಲ ಇದು ಭಂಗಿ ಸೊಪ್ಪಿನ ಬೆಲ್ಲ ಹಿಂಗೆ ರಾಶಿ ತಿಂದರೆ ಹಿಂಗೆ ಆಗೋದು ಅಂತಿದ್ದ !! ಅವನಿಗೆ ಎರೆಡು ತಪರಾಕಿ ಬಿಡಬೇಕೆನ್ನಿಸಿದರೂ ನನ್ನ ಕೈ ಕಾಲು ಒಪ್ಪಿಗೆ ಕೊಡಲೇ ಇಲ್ಲ, ಹಿಸ್ಸೆ ಪಂಚಾಯಿತಿ ಅದ೯ಕ್ಕೆ ಬರಖಾಸ್ತು ಆಯಿತು.
  ಮಲೆನಾಡಿನಲ್ಲಿ ಆಲೆಮನೆ ಹಾಕಿ ಬೆಲ್ಲ ತಯಾರಿಸುವ ಪದ್ದತಿ ಈಗಿಲ್ಲ ಆಗೆಲ್ಲ ಭಂಗಿ ಬೆಲ್ಲ, ಗುಡ್ಡೆ ಗೇರು ಬೆಲ್ಲದ ಸರ, ಬಾಳೆ ದಿಂಡಿನ ಸರದ ಬೆಲ್ಲ, ಅ೦ಟು ಬೆಲ್ಲ ಸುತ್ತಿದಎಳೆ ಕಬ್ಬಿನ ಕೋಲಿನ ತುದಿ, ಆಲೆಮನೆಯ ಬೆಲ್ಲದ ಜೊಂಡಿನ ಭಟ್ಟಿ ಸರಾಯಿ ಈಗೆಲ್ಲ ನೆನಪು ಮಾತ್ರ.
   ಭಂಗಿ ಬೆಲ್ಲದ ಈ ಪ್ರಸಂಗ ನನಗೆ ಜೀವಮಾನದಲ್ಲೇ ಮರೆಯದ ಜೀವವೇ ಹೋಯಿತೆ೦ದು ಭಯ ಪಡಿಸಿದ ಘಟನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ