Skip to main content

Blog number 1049.ಹಿಸ್ಸೆ ಪಂಚಾಯಿತಿ ಬರಖಾಸ್ತು ಮಾಡಿದ ಭಂಗಿ ಬೆಲ್ಲ..... ಜೀವಮಾನದಲ್ಲೇ ಮರೆಯದ ಘಟನೆ.

#ಸಸ್ಯಗಳಲ್ಲಿ_ಏನಿದೆ_ಏನಿಲ್ಲ.

#ಪ್ರಾಚೀನ_ಭಾರತದಲ್ಲಿ_ತಂಬಾಕು_ಇರಲಿಲ್ಲ

#ಭಂಗಿ_ಸೊಪ್ಪು_ಮಾತ್ರ_ಬಳಕೆಯಲ್ಲಿತ್ತು.

#ಚಿಲುಮೆ_ಸೇದುವ_ರಾಮರಸ_ಕುಡಿಯುವ_ಪದ್ಧತಿ_ಇತ್ತು.

#ಮಲೆನಾಡಿನಲ್ಲಿ_ಆಲೆಮನೆಯಲ್ಲಿ_ಭಂಗಿ_ಸೊಪ್ಪಿನ_ಬೆಲ್ಲ_ಮಾಡುವ_ಪದ್ದತಿಯೂ_ಇತ್ತು.

#ಹಿಸ್ಸಪಂಚಾಯಿತಿಯಲ್ಲಿ_ಭಂಗಿ_ಬೆಲ್ಲ_ತಿಂದ_ನನ್ನ_ಪಜೀತಿ_ಪ್ರಸಂಗ.

   ಮುಸ್ಲಿಂ ಸಹೋದರರ ಆಸ್ತಿ ಹಿಸ್ಸೆಯ ಪಂಚಾಯ್ತಿಗೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯನಾದ ನಾನು ಮುಖ್ಯ ಪ೦ಚಾಯಿತಿದಾರನಾಗಿ ಸಹೃದಯದ ಆ ಕುಟುಂಬದವರು ಆಹ್ವಾನಿಸಿದ್ದರು.
  ಇವರಿಗೂ ಇವರ ತಾಯಿಗೂ ನನ್ನ ಮೇಲೆ ಆ ಕಾಲದಲ್ಲಿ ನಂಬಿಕೆ ಇತ್ತು.
   ಈ ಕುಟುಂಬದ ಇವರ ತಂದೆ ಮತ್ತು ಸಹೋದರರ ಹಿಸ್ಸೆ ಪಂಚಾಯತಿ ನಾನೇ ಮಾಡಿದ್ದೆ ಆ ನಂತರ ಈ ಪಂಚಾಯಿತಿ ಆದ್ದರಿಂದ ಇವರ ಆಸ್ತಿ ಮತ್ತು ಈ ಸಹೋದರರ ಮನಸ್ಥಿತಿ ನನಗೆ ಚೆನ್ನಾಗಿ ಗೊತ್ತಿದ್ದರಿಂದ ನನಗೆ ಈ ಹಿಸ್ಸೆ ಪ೦ಚಾಯತನಲ್ಲಿ ಪ್ರಮುಖ ಸ್ಥಾನವಾಗಿತ್ತು.
   ಬಿದನೂರು ನಗರದ ಬುಡನ್ ಸಾಹೇಬರ ಕುಟುಂಬ ಆನಂದಪುರಂಗೆ ಬಂದಿದ್ದು ಟಿಪ್ಪು ಸುಲ್ತಾನ್ ಕೆಳದಿ ಸಾಮ್ರಾಜ್ಯ ವಶ ಪಡಿಸಿಕೊಂಡಾಗ ಆನಂದಪುರಂ ಕೋಟೆಯ ನಿರ್ವಹಣೆಗೆ ಬಂದ ಯೋದರ ಕುಟುಂಬ ಇವರದ್ದು ಬಿದನೂರು ನಗರದ ದುಬಾರಪೇಟೆ ಇವರ ಮೂಲ.
  ನಗರದ ಬುಡನ್ ಸಾಬರು ಆ ಕಾಲದಲ್ಲಿ ದೊಡ್ಡ ಜಮೀನ್ದಾರರು ಅವರಿಗೆ ಶೇಖ್ ಹಸನ್ ಸಾಬ್, ಶೇಖ್ ಮೈದೀನ್ ಸಾಬ್ ಮತ್ತು ಶೇಖ್ ಮಹಮದ್ ಗೌಸ್‌ ಮತ್ತು ಇಬ್ಬರು ಹೆಣ್ಣು ಮಕ್ಕಳು.
  ದೊಡ್ಡ ಮಗ ಶೇಖ್ ಹಸನ್ ಸಾಹೇಬರ ಆರು ಗಂಡು ಮಕ್ಕಳ ಆಸ್ತಿ ಹಿಸ್ಸೆ ಪಂಚಾಯಿತಿ ಅವರ ಮೂರನೆ ಮಗ ಅಮೀರ್ ಸಾಹೇಬರ ಮನೆಯಲ್ಲಿ ಅಲ್ಲಿ ಎಲ್ಲರೂ ಸೇರಿದ್ದೆವು.
   ಇವರ ಕುಟುಂಬದ ಒಟ್ಟು ಆಸ್ತಿ ಮತ್ತು ಈಗಾಗಲೇ ಹಿಸ್ಸೆಗಿ೦ತ ಮೊದಲೇ ಅಲ್ಲಲ್ಲಿ ಅವರವರ ಮೌಕಿಕ ಒಪ್ಪಿಗೆಯಲ್ಲಿ ಅನುಭವದಲ್ಲಿರುವ ಮನೆ ಜಮೀನು ಸೇರಿ ಹಿಸ್ಸೆ ಮಾಡಿಸುವ ಕ್ಲಿಷ್ಟವಾದ ಕೆಲಸ ನನ್ನದಾಗಿತ್ತು.
   ವಾದ ವಿವಾದಗಳು ತರ್ಕಗಳ ಮದ್ಯದಲ್ಲಿ ಎಲ್ಲರೂ ಇರುವಾಗಲೇ ನನ್ನ ಶಿಷ್ಯ ಹೆಬ್ಬೋಡಿ ರಾಮಸ್ವಾಮಿ ತನ್ನ ಆಲೆಮನೆ ಮುಗಿಸಿ ತಂದ ಅಚ್ಚು ಬೆಲ್ಲ ತಂದು ಕೊಟ್ಟ.
  ಅದನ್ನು ತಟ್ಟೆಯಲ್ಲಿ ಹಾಕಿ ಪಂಚಾಯಿತಿದಾರರ ಮದ್ಯ ಇಟ್ಟರು, ಮಲೆನಾಡಿನ ದೇಸಿ ಕಬ್ಬಿನ ಆಲೆಮನೆ ಬೆಲ್ಲ ಅಪರೂಪವಾದ್ದರಿಂದ ಎಲ್ಲರೂ ಜಾಸ್ತಿ ಜಾಸ್ತಿಯೇ ತಿಂದಿದ್ದರು.
  ಪಂಚಾಯಿತಿ ಅಂತಿಮ ಘಟ್ಟ ತಲುಪಿತ್ತು, ಆಸ್ತಿ ವಿಬಾಗದ ತಕ್ಕಡಿಯಲ್ಲಿ ತೂಗುವ ಸಂದರ್ಭದಲ್ಲಿ ನನಗೆ ಯಾಕೋ ಕಸಿವಿಸಿ ಮತ್ತು ಭಯ ಪ್ರಾರಂಭವಾಯಿತು !!?.
  ಪಂಚಾಯಿತಿ ಪ್ರಾರಂಭದಲ್ಲಿದ್ದ ನನ್ನ ನೆನಪಿನ ಶಕ್ತಿ ಪಂಚಾಯಿತಿ ಅಂತಿಮ ಘಟ್ಟದಲ್ಲಿ ಯಾಕೋ ದುರ್ಬಲ ಅನ್ನಿಸಲು ಪ್ರಾರಂಭ ಆಯಿತು.
  ಸಾಧ್ಯವೇ ಇಲ್ಲ... ಪಂಚಾಯಿತಿ ಬೇಡವೇ ಬೇಡ ಅನ್ನಿಸಿತು, ಮಲಗಬೇಕು ಅನ್ನಿಸಿತು, ವಿಪರೀತ ಭಯ ಆವರಿಸಿತು ಆಗಲೆ ನನಗೆ ಇದು ಹಾರ್ಟ್ ಅಟ್ಯಾಕ್ ಲಕ್ಷಣ ಅನ್ನಿಸಲು ಪ್ರಾರಂಭ ಆಯಿತು.
   ನನ್ನನ್ನು ತಕ್ಷಣ ವ್ಯೆದ್ಯರ ಬಳಿ ಕರೆದುಕೊಂಡು ಹೋಗಿ ಅಂತ ಹೇಳಿ ಅಲ್ಲೇ ಮಲಗಿದೆ... ಆಗಲೇ ಶಿಷ್ಯ ತಣ್ಣಗೆ ಉಸುರಿದ ಎಂತದೂ ಆಗಲ್ಲ ಇದು ಭಂಗಿ ಸೊಪ್ಪಿನ ಬೆಲ್ಲ ಹಿಂಗೆ ರಾಶಿ ತಿಂದರೆ ಹಿಂಗೆ ಆಗೋದು ಅಂತಿದ್ದ !! ಅವನಿಗೆ ಎರೆಡು ತಪರಾಕಿ ಬಿಡಬೇಕೆನ್ನಿಸಿದರೂ ನನ್ನ ಕೈ ಕಾಲು ಒಪ್ಪಿಗೆ ಕೊಡಲೇ ಇಲ್ಲ, ಹಿಸ್ಸೆ ಪಂಚಾಯಿತಿ ಅದ೯ಕ್ಕೆ ಬರಖಾಸ್ತು ಆಯಿತು.
  ಮಲೆನಾಡಿನಲ್ಲಿ ಆಲೆಮನೆ ಹಾಕಿ ಬೆಲ್ಲ ತಯಾರಿಸುವ ಪದ್ದತಿ ಈಗಿಲ್ಲ ಆಗೆಲ್ಲ ಭಂಗಿ ಬೆಲ್ಲ, ಗುಡ್ಡೆ ಗೇರು ಬೆಲ್ಲದ ಸರ, ಬಾಳೆ ದಿಂಡಿನ ಸರದ ಬೆಲ್ಲ, ಅ೦ಟು ಬೆಲ್ಲ ಸುತ್ತಿದಎಳೆ ಕಬ್ಬಿನ ಕೋಲಿನ ತುದಿ, ಆಲೆಮನೆಯ ಬೆಲ್ಲದ ಜೊಂಡಿನ ಭಟ್ಟಿ ಸರಾಯಿ ಈಗೆಲ್ಲ ನೆನಪು ಮಾತ್ರ.
   ಭಂಗಿ ಬೆಲ್ಲದ ಈ ಪ್ರಸಂಗ ನನಗೆ ಜೀವಮಾನದಲ್ಲೇ ಮರೆಯದ ಜೀವವೇ ಹೋಯಿತೆ೦ದು ಭಯ ಪಡಿಸಿದ ಘಟನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...