Skip to main content

Blog number 1079. ರಿಪ್ಪನ್ ಪೇಟೆಯ ಅಶ್ವಲ್ ಮತ್ತು ಇನ್ನಿಬ್ಬರು ವಿದ್ಯಾರ್ಥಿಗಳು ಹಿಮಾಲಯನ್ ಬೈಕ್ ನಲ್ಲಿ ಗೋವಾದಲ್ಲಿ ನಡೆದ ರಾಯಲ್ ಎನ್ಫೀಲ್ಡ್ ಬೈಕ್ ನ ರೈಡರ್ಸ್ ಮ್ಯಾನಿಯಾ 2022 ರಲ್ಲಿ ಭಾಗವಹಿಸಿದ ಇದಕ್ಕಾಗಿ 900 ಕಿ ಮಿ ಸುರಕ್ಷಿತ ಬೈಕ್ ರೈಡಿಂಗ್ ಮಾಡಿದ ಅನುಭವ ವಾಪಾಸಾಗುವಾಗ ಈ ಯುವಕರ ಸಾಹಸ ಪ್ರೋತ್ಸಾಹಿಸಲು ಮಲ್ಲಿಕಾ ವೆಜ್ ನಲ್ಲಿ ಸಂಜೆ ಉಪಹಾರಕ್ಕೆ ಆಹ್ವಾನಿಸಿದ್ದೆ.

#ಗೋವಾದಲ್ಲಿ_ನಡೆದ_ರಾಯಲ್_ಎನಪೀಲ್ಡ್_ರೈಡರ್ಸ್_ಮ್ಯಾನಿಯಾ_2022ರಲ್ಲಿ_ಭಾಗವಹಿಸಿದ_ನಮ್ಮ_ಹುಡುಗರು

#ವಿದೇಶಿ_ಸಾಹಸಿಗಳ_ಈ_ಹವ್ಯಾಸ_ನಮ್ಮ_ಹಳ್ಳಿ_ಹುಡುಗರಿಗೂ_ಆಕರ್ಷಿಸುತ್ತಿದೆ.

#ಇದರಿಂದ_ಯುವಜನತೆ_ಉತ್ತಮ_ಹವ್ಯಾಸದ_ಕಡೆ_ಸಾಗುವ_ಸಾಧ್ಯತೆ

#ರೈಡರ್ಸ್_ಸಾಹಸ_ಯಾತ್ರೆಯನ್ನು_youtubeನಲ್ಲಿ_ಪ್ರಕಟಿಸಿ_ಹಣಗಳಿಸುವ_ಲಾಭದ_ದಾರಿಯೂ_ಇದೆ.

#ರಿಪ್ಪನಪೇಟೆ_ಅಶ್ವಲ್_900_ಕಿಮಿ_ಹಿಮಾಲಯನ್_ಬೈಕಲ್ಲಿ_ಚೊಚ್ಚಲ_ರೈಡಿಂಗ್_ಅನುಭವ.

   ಈಗೆಲ್ಲ ಹಳ್ಳಿಗಳಲ್ಲಿ ಯುವಕ ಯುವತಿಯರು ಪ್ರತ್ಯೇಕವಾಗಿ ಬೈಕ್ - ಸ್ಕೂಟಿ ಖರೀದಿಸದೇ ಇರುವುದಿಲ್ಲ ಆದ್ದರಿಂದ ಪ್ರತಿ ಹೋಬಳಿಯಲ್ಲಿ ಬೈಕ್ ಮಾರಾಟದ ಶೋರೂಂಗಳಿದೆ, ಸರ್ವಿಸ್ ಸ್ಟೇಷನ್ ಮತ್ತು ಪೆಟ್ರೋಲ್ ಬಂಕ್ ಗಳಾಗಿದೆ.
   ಬೈಕ್ ಸಂಖ್ಯೆ ಹೆಚ್ಚಿದಂತೆ ಅಪಘಾತವೂ ಹೆಚ್ಚಾಗಿದೆ, ಅಮಲು ಪದಾರ್ಥ ಸೇವಿಸಿ ಆಗುವ ಅನಾಹುತ, ವಿಪರೀತ ವೇಗದಿಂದ ಜಡ್ಜಮೆಂಟ್ ಇಲ್ಲದೆ ಅಪಘಾತಗಳು ಸಾಮಾನ್ಯವಾಗಿದೆ, ಸಾವಿನ ಸಂಖ್ಯೆ ಕೂಡ ಹೆಚ್ಚು.
   ಇದರಿಂದ ಪೋಷಕರು ಮಕ್ಕಳಿಗೆ ಬೈಕ್ ಕೊಡಿಸಲು ಹೆದರುತ್ತಾರೆ ಆದರೆ ಈಗಿನ ಮಕ್ಕಳ ಬೇಡಿಕೆ ತಿರಸ್ಕರಿಸಲಾಗದೇ ಸಾಲ ಮಾಡಿ ಬೈಕ್ ಕೊಡಿಸುತ್ತಾರೆ.
   ಈ ರೀತಿ ಬೈಕ್ ಖರೀದಿಸುವ ಯುವ ಜನಾಂಗಕ್ಕೆ ತದ್ವಿರುದ್ಧವಾದ ಹೊಸ ಖಯಾಲಿಯ ಯುವ ಜನತೆ ತಮ್ಮ ಬೈಕ್ ನಲ್ಲಿ ದೇಶ ಮತ್ತು ಅಂತರ್ ರಾಷ್ಟ್ರೀಯ ಪ್ರವಾಸ ಮಾಡುವ ವಿದೇಶಿ ಸಾಹಸಿ ಪ್ರವಾಸಿಗಳಂತೆ ನಮ್ಮ ಹಳ್ಳಿ ಹುಡುಗರು ಈ ರೀತಿ ಬೈಕ್ ನಲ್ಲಿ ಪ್ರವಾಸ ಮಾಡಲು ಮುಂದಾಗುತ್ತಿರುವುದು ಸ್ವಾಗತಾರ್ಹವಾಗಿದೆ.
   ಅವರವರ ಆಯ್ಕೆಯ ಬೈಕ್ ಖರೀದಿಸಿ ಅದಕ್ಕೆ ಸೂಕ್ತವಾದ ರೈಡಿಂಗ್ ಗಿಯರ್ಸ್ಗಳಾದ ಹೆಲ್ಮೆಟ್ , ಜರ್ಕಿನ್, ಶೂ, ನೀಗಾರ್ಡ್ ಮುಂತಾದ ಸ್ವಯಂ ರಕ್ಷಣಾ ಕವಚ ಧರಿಸಿ, ಬೈಕ್ ಲ್ಲಿ ತಮ್ಮೆಲ್ಲ ದಾಖಲೆ, ಉಡುಗೆ ತೊಡುಗೆ, ವಾಸ್ತವ್ಯ ಹೂಡಿದರೆ , ಅಲ್ಲಿ ಆಹಾರ ಅಡುಗೆಗಾಗಿ ಪಾತ್ರೆ, ರೇಷನ್, ಕಾಪಿ, ಸ್ಟವ್ ಹೀಗೆ ಇದನ್ನೆಲ್ಲ ಜೊತೆಯಲ್ಲೇ ಒಯ್ಯುತ್ತಾರೆ.
  ಸಂಪೂಣ೯ ಸಂಚಾರ ನಿಯಮ ಕಡ್ಡಾಯ ಪಾಲನೆ, ಸುರಕ್ಷಿತವಾದ ವೇಗದಲ್ಲಿ ಸಂಚಾರ, ನಿಗದಿ ಪಡಿಸಿದ ಜಾಗದಲ್ಲೇ ಪಾರ್ಕಿಂಗ್ ಈ ರೀತಿ ಬೈಕ್ ರೈಡರ್ ಗಳು ಸಂಚರಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ.
   ಆದ್ದರಿಂದ ಪ್ರತಿ ವರ್ಷ ನವೆಂಬರ್ ನಲ್ಲಿ ನಡೆಯುವ ರಾಯಲ್ ಎನ್ಫೀಲ್ಡ್ ಬೈಕ್ ಪೆಸ್ಟಿವಲ್ #ರೈಡರ್ಸ_ಮೇನಿಯಾ_2022 ಈ ಬಾರಿ ಗೋವಾದಲ್ಲಿ ಯಶಸ್ವಿ ಆಗಿ ನಡೆದಿದೆ ಇದರಲ್ಲಿ ದೇಶ ವಿದೇಶದಿಂದ ಬಂದು ಭಾಗವಹಿಸಿದ ಬೈಕ್ ಗಳ ಸಂಖ್ಯೆ 15 ಸಾವಿರ! ಮತ್ತು ಈ ಸಂದರ್ಭದಲ್ಲೇ ಹೊಸ ರಾಯಲ್ ಎನ್ಫೀಲ್ಡ್ ಸೂಪರ್ ಮೆಟಾರ್ 650 ಬೈಕ್ ಲೋಕಾರ್ಪಣೆ ಕೂಡ ಕಂಪನಿ ಮಾಡಿದೆ.
   ನಮ್ಮ ರಿಪ್ಪನ್ ಪೇಟೆಯಿಂದ ಮೂವರು ಯುವ ವಿದ್ಯಾರ್ಥಿಗಳು ಈ ಗೋವಾದ ರಾಯಲ್ ಎನ್ಫೀಲ್ಡ್ ಬೈಕ್ ನ ರೈಡರ್ಸ್ ಮೇನಿಯಾ 2022 ರಲ್ಲಿ ಯಶಸ್ವಿ ಆಗಿ ಭಾಗವಹಿಸಿ ವಾಪಾಸ್ ಬಂದಿದ್ದಾರೆ, ಬರುವಾಗ ಇವರಿಗೆ ನಮ್ಮ ಮಲ್ಲಿಕಾ ವೆಜ್ ನಲ್ಲಿ ಸಂಜೆಯ ಉಪಹಾರಕ್ಕೆ ಆಮಂತ್ರಣ ನೀಡಿದ್ದೆ.
  ಉಪಹಾರದ ನಂತರ ಪರಿಚಿತ ಯುವಕ ರಿಪ್ಪನ್ ಪೇಟೆಯ ಅಶ್ವಲ್ ನನ್ನ ಕಛೇರಿಗೆ ಬಂದು ಧನ್ಯವಾದ ಹೇಳಿದಾಗ ಅವರ ಅನುಭವದ ಬಗ್ಗೆ ಮಾತಾಡಿದೆವು, ಮುಂದಿನ ದಿನಗಳಲ್ಲಿ ಇಡೀ ದೇಶ ಸುತ್ತುವ ಅಭಿಲಾಷೆ ಈ ಯುವಕ ಹೊಂದಿರುವುದಾಗಿ ತಿಳಿಸಿದರು.
   ಇವರ ಇನ್ನಿಬ್ಬರು ಜೊತೆಗಾರರು ಮನೆ ಸೇರುವ ಅವಸರದಲ್ಲಿ ಉಪಹಾರ ಸೇವಿಸಿ ಮೊದಲೇ ಹೋಗಿದ್ದರಿಂದ  ನನಗೆ ಅವರ ಬೇಟಿ ಸಾಧ್ಯವಾಗಲಿಲ್ಲ.
  ಮುಂದಿನ ಇವರ ಭಾರತ ದರ್ಶನದ ಬೈಕ್ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿ ಬಿಳ್ಕೊಟ್ಟೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...