Skip to main content

Blog number 1079. ರಿಪ್ಪನ್ ಪೇಟೆಯ ಅಶ್ವಲ್ ಮತ್ತು ಇನ್ನಿಬ್ಬರು ವಿದ್ಯಾರ್ಥಿಗಳು ಹಿಮಾಲಯನ್ ಬೈಕ್ ನಲ್ಲಿ ಗೋವಾದಲ್ಲಿ ನಡೆದ ರಾಯಲ್ ಎನ್ಫೀಲ್ಡ್ ಬೈಕ್ ನ ರೈಡರ್ಸ್ ಮ್ಯಾನಿಯಾ 2022 ರಲ್ಲಿ ಭಾಗವಹಿಸಿದ ಇದಕ್ಕಾಗಿ 900 ಕಿ ಮಿ ಸುರಕ್ಷಿತ ಬೈಕ್ ರೈಡಿಂಗ್ ಮಾಡಿದ ಅನುಭವ ವಾಪಾಸಾಗುವಾಗ ಈ ಯುವಕರ ಸಾಹಸ ಪ್ರೋತ್ಸಾಹಿಸಲು ಮಲ್ಲಿಕಾ ವೆಜ್ ನಲ್ಲಿ ಸಂಜೆ ಉಪಹಾರಕ್ಕೆ ಆಹ್ವಾನಿಸಿದ್ದೆ.

#ಗೋವಾದಲ್ಲಿ_ನಡೆದ_ರಾಯಲ್_ಎನಪೀಲ್ಡ್_ರೈಡರ್ಸ್_ಮ್ಯಾನಿಯಾ_2022ರಲ್ಲಿ_ಭಾಗವಹಿಸಿದ_ನಮ್ಮ_ಹುಡುಗರು

#ವಿದೇಶಿ_ಸಾಹಸಿಗಳ_ಈ_ಹವ್ಯಾಸ_ನಮ್ಮ_ಹಳ್ಳಿ_ಹುಡುಗರಿಗೂ_ಆಕರ್ಷಿಸುತ್ತಿದೆ.

#ಇದರಿಂದ_ಯುವಜನತೆ_ಉತ್ತಮ_ಹವ್ಯಾಸದ_ಕಡೆ_ಸಾಗುವ_ಸಾಧ್ಯತೆ

#ರೈಡರ್ಸ್_ಸಾಹಸ_ಯಾತ್ರೆಯನ್ನು_youtubeನಲ್ಲಿ_ಪ್ರಕಟಿಸಿ_ಹಣಗಳಿಸುವ_ಲಾಭದ_ದಾರಿಯೂ_ಇದೆ.

#ರಿಪ್ಪನಪೇಟೆ_ಅಶ್ವಲ್_900_ಕಿಮಿ_ಹಿಮಾಲಯನ್_ಬೈಕಲ್ಲಿ_ಚೊಚ್ಚಲ_ರೈಡಿಂಗ್_ಅನುಭವ.

   ಈಗೆಲ್ಲ ಹಳ್ಳಿಗಳಲ್ಲಿ ಯುವಕ ಯುವತಿಯರು ಪ್ರತ್ಯೇಕವಾಗಿ ಬೈಕ್ - ಸ್ಕೂಟಿ ಖರೀದಿಸದೇ ಇರುವುದಿಲ್ಲ ಆದ್ದರಿಂದ ಪ್ರತಿ ಹೋಬಳಿಯಲ್ಲಿ ಬೈಕ್ ಮಾರಾಟದ ಶೋರೂಂಗಳಿದೆ, ಸರ್ವಿಸ್ ಸ್ಟೇಷನ್ ಮತ್ತು ಪೆಟ್ರೋಲ್ ಬಂಕ್ ಗಳಾಗಿದೆ.
   ಬೈಕ್ ಸಂಖ್ಯೆ ಹೆಚ್ಚಿದಂತೆ ಅಪಘಾತವೂ ಹೆಚ್ಚಾಗಿದೆ, ಅಮಲು ಪದಾರ್ಥ ಸೇವಿಸಿ ಆಗುವ ಅನಾಹುತ, ವಿಪರೀತ ವೇಗದಿಂದ ಜಡ್ಜಮೆಂಟ್ ಇಲ್ಲದೆ ಅಪಘಾತಗಳು ಸಾಮಾನ್ಯವಾಗಿದೆ, ಸಾವಿನ ಸಂಖ್ಯೆ ಕೂಡ ಹೆಚ್ಚು.
   ಇದರಿಂದ ಪೋಷಕರು ಮಕ್ಕಳಿಗೆ ಬೈಕ್ ಕೊಡಿಸಲು ಹೆದರುತ್ತಾರೆ ಆದರೆ ಈಗಿನ ಮಕ್ಕಳ ಬೇಡಿಕೆ ತಿರಸ್ಕರಿಸಲಾಗದೇ ಸಾಲ ಮಾಡಿ ಬೈಕ್ ಕೊಡಿಸುತ್ತಾರೆ.
   ಈ ರೀತಿ ಬೈಕ್ ಖರೀದಿಸುವ ಯುವ ಜನಾಂಗಕ್ಕೆ ತದ್ವಿರುದ್ಧವಾದ ಹೊಸ ಖಯಾಲಿಯ ಯುವ ಜನತೆ ತಮ್ಮ ಬೈಕ್ ನಲ್ಲಿ ದೇಶ ಮತ್ತು ಅಂತರ್ ರಾಷ್ಟ್ರೀಯ ಪ್ರವಾಸ ಮಾಡುವ ವಿದೇಶಿ ಸಾಹಸಿ ಪ್ರವಾಸಿಗಳಂತೆ ನಮ್ಮ ಹಳ್ಳಿ ಹುಡುಗರು ಈ ರೀತಿ ಬೈಕ್ ನಲ್ಲಿ ಪ್ರವಾಸ ಮಾಡಲು ಮುಂದಾಗುತ್ತಿರುವುದು ಸ್ವಾಗತಾರ್ಹವಾಗಿದೆ.
   ಅವರವರ ಆಯ್ಕೆಯ ಬೈಕ್ ಖರೀದಿಸಿ ಅದಕ್ಕೆ ಸೂಕ್ತವಾದ ರೈಡಿಂಗ್ ಗಿಯರ್ಸ್ಗಳಾದ ಹೆಲ್ಮೆಟ್ , ಜರ್ಕಿನ್, ಶೂ, ನೀಗಾರ್ಡ್ ಮುಂತಾದ ಸ್ವಯಂ ರಕ್ಷಣಾ ಕವಚ ಧರಿಸಿ, ಬೈಕ್ ಲ್ಲಿ ತಮ್ಮೆಲ್ಲ ದಾಖಲೆ, ಉಡುಗೆ ತೊಡುಗೆ, ವಾಸ್ತವ್ಯ ಹೂಡಿದರೆ , ಅಲ್ಲಿ ಆಹಾರ ಅಡುಗೆಗಾಗಿ ಪಾತ್ರೆ, ರೇಷನ್, ಕಾಪಿ, ಸ್ಟವ್ ಹೀಗೆ ಇದನ್ನೆಲ್ಲ ಜೊತೆಯಲ್ಲೇ ಒಯ್ಯುತ್ತಾರೆ.
  ಸಂಪೂಣ೯ ಸಂಚಾರ ನಿಯಮ ಕಡ್ಡಾಯ ಪಾಲನೆ, ಸುರಕ್ಷಿತವಾದ ವೇಗದಲ್ಲಿ ಸಂಚಾರ, ನಿಗದಿ ಪಡಿಸಿದ ಜಾಗದಲ್ಲೇ ಪಾರ್ಕಿಂಗ್ ಈ ರೀತಿ ಬೈಕ್ ರೈಡರ್ ಗಳು ಸಂಚರಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ.
   ಆದ್ದರಿಂದ ಪ್ರತಿ ವರ್ಷ ನವೆಂಬರ್ ನಲ್ಲಿ ನಡೆಯುವ ರಾಯಲ್ ಎನ್ಫೀಲ್ಡ್ ಬೈಕ್ ಪೆಸ್ಟಿವಲ್ #ರೈಡರ್ಸ_ಮೇನಿಯಾ_2022 ಈ ಬಾರಿ ಗೋವಾದಲ್ಲಿ ಯಶಸ್ವಿ ಆಗಿ ನಡೆದಿದೆ ಇದರಲ್ಲಿ ದೇಶ ವಿದೇಶದಿಂದ ಬಂದು ಭಾಗವಹಿಸಿದ ಬೈಕ್ ಗಳ ಸಂಖ್ಯೆ 15 ಸಾವಿರ! ಮತ್ತು ಈ ಸಂದರ್ಭದಲ್ಲೇ ಹೊಸ ರಾಯಲ್ ಎನ್ಫೀಲ್ಡ್ ಸೂಪರ್ ಮೆಟಾರ್ 650 ಬೈಕ್ ಲೋಕಾರ್ಪಣೆ ಕೂಡ ಕಂಪನಿ ಮಾಡಿದೆ.
   ನಮ್ಮ ರಿಪ್ಪನ್ ಪೇಟೆಯಿಂದ ಮೂವರು ಯುವ ವಿದ್ಯಾರ್ಥಿಗಳು ಈ ಗೋವಾದ ರಾಯಲ್ ಎನ್ಫೀಲ್ಡ್ ಬೈಕ್ ನ ರೈಡರ್ಸ್ ಮೇನಿಯಾ 2022 ರಲ್ಲಿ ಯಶಸ್ವಿ ಆಗಿ ಭಾಗವಹಿಸಿ ವಾಪಾಸ್ ಬಂದಿದ್ದಾರೆ, ಬರುವಾಗ ಇವರಿಗೆ ನಮ್ಮ ಮಲ್ಲಿಕಾ ವೆಜ್ ನಲ್ಲಿ ಸಂಜೆಯ ಉಪಹಾರಕ್ಕೆ ಆಮಂತ್ರಣ ನೀಡಿದ್ದೆ.
  ಉಪಹಾರದ ನಂತರ ಪರಿಚಿತ ಯುವಕ ರಿಪ್ಪನ್ ಪೇಟೆಯ ಅಶ್ವಲ್ ನನ್ನ ಕಛೇರಿಗೆ ಬಂದು ಧನ್ಯವಾದ ಹೇಳಿದಾಗ ಅವರ ಅನುಭವದ ಬಗ್ಗೆ ಮಾತಾಡಿದೆವು, ಮುಂದಿನ ದಿನಗಳಲ್ಲಿ ಇಡೀ ದೇಶ ಸುತ್ತುವ ಅಭಿಲಾಷೆ ಈ ಯುವಕ ಹೊಂದಿರುವುದಾಗಿ ತಿಳಿಸಿದರು.
   ಇವರ ಇನ್ನಿಬ್ಬರು ಜೊತೆಗಾರರು ಮನೆ ಸೇರುವ ಅವಸರದಲ್ಲಿ ಉಪಹಾರ ಸೇವಿಸಿ ಮೊದಲೇ ಹೋಗಿದ್ದರಿಂದ  ನನಗೆ ಅವರ ಬೇಟಿ ಸಾಧ್ಯವಾಗಲಿಲ್ಲ.
  ಮುಂದಿನ ಇವರ ಭಾರತ ದರ್ಶನದ ಬೈಕ್ ಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿ ಬಿಳ್ಕೊಟ್ಟೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ