Skip to main content

Blog number 1095. ಮಲೆನಾಡ ಶಿವಮೊಗ್ಗ ಜಿಲ್ಲೆಗೆ ರಬ್ಬರ್ ಬೆಳೆ ಪರಿಚಯಿಸಿ ಕೇಂದ್ರದ ರಬ್ಬರ್ ಬೋರ್ಡ್ನಿಂದ ಅಧಿಕೃತ ಅನುಮೋದನೆ ಕೊಡಿಸಿದ ಪಾದರ್ ಜೋಸೆಪ್ ಆನಂದಪುರಂನ ಮುಂಬಾಳಿನ ಗೋಕುಲ್ ಪಾರಂ ಸ್ಥಾಪಿಸಿದವರು ಈಗ ಅಪಾಯದಲ್ಲಿರುವ ರಬ್ಬರ್ ಕೃಷಿಗೆ ಕಾರಣಗಳು.

ಶಿವಮೊಗ್ಗಾ ಜಿಲ್ಲಾ ಮಲೆನಾಡ ರಬ್ಬರ್ ಬೆಳೆಗಾರರೇ ಎಚ್ಚರ! ಹೆಚ್ಚು ರಬ್ಬರ್ ಬರಲು ಎಥಿನೋ ಎಂಬ ಮಾರಕ ರಾಸಾಯನಿಕ ರಬ್ಬರ್ ಪಸಲು ಗುತ್ತಿಗೆದಾರರು ಬಳಸುತ್ತಿದ್ದಾರೆ ಇದರಿಂದ 40 ವರ್ಷ ಪಸಲು ಬರುವ ಮರ 4 ವಷ೯ದಲ್ಲಿ ನಿನಾ೯ಮವಾಗಲಿದೆ.
ಶಿವಮೊಗ್ಗ ಜಿಲ್ಲಾ ರಬ್ಬರ್ ಬೆಳೆಗಾರರ ಗಮನಕ್ಕಾಗಿ
 

    ಕೇಂದ್ರ ಸಕಾ೯ರದ ರಬ್ಬರ್ ಬೋಡ್೯ ಮಲೆನಾಡು ಪ್ರದೇಶದಲ್ಲಿ ರಬ್ಬರ್ ಇಳುವರಿ ಹೆಚ್ಚು ಬರುತ್ತದೆ ಎಂದು ಸಾಗರ ತಾಲ್ಲುಕಿನ  ಆನಂದಪುರ೦,ಇಡುವಳ್ಳಿ ಮತ್ತು ನಾಗವಳ್ಳಿಯಲ್ಲಿ ಮುಂಬಾಳಿನ ಗೋಕುಲ್ ಪಾರಂ ಪಾದರ್ ಜೋಸ್
 
ರಬ್ಬರ್ ಬೋಡ್೯ ಜೊತೆ ಬೆಳೆಸಿದ ಪ್ರಾತ್ಯಕ್ಷಿಕಾ ರಬ್ಬರ್ ತೋಟದ ಸಂಶೋದನೆಯಿಂದ ಪುರಸ್ಕರಿಸಿ ಈ ಪ್ರದೇಶದಲ್ಲಿ ರೈತರು ರಬ್ಬರ್ ಬೆಳೆಸಲು ಪ್ರೋತ್ಸಾಹಿಸಿ, ರಬ್ಬರ್ ಬೋಡ್೯ನ ಪ್ರಾದೇಶಿಕ ಕಛೇರಿ ಸಾಗರದಲ್ಲಿ ಪ್ರಾರ೦ಬಿಸಿತ್ತು.
 
   ರೈತರಿಗೆ ಬೇಕಾದ ಮಾಹಿತಿ,ಸಹಾಯಧನಗಳನ್ನ ಕೊಡಿಸಲು ಸಹಾಯ ಪ್ರಾರ೦ಬಿಸಿದ್ದರಿಂದ ಮತ್ತು ಈ ಬೆಳೆಗೆ ನೀರಾವರಿ ಅವಶ್ಯವಿಲ್ಲ ಮಳೆ ನೀರಿನ ಆಶ್ರಯದಲ್ಲಿ ರಬ್ಬರ್ ಬೆಳೆ ಬರುವುದರಿಂದ ಮತ್ತು ರಬ್ಬರ್ ದಾರಣೆ ಹೆಚ್ಚು ಆ ಸಂದಭ೯ದಲ್ಲಿ ಇದ್ದಿದ್ದರಿಂದ ಮಲೆನಾಡಿನ ರೈತರು ಹೆಚ್ಚು ಹೆಚ್ಚು ತಮ್ಮ ಖುಷ್ಕಿ ಜಮೀನಿನಲ್ಲಿ  ರಬ್ಬರ್ ಬೆಳೆಸಿದ್ದಾರೆ.
    ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಟನ್ ರಬ್ಬರ್ ಗೆ ಬೇಡಿಕೆ ಇದೆ ಆದರೆ 7 ಲಕ್ಷ ಟನ್ ಮಾತ್ರ ರೈತರು ಬೆಳೆಯುತ್ತಾರೆ೦ಬ ಮಾಹಿತಿ ಇದ್ದರೂ ಕಳೆದ 10 ವರ್ಷದಿಂದ ರಬ್ಬರ್ ಖರೀದಿ ಬೆಲೆ 100 ರಿಂದ 150 ರ ಒಳಗೆ ಉಳಿದು ಬಿಟ್ಟಿದ್ದು ಮಾತ್ರ ಸೋಜಿಗ ಇದರಿ೦ದ ಮಲೆನಾಡಿನ ರಬ್ಬರ್ ಬೆಳೆಗಾರರು ರಬ್ಬರ್ ಬೆಳೆಯ ಮೇಲೆ ವಿಶ್ವಾಸ ಕಳೆದು ಕೊಂಡು ರಬ್ಬರ್ ಬೆಳೆ ತೆಗೆದು ಅಡಿಕೆ ತೋಟ ಮಾಡಲು ಪ್ರಾರಂಬಿಸಿದರು.
    ಹಾಗೇ ರಬ್ಬರ್ ಉಳಿಸಿ ಕೊಂಡವರು ಟ್ಯಾಪರ್ ಗಳು ಸ್ಥಳಿಯವಾಗಿ ಸಿಗದಿದ್ದರಿಂದ, ಸ್ವತಃ ರಬ್ಬರ್ ತೆಗೆದು ಯಂತ್ರದಲ್ಲಿ ಶೀಟ್ ಮಾಡಿ ಒಣಗಿಸಿ ಪುನಃ ಡ್ರೈಯರ್ ನಲ್ಲಿ ಹದ ಮಾಡಿ ಮಾರಾಟ ಮಾಡುವ ಕೆಲಸ ತುಸು ಶ್ರಮದಾಯಕ ಮತ್ತು ಸೂಯೋ೯ದಯಕ್ಕಿ೦ತ ಮೊದಲೆ ಚಳಿ ಮತ್ತು ಮಳೆಯಲ್ಲಿ ರಬ್ಬರ್ ಮರದಲ್ಲಿ ಟ್ಯಾಪ್ ಮಾಡಲು ಎದ್ದು ಹೋಗಲು ಇಷ್ಟ ಇಲ್ಲದ್ದರಿಂದ ತಮ್ಮ ರಬ್ಬರ್ ತೋಟಗಳನ್ನ ಪಸಲು ಗುತ್ತಿಗೆಗೆ ನೀಡಲು ಪಾರಂಬಿಸಿದರು.
   ತಮ್ಮ ರಬ್ಬರ್ ಮರ ಒ0ದಕ್ಕೆ 1.50 ಪೈಸೆ ಕೂಲಿ ಪಡೆದು ಬೆಳ್ಳಂಬೆಳಗೆ ಟ್ಯಾಪ್ ಮಾಡಿ ಹಾಲು ತಂದು ಶೀಟ್ ಮಾಡಿ ಒಣಗಿಸಿ ಕೊಡುತ್ತಿದ್ದ ಟ್ಯಾಪರ್ ಗಳೂ ಈಗ ಇದಕ್ಕಿಂತ ಲಾಭವಾದ ರಬ್ಬರ್ ಪಸಲು ಗುತ್ತಿಗೆ ಪಡೆದು ರಬ್ಬರ್ ಬೆಳೆಗಾರನಿಗೇ 1.50 ಪೈಸೆ ಪ್ರತಿ ಟ್ಯಾಪ್ ಗೆ ನೀಡಿ ರಬ್ಬರ್ ಹಾಲು ತೆಗೆದು ಕೊಂಡು ಹೋಗುತ್ತಿದ್ದಾನೆ, ಪ್ರತಿ ತಿಂಗಳಿಗೆ 15 ದಿನ ಟ್ಯಾಪ್ ಮಾಡುತ್ತಾರೆಂದರೆ ಪ್ರತಿ ರಬ್ಬರ್ ಮರದಿಂದ ತಿಂಗಳಿಗೆ  22 ರೂಪಾಯಿ   ಕನಿಷ್ಟ ಆದಾಯಕ್ಕೆ ರಬ್ಬರ್ ಬೆಳೆಗಾರ ತೃಪ್ತಿ ಪಡುತ್ತಾನೆ.
   ಇದು ಹೊರಗಿನಿಂದ ನೋಡಲು ಸುಲಭ ಅಂತ ಕಾಣುತ್ತದೆ ಆದರೆ ಇದರ ಆಳದಲ್ಲಿ ಬೇರೆ ಲೆಕ್ಕಾಚಾರವೇ ಇದೆ, ಟ್ಯಾಪರ್ ಪ್ರತಿ ಮರಕ್ಕೆ ಪಡೆಯುತ್ತಿದ್ದ ಕೂಲಿ ರಬ್ಬರ್ ಬೆಳೆಗಾರನಿಗೆ ನೀಡಿ ಅವನು ಹೇಗೆ ಲಾಭಗಳಿಸುತ್ತಾನೆ? ಎಂಬುದನ್ನ ಮಲೆನಾಡ ರೈತರು ಚಿಂತಿಸುತ್ತಿಲ್ಲ.
   ಈ ರೀತಿ ರಬ್ಬರ್ ತೋಟ ವಹಿಸಿಕೊಂಡವರು ನೋಡಲು ರಬ್ಬರ್ ಹಾಲಿನಂತೆ ಕಾಣುವ ಎಥಿನೋ ಎಂಬ ರಾಸಾಯನಿಕವನ್ನ ರಬ್ಬರ್ ಟ್ಯಾಪ್ ಮಾಡುವ ಜಾಗಕ್ಕೆ ಲೇಪಿಸುತ್ತಾರೆ ಇದರಿ೦ದ ರಬ್ಬರ್ ಯಥೇಚ್ಚಾ ಹರಿದು ಬರುತ್ತದೆ ಮತ್ತು ಇದರಿಂದ 40 ವರ್ಷ ಆದಾಯ ನೀಡಬೇಕಾದ ರಬ್ಬರ್ ಮರ 4 ವಷ೯ದಲ್ಲಿ ತನ್ನ ಪಸಲು ನಿಲ್ಲಿಸುತ್ತದೆ.
   ಇದು ನಿಷಿದ್ದವಾದ ರಾಸಾಯನಿಕ ಮತ್ತು ಇದನ್ನು 30 ರಿಂದ 40 ವರ್ಷದ ಹಳೆ ರಬ್ಬರ್ ಮರಕ್ಕೆ ಬಳಸಿ ರಬ್ಬರ್ ತೆಗೆಯಲು ರಬ್ಬರ್ ಬೋಡ್೯ ಶಿಪಾರಸ್ಸು ಮಾಡುತ್ತದೆ ಆದರೆ ಇದನ್ನು ಪ್ರಾರಂಭದ ಹೊಸ ರಬ್ಬರ್ ತೋಟದಲ್ಲಿ ಬಳಸಿ ಪಸಲು ಗುತ್ತಿಗೆದಾರ ಲಾಭ ಮಾಡಿಕೊಂಡು ಹತ್ತಾರು ವರ್ಷ ಕೃಷಿ ಮಾಡಿದ ರಬ್ಬರ್ ತೋಟ ಕೇವಲ ನಾಲ್ಕೆ ವರ್ಷಕ್ಕೆ ಕಳೆದುಕೊಳ್ಳುವ ಅಪಾಯಕಾರಿ ಮಾಗ೯ದಲ್ಲಿ ನಡೆದಿದ್ದಾನೆ.
    ಇದನ್ನು ರಬ್ಬರ್ ಬೆಳೆಗಾರರಿಗೆ ತಿಳುವಳಿಕೆ ನೀಡಬೇಕಾದ ರಬ್ಬರ್ ಬೋಡ್೯ ಪ್ರಾದೇಶಿಕ ಕಛೇರಿ ಆಗಲಿ, ಸ್ಥಳಿಯ ಕೃಷಿ ತೋಟಗಾರಿಕಾ ಇಲಾಖೆ ಆಗಲಿ ರೈತರನ್ನ ಎಚ್ಚರಿಸುತ್ತಿಲ್ಲ!?
  ರಬ್ಬರ್ ಬೆಳೆಗಾರರ ಸಂಘ ಈ ಬಗ್ಗೆ ಏನು ನಿದಾ೯ರ ಮಾಡಲಿದೆ ಗೊತ್ತಾಗಿಲ್ಲ.
   ಸ್ವಲ್ಪ ದಿನ ರೈತರು ತಾಳ್ಮೆಯಿ೦ದ ಇದ್ದರೆ ರಬ್ಬರ್ ದಾರಣೆ ಹೆಚ್ಚಾಗಬಹುದು ಆದರೆ ತಾಳ್ಮೆ ಕಳೆದುಕೊಂಡ ರಬ್ಬರ್ ಬೆಳೆಗಾರ ಈ ರೀತಿ ತನ್ನ ಬೆಳೆ ಹಾಳು ಮಾಡಿಕೊಳ್ಳುವ ಕ್ರಮವಾದ ರಬ್ಬರ್ ಪಸಲು ಗುತ್ತಿಗೆ ನೀಡಬಾರದು.
   ಇದನ್ನು ಮಲೆನಾಡು ರಬ್ಬರ್ ಬೆಳೆಗಾರರಿಗೆ ಮನವರಿಕೆ ಮಾಡುವುದು ಹೇಗೆ?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...