Skip to main content

Blog number 1067. ಅಮರ ಸುಳ್ಯ 1837 ಬ್ರಿಟಿಷ್ ವಸಾಹತುಶಾಹಿ ವಿರುದ್ದದ ಸಶಸ್ತ್ರ ಹೋರಾಟ ಎಂಬ ವಿದ್ಯಾದರ ಕುಡೇಕಲ್ಲು ಬರೆದ ಇತಿಹಾಸದ ಪುಸ್ತಕ,150 ವಷ೯ದಿಂದ ಇತಿಹಾಸದ ಗರ್ಭದಲ್ಲಿ ಹುದುಗಿ ಹೋದ ಸ್ವಾಭಿಮಾನಿ ಕೊಡಗಿನ ಜನರ ಸ್ವಾತಂತ್ರ್ಯದ ಹೋರಾಟ, ಕೆಳದಿ ವ೦ಶಸ್ಥ ಬೂದಿ ಬಸಪ್ಪ ನಾಯಕರು ನಗರ ರೈತ ದಂಗೆ ನಂತರ ಕೊಡಗಿಗೆ ಹೋಗುತ್ತಾರಾ? ಕೆಳದಿ ಇತಿಹಾಸ ಸಂಶೋದನೆ ನಿಂತ ನೀರಾಗಿದೆ.

#ಕೊಡಗಿನ_ಜನರ_ಸ್ವಾಭಿಮಾನಿ_ಕಥನ_ಒಂದೂವರೆ_ಶತಮಾನ_ಕಾಲಗಭ೯ದಲ್ಲಿ_ಹೂತು_ಹೋಗಿತ್ತು.

#ಅಮರ_ಸುಳ್ಯ_1837_ಬ್ರಿಟೀಶ್_ವಸಾಹುತಶಾಹಿ_ವಿರುದ್ದದ_ಸಶಸ್ತ್ರ_ಹೋರಾಟ.

#ಸಾಹಿತಿ_ಕೆ_ಆರ್_ತೇಜಕುಮಾರ್_ಬಡ್ಡಡ್ಕರ_ಸಹೋದರ_ವಿದ್ಯಾದರ_ಕುಡೆಕಲ್_ಪ್ರಕಟಿಸಿದ_ಪುಸ್ತಕ

#ಇದೇ_ನವೆಂಬರ್_19ಕ್ಕೆ_ಅಮರ_ಸುಳ್ಯ_ಹೋರಾಟದ_ನೇತಾರ_ಕೆದಂಬಾಡಿ_ರಾಮಯ್ಯಗೌಡರ_ಪ್ರತಿಮೆ_ಅನಾವರಣ.
 
#ಈ_ಪುಸ್ತಕದ_ಅಧ್ಯಾಯ_4ರಲ್ಲಿ_ಪುಟ_ಸಂಖ್ಯೆ_50ರಿಂದ_70ರವರೆಗೆ_ಸ್ವಾಮಿ_ಅಪರಂಪಾರ_ಚರಿತ್ರೆ_ದಾಖಲಾಗಿದೆ

#ಇವರೇ_ನಗರ_ರೈತ_ದಂಗೆಯ_ಬೂದಿಬಸಪ್ಪ_ಕೆಳದಿ_ಕೊನೆಯ_ರಾಜ_ಚೆನ್ನಬಸಪ್ಪನಾಯಕರ_ಪುತ್ರರೇ?

#ಕೆಳದಿ_ಇತಿಹಾಸ_ಸಂಶೋದನೆ_ಏಕೆ_ನಿಂತ_ನೀರಾಗಿದೆ ?

  ಸ್ಟಾತಂತ್ರ್ಯ ಪೂರ್ವ ಭಾರತದಲ್ಲಿ ಬ್ರಿಟಿಷರ ದಾಸ್ಯದ ವಿರುದ್ದದ ಎಲ್ಲಾ ಹೋರಾಟಗಾರರನ್ನು ದಂಗೆಕೋರರು, ದರೋಡೆಕೋರರೆಂದೇ ದಾಖಲಿಸಲಾಗಿದೆ, ಸ್ವಾತಂತ್ರ್ಯ ನಂತರವೂ ಜನಪರ ಹೋರಾಟ ಮಾಡಿದವರನ್ನು ಆಡಳಿತಕ್ಕೆ ತಡೆ ಮಾಡಿದವರೆಂದು ಬಂದಿಸಿ ಜೈಲಿಗೆ ಕಳಿಸಿ ರವಡಿ ಲಿಸ್ಟ್ ಒಪನ್ ಮಾಡಿದಂತೆ.
   ಆದ್ದರಿಂದ ಬ್ರಿಟೀಷ್ ವಸಾಹತುಶಾಹಿಯ ವಿರುದ್ಧ ನಡೆದ ಸಶಸ್ತ್ರ ಹೋರಾಟವಾದ ಅಮರ ಸುಳ್ಯ ಹೋರಾಟ ದರೋಡೆ ಅನ್ನುವಂತೆ ದಾಖಲಾಗಿದೆ.
   ಯಾವ ಕಥನವು ಕೊಡಗಿನ ಜನರ ಸ್ವಾಭಿಮಾನ, ಆತ್ಮಸ್ಥೆರ್ಯಕ್ಕೆ ಸಾಕ್ಷಿಯಾಗಿತ್ತೋ ಆ ಕಥನವು ಚರಿತ್ರೆಯ ಕಾಲಗರ್ಭದಲ್ಲಿ ಒಂದೂವರೆ ಶತಮಾನದಿಂದ ಕಾಲಗರ್ಭದಲ್ಲಿ ಹೂತು ಹೋಗಿತ್ತು ಎಂದು ಈ ಪುಸ್ತಕದ ಮುನ್ನುಡಿ ಬರೆದ ಡಾ.ವಿಜಯ ಪೂಣಚ್ಚ ತಂಬಂಡ ಬರೆದಿದ್ದಾರೆ.
  ಇದೇ 2022ರ ನವೆ೦ಬರ್ 19 ರಂದು ಈ ಸಶಸ್ತ್ರ ಹೋರಾಟ ಅಮರ ಸುಳ್ಯ ಹೋರಾಟದ ರೂವಾರಿ ನೇತಾರ ಕೆದಂಬಾಡಿ ರಾಮಯ್ಯ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಮಂಗಳೂರಿನಲ್ಲಿ ಲೋಕಾರ್ಪಣೆ ಆಗಲಿದೆ.
  ಆಡಳಿತ ಶಾಹಿ ಅರಸೊತ್ತಿಗೆ ಸ್ವಾತಂತ್ರ್ಯದ ಸಶಸ್ತ್ರ ಹೋರಾಟದ ಇತಿಹಾಸವನ್ನೇ ಸುಮಾರು 150 ವರ್ಷ ದರೋಡೆಕೊರರ ದಂಗೆ ಎಂಬಂತೆ ಬಿಂಬಿಸಿತ್ತು ಮತ್ತು ಅದನ್ನು ಜನತೆ ನಂಬಿತ್ತು.
   ಆದರೆ ಈಗಿನ ಹೊಸ ತಲೆಮಾರು ರಾಜಾಶ್ರಯದ ಇತಿಹಾಸಕಾರರ ಸುಳ್ಳಿನ ಕಥನಕ್ಕೆ ಸತ್ಯದ ಬಾಷ್ಯಾ ಬರೆಯುವ ಮೂಲಕ ಮುಚ್ಚಿ ಹಾಕಿದ ಇತಿಹಾಸ ತೆರೆಯುವಂತಾಗಿದೆ.
  ಸಾಹಿತಿ ತೇಜಕುಮಾರ ಬಡ್ಡಡ್ಕರ ಸಹೋದರ ವಿದ್ಯಾದರ ಕುಡೇಕಲ್ಲು ಈ ಪುಸ್ತಕ ಬರೆದು ಬಂಟ ಮಲೆ ಪ್ರಕಾಶನ ಪ್ರಕಟಿಸಿದೆ.
  ಈ ಪುಸ್ತಕದ 4 ನೇ ಅಧ್ಯಾಯ ಪುಟ ಸಂಖ್ಯೆ 50 ರಿಂದ 70 ಸ್ವಾಮಿ ಅಪರಂಪಾರ ವ್ಯಕ್ತಿತ್ವ ಮತ್ತು ಚಿಂತನೆಯ ವ್ಯಾಪ್ತಿ ನಮ್ಮ ಜಿಲ್ಲೆಯ ಕೆಳದಿ ರಾಜವಂಶಸ್ತ ಕೆಳದಿಯ ಕೊನೆಯ ರಾಜ ಚೆನ್ನಬಸಪ್ಪ ನಾಯಕರ ಪುತ್ರ ನಗರ ರೈತ ದಂಗೆಯ ರೂವಾರಿ ಬೂದಿ ಬಸಪ್ಪನವರದ್ದೇ ಚರಿತ್ರೆ ಆಗಿದೆ.
  ಆದರೆ ಈವರೆಗೆ ಇದರ ಬಗ್ಗೆ ಯಾವುದೇ ಸಂಶೋದನೆ ಆಗಿಲ್ಲದಿರುವುದು ಕೆಳದಿ ಇತಿಹಾಸದ ಬಹುಪಾಲು ಸತ್ಯದ ಚರಿತ್ರೆ ಕತ್ತಲಲ್ಲೇ ಉಳಿದಿರುವುದಕ್ಕೆ ಸಾಕ್ಷಿ.
  ಈ ಅಧ್ಯಾಯದಲ್ಲಿ ಹೀಗಿದೆ.....
   ಮಡಿಕೆರೆ ಪತನಕ್ಕೆ ಆರು ತಿಂಗಳ ಮೊದಲು ಸ್ವಾಮಿ ಅಪರಂಪಾರ ಎಂಬ ರಹಸ್ಯಮಯ ವ್ಯಕ್ತಿ ಪ್ರತ್ಯಕ್ಷನಾಗುತ್ತಾನೆ.
  ಈತ ಚಿಕ್ಕ ವೀರ ರಾಜನ ಪದಚ್ಯುತಿಯ ನಂತರ ಪುನಃ ಕೊಡಗಿಗೆ ಬೇಟಿ ನೀಡಿದಾಗ ತಾನು ಚಿಕ್ಕವೀರ ರಾಜನ ದೊಡ್ಡಪ್ಪ ಅಪ್ಪಾಜಿ ಅರಸನ ಮಗ ವೀರಪ್ಪಾಜಿ ಒಡೆಯ ಹಾಲೇರಿ ಸಂಸ್ಥಾನದ ಉತ್ತರಾಧಿಕಾರಿ ಎಂಬುದಾಗಿ ಸುದ್ದಿ ಹಬ್ಬಿಸುತ್ತಾನೆ.
  ಈತನಿಗೆ ಕೊಡಗು ಮತ್ತು ಕೊಡಗಿನ ಅದೇ ತಾನೆ ಪ್ರತ್ಯೇಕಿಸಿದ ಕೆನರಾ ಜಿಲ್ಲೆಗೆ ಸೇರಿಸಲ್ಪಟ್ಟ ಕೆಳ ಕೊಡಗಿನ ಪ್ರದೇಶ ಇವೆರೆಡರಲ್ಲೂ ಅಪಾರ ಜನಬೆಂಬಲ ವ್ಯಕ್ತವಾಗುತ್ತದೆ.
  ಆದರೆ 1835ರಲ್ಲಿ ಕೊಡಗಿನ ಹೋರಾಟ ಆರಂಬಿಸುವ ಪ್ರಯತ್ನದಲ್ಲಿ ತೊಡಗಿದಾಗ ಇವರನ್ನು ಬಂದಿಸಿ ಸೆರೆಮನೆಗೆ ಕಳಿಸುತ್ತಾರೆ, 1869 ರಲ್ಲಿ ತಿರುಚನಾಪಳ್ಳಿ ಸೆರೆಮನೆಯಿಂದ ಬಿಡುಗಡೆ ಆಗಿ 1870 ರಲ್ಲಿ ಶ್ರೀರಂಗಪಟ್ಟಣದಲ್ಲಿ ಮೃತರಾಗುತ್ತಾರೆ.
  ಇಂಗ್ಲೀಷ್ ದಾಖಲೆ ಪ್ರಕಾರ ಇವರ ಹೆಸರು ಕತ್ರಪ್ಪ ಬಾಹು.
 ಡಾ. ಪುರುಶೋತ್ತಮ ಬಿಳಿಮಲೆಯವರ ಪ್ರಕಾರ ಶಿವಮೊಗ್ಗದ ನಗರ ರೈತ ಹೋರಾಟದ ನಾಯಕ ಬೂದಿ ಬಸಪ್ಪನೇ ಸ್ವಾಮಿ ಅಪರಂಪಾರ ಎಂದಿದ್ದಾರೆ.
  ನಗರ ರೈತ ಹೋರಾಟದ ಅಂತ್ಯದಲ್ಲಿ ಬೂದಿ ಬಸಪ್ಪ ಹೈದರಾಬಾದಿಗೆ ಪಲಾಯನ ಮಾಡಿದರು ಎಂಬ ಇತಿಹಾಸದ ಮುಂದಿನ ಭಾಗವೇ ಇದು ಆಗಿರಬಹುದು.
  ಬೂದಿ ಬಸಪ್ಪರ ರೈತ ಹೋರಾಟದ ಬಗ್ಗೆ ಈ ಲಿಂಕ್ ಕ್ಲಿಕ್ ಮಾಡಿ https://arunprasadhombuja.blogspot.com/search?q=%E0%B2%AC%E0%B3%82%E0%B2%A6%E0%B2%BF+%E0%B2%AC%E0%B2%B8%E0%B2%AA%E0%B3%8D%E0%B2%AA

  1833 ರಲ್ಲಿ ಸ್ವಾಮಿ ಅಪರಂಪಾರ ಮಡಿಕೆರೆಗೆ ಏಕೆ ಬಂದಿದ್ದ ರು ಎಂಬುದು ಈವರೆಗೆ ಸಂಶೋದನೆ ಆಗಿಲ್ಲ.
  ಅಮರ ಸುಳ್ಯ ಹೋರಾಟದ ಬಗ್ಗೆ ಅನೇಕ ಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿದೆ,ಇಂಗ್ಲೀಷ್ ನಲ್ಲೂ ಒಂದು ಪುಸ್ತಕ ಬ೦ದಿರುವುದು ಇತಿಹಾಸದ ಚರ್ಚೆಗೆ ಕಾರಣವಾಗಿದೆ.
  ನಮ್ಮ ಜಿಲ್ಲೆಯ ಕೆಳದಿ ಅರಸರ ಇತಿಹಾಸ ಸಂಶೋದನೆ ನಿಜಕ್ಕೂ ಆಗಿದೆಯಾ? ಕೇವಲ ಸರ್ಕಾರದ ಅನುದಾನದಲ್ಲಿ ಮಕ್ಕೀಕ ಮಕ್ಕಿ ಎಂಬಂತೆ ಕೆಳದಿ ರಾಜರ ಆಸ್ಥಾನ ಕವಿಗಳು ಬರೆದದ್ದೆ ಇತಿಹಾಸ ಎಂಬಂತೆ ಬಿಂಬಿಸಲ್ಪಟ್ಟಿದಿಯಾ? ಎಂಬ ಅನುಮಾನ ಇದೆ.
  ಈ ಪುಸ್ತಕದ ಗೌರವ ಪ್ರತಿ ಕಳಿಸಿದ ಕೆ.ಆರ್. ತೇಜಕುಮಾರರಿಗೆ ಕೃತಜ್ಞತೆಗಳು.
  #Let_facts_to_Speak.
ಪುಸ್ತಕದ ಬೇಕಾದವರು ಮತ್ತು ಐತಿಹಾಸಿಕ ಚರಿತ್ರೆಯ ಬಗ್ಗೆ ಪುಸ್ತಕ ಬರೆದ ವಿದ್ಯಾದರ ಕುಡೆಕಲ್ಲು ಅವರಿಗೆ ಅಭಿನಂದಿಸುವವರಿಗೆ ವಿದ್ಯಾದರ ಕುಡೆಕಲ್ಲು ಅವರ ಸಂಪಕ೯ ಸಂಖ್ಯೆ 916457 5765.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ