Skip to main content

Blog number 1099. ರವಿ ಬೆಳೆಗೆರೆ ಅಂದರೆ ನನಗೇಕೆ ಅಭಿಮಾನ

# ನನಗೇಕೆ ರವಿ ಬೆಳೆಗೆರೆ ಎಂದರೆ ಅಭಿಮಾನ ಕೇಳಿ#

#ರವಿ ಬೆಳೆಗೆರೆಗೆ ಆತಿಥ್ಯ ನೀಡಿದ ಸಂಭ್ರಮ#

# ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕರಾದ ರವಿ ಬೆಳೆಗೆರೆ ನನ್ನ ಅತಿಥಿ ಆಗಿದ್ದು ಈ ಸಂದಭ೯ದ ಮಾತುಕತೆ ಸಂದಶ೯ನ ಅಥವ ಸಂವಾದ ಇಲ್ಲಿದೆ#
    
   ದಿನಾ೦ಕ 16-ಪೆಬ್ರವರಿ -2018ರ ಶುಕ್ರವಾರ ಬೆಳಿಗ್ಗೆ 9ಕ್ಕೆ ಧ್ಯಾನ ಮುಗಿಸಿ ಸೈಲೆಂಟ್ ಮಾಡಿದ್ದ ಸೆಲ್ ಫೋನ್ ತೆಗೆದು ನೋಡಿದಾಗ ಅನೇಕರ ಮಿಸ್ ಕಾಲ್ ಮಧ್ಯ ಹಾಯ್ ಬೆಂಗಳೂರು ವರದಿಗಾರರು ಹಾಗೂ ಶಿವಮೊಗ್ಗದ ಜನ ಹೋರಾಟದ ದೈನಿಕದ ಶೃ೦ಗೇಶರ ಮಿಸ್ ಕಾಲ್ಯಾಕೆ ಅಂತ ಅವರಿಗೆ ಪೋನಾಯಿಸಿದಾಗ ಅವರು ರವಿ ಬೆಳೆಗೆರೆ ನಿಮ್ಮಲ್ಲಿ ಉಪಹಾರ ಮಾಡಿ ಸಾಗರಕ್ಕೆ ಹೋಗುತ್ತಾರೆ ಇನ್ನೊಂದು 20 ನಿಮಿಷದಲ್ಲಿ ನಿಮ್ಮಲ್ಲಿ ಇರುತ್ತೇವೆ ಅಂದಾಗ ನನಗೆ ತುಂಬಾ ಸಂತೋಷ ಗಡಿಬಿಡಿ ಆಯಿತು.
  ನಾನು ಜಿಲ್ಲಾ ಪಂಚಾಯತ ಸದಸ್ಯನಾಗಿದ್ದಾಗ 1997-98ರಲ್ಲಿ ಶಿವಮೊಗ್ಗದಲ್ಲಿ ಸಕಾ೯ರಿ ಆಸ್ಪತ್ರೆಗೆ ಖರೀದಿಸಿದ ಕೋಟ್ಯಾ0ತರ ಮೌಲ್ಯದ ಔಷದಗಳು ಕಳಪೆ ಜನರ ಆರೋಗ್ಯಕ್ಕೆ ಮಾರಕ ಅಂತ ಅಂದಿನ ಜಿಲ್ಲಾ ಸಜ೯ನ್ ರು ಮಾಹಿತಿ ಕಳಿಸಿದ್ದರು ಇದನ್ನ ಜಿಲ್ಲಾ ಪಂಚಾಯತ ಸಭೆಯಲ್ಲಿ ತನಿಖೆಗೆ ಒತ್ತಾಯಿಸಿದ ಮರುದಿನವೆ ಜಿಲ್ಲಾ ಪಂಚಾಯತನ ಜಾಷದಿ ಗೋದಾಮಿಗೆ ಬೆಂಕಿ ಹಾಕಿ ಕಳಪೆ ಔಷದಿಗಳನ್ನ ಸುಟ್ಟು ವಿದ್ಯುತ್ ಅವಗಡದಲ್ಲಿ ಔಷದ ಭಸ್ಮ ಅಂತ ಸುದ್ದಿ ಮಾಡಿದರು ಇದನ್ನ ಮುಂದಿನ ಸಭೆಯಲ್ಲಿ ಪ್ರಶ್ನೆ ಮಾಡಿದ್ದಕ್ಕಾಗಿ ನನ್ನನ್ನ ಎರೆಡೆರಡು ಸುಳ್ಳು ದೂರು ನೀಡಿ ಜೈಲಿಗೆ ಕಳಿಸಿದ್ದರು.
   ಆಗ ಪಟೇಲರು ಮುಖ್ಯಮಂತ್ರಿ, ಜಿಲ್ಲಾ ಮಂತ್ರಿ ಜಿ.ಬಸವಣ್ಯಪ್ಪ, ಸಂಸದರು ಡಿ.ಬಿ.ಚಂದ್ರಗೌಡರು, ಸಾಗರದ ಶಾಸಕರು ಕಾಗೋಡರು ಆದರೆ ಅವರೆಲ್ಲರೂ ನನ್ನ ವಿರೋದವಾಗಿದ್ದರು ಆಗ ನನ್ನ ಬೆಂಬಲಿಸಿದವರು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇಸ್ಮಯಿಲ್ ಖಾನ್, ವೈ.ಹೆಚ್.ನಾಗರಾಜ, ರಾಮೇಗೌಡರು, sp.ದಿನೇಶ್, ರವಿಕುಮಾರ್ ಇವರ ತಂಡ ಆಗ ರಾಜ್ಯ ಮಟ್ಟದ ಭ್ರಷ್ಟಾಚಾರದ ವಿರುದ್ಧ ಬೆಂಕಿ ಉಗುಳುವ ಪತ್ರಿಕೆ ಹಾಯ್ ಬೆಂಗಳೂರು ನನ್ನ ಪರವಾಗಿ ಸುದ್ದಿ ಮಾಡಿತ್ತು.
  ಇದನ್ನ ಸುದ್ದಿ ಮಾಡಿದ ಶೃ೦ಗೇಶರ ಪರಿಚಯ ಆಗ ನನಗೆ ಇರಲಿಲ್ಲ, ಸುದ್ದಿ ಮಾಡಿದ್ದಕ್ಕಾಗಿ ರವಿ ಬೆಳೆಗೆರೆಯವರಿಗೆ ಪೋನ್ ಮಾಡಿ ಕೃತಜ್ಞತೆ ಹೇಳಿದೆ ಅದಕ್ಕೆ ಅವರು ಪೋನ್ನಲ್ಲಿ Thanks ಬೇಡ ಬೆಂಗಳೂರಿಗೆ ಬಂದು ಹೇಳಿ ಅಂದರು ಆ ನಂತರ ಬೆಂಗಳೂರಿನ ಅವರ ಕಚೇರಿಗೆ ಹೋಗಿ ಬೇಟಿ ಆಗಿದ್ದೆ, ನಂತರ ಸತತ ಎರೆಡು ವಷ೯ ಹಾಯ್ ಬೆಂಗಳೂರು ವಾಷಿ೯ಕೊತ್ಸವಕ್ಕೆ ಹೋಗಿದ್ದೆ ನಂತರ ಅನೇಕ ಬಾರಿ ನನ್ನ ಚುನಾವಣೆ ಸ್ಪದೆ೯, ಜನಪರ ಹೋರಾಟಗಳ ಬಗ್ಗೆ ಪತ್ರಿಕೆ ಸುದ್ದಿ ಮಾಡಿ ಪ್ರಭಾವಿಗಳ ಕಣ್ಣು ಕೆಂಪಿಗೆ ಕಾರಣ ಆಗಿತ್ತು.
   ಅದಾಗಿ ಸುಮಾರು ವಷ೯ ನನ್ನ ಅವರ ಬೇಟಿ ಆಗಿರಲಿಲ್ಲ.
  ಉಪಹಾರದ ಸಂದಭ೯ದಲ್ಲಿ ರಾಜಕೀಯದಿಂದ ನಾನು ನಿವೃತ್ತಿ ಆಗಿದ್ದು ತಿಳಿದು ಅವರು ಹೇಳಿದ್ದು ಇನ್ನು ನಿಮ್ಮನ್ನ ನಂಬಬಹುದು ಅಂತ, ನಿಮಗೆ ಹೇಗೆ ಹೋಟೆಲ್ ಉದ್ಯಮ ಅಂತ ತಿಳಿದು ಕೊಂಡರು ಉಪಹಾರದ ನಂತರ ಮಧ್ಯಾಹ್ನದ ಬೋಜನಕ್ಕೆ ಬರಬೇಕಾಗಿ ವಿನಂತಿಸಿದಾಗ ಒಪ್ಪಿದರು.
  ಮದ್ಯಾನ್ನ 2 ಗಂಟೆಗೆ ಬಂದವರು ನಮ್ಮ ಕಾಟೇಜಿನಲ್ಲಿ ನಮ್ಮ ಅತಿಥಿಗಳಾದರು, ನಾವು ಅತಿಥೆಯರಾದೆವು ಇದರ ಮಧ್ಯೆ ಅವರು ತಮ್ಮ ಅಗಾದ ನೆನಪಿನ ಭಂಡಾರ ತೆರೆದರು ಆತ್ಮೀಯತೆಯಲ್ಲಿ ಸಲಿಗೆಯಿಂದ ನಮ್ಮ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು ನನ್ನ ಅವರ ಸಂವಾದ ಸಾರಾ೦ಶ ಹೀಗಿದೆ.
  * 30 ಲಕ್ಷದ ಸುಪಾರಿಗೆ 5 ಸಾವಿರ ಮುಂಗಡ ಪಡೆದ ಅಂದರೆ ಅಥ೯ ಆಗುತ್ತೆ ಈ ದೂರು ದಾಖಲು ಮಾಡಿದ ಹಿನ್ನೆಲೆ.
*  ಅವರು ಇಲ್ಲಿನ ಕೋಟಿ೯ಗೆ ಬಂದ ದಿನವೇ ಅವರ ನೆಚ್ಚಿನ ಗೆಳೆಯ ಬಳ್ಳಾರಿಯ ಸುರೇಶರ ತಾಯಿ ತೀರಿದ ಸುದ್ದಿ ಅವರಿಗೆ ದುಃಖ ಮತ್ತು ವಿಷಾದದ ಸುದ್ದಿ ಆಗಿತ್ತು, ಗೆಳೆಯನ ತಾಯಿ ನನಗೆ ರವಿ ಬೆಳೆಗೆರೆ ನನ್ನ ಮೊದಲ ಮಗ ಅನ್ನುತ್ತಿದ್ದರಂತೆ ಆಗ ಇವರು ತೂಕ ಹೆಚ್ಚಾಗಿ ದಪ್ಪ ಆಗಿದ್ದರು ಗೆಳೆಯನ ತಾಯಿ ಮಗ ನೀನು ತುಂಬಾ ಸೋತು ಹೋದಿಯಲ್ಲ ಅಂತ ತಾಯಿ ಮಮತೆ ತೋರುತ್ತಿದ್ದನ್ನ ನೆನಪಿಸಿ ಕಣ್ಣಿರಾದರು.
* ಡಯಾಬಿಟೀಸ್ ಬಗ್ಗೆ ಅವರ ಹಿರಿತನದ ಅನುಭವ, ಚಿಕಿತ್ಸೆ ಪರಿಣಾಮಗಳ ಬಗ್ಗೆ ಡಯಾಬಿಟೀಸ್ ಕ್ಲಬ್ ನ ಕಿರಿಯ ಸದಸ್ಯರಾದ ನಮಗೆ ಸೂಕ್ತ ಮಾಗ೯ದಶ೯ನ ನೀಡಿದರು.
* ಅಂತರ್ ಜಾತಿ ವಿವಾಹಗಳಿಗೆ ಹೆಚ್ಚು ಬೆಂಬಲ ನೀಡಬೇಕು ಅಂದರು, ಅಂತರ್ ಜಾತಿ ವಿವಾಹ ಆದ ನನ್ನ ಜೀವನದ ಬಗ್ಗೆ ತಿಳಿದು ಕೊಂಡರು.
* ನನ್ನ ಮಕ್ಕಳಿಗೆ ಸಕಾ೯ರಿ ಅಂಗನವಾಡಿಯಿಂದ ಪ್ರಾರಂಭ ಮಾಡಿದ ವಿದ್ಯಾಭ್ಯಾಸ ಸಕಾ೯ರದ ಕನ್ನಡ ಮಾಧ್ಯಮದಲ್ಲಿ ಪಿಯಸಿ ತನಕ ಓದಿಸಿದ್ದು ಕೇಳಿ ಸಂತೋಷಪಟ್ಟರು, ಸ್ವತಃ ತಾವು ಅದೇ ರೀತಿ ಓದಿ ಮುಂದೆ ಬಂದೆ ಅಂದರು.
* ನನ್ನ ಮಕ್ಕಳು ಅವರ ಅಭಿಮಾನಿಗಳು ಹಾಯ್ ಬೆಂಗಳೂರು ಓದುಗರು ಅವರಿಗೆಲ್ಲ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಜೀವನದ ಬಗ್ಗೆ ಅನೇಕ ಮಾಗ೯ದಶ೯ನ ನೀಡಿದರು.
* ಅವರ ಪ್ರಾಥ೯ನ ಶಾಲೆಯಲ್ಲಿ ಡೊನೆಷನ್ ಇಲ್ಲ, ಅಡ್ಮಿಷನ್ ಪಾರಂನಲ್ಲಿ ಜಾತಿ ಕಾಲಂ ಇಲ್ಲದ ಬಗ್ಗೆ ವಿವರಿಸಿದರು.
* ದಾಂಡೆಲೀಯ ಅವರು ಖರೀದಿಸಿರುವ ಕಾಡಿನ ಮಧ್ಯದ ಮನೆ ಬಗ್ಗೆ ಹೇಳುತ್ತಾ ಅವರ ಕುಟುಂಬದವರಿಗೆ ಇದರ ಬಗ್ಗೆ ನಿರಾಸಕ್ತಿ ವಿರೋದ ಇದ್ದರೂ ಇವರಿಗೆ ಅಲ್ಲಿದ್ದರೆ 10 ವಷ೯ ಆಯುಸ್ಸು ಹೆಚ್ಚಾಗುತ್ತೆ ಅಂತ ಸಂಭ್ರಮಪಟ್ಟರು.
* ನರಸೀಪುರದ ನಾಟಿ ವೈದ್ಯರ ಬಗ್ಗೆ ಅವರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿಚಾರಿಸಿದರು.
* ಜೋಗ ಅಭಿವೃದ್ಧಿ ಯೋಜನೆಯ ದುಬೈನ ಬಿ.ಆರ್.ಶೆಟ್ಟರ ಬಗ್ಗೆ ಮಾತಾಡಿದರು.
* ಹವ್ಯಕ ಬ್ರಾಹ್ಮಣರ ಬುದ್ಧಿವಂತಿಕೆ ಸಾಮಾಜಿಕ ದೈಯ೯ದ ಬಗ್ಗೆ ಅಭಿಮಾನದ ಮಾತಾಡಿ ಈಗ ಅವರ ಮಠ ಒಂದರ ಬಗ್ಗೆ ಅದರ ಅನಾಚಾರದ ಬಗ್ಗೆ ಅವರಲ್ಲಿನ ಮೌನದ ಬಗ್ಗೆ ಬೇಸರಿಸಿದರು.
* ಕಂಬಾರರ ಕೇ೦ದ್ರದ ಅಕಾಡೆಮಿ ಸ್ಥಾನದ ಆಯ್ಕೆ ಬಗ್ಗೆ ಸಂತೋಷ ವ್ಯಕ್ತಪಡಿಸಿದರು, ಅವರಿಗೆ ಕೆಲ ಅನಾಡಿಗಳು ಆಪ್ತರಾಗಿದ್ದು ಹೇಗೆ ಅಂದಿದ್ದರಂತೆ ಆದಕ್ಕೆ ಕಂಬಾರರು ಹೇಳಿದ್ದು ಹೆಂಗೋ ಬ೦ದು ಸೇರಿಕೊಂಡು ಬಿಡ್ತಾರೆ ಅಂತ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದು ತಿಳಿಸಿದರು.
* ಜಿಲ್ಲೆಯ ರಾಜಕಾರಣದ ಬಗ್ಗೆ ತೀಥ೯ಹಳ್ಳಿ ಕಿಮ್ಮನೆ ಬಗ್ಗೆ, ಆರಗ ಜ್ಞಾನೇ Oದ್ರರ ಬಗ್ಗೆ ಮಾತಾಡಿದರು.
* ಪ್ರತಿವಾರ ಪತ್ರಿಕೆ ಹೊರ ಬಂದಾಗಲು ಹೊಸ ಶತ್ರುಗಳು ಹುಟ್ಟು ಕೊಳ್ಳುವ ಬಗ್ಗೆ ಸ್ವಾರಸ್ಯವಾಗಿ ವಿವರಿಸಿದರು.


  ಮುಂದಿನ ಬಾರಿ ಈ ಭಾಗಕ್ಕೆ ಬಂದಾಗ ಪುನಃ ಬರುವುದಾಗಿ ಶುಭ ವಿದಾಯದ ಹಾರೈಕೆಯೋOದಿಗೆ ಶೃಂಗೇಶರೊಂದಿಗೆ ಬೆಂಗಳೂರಿಗೆ ತೆರಳಿದರು.
 

Popular posts from this blog

ರಾಮಚಂದ್ರಪುರದ ಮಠದ ಸ್ವಾಮಿಗಳ ಮೇಲಿನ ಆಪಾದನೆ ಸತ್ಯವೊ? ಮಿಥೈಯೋ?

   ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿನ ಶ್ರೀ ರಾಮ ಚಂದ್ರಾಪುರ ಮಠ ಹವ್ಯಕ ಬ್ರಾಹ್ಮಣರ ಮಠ ಇಲ್ಲಿನ ಹಾಲಿ ಸ್ವಾಮಿಗಳ ಮೇಲೆ ಅಪಾದನೆಗಳು ಅನೇಕ, ನ್ಯಾಯಾಲಯಗಳಲ್ಲಿ ಪರ ವಿರೋದದ ಅನೇಕ ವ್ಯಾಜ್ಯಗಳಿವೆ.    ರಾಜ್ಯ ಮಟ್ಟದ ಪತ್ರಿಕೆ, ಟೀವಿ ಮಾಧ್ಯಮಗಳಲ್ಲಿ ಈ ಮಠದ ಸ್ವಾಮಿಗಳ ಬಗ್ಗೆ ಅನೇಕ ವರದಿ ಪ್ರಕಟವಾಗಿದೆ, ಇಲ್ಲೂ ಪರ ವಿರೋದ ಗುಂಪುಗಾರಿಕೆ ಇದೆ.    ಭಕ್ತರಲ್ಲೂ ಪರ ವಿರೋದ ಜೊತೆ ಅನೇಕ ಶಂಕೆಗಳಿವೆ, ಇಷ್ಟೆಲ್ಲ ಅಪಾದನೆ ಸತ್ಯವೇ? ಸತ್ಯ ಆಗಿದ್ದಲ್ಲಿ ಪೀಠ ತ್ಯಾಗ ಮಾಡಲಿ ಎಂದು ಒಂದು ಗುಂಪು ಪ್ರತಿಪಾದಿಸಿದರೆ  ಇನ್ನೊಂದು ಇದೆಲ್ಲ ಸುಳ್ಳು ಅನ್ನುತ್ತೆ     ಸತ್ಯ ಶೋದ ಮಂಡಳಿ ಎಂಬ ಈ ಮಠದ ಭಕ್ತರು ಅನೇಕ ಸಾಕ್ಷಿ, ಪೋಟೋಗಳನ್ನ ಪೇಸ್ ಬುಕ್ ಗಳಲ್ಲಿ ಹಾಕಿದ್ದಾರೆ, ಒಂದು ಬ್ರಹ್ಮಚಾರಿ ಸ್ವಾಮಿಜಿ ಮಹಿಳೆಯರನ್ನ ಮೈ ಮುಟ್ಟುವುದು ಅಕ್ಷಮ್ಯ ಅಪರಾದ, ಇದರಿಂದ ಇವರು ಪೀಠದಲ್ಲಿ ಇರಲು ಅಹ೯ರಲ್ಲ ಎಂಬ ವಾದ ಮಂಡಿಸಿದ್ದಾರೆ.   ಅನೇಕ ಧಮ೯ ಗ್ರಂಥಗಳನ್ನ ಉಲ್ಲೇಖಿಸಿದ್ದಾರೆ, ಇವೆಲ್ಲ ವಾದ ವಿವಾದ ಹವ್ಯಕ ಬ್ರಾಹ್ಮಣರಲ್ಲೇ ಚಚೆ೯ ಆಗುತ್ತಿತ್ತು ಹಾಗಾಗಿ ಶೂದ್ರರಲ್ಲಿ ಸರಿಯಾದ ಮಾಹಿತಿ ಇರಲಿಲ್ಲ ಈಗ ಅನೇಕ ಶೂದ್ರರು ಈ ಬಗ್ಗೆ ಆಸಕ್ತಿ ವಹಿಸಿ ಏನು ಇಲ್ಲಿನ ವಿದ್ಯಾಮಾನ ಅನ್ನುವ ಕುತೂಹಲಿಗಳಿಗಾಗಿ ಇದನ್ನ ಬರೆಯಲಾಗಿದೆ, ವಿವಾದ ಸಾಕ್ಷಿಯಾಗಿ ಅವರುಗಳಲ್ಲಿ ಹರಿದಾಡುತ್ತಿರುವ ಪೋಟೋ ಇಲ್ಲಿದೆ.        ದೇವರಾದ ಶ್ರೀಕೃಷ್ಣನಿಗೂ ಅಪವಾದ ತಪ್ಪಿಲ್ಲ ಹಾಗಾ

#ಇನ್ನೂ ಎಂಥಹ ಸಾಕ್ಷಿ ಬೇಕು ಈತ ಕಾವಿ ತೊಟ್ಟ ಕಾಮಿ#

ತೂ... ಇನ್ನೂ ಎಂಥಹ ಸಾಕ್ಷಿ ಬೇಕು ಈತ ಸಂನ್ಯಾಸಿ ಅಲ್ಲ, ಕಾವಿ ವಸ್ತ್ರದಲ್ಲಿರುವ ಕಾಮುಕ, ಯಾವ ಜಾತಿಗೆ ಮಠಾದೀಶ ಆಗಿದ್ದಾರೋ ಆ ಜಾತಿಯ ಜನರ ಉದ್ದಾರ ಮಾಡಬೇಕಾಗಿದ್ದವರು ಆ ಜಾತೀಯ ಕನ್ಯರನ್ನು ರಾಜಾರೋಷ್ ಆಗಿ ತನ್ನ ಲೈoಗಿಕ ಸುಖಕ್ಕೆ ಬಳಸಿಕೊಳ್ಳುತ್ತಿರುವುದು ಅದಕ್ಕೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡುವ ಆ ಸಮಾಜದ ಪ್ರಮುಖರ ಸಮಿತಿಗಳು ಇದನ್ನ ವಿರೋದಿಸದ, ಪ್ರತಿಭಟಿಸದ ಆದರೆ ಯಾರು ಇದನ್ನ ಬಹಿರಂಗ ಪಡಿಸುತ್ತಾರೋ ಅವರನ್ನ ವಿರೋದಿಸುವ ಈ ಬುದ್ಧಿವಂತ ಸಮಾಜದ ಯುವ ಶಕ್ತಿ ಇದನ್ನೆಲ್ಲ ನೋಡಿದರೆ ಹಣ ಆಸ್ತಿಗಾಗಿ ಯಾವುದೊ ಮಾಫಿಯಾ ಇದೆಲ್ಲ ನಿವ೯ಹಿಸುತ್ತಿದಿಯಾ ಅಥವ ಮಠಾಧೀಶರ ಕುಟು೦ಬದ ಉಸ್ತುವಾರಿಯಲ್ಲಿಯೇ ನಡೆಯುತ್ತಿದೆಯೋ? ಅನುಮಾನ ಇದೆ.   ದೇವಾಲಯದಲ್ಲಿ, ಸನ್ಯಾಸಿ ಮಠದಲ್ಲಿ ರಾಜಾರೋಷ್ ಆಗಿ ಅನಾಚಾರ, ಅತ್ಯಾಚಾರ ಗಳಿಗೆ ಈ ಪರಿಯ ವ್ಯವಸ್ಥೆ ಮತ್ತು ಮಧ್ಯರಾತ್ರಿ ಮಠಾದೀಶನ ಹಾಸಿಗೆ ಸೇರುವ ಬಿಸಿ ಕಾಮದ ಹೆಣ್ಣುಗಳ ಸಾಲು ಅವರ ಜೊತೆ ರಾತ್ರಿ ಪೂರ ಬರಪೂರ ಪೋನ್ ಸಲ್ಲಾಪ ಬಾಕಿ ಇರುವ ರೇಪ್ ಕೇಸ್, ಇಂತಹ ನೀಚ ಗುಣದವರಿಗೆ ಹೆಚ್ಚಿನ ಅನ್ಯಾಯ ಅನೈತಿಕ ಕೆಲಸಕ್ಕೆ ಹೆಚ್ಚು ಆದಾಯ ನೀಡುವ ಗೋಕಣ೯ ದಾರೆ ಎರೆದುಕೊಟ್ಟ ಸಕಾ೯ರ ಹೀಗೆ ಯಾರು ಇಲ್ಲಿ ರಾಕ್ಷಸರೋ ಆ ರಾಕ್ಷಸನ ಅನಾಚಾರ ಪೋಷಿಸುವ ಎಲ್ಲರೂ ಅನಾಚಾರಿಗಳೇ ಆಗಿದ್ದಾರೆ.   ಇದಕ್ಕೆ ಕೊನೆ ಇಲ್ಲವೇ? ದೇವರು ನ್ಯಾಯವಿಳಂಬ ಮಾಡಿದಷ್ಟು ಈ ಬುದ್ಧಿವಂತ ಜನಾಂಗ ಎಂಬ ಹೆಸರಿಗೆ ಕಳಂಕವಲ್ಲವೆ? ಆದ

ಪ್ರಕಾಶ್ ಟ್ರಾವೆಲ್ಸ್ ಮಲೆನಾಡಿನಲ್ಲಿ ನೂರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಜನರ ಊಟದ ತಟ್ಟೆಗೆ ಆದಾರವಾಗಿದ್ದ ಸಂಸ್ಥೆ, ಈ ಸಂಸ್ಥೆ ಈ ಮಟ್ಟಕ್ಕೆ ಕಟ್ಟಿದ್ದ ಕನಸುಗಾರ ಪ್ರಕಾಶ್ ದುಡುಕಿನಿಂದ ದುರಂತಕ್ಕೆ ಹೋಗದಿರಲಿ.

#ಕೊರಾನಾ_ವೈರಸ್ನಿ೦ದ_ಸತ್ತವರು_ಲಕ್ಷಾಂತರ_ಜನ #ಕೊರಾನಾ_ಸೃಷ್ಟಿಸಿದ_ಆರ್ಥಿಕ_ಸಂಕಷ್ಟದಿಂದ_ಆಗುತ್ತಿರುವ_ಆತ್ಮಹತ್ಯೆಗಳು_ಲೆಕ್ಕವಿಲ್ಲದಷ್ಟು . #ಇಪ್ಪತ್ತೆರೆಡು_ವರ್ಷದಲ್ಲಿ_ಸಾಗರ_ಕೇಂದ್ರವಾಗಿ_ಸಾರಿಗೆ_ಕ್ಷೇತ್ರದಲ್ಲಿ_ಎತ್ತರೆತ್ತರಕ್ಕೆ_ಏರಿದ್ದ_ಪ್ರಕಾಶ್_ಟ್ರಾವೆಲ್ಸ್ #ನೂರಾರು_ಜನರಿಗೆ_ಉದ್ಯೋಗ_ನೀಡಿದ_ಉದ್ಯಮಿ #ಶುಕ್ರವಾರದಿಂದ_ನಾಪತ್ತೆ!?   2001 ರಿಂದ ಸಾಗರ ಮೂಲ ಕೇಂದ್ರವಾಗಿ ಪ್ರಾರಂಭವಾದ ಪ್ರಕಾಶ್ ಟ್ರಾವೆಲ್ಸ್ ಸಾರ್ವಜನಿಕ ಸಂಪರ್ಕ ಉದ್ಯಮದಲ್ಲಿ ಅಚ್ಚರಿಗೆ ಕಾರಣ ಆಗಿತ್ತು.   ಪ್ರಾರಂಭದಲ್ಲಿ ಪ್ರಕಾಶ್ ಮತ್ತು ಗಂಗರಾಜು ಸಹೋದರರು ಹಾಸನದಿಂದ ಉದ್ಯೋಗ ಹುಡುಕಿ ಬಂದ ಉತ್ಸಾಹಿ ಯುವಕ ಸಹೋದರರ ಜೊತೆ ಅವರ ಸೋದರ ಸಂಬಂದಿ ಅವರ ವಯೋಮಾನದವರೇ ಆದ ಅಣ್ಣಪ್ಪ ಕೂಡ ಸಾಥಿ ಅಗುತ್ತಾರೆ.  ಸಾಗರ -ಸೊರಬ-ಚಿಕ್ಕೆರೂರು ಮಾರ್ಗದ ಗುರುರೇಣುಕಾ ಬಸ್ ನಿಂದ ಪ್ರಾರಂಭ ಆದ ಇವರ ಜೀವನ ಪ್ರಯಾಣ 2020 - ಮಾರ್ಚ್ -24ರ ಸಂಜೆ ಪ್ರದಾನ ಮಂತ್ರಿಗಳು ದೇಶದಾದ್ಯಂತ ಪ್ರಾರಂಬಿಸಿದ ಲಾಕ್ ಡೌನ್ ವರೆಗೆ ವಿಜೃಂಬಿಸಿತು ಅರ್ದ ಶತಕದಷ್ಟು ಬಸ್ ಗಳು ಅದರಲ್ಲಿ ನೂರಾರು ಸಿಬ್ಬಂದಿ, ಪ್ರತಿ ಊರಲ್ಲಿ ಏಜೆಂಟರರು, ಪ್ರತಿನಿತ್ಯ ಸಾವಿರಾರು ಲೀಟರ್ ಡಿಸೇಲ್ ಖರೀದಿ ಇದರ ಮಧ್ಯೆ ಸಿದ್ದಾಪುರ - ಬೆಂಗಳೂರು, ಸೊರಬ-ಬೆಂಗಳೂರು, ಸಾಗರ - ಬೆಂಗಳೂರು ಹೈಟಿಕ್ ಸ್ಲೀಪರ್ ಬಸ್ ಗಳು, ಮದುವೆ - ಪ್ರವಾಸಕ್ಕಾಗಿ ಪ್ರತ್ಯೇಕ ಬಸ್ ಗಳು ಈ ರೀತಿ #ಪ್ರಕಾಶ್_ಟ್ರಾವೆಲ್ಸ

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ