Skip to main content

Blog number 1117. ಮೂರನೆ ರಾಜ್ಯ ಮಟ್ಟದ ಆ ದಿವಾಸಿಗಳ ಸಮ್ಮಿಲನ - ಸಾಂಸ್ಕೃತಿಕ ಸಂಭ್ರಮ 21-22 ಡಿಸೆಂಬರ್ 2019 ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ನಡೆಯಲಿದ್ದು ಆಹ್ವಾನ ಪತ್ರಿಕೆ ನೀಡಲು ಬಂದ ಗೆಳೆಯರು.

ಕನಾ೯ಟಕರಾಜ್ಯ ಮಟ್ಟದ ಮೂರನೆ ಆದಿವಾಸಿಗಳ ಸಮ್ಮೇಳನ 21-22 ಡಿಸೆಂಬರ್ 2019 ರಂದು
  ಶಿವಮೊಗ್ಗ  ಜಿಲ್ಲೆಯ ಹೊಸನಗರದಲ್ಲಿ ನಡೆಯಲಿದ್ದು ಇದರ ಆಹ್ವಾನ ನೀಡಲು ಬಂದವರು ರಾಜ್ಯ ಆದಿವಾಸಿ ಹಕ್ಕುಗಳ ಸಂಚಾಲಕರಾದ ಗುರುಶಾಂತ್ S.Y.
  ಮೊನ್ನೆ ನನ್ನ ಕ್ಲಾಸ್ ಮೇಟ್ ಪುರಪ್ಪೆಮನೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಮತ್ತು ಬಟ್ಟೆಮಲ್ಲಪ್ಪದಲ್ಲಿ ಸಾಹಸದಿಂದ ವ್ಯಾಸ ವಿದ್ಯಾಲಯ ಶಾಲೆ ನಡೆಸುತ್ತಿರುವ ಗ್ರಾಮ ಪಂಚಾಯತ್ ಸದಸ್ಯ ಮಂಜುನಾಥ ಸತ್ಯನಾರಾಯಣ್ ಬ್ಯಾಣದ್ ಕನಾ೯ಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕರಾದ ಬೆಂಗಳೂರಿನ SY ಗುರುಶಾ೦ತ್ ಜೊತೆ ಬಂದು ಕರಪತ್ರ ನೀಡಿದರು.
  ಈ ಸಮ್ಮೇಳನದ ಗೌರವಾಧ್ಯಕ್ಷರು ಚರಕ ಪ್ರಸನ್ನ,ಅಧ್ಯಕ್ಷರು ಕುಣುಬಿ ಸಮಾಜದ ಸಾಗರದ ವಕೀಲರಾದ ಕೊಂಗನಾಸಳ್ಳಿ ಮಂಜಪ್ಪ, ಇವರು ನನ್ನ ಶಿಷ್ಯ ಇವರ ನೇತೃತ್ವದಲ್ಲಿ 1995 ರಲ್ಲಿ ಆನಂದಪುರದಲ್ಲಿ ಮತ್ತು 1996ರಲ್ಲಿ ಭಟ್ಕಳ ಸಮೀಪದ ಕೊಗಾರಿನ ದೇವಗಾರು ಎಂಬ ಹಳ್ಳಿಯಲ್ಲಿ ಜಾನು ಎನ್ನುವವರ ಜಾಗದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಕುಣುಬಿ ಜನಾ೦ಗದ ಎರೆಡು ಸಮಾವೇಶ ಮಾಡಿದ್ದು, ನಾನು ಭಾಗವಹಿಸಿದ್ದು ನೆನಪಾಯಿತು.
  ಪಕ್ಕದ ಗೋವಾ ರಾಜ್ಯದಲ್ಲಿ ಇವರ ಜಾತಿ ST ನಮ್ಮ ರಾಜ್ಯದಲ್ಲಿ BCM - B, ಮೀಸಲಾತಿಗಾಗಿ ಅವರ ಹೋರಾಟ ನಡೆದೇ ಇದೆ.
 ಶಿವಮೊಗ್ಗ ಜಿಲ್ಲೆಯ ಕುಣುಬಿ, ಹಸಲರು, ಗೌಳಿ, ಸಿಳ್ಳೆಕ್ಯಾತರರನ್ನ ಆದಿವಾಸಿ ಸಮಾವೇಶದಲ್ಲಿ ಸೇರಿಸಿಕೊಂಡಿರುವುದು ಸ್ವಾಗತಾಹ೯ ಇವರಿಗೆ ಬೆಂಬಲಿಸಿ ಇವರ ಸಮ್ಮೇಳನ ಯಶಸ್ವಿಗೆ ಪ್ರಕಾಶ್ ಮತ್ತು ಮಂಜುನಾಥ ಸತ್ಯನಾರಾಯಣ್ ಬ್ಯಾಣದ್ ಬೆಂಬಲಿಸುತ್ತಿರುವುದು ಖುಷಿ ಆಯಿತು ಇವರ ರಾಜ್ಯ ಮಟ್ಟದ ಸಮಾವೇಶಕ್ಕೆ ತಯಾರಿ ಹೇಗೆ ಎಂದೆ? ಬಂದವರಿಗೆ ಹೊಸನಗರದ 2 ಕಲ್ಯಾಣ ಮಂಟಪದಲ್ಲಿ ವ್ಯವಸ್ಥೆ ಮಾಡಿದ್ದೇವೆ ನಮ್ಮ ಆಥಿ೯ಕ ಲಭ್ಯತೆ ನೋಡಿ ಅದಕ್ಕೆ ತಕ್ಕ ಹಾಗೆ ಸರಳ ಊಟ ವ್ಯವಸ್ಥೆ ಮಾಡಲಾಗುವುದು ಅಂತ ಗುರುಶಾಂತ್ ಹೇಳಿದರು.
   ರಾಜಕೀಯ ಸಮಾವೇಶಗಳು ಅದರ ಡಾಂ ಡೂo ವ್ಯವಸ್ಥೆ ಮುಂದೆ ಆದಿವಾಸಿಗಳ ಸಮಾವೇಶ ಬಡವಾಗಿ ಕಂಡರೂ ಇಲ್ಲಿ ವೈಚಾರಿಕ ಶ್ರೀಮಂತಿಕೆ ಇದೆ, ಈ ಸಮಾವೇಶ ಅವರ ಸಂಘಟನೆ ಮತ್ತು ಹಕ್ಕುಗಳಿಗಾಗಿ ಜನ ಜಾಗೃತಿ ಆಗಲಿದೆ.
  ಇಲ್ಲಿ ಪ್ರಕಾಶ್ ಬಗ್ಗೆ ಎರೆಡು ಮಾತು ಬರೆಯಲೆ ಬೇಕು, ಸಾಗರದಲ್ಲಿ 8ನೇ ತರಗತಿ ಓದುವಾಗ ಇವರ ಮನೆ ಸಾಗರ ಆಸ್ಪತ್ರೆ ಹಿಂಬಾಗದ ಕ್ವಾಟ೯ರ್ಸ್ ನಲ್ಲಿ ಇತ್ತು ಇವರ ತಾಯಿ ಲೀಲಾವತಿ ಸಿಸ್ಟರ್ ನನಗೆ ತಾಯಿಯ೦ತೆ ಒಂದು ವಷ೯ ಮದ್ಯಾಹನ ಊಟ ಬಡಿಸಿದ್ದಾರೆ, ನಾನು ಹುಟ್ಟಿದಾಗ ಪ್ರಕಾಶ್ ಅಜ್ಜಿ ನನಗೆ ಬಂಗಾರದ ಉoಗುರ ತೊಡಿಸಿದ್ದರಂತೆ, ಈಗ ಪ್ರಕಾಶ್ ಪುರಪ್ಪೆ ಮನೆ ಪಂಚಾಯಿತಿ ಮಾಜಿ ಸದಸ್ಯರು, ನೀನಾಸಂನಲ್ಲಿ ನುರಿತವರು ನಾಟಕ, ಟಿವಿ ದಾರಾವಾಹಿ ಮತ್ತು ಸಿನಿಮಾದಲ್ಲೂ ಅಭಿನಯಿಸುತ್ತಾರೆ, ಪರಿಸರ ಹೋರಾಟ ಮತ್ತು ಇಂತಹ ಜನಪರ ಕಾಯ೯ಕ್ರಮದಲ್ಲೂ ಮುಂದೆ ಇದ್ದಾರೆ.
  ಇನ್ನೊಬ್ಬರು ಮಂಜುನಾಥ ಸತ್ಯನಾರಾಯಣ್ ಬ್ಯಾಣದ್ ಪತ್ರಕತ೯ರಾಗಿ ಟಿವಿ ರಿಪೋಟ್೯ರ್ ಆಗಿ ಕಾರವಾರ ಜಿಲ್ಲೆಯಲ್ಲಿದ್ದವರು ಅದನ್ನ ಬಿಟ್ಟು ಹಳ್ಳಿಯಲ್ಲಿ ವ್ಯಾಸ ವಿದ್ಯಾಸಂಸ್ಥೆ ಕಟ್ಟಿ ಬೆಳೆಸುತ್ತಿದ್ದಾರೆ, ಇವರದ್ದು ಹತ್ತು ಹಲವಾರು ಆದಶ೯ದ ಕಾಯ೯ಕ್ರಮ ಇದರ ಮಧ್ಯೆ ದೆಹಲಿಯ ಆಮ್ ಆದ್ಮಿ ಪಾಟಿ೯ ಚಿಂತನೆಯಲ್ಲಿ ಯುವಕರ ಪಡೆ ಆಲಗೇರಿ ಮOಡ್ರಿ ಗ್ರಾಮ ಪoಚಾಯತನಲ್ಲಿ ಅಧಿಕಾರ ನಡೆಸುತ್ತಿದೆ ಬಹುಶಃ ರಾಜ್ಯದಲ್ಲಿ ಇದೊಂದೆ ಗ್ರಾಮ ಪಂಚಾಯತ್ ಆಮ್ ಆದ್ಮಿ ಪಾಟಿ೯ಯದು ಇರಬೇಕು ಅಲ್ಲಿ ಇವರೂ ಗ್ರಾಮ ಪಂಚಾಯತ ಸದಸ್ಯರು.
  ಇವತ್ತಿನ ದಿನದಲ್ಲಿ ಅಧಿಕಾರದ ರಾಜಕಾರಣ ಪಕ್ಷ ಅಂತ ಯುವಕರು ಆಕಡೆ ಆಕಷಿ೯ತರಾಗಿದ್ದರೆ ಈ ಇಬ್ಬರು ಬಿನ್ನವಾಗಿ ಆದಿವಾಸಿ ಸಮ್ಮೇಳನಕ್ಕೆ ಸಹಕರಿಸುತ್ತಿರಲಿಕ್ಕೆ ಇವರಿಬ್ಬರ ವೈಚಾರಿಕ ಹಿನ್ನೆಲೆ ಕೂಡ ಕಾರಣ.
  ಇವರ ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಗಲಿ ಎಂದು ಹಾರೈಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ