Skip to main content

Blog number 1141.ತ್ರೀಡಿ ಟೆಕ್ನಾಲಜಿ ಎಂಬ ಹೊಸ ಅವಿಷ್ಕಾರದಿಂದ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವರ ಮಿನಿಯೇಚರ್ ವಿಗ್ರಹಗಳ ತಯಾರಿಯ ಪ್ರಯತ್ನ. ಈ ಸ್ಕ್ಯಾನರ್ ಬೆಲೆ 50 ಲಕ್ಷ!!

#ಹೊಸ_ತಂತ್ರಜ್ಞಾನದ_3D_ಸ್ಕ್ಯಾನಿಂಗ್_ಪ್ರಿಂಟಿಂಗ್_ಮೌಲ್ಡಿಂಗ್.

#ನಮ್ಮೂರ_ವರಸಿದ್ದಿ_ವಿನಾಯಕ_ದೇವಸ್ಥಾನದಲ್ಲಿ

#ದೇವರ_ವಿಗ್ರಹದ_ಯಥಾವತ್ತಾದ_ನಾಲ್ಕು_ಇಂಚಿನ_ಗಾತ್ರದ_ವಿಗ್ರಹ_ತಯಾರಿಗಾಗಿ.

#ಈ_ತಂತ್ರಜ್ಞಾನದಿಂದ_ವೈದ್ಯಕೀಯ_ಕ್ಷೇತ್ರ_ಆಟೋಮೊಬೈಲ್_ಕ್ಷೇತ್ರದಲ್ಲಿ_ಹೊಸ_ಶಕೆ_ಪ್ರಾರಂಭ.

#ಭಾರತದಲ್ಲಿ_ಬೆರಳೆಣಿಕೆಯಷ್ಟು_ಸಂಸ್ಥೆಗಳಿದೆ_ಅದರಲ್ಲಿ_ಈ_ಆಕೃತಿ_3D_ನಂಬರ್_ಒನ್_ಸಂಸ್ಥೆ.

   ನಮಗೆ ಡಿಪ್ಲೋಮದ ಮೊದಲ ವರ್ಷ ಡ್ರಾಯಿಂಗ್ ಕ್ಲಾಸ್ ಇತ್ತು, ಅದರಲ್ಲಿ 3D ಡ್ರಾಯಿಂಗ್ ಮಾಡುವುದು ಕಷ್ಟಕರ ಅಂತ ಸಾಗರದ ಸಂಜಯ್ ಮೆಮೊರಿಯಲ್ ಪಾಲಿಟೆಕ್ನಿಕ್ ನ ಡ್ರಾಯಿಂಗ್ ಮಾಸ್ಟರ್ ಜೋಷಿ ಹೇಳುತ್ತಿದ್ದರು.
  ಆದರೆ ಅದು ನನಗೆ ಮಾತ್ರ ಸುಲಭವಾಗಿತ್ತು ಆಗಿನ ವಾಷಿ೯ಕ ಪರೀಕ್ಷೆಯಲ್ಲಿ 3D ಡ್ರಾಯಿಂಗ್ ಗೆ 45 ಅಂಕ ಇಟ್ಟಿದ್ದರಿಂದ ನಾನು ಅದನ್ನೆ ಬಿಡಿಸಲು ಪ್ರಾರಂಬಿಸಿದ್ದೆ.
   ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೆ ಇಡೀ ಕೊಠಡಿಯಲ್ಲಿ ನಾನೊಬ್ಬನೆ ಮಾತ್ರ ಇದನ್ನು ಬಿಡಿಸುತ್ತಿರುವುದು ನೋಡಿ ಅನುಮಾನದಿಂದ ಪ್ರಶ್ನಿಸಿದರು ಆಗ ನಾನು ಪ್ರಶ್ನೆ ಪತ್ರಿಕೆಯ ತೋರಿಸಿದೆ.
   ಆದರೆ ಅವರಿಗೆ ಅನುಮಾನ ಉಂಟಾಯಿತು ಈ ವಿದ್ಯಾರ್ಥಿ ತಪ್ಪಾಗಿ ಬರೆದು ಪೇಲ್ ಆದಾನೆಂಬ ಸದುದ್ದೇಶದಿಂದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ ತಕ್ಷಣ ನಮ್ಮ ಜೋಷಿ ಮಾಸ್ಟರ್ ನ್ನೇ ಕಳಿಸಿದ್ದಾರೆ ಅವರು.
   ತುಂಬಾ ಗಡಿಬಿಡಿ ಮತ್ತು ಸಿಟ್ಟಿನಿಂದ ಒಡೋಡಿ ಬಂದ ಡ್ರಾಯಿಂಗ್ ಮಾಸ್ಟರ್ ನನ್ನ ಡ್ರಾಯಿಂಗ್ ಬೋರ್ಡ್ ನೋಡಿದವರೇ ಸಮಾದಾನದಿಂದ ತೃಪ್ತಿಯಿಂದ ನನ್ನ ಭುಜ ತಟ್ಟಿದ್ದರು ಆ ಪ್ರಥಮ ವರ್ಷದ ಎಲ್ಲಾ ವಿಭಾಗದ 120 ವಿದ್ಯಾರ್ಥಿಗಳಲ್ಲಿ ನಾನೊಬ್ಬನೆ 3D ಡ್ರಾಯಿಂಗ್ ಮಾಡಿದವನು.
   ಮೊನ್ನೆ ಪ್ರತಿಬಾವಂತ ಬಂಗಾರದ ಪದಕ ಪಡೆದ ವಿದ್ಯಾರ್ಥಿ ರಾಘವೇಂದ್ರ ಮತ್ತು ಅವರ ಆಕೃತಿ 3D ಪ್ರೈ.ಲಿ. ಖರೀದಿಸಿರುವ ಹೊಸ ಸ್ಕ್ಯಾನಿಂಗ್ ಯಂತ್ರ ನಮ್ಮ ಊರಿನ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ನಂತರ ಮೂಡುಬಿದರೆಯ ಆಳ್ವಾಸ್ ನ ಎಕ್ಸಿಬ್ಯೂಷನ್ ನಲ್ಲಿ ಅವರ ಸ್ಟಾಲ್ ಗೆ ಹೋಗುವುದಾಗಿ ತಿಳಿಸಿದ್ದರು.
    ಆ ಸ್ಕ್ಯಾನಿಂಗ್ ಯಂತ್ರ ಕೆನಡಾ ದೇಶದಿಂದ ಆಮದು ಮಾಡಿಕೊಂಡಿದ್ದು ಅದರ ಬೆಲೆ ಕಸ್ಟಮ್ ಟ್ರಾನ್ಸ್ ಪೋರ್ಟ್ ಸೇರಿ 50 ಲಕ್ಷ ಅಂದಿದ್ದರು ಅವರ ಹತ್ತಿರ ಈಗಾಗಲೇ ಕೋಟಿ ರೂಪಾಯಿಗೂ ಅಧಿಕವಾದ ಪ್ರಿಂಟರ್, ಸ್ಕಾನರ್ ಗಳಿದ್ದರೂ ಈ ಅದುನಿಕ ಸ್ಕ್ಯಾನರ್ ತರಿಸಿದ್ದಾರೆ.
   ಹೇಗೂ ಪೂಜೆಗೆ ಸ್ಕ್ಯಾನರ್ ತರುವುದರಿಂದ ನಮ್ಮ ದೇವರ ವಿಗ್ರಹ ಸ್ಕ್ಯಾನ್ ಮಾಡಿಸಿ ನಮ್ಮೂರ ಶ್ರೀ ವರಸಿದ್ದಿ ವಿನಾಯಕ ದೇವರ ಮೂರ್ತಿಯ ಮಿನಿಯೇಚರ್ ಮಾಡಿಸಿ ಜಾತ್ರಾ ಕಾಯ೯ಕ್ರಮದಲ್ಲಿ ಭಕ್ತರಿಗೆ ನೀಡುವ ನನ್ನ ಯೋಜನೆಗೆ ಇವರ ಕಂಪನಿಯ ಉಳಿದ ನಿರ್ದೇಶಕರಾದ ನವೀನ್ ಕುಮಾರ್, ರೇವಣಸಿದ್ದಯ್ಯ, ಸುರೇಂದ್ರರೂ ಒಪ್ಪಿ ತಮ್ಮ ತಾಂತ್ರಿಕ ಸಿಬ್ಬಂದಿ ವರ್ಗದವರನ್ನು ಕರೆತಂದಿದ್ದರು.
   ದಿನಾಂಕ 21-ಡಿಸೆಂಬರ್ -2023ರ ಗುರುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ರವರೆಗೆ ಕಾಯ೯ನಿರ್ವಹಿಸಿದರು.
  ದೇವಾಲಯವತಿಯಿಂದ ಪೂಜೆ ಮಾಡಿಸಿ ಅವರ ಉದ್ಯಮಕ್ಕೆ ಶುಭ ಹಾರೈಸಲಾಯಿತು.
  ಈ ಉದ್ಯಮ ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಉತ್ಪಾದನೆಯಲ್ಲಿ, ಮೆಡಿಕಲ್ ಕ್ಷೇತ್ರದ ಅಂಗಾಂಶ ಕಸಿಗಳಲ್ಲಿ ಹೆಚ್ಚಿನ ಬಳಕೆ ಇದೆ, ವಸ್ತುವಿನ ಪ್ರತಿಕೃತಿ ಮೂಲ ಕೃತಿಯ ಯಥಾವತ್ತು ಮಾಡುವ ತಂತ್ರಜ್ಞಾನ ಇದು.
  ಮುಂದಿನ ವಾರ ಪ್ರತಿಕೃತಿಗಳು ನನ್ನ ಕೈ ಸೇರಲಿದೆ.
   ನನಗೆ ತುಂಬಾ ಆಶ್ಚರ್ಯ ಅಗಿದ್ದು 50 ಲಕ್ಷದ ಸ್ಕ್ಯಾನರ್ ಗಾತ್ರ ಅದು ನಿತ್ಯ ನಾವು ಬಳಸುವ ಮೊಬೈಲ್ ಗಿಂತ ಸ್ವಲ್ಪ ದೊಡ್ಡದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...