Skip to main content

Blog number 1141.ತ್ರೀಡಿ ಟೆಕ್ನಾಲಜಿ ಎಂಬ ಹೊಸ ಅವಿಷ್ಕಾರದಿಂದ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವರ ಮಿನಿಯೇಚರ್ ವಿಗ್ರಹಗಳ ತಯಾರಿಯ ಪ್ರಯತ್ನ. ಈ ಸ್ಕ್ಯಾನರ್ ಬೆಲೆ 50 ಲಕ್ಷ!!

#ಹೊಸ_ತಂತ್ರಜ್ಞಾನದ_3D_ಸ್ಕ್ಯಾನಿಂಗ್_ಪ್ರಿಂಟಿಂಗ್_ಮೌಲ್ಡಿಂಗ್.

#ನಮ್ಮೂರ_ವರಸಿದ್ದಿ_ವಿನಾಯಕ_ದೇವಸ್ಥಾನದಲ್ಲಿ

#ದೇವರ_ವಿಗ್ರಹದ_ಯಥಾವತ್ತಾದ_ನಾಲ್ಕು_ಇಂಚಿನ_ಗಾತ್ರದ_ವಿಗ್ರಹ_ತಯಾರಿಗಾಗಿ.

#ಈ_ತಂತ್ರಜ್ಞಾನದಿಂದ_ವೈದ್ಯಕೀಯ_ಕ್ಷೇತ್ರ_ಆಟೋಮೊಬೈಲ್_ಕ್ಷೇತ್ರದಲ್ಲಿ_ಹೊಸ_ಶಕೆ_ಪ್ರಾರಂಭ.

#ಭಾರತದಲ್ಲಿ_ಬೆರಳೆಣಿಕೆಯಷ್ಟು_ಸಂಸ್ಥೆಗಳಿದೆ_ಅದರಲ್ಲಿ_ಈ_ಆಕೃತಿ_3D_ನಂಬರ್_ಒನ್_ಸಂಸ್ಥೆ.

   ನಮಗೆ ಡಿಪ್ಲೋಮದ ಮೊದಲ ವರ್ಷ ಡ್ರಾಯಿಂಗ್ ಕ್ಲಾಸ್ ಇತ್ತು, ಅದರಲ್ಲಿ 3D ಡ್ರಾಯಿಂಗ್ ಮಾಡುವುದು ಕಷ್ಟಕರ ಅಂತ ಸಾಗರದ ಸಂಜಯ್ ಮೆಮೊರಿಯಲ್ ಪಾಲಿಟೆಕ್ನಿಕ್ ನ ಡ್ರಾಯಿಂಗ್ ಮಾಸ್ಟರ್ ಜೋಷಿ ಹೇಳುತ್ತಿದ್ದರು.
  ಆದರೆ ಅದು ನನಗೆ ಮಾತ್ರ ಸುಲಭವಾಗಿತ್ತು ಆಗಿನ ವಾಷಿ೯ಕ ಪರೀಕ್ಷೆಯಲ್ಲಿ 3D ಡ್ರಾಯಿಂಗ್ ಗೆ 45 ಅಂಕ ಇಟ್ಟಿದ್ದರಿಂದ ನಾನು ಅದನ್ನೆ ಬಿಡಿಸಲು ಪ್ರಾರಂಬಿಸಿದ್ದೆ.
   ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೆ ಇಡೀ ಕೊಠಡಿಯಲ್ಲಿ ನಾನೊಬ್ಬನೆ ಮಾತ್ರ ಇದನ್ನು ಬಿಡಿಸುತ್ತಿರುವುದು ನೋಡಿ ಅನುಮಾನದಿಂದ ಪ್ರಶ್ನಿಸಿದರು ಆಗ ನಾನು ಪ್ರಶ್ನೆ ಪತ್ರಿಕೆಯ ತೋರಿಸಿದೆ.
   ಆದರೆ ಅವರಿಗೆ ಅನುಮಾನ ಉಂಟಾಯಿತು ಈ ವಿದ್ಯಾರ್ಥಿ ತಪ್ಪಾಗಿ ಬರೆದು ಪೇಲ್ ಆದಾನೆಂಬ ಸದುದ್ದೇಶದಿಂದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ ತಕ್ಷಣ ನಮ್ಮ ಜೋಷಿ ಮಾಸ್ಟರ್ ನ್ನೇ ಕಳಿಸಿದ್ದಾರೆ ಅವರು.
   ತುಂಬಾ ಗಡಿಬಿಡಿ ಮತ್ತು ಸಿಟ್ಟಿನಿಂದ ಒಡೋಡಿ ಬಂದ ಡ್ರಾಯಿಂಗ್ ಮಾಸ್ಟರ್ ನನ್ನ ಡ್ರಾಯಿಂಗ್ ಬೋರ್ಡ್ ನೋಡಿದವರೇ ಸಮಾದಾನದಿಂದ ತೃಪ್ತಿಯಿಂದ ನನ್ನ ಭುಜ ತಟ್ಟಿದ್ದರು ಆ ಪ್ರಥಮ ವರ್ಷದ ಎಲ್ಲಾ ವಿಭಾಗದ 120 ವಿದ್ಯಾರ್ಥಿಗಳಲ್ಲಿ ನಾನೊಬ್ಬನೆ 3D ಡ್ರಾಯಿಂಗ್ ಮಾಡಿದವನು.
   ಮೊನ್ನೆ ಪ್ರತಿಬಾವಂತ ಬಂಗಾರದ ಪದಕ ಪಡೆದ ವಿದ್ಯಾರ್ಥಿ ರಾಘವೇಂದ್ರ ಮತ್ತು ಅವರ ಆಕೃತಿ 3D ಪ್ರೈ.ಲಿ. ಖರೀದಿಸಿರುವ ಹೊಸ ಸ್ಕ್ಯಾನಿಂಗ್ ಯಂತ್ರ ನಮ್ಮ ಊರಿನ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ನಂತರ ಮೂಡುಬಿದರೆಯ ಆಳ್ವಾಸ್ ನ ಎಕ್ಸಿಬ್ಯೂಷನ್ ನಲ್ಲಿ ಅವರ ಸ್ಟಾಲ್ ಗೆ ಹೋಗುವುದಾಗಿ ತಿಳಿಸಿದ್ದರು.
    ಆ ಸ್ಕ್ಯಾನಿಂಗ್ ಯಂತ್ರ ಕೆನಡಾ ದೇಶದಿಂದ ಆಮದು ಮಾಡಿಕೊಂಡಿದ್ದು ಅದರ ಬೆಲೆ ಕಸ್ಟಮ್ ಟ್ರಾನ್ಸ್ ಪೋರ್ಟ್ ಸೇರಿ 50 ಲಕ್ಷ ಅಂದಿದ್ದರು ಅವರ ಹತ್ತಿರ ಈಗಾಗಲೇ ಕೋಟಿ ರೂಪಾಯಿಗೂ ಅಧಿಕವಾದ ಪ್ರಿಂಟರ್, ಸ್ಕಾನರ್ ಗಳಿದ್ದರೂ ಈ ಅದುನಿಕ ಸ್ಕ್ಯಾನರ್ ತರಿಸಿದ್ದಾರೆ.
   ಹೇಗೂ ಪೂಜೆಗೆ ಸ್ಕ್ಯಾನರ್ ತರುವುದರಿಂದ ನಮ್ಮ ದೇವರ ವಿಗ್ರಹ ಸ್ಕ್ಯಾನ್ ಮಾಡಿಸಿ ನಮ್ಮೂರ ಶ್ರೀ ವರಸಿದ್ದಿ ವಿನಾಯಕ ದೇವರ ಮೂರ್ತಿಯ ಮಿನಿಯೇಚರ್ ಮಾಡಿಸಿ ಜಾತ್ರಾ ಕಾಯ೯ಕ್ರಮದಲ್ಲಿ ಭಕ್ತರಿಗೆ ನೀಡುವ ನನ್ನ ಯೋಜನೆಗೆ ಇವರ ಕಂಪನಿಯ ಉಳಿದ ನಿರ್ದೇಶಕರಾದ ನವೀನ್ ಕುಮಾರ್, ರೇವಣಸಿದ್ದಯ್ಯ, ಸುರೇಂದ್ರರೂ ಒಪ್ಪಿ ತಮ್ಮ ತಾಂತ್ರಿಕ ಸಿಬ್ಬಂದಿ ವರ್ಗದವರನ್ನು ಕರೆತಂದಿದ್ದರು.
   ದಿನಾಂಕ 21-ಡಿಸೆಂಬರ್ -2023ರ ಗುರುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2ರವರೆಗೆ ಕಾಯ೯ನಿರ್ವಹಿಸಿದರು.
  ದೇವಾಲಯವತಿಯಿಂದ ಪೂಜೆ ಮಾಡಿಸಿ ಅವರ ಉದ್ಯಮಕ್ಕೆ ಶುಭ ಹಾರೈಸಲಾಯಿತು.
  ಈ ಉದ್ಯಮ ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಉತ್ಪಾದನೆಯಲ್ಲಿ, ಮೆಡಿಕಲ್ ಕ್ಷೇತ್ರದ ಅಂಗಾಂಶ ಕಸಿಗಳಲ್ಲಿ ಹೆಚ್ಚಿನ ಬಳಕೆ ಇದೆ, ವಸ್ತುವಿನ ಪ್ರತಿಕೃತಿ ಮೂಲ ಕೃತಿಯ ಯಥಾವತ್ತು ಮಾಡುವ ತಂತ್ರಜ್ಞಾನ ಇದು.
  ಮುಂದಿನ ವಾರ ಪ್ರತಿಕೃತಿಗಳು ನನ್ನ ಕೈ ಸೇರಲಿದೆ.
   ನನಗೆ ತುಂಬಾ ಆಶ್ಚರ್ಯ ಅಗಿದ್ದು 50 ಲಕ್ಷದ ಸ್ಕ್ಯಾನರ್ ಗಾತ್ರ ಅದು ನಿತ್ಯ ನಾವು ಬಳಸುವ ಮೊಬೈಲ್ ಗಿಂತ ಸ್ವಲ್ಪ ದೊಡ್ಡದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ