Skip to main content

Blog number 1150. ಶಿವಮೊಗ್ಗ ಜಿಲ್ಲೆಯ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ 2023ರಲ್ಲಿ ಆನಂದಪುರಂನ ಐತಿಹಾಸಿಕ ಸ್ಮಾರಕ ಚಂಪಕ ಸರಸ್ಸುವಿದೆ.ಪ್ರತಿ ತಿಂಗಳ ಪೋಟೋದಲ್ಲಿ ಶಿವಮೊಗ್ಗ ಜಿಲ್ಲೆಯ ಇತಿಹಾಸವಿದೆ ಸು೦ದರವಾಗಿ ಮುದ್ರಿಸಿದ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ ಜಿಲ್ಲೆಯ ಇತಿಹಾಸ - ಪ್ರೇಕ್ಷಣೀಯ ಸ್ಥಳದ ಮಹತ್ತದ ದಾಖಲೆಯ ಕ್ಯಾಲೆಂಡರ್ ಆಗಿದೆ. ಕ್ಯಾಲೆಂಡರ್ ಗಳಿಗೆ ಪ್ರಶಸ್ತಿ ನೀಡುವುದಾದರೆ ಪ್ರಥಮ ಪ್ರಶಸ್ತಿ ಈ ಕ್ಯಾಲೆಂಡರ್ ಗೆ ನೀಡಲೇ ಬೇಕು

#ಹೊಸವರ್ಷದ_ಡಿಸಿಸಿ_ಬ್ಯಾಂಕ್_ಕ್ಯಾಲೆಂಡರ್

#ಸುಂದರವಾದ_ಶಿವಮೊಗ್ಗ_ಜಿಲ್ಲೆಯ_ಚಿತ್ರಗಳೊಂದಿಗೆ

#ಇದರಲ್ಲಿ_ಆನಂದಪುರಂನ_ಚಂಪಕ_ಸರಸ್ಸು_ಚಿತ್ರವೂ_ಇದೆ.

#ಅಭಿನಂದನೆಗಳು_ಡಿಸಿಸಿ_ಬ್ಯಾಂಕ್_ಅಧ್ಯಕ್ಷರಾದ_ಚನ್ನವೀರಪ್ಪನವರಿಗೆ

#ಈ_ಕ್ಯಾಲೆಂಡರ್_ನಿಜಕ್ಕೂ_ಅದ್ಬುತವಾಗಿದೆ.
  
  ಬಹಳಷ್ಟು ರಾಜಕಾರಣಿಗಳು ಅಧಿಕಾರ ಸಿಕ್ಕಾಗ ತಮ್ಮ ಊರು ಮತ್ತು ಹಳ್ಳಿಯನ್ನು ದೂರದ ದೇಶವಾದ ಸಿಂಗಾಪುರದಂತೆ ಮಾಡುವುದಾಗಿ ಹೇಳಿ ಬಿಡುತ್ತಾರೆ.
  ಆದರೆ ತಮ್ಮ ಊರಿನ ಚರಿತ್ರೆ ಸಿಂಗಾಪುರಕ್ಕಿಂತ ಶ್ರೀಮಂತವಾಗಿತ್ತು ಎಂಬ ಜ್ಞಾನ ಇಲ್ಲದವರ ಮುಂದೆ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಬಿನ್ನವಾಗಿ ಕಾಣುತ್ತಾರೆ ಅದಕ್ಕೆ ಉದಾಹರಣೆ ಮೊನ್ನೆ ಅವರು ಬಿಡುಗಡೆ ಮಾಡಿದ 2023ರ ಕ್ಯಾಲೆಂಡರ್ ಅವರ ಜಿಲ್ಲೆಯ ಇತಿಹಾಸದ ಕಾಳಜಿ ತೋರಿಸಿದೆ.
  2023ರ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ ನ ಜನವರಿ ಮಾಸ ಶಿವಮೊಗ್ಗದ ಡಿಸಿಸಿ ಬ್ಯಾಂಕ್ ಕೇಂದ್ರ ಕಛೇರಿ ಚಿತ್ರವಿದೆ.
  ಪೆಬ್ರವರಿ ಮಾಸ ಶಿಕಾರಿಪುರದ ಅಂಜನಾಪುರದ ರೈತರ ನಿರಾವರಿ ಆಣೆಕಟ್ಟಿನ ಚಿತ್ರವಿದೆ.
   ಮಾರ್ಚ ಮಾಸ ಸಕ್ರೆಬೈಲು ಆನೆ ಬಿಡಾರದ ಸುಂದರ ಚಿತ್ರ ಹಾಕಿದ್ದಾರೆ.
  ಏಪ್ರಿಲ್ ಮಾಸಕ್ಕೆ ಶಿವಮೊಗ್ಗದ ಕೆಳದಿ ಅರಸರ ಶಿವಪ್ಪ ನಾಯಕರ ಬೇಸಿಗೆ ಅರಮನೆ ಚಿತ್ರವಿದೆ.
   ಮೇ ಮಾಸದ್ದು ಸಾವೆ ಹಕ್ಕಲುವಿನ ವರಾಹಿ ಆಣೆಕಟ್ಟಿನ ಚಿತ್ರವಿದೆ.
   ಜೂನ್ ಮಾಸದ್ದು ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕರು ಮತ್ತು ಬೆಸ್ತರ ರಾಣಿ ಚಂಪಕಾಳ ದುರಂತ ಪ್ರೇಮ ಕಥೆಯ ಸ್ಮಾರಕ ತಾಜ್ ಮಹಲಿಗಿಂತ ಮೊದಲೆ ನಿರ್ಮಾಣವಾದ ಪ್ರೇಮ ಸ್ಮಾರಕದ ಚಿತ್ರ ಹಾಕಿದ್ದಾರೆ.
   ಜುಲೈ ಮಾಸದ ಕ್ಯಾಲೆಂಡರ್ ನಲ್ಲಿ ಕೆಳದಿ ಅರಸರ ಸುಂದರವಾದ ಕವಲೆದುರ್ಗದ ಕೋಟೆ.
    ಆಗಸ್ಟ್ ಮಾಸದಲ್ಲಿ ಜೈನರ ಪವಿತ್ರ ಕ್ಷೇತ್ರ ಕುಂದಾದ್ರಿ ಜಿನ ಮಂದಿರ.
    ಸೆಪ್ಟೆಂಬರ್ ಮಾಸದಲ್ಲಿ ಕೆಳದಿ ಅರಸರ ರಾಜಧಾನಿ ಆಗಿದ್ದ ಬಿದನೂರು ನಗರದ ಕೋಟೆಯ ಸುಂದರವಾದ ಚಿತ್ರವಿದೆ.
   ಅಕ್ಟೋಬರ್ ಮಾಸದಲ್ಲಿ ಜಿಲ್ಲೆಯ ಶರಾವತಿ ನದಿಯ ಹಿನ್ನೀರ ಪಟವಿದೆ.  ನವೆಂಬರ್ ಮಾಸದಲ್ಲಿ ಜಿಲ್ಲೆಯ ತುಂಗಾ ತೀರದ ಮಂಡಗದ್ದೆ ಪಕ್ಷಿಧಾಮದ ಚಿತ್ರವಿದೆ.
  ಡಿಸೆಂಬರ್ 2023ರ ಮಾಸದ ಚಿತ್ರ ಆಗುಂಬೆಯ ಸೂರ್ಯಾಸ್ತದ ಚಿತ್ರದೊಂದಿಗೆ 2023 ಮುಕ್ತಾಯವಾಗುವ ಈ ಡಿಸಿಸಿ ಬ್ಯಾಂಕ್ ಕ್ಯಾಲೆಂಡರ್ ವಿಶೇಷ ಮತ್ತು ವಿಶಿಷ್ಟವಾದ  ಸುಂದರ ಕಾವ್ಯದಂತಿದೆ.
   ಇಂತಹ ನೂತನ ಪ್ರಯೋಗದ ಕ್ಯಾಲೆಂಡರ್ ಬಿಡುಗಡೆ ಮಾಡಿರುವ ಡಿಸಿಸಿ ಬ್ಯಾಂಕ್ ಮತ್ತು ಅದರ ಅಧ್ಯಕ್ಷರಾದ ಚೆನ್ನವೀರಪ್ಪರಿಗೆ ಅಭಿನಂದನೆ ಸಲ್ಲಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...