Skip to main content

Blog number 1112. ಆನಂದಪುರಂನ ಸಾಹಿತ್ಯ ಹಬ್ಬ ಕಾಯ೯ಕ್ರಮ ಉದ್ಘಾಟಿಸಲಿದ್ದಾರೆ ಖ್ಯಾತ ಸಾಹಿತಿ ಅಂಕಣಕಾರ ಅರವಿಂದ ಚೊಕ್ಕಾಡಿಯವರು

#ಚಿಕ್ಕ_ಚೊಕ್ಕ_ಕಾರ್ಯಕ್ರಮ_ಉದ್ಘಾಟನೆ_ಅರವಿಂದ_ಚೊಕ್ಕಾಡಿಯವರಿಂದ

#ನಾಳೆ_ದಿನಾಂಕ_11_ಡಿಸೆಂಬರ್_2022ರ_ಭಾನುವಾರ_ಬೆಳಿಗ್ಗೆ_11ರಿಂದ.

#ಆನಂದಪುರಂನ_ನಮ್ಮ_ಕೃಷ್ಣಸರಸ_ಕಲ್ಯಾಣಮಂದಿರದಲ್ಲಿ

#ಸಾಗರ_ತಾಲ್ಲೂಕ್_ಮತ್ತು_ಆನಂದಪುರಂ_ಹೋಬಳಿ_ಸಾಹಿತ್ಯ_ಪರಿಷತ್ತು_ಆಯೋಜಿಸಿದೆ.

#ಸಾಹಿತ್ಯ_ಹಬ್ಬದಲ್ಲಿ_ನನ್ನೆರೆಡು_ಪುಸ್ತಕ_ಅವಲೋಕನ

#ಒಂದೇ_ಕುಟುಂಬದ_ತಂದೆ_ಮತ್ತು_ಆರು_ಮಕ್ಕಳು_ಸಾಹಿತ್ಯ_ರಚಿಸಿ_ವಿಶ್ವದಾಖಲೆ_ಮಾಡಿರುವ_ಅಂಕೋಲ_ಮೂಲದ
#ಹಬ್ಬು_ಕುಟುಂಬದವರ_ಜೊತೆ_ಸಾಹಿತ್ಯ_ಸಂವಾದ_ಪುಸ್ತಕ_ಪ್ರದರ್ಶನ.

#ಹಬ್ಬು_ಕುಟುಂಬ_ಪುಸ್ತಕ_ಪ್ರದರ್ಶನ_ಉದ್ಘಾಟನೆ_ಶಿವಮೊಗ್ಗ_ಜಿಲ್ಲಾ_ಸಾಹಿತ್ಯ_ಪರಿಷತ್ತು_ಅಧ್ಯಕ್ಷ_ಮಂಜುನಾಥರಿಂದ 

#ಅಧ್ಯಕ್ಷತೆ_ಆನಂದಪುರಂ_ಹೋಬಳಿ_ಸಾಹಿತ್ಯ_ಪರಿಷತ್_ಅಧ್ಯಕ್ಷ_ಬಿ_ಡಿ_ರವಿಕುಮಾರ್

#ಆಶಯ_ನುಡಿ_ಸಾಗರ_ತಾಲೂಕ್_ಸಾಹಿತ್ಯ_ಪರಿಷತ್_ಅಧ್ಯಕ್ಷ_ವಿ_ಟಿ_ಸ್ವಾಮಿಯವರಿಂದ

#ವೇದಿಕೆಯಲ್ಲಿ_ಡಿ_ಪಿ_ಸತೀಶ್_TV_18_ಸಂಸ್ಥೆ_ದಕ್ಷಿಣಭಾರತದ_ಉಸ್ತುವಾರಿ
#ತಾಳಗುಪ್ಪ_ಮೈಸೂರು_ರೈಲಿಗೆ_ಕುವೆಂಪು_ಹೆಸರು_ಸೂಚಿಸಿದವರು

#ಶಿವಮೊಗ್ಗ_ಜನಹೋರಾಟ_ದಿನಪತ್ರಿಕೆ_ಸಂಪಾದಕರಾದ_ಶೃಂಗೇಶ್

#ಜೊತೆಯಲ್ಲಿ_ನಾನು_ನೀವು

  ಖ್ಯಾತ ಸಾಹಿತಿ ಉದಯ ಕುಮಾರ್ ಹಬ್ಬು ಅವರ ಗೆಳೆತನ ಪೇಸ್ ಬುಕ್ ನಲ್ಲಿ ತೀರ ಇತ್ತೀಚಿನ 2019 ರಿಂದ ಅವರ ಈವರೆಗೆ ಪ್ರಕಟವಾದ ಪುಸ್ತಕಗಳು 50ಕ್ಕೂ ಹೆಚ್ಚು, ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆ ಲೇಖನಗಳು ಸಾವಿರಕ್ಕೂ ಹೆಚ್ಚು.
   ಇವರ ಪೋಸ್ಟ್ ನಲ್ಲಿ ಇವರ ತಂದೆ ಬರೆದ ಪುಸ್ತಕ ಇವರ ಸಹೋದರರ ಪ್ರಕಟವಾದ ಪುಸ್ತಕಗಳ ಉಲ್ಲೇಖ ನೋಡಿ ನನಗೇ ಆಶ್ಚರ್ಯ ಒಂದೇ ಕುಟುಂಬದಲ್ಲಿ ತಂದೆ ಮತ್ತು ಅವರ ಆರು ಮಕ್ಕಳೂ ಸಾಹಿತಿಗಳಾಗುವುದು ಮತ್ತು ಅವರ ಪುಸ್ತಗಳು ಪ್ರಕಟವಾಗುವುದು! ಈ ರೀತಿಯ ಇನ್ನೊಂದು ಉದಾಹರಿಸಬಹುದಾದ ಕುಟುಂಬ ಕನ್ನಡದಲ್ಲಿ ಇದಿಯಾ ಅಂತ ನಾನು ನನ್ನ ಗೆಳೆಯರು ಹುಡುಕಾಡಿದಾಗ ಯಾವುದೂ ಇಲ್ಲವೆಂತಲೇ ಗೊತ್ತಾಯಿತು.
    ದೇಶದ ಇತರ ಬಾಷೆಯಲ್ಲಿ ಅಷ್ಟೇಕೆ ವಿಶ್ವದಲ್ಲೇ ಇಂತಹ ಅಪರೂಪದ ಕುಟುಂಬ ಎಂದು ಗೊತ್ತಾದಾಗ ನಾನು ಲೇಖನ ಬರೆದದ್ದು ಹಬ್ಬು ಸಹೋದರರಿಗೆ ಆಶ್ವಯ೯ದ ವಿಷಯ, ಇತ್ತೀಚಿಗೆ ಇಂಡಿಯನ್ ಬುಕ್ ಆಪ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಇವರ ದಾಖಲೆ ಮಾಡಿದೆ ಮತ್ತು ಗಿನ್ನೆಸ್ ದಾಖಲೆಯಲ್ಲೂ ಸೇರಲಿದೆ. (ಅವರಾರು ಪ್ರಚಾರ ಸನ್ಮಾನ ಬಯಸದವರು) ನಂತರ ಎಲ್ಲಾ ಸಹೋದರರು ಈ ಕಾರಣದಿಂದ ನನ್ನ ಬೇಟೆಗೆ ಬರುವ ಕಾರ್ಯಕ್ರಮ ಹಾಕಿದರು ಇದನ್ನು ಆನಂದಪುರಂನ ಉತ್ಸಾಹಿ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರರಿಗೆ ತಿಳಿಸಿದ್ದೆ.
   ಅವರು ಮತ್ತು ಸಾಗರ ತಾಲ್ಲೂಕ್ ಅಧ್ಯಕ್ಷರಾದ ವಿ.ಟಿ. ಸ್ವಾಮಿ ಬಂದು ಮುಖತಃ ಬೇಟಿ ಮಾಡಿ ಸಾಹಿತ್ಯ ಹಬ್ಬ ಎಂಬ ಕಾರ್ಯಕ್ರಮ ವ್ಯವಸ್ಥೆ ಮಾಡಿದರು ಇದರಲ್ಲಿ ನನ್ನ ಎರೆಡು ಪುಸ್ತಕಗಳ ಅವಲೋಕನವೂ ಸೇರಿಸಿದರು ಬೇರೆ ಕಡೆ ಆದರೆ ನಾನು ಬರುವುದಿಲ್ಲ ಅಂತ ನಮ್ಮ ಕಲ್ಯಾಣ ಮಂಟಪದಲ್ಲಿ ಸ್ಥಳಾವಕಾಶ ಪಡೆದರು, ವಿ.ಟಿ. ಸ್ಟಾಮಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಮುರುಘಾ ಮಠದ ಸರ್ಕಾರಿ ಮಾಧ್ಯಮಿಕ ಶಾಲೆ ಶಿಕ್ಷಕರಾಗಿದ್ದರು ಆಗಲೇ ನಾನು ಆ ಶಾಲಾ ಆವರಣದಲ್ಲಿ ಕೆ.ವಿ.ಸುಬ್ಬಣ್ಣ ರಂಗಮಂದಿರ ನಿರ್ಮಿಸಿ ಉದ್ಘಾಟಿಸಿದ್ದು ನಂತರ ಅವರು ಇಲ್ಲಿ ಸೇವೆ ಸಲ್ಲಿಸುವಾಗಲೇ ಆಚಾಪುರದ ಶಾಸನ - ತೀರ್ಥಗಳ ಬಗ್ಗೆ ಸಂಶೋದನಾ ಪುಸ್ತಕ ಒಂದನ್ನು ಪ್ರಕಟಿಸಿದ್ದರು.
   ನನ್ನ ಕಾದಂಬರಿಯ ಮೊದಲ ಓದುಗರಾಗಿ ವಿಮಷೆ೯ ಮಾಡಿದ್ದ ಮತ್ತು ನನ್ನ ಕಥಾ ಸಂಕಲನಕ್ಕೆ ಮುನ್ನುಡಿ ಬರೆದಿದ್ದ ಖ್ಯಾತ ಲೇಖಕ, ಅಂಕಣಕಾರ ಅರವಿಂದ ಚೊಕ್ಕಾಡಿ ಅವರನ್ನು ಕೂಡ ನಾನು ಬೇಟಿ ಆಗಿಲ್ಲ, ಗಾಂಧೀವಾದಿ ಆದ ಇವರ ತರ್ಕ ನನಗೆ ಇಷ್ಟ ಕೆಲವೊಮ್ಮೆ ಆ ಚರ್ಚೆಯಲ್ಲಿ ನನ್ನನ್ನು ಸೇರಿಸುತ್ತಾರೆ,ಅವರ ಅಕಾಡೆಮಿ ಪ್ರಶಸ್ತಿ ಪಡೆದ ಪುಸ್ತಕ ಕಾಣದ ತೀರ ಈಗಲೂ ನನಗೆ ಕಾಡುತ್ತಿದೆ, ಅವರ ಅಭಿಮಾನಿ ಆದ ನಾನು ಅವರಿಗೆ ಈ ಕಾರ್ಯಕ್ರಮ ಉದ್ಘಾಟಿಸಿ ನನ್ನ ಎರೆಡು ಪುಸ್ತಕ ನೀವೇ ಅವಲೋಕನ ಮಾಡಿ ಎಂದು ವಿನಂತಿಸಿದಾಗ ಒಪ್ಪಿದರು.
   ಸಾಗರ ತಾಲ್ಲೂಕಿನ ಹಾಲಿ ವಿಶ್ವ ಮನ್ನಣೆಯ ಪಡೆದಿರುವ ಯುವ ಪತ್ರಕರ್ತ ಡಿ.ಪಿ. ಸತೀಶ್ ಗೆ ಆಹ್ವಾನಿಸಿದಾಗ ಅವರು ದೆಹಲಿಯಿಂದ ಬಿಡುವು ಮಾಡಿ ಬರಲಿದ್ದಾರೆ ಇವರ ವಿನಂತಿಯಿಂದಲೇ ತಾಳುಗುಪ್ಪ ಮೈಸೂರು ರೈಲು ಜಿಲ್ಲೆಯ ಹೆಮ್ಮೆಯ ಕವಿ ಕುವೆಂಪು ನಾಮಕರಣವಾದ್ದರಿಂದ ವೈಯಕ್ತಿಕವಾಗಿ ಅಭಿನಂದಿಸಲು ನನಗೆ ಅವಕಾಶ ಆಗಿದೆ.
   ನನ್ನ ಎರೆಡೂ ಪುಸ್ತಕ ಅವರ ಮುದ್ರಣ ಸಂಸ್ಥೆಯಲ್ಲಿ ಅಚ್ಚುಹಾಕಿಸಿಕೊಟ್ಟ,ಕಾದಂಬರಿ ಮತ್ತು ಕಥಾ ಸಂಕಲನಕ್ಕೆ ಮುನ್ನುಡಿ ಬರೆದು ಪುಸ್ತಕ ಬಿಡುಗಡೆ ಮಾಡಿದ್ದ ಶಿವಮೊಗ್ಗ ಜನಹೋರಾಟ ದಿನಪತ್ರಿಕೆ ಶೃಂಗೇಶ್ ಕೂಡ ಬರಲು ಒಪ್ಪಿದ್ದಾರೆ.
   ರಾಜ್ಯದ ಹಿರಿಯ ಪತ್ರಕರ್ತ ಆರ್.ಟಿ.ವಿಠಲಮೂರ್ತಿ ಅವರನ್ನು ಆಹ್ವಾನಿಸಿದ್ದೆ ಆದರೆ ಚುನಾವಣಾ ಪೂರ್ವ ಸಮೀಕ್ಷಾ ವರದಿಗಾಗಿ ಪ್ರವಾಸದಲ್ಲಿರುವುದರಿಂದ ಅವರು ಬರಲಾಗುತ್ತಿಲ್ಲ.
  ಇದಿಷ್ಟು ನಾಳೆಯ ಕಾರ್ಯಕ್ರಮದ ನೀಲನಕ್ಷೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ