Skip to main content

Blog number 1125. ಸಾಗರದ ಶಾಸಕರು ಹಾಲಿ MSIL ಅಧ್ಯಕ್ಷರೂ ಆದ ಹರತಾಳು ಹಾಲಪ್ಪನವರು ನನ್ನ ಕಾದಂಬರಿ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕಾ ಪುಸ್ತಕ ಪುಸ್ತಕದ ಅಂಗಡಿಯಲ್ಲಿ ಖರೀದಿಸಿ ಓದಿ ಪ್ರಶಂಸಿಸಿ ಪತ್ರ ಬರೆದಿದ್ದಾರೆ.

#ಪತ್ರಿಕೆ_ಪುಸ್ತಕ_ಓದುವ_ಶಾಸಕರು_ಸಂಸದರು_ಎಷ್ಟು_ಜನ?

#ಸ್ವತಃ_ಪೇಸ್_ಬುಕ್_ವಾಟ್ಸಪ್_ಬಳಸುವವರೆಷ್ಟು ?

#ಪುಸ್ತಕ_ಖರೀದಿಸಿ_ಓದಿ_ಪ್ರಶಂಸಿಸಿ_ಪತ್ರ_ಬರೆದ_ಶಾಸಕರು_ಹರತಾಳು_ಹಾಲಪ್ಪನವರು.

#ಅವರದೇ_ವಿದಾನಸಭಾ_ಕ್ಷೇತ್ರದ_ಸ್ಮಾರಕ_ಚಂಪಕ_ಸರಸ್ಸುವಿಗೆ_400ನೇ_ವಷಾ೯ಚಾರಣೆ.

#ಕೆಳದಿ_ಅರಸರ_ಮೂಲ_ದೀವರಾಗಿದ್ದಾರೆ_ಈ_ಬಗ್ಗೆ_ಸಂಶೋದನೆಗಳಾಗಲಿ.

   ಇವತ್ತು ಅಂಚೆಯಲ್ಲಿ ನಮ್ಮ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಮಂತ್ರಿಗಳೂ ಹಾಲಿ ಅಧ್ಯಕ್ಷರು MSIL ಆದ ಹರತಾಳು ಹಾಲಪ್ಪರ ಪತ್ರ ಓದಿ ಸಂತೋಷ ಆಯಿತು.
  ಇತಿಹಾಸದ ಆಸಕ್ತಿ, ಪತ್ರಿಕೆಗಳ ನಿರಂತರ ಓದು, ಸ್ವತಃ ಪೇಸ್ ಬುಕ್, ವಾಟ್ಸ್ ಪ್ ನಿರ್ವಹಿಸುವ ಹಾಲಪ್ಪನವರು ಮಾತಾಡಲು ನಿಂತರೆ ಬಂಗಾರಪ್ಪರಂತೆ ವಾಗ್ಜರಿ ಹರಿಸುತ್ತಾರೆ.
  ಇವತ್ತಿನ ರಾಜಕಾರಣಿಗಳಲ್ಲಿ ಇವೆಲ್ಲ ಅಪರೂಪ,ಅವರ ಪೇಸ್ ಬುಕ್ ನಿರ್ವಹಣೆ ಮಾಸಿಕ 15 ಸಾವಿರ ನೀಡಿ ಹೊರಗುತ್ತಿಗೆ ನೀಡಿರುತ್ತಾರೆ, ನಿತ್ಯ ಪತ್ರಿಕೆ ಓದುವುದೂ ಇಲ್ಲ, ಪುಸ್ತಕಗಳಂತೂ ಮುಟ್ಟುವುದೂ ಇಲ್ಲ, ಪತ್ರ/ಅರ್ಜಿ ಬರೆದರೆ ಉತ್ತರಿಸುವುದೂ ಇಲ್ಲ ಆದರೆ ಹರತಾಳು ಹಾಲಪ್ಪನವರು ಬಿನ್ನರಾಗಿ ಕಾಣುತ್ತಾರೆ.
  ಇವರು ನನ್ನ ಕಾದಂಬರಿ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ" #ಬೆಸ್ತರ_ರಾಣಿ_ಚಂಪಕಾ ಪುಸ್ತಕ ಸಾಗರದಲ್ಲಿ ಪುಸ್ತಕದ ಅಂಗಡಿಯಲ್ಲಿ ಖರೀದಿಸಿ ಓದಿ ಬರೆದ ಪತ್ರ ಇಲ್ಲಿ ಲಗತ್ತಿಸಿದ್ದೇನೆ ಓದಿ.
  ಕೆಳದಿ ಸಾಮ್ರಾಜ್ಯದಲ್ಲಿ ದೀರ್ಘ ಅವದಿ ಅಂದರೆ 43 ವರ್ಷ ಆಡಳಿತ ಮಾಡಿ ಸಾಮ್ರಾಜ್ಯ ವಿಸ್ತರಿಸಿದ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸದಾಶಿವ ಸಾಗರ ಎಂಬ ಪಟ್ಟಣವೇ ಈಗಿನ ಸಾಗರ ಪಟ್ಟಣ.
  ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಅಜ್ಜ ಸದಾಶಿವ ನಾಯಕರ ಹೆಸರಲ್ಲಿ ಈ ಪಟ್ಟಣ ನಿರ್ಮಿಸಿದ್ದು ಈಗಿನ ಗಣಪತಿ ಕೆರೆಯೆ ಸದಾಶಿವ ಸಾಗರ.
  ಮಾಂಸಹಾರಿ ಶೂದ್ರ ಹೆಣ್ಣು ಮಗಳ ರಂಗೋಲಿಯಿಂದ ಆಕರ್ಷಿತರಾಗಿ ಮದುವೆ ಆಗಿದ್ದು ಪಟ್ಟದ ರಾಣಿ ಭದ್ರಮ್ಮಾಜಿ ಅವರಿಗೆ ಆಗಿ ಬರದೆ ಅನ್ನಾಹಾರ ತ್ಯಜಿಸಿ ಮೃತರಾಗುವುದು ಇದರಿಂದ ನೊಂದ ಬೆಸ್ತರ ರಾಣಿ ಚಂಪಕಾ ವಜ್ರದ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಚಂಪಕಾಳ ಸ್ಮರಣಾರ್ಥ ನಿರ್ಮಿಸಿದ ಪ್ರೇಮ ಸೌಧವೆ ಆನಂದಪುರಂನ ಚಂಪಕ ಸರಸ್ಸು ಈ ಸ್ಮಾರಕಕ್ಕೆ 2025ರಲ್ಲಿ 400 ನೇ ವರ್ಷಾಚಾರಣೆ ಇದೆ.
  ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸಾಗರದ ಈಗಿನ ಶಾಸಕರು ಹಾಲಪ್ಪನವರು, ಇವರ ಕಾಳಜಿಯಿಂದಲೇ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಗಣಪತಿ ಕೆರೆ ಅಭಿವೃದ್ಧಿ ಆಗುತ್ತಿದೆ,ಮುಂದಿನ ದಿನಗಳಲ್ಲಿ ಚಂಪಕ ಸರಸ್ಸುವಿನ ಅಭಿವೃದ್ಧಿ ಕೂಡ ಇವರೇ ಮಾಡಬಹುದಾಗಿದೆ.
  ಈ  ಪ್ರೇಮದ ಸ್ಮಾರಕ ತಾಜ್ ಮಹಲಿಗಿಂತ 28 ವಷ೯ ಮೊದಲೇ ನಿರ್ಮಾಣವಾಗಿದೆ ಅನ್ನುವುದೇ ಒಂದು ವಿಶೇಷ.
  ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯೇ ರಾಜ ವೆಂಕಟಪ್ಪ ನಾಯಕರನ್ನು ಜಾತಿ ಕಾರಣದಿಂದ ಇತಿಹಾಸದಲ್ಲಿ ಮುಸುಕು ಮಾಡಲು ಕಾರಣವಾಗಿದೆ, ರಾಜಾಶ್ರಯದ ಕವಿಗಳೂ ಇದನ್ನು ದಾಖಲಿಸಲು ಸಾಧ್ಯವೂ ಇಲ್ಲ.
  ಕೆಳದಿ ಅರಸರ ಮೂಲ ಅವರು ಈ ಭಾಗದ ಬಹುಸಂಖ್ಯಾತ ದೀವರ ಜಾತಿಯವರು ಈ ಬಗ್ಗೆ 10 ನೇ ಶತಮಾನದ ಶಿಲಾ ಶಾಸನಗಳಲ್ಲಿ ಕಾಣಬಹುದು ಆದರೆ ಇದನ್ನು ಹೇಳಲು ಬರೆಯಲು ಅಗೋಚರ ಭಯ ಈ ಜನಾಂಗದಲ್ಲಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಬರಹಗಳು ಬರಬಹುದು.
  ಮಾನ್ಯ ಶಾಸಕರಲ್ಲಿ ವಿನಂತಿ ಕೆಳದಿ ರಾಜ ವೆಂಕಟಪ್ಪ ನಾಯಕರ ಹೆಸರು ಚಿರಸ್ಥಾಯಿ ಮಾಡುವಂತೆ ಸಾಗರ ಪಟ್ಟಣದಲ್ಲಿನ ರಸ್ತೆ, ರಂಗಮಂದಿರಗಳಿಗೆ ಅವರ ಹೆಸರು ಇಡಬೇಕು.
 ಆನಂದಪುರಂನಲ್ಲಿ ಕನ್ನಡ ಸಂಘದ ಎದುರು ಪದವಿ ಪೂರ್ವ ಕಾಲೇಜ್ ಮತ್ತು ಕೆ.ಎಂ.ಎಸ್ ರೈಸ್ ಮಿಲ್ ಮಧ್ಯದ ಹಾಳು ಬಿದ್ದಿರುವ ನಕಾಶೆ ಕಂಡ ರಸ್ತೆ ರಾಜರು ನಿರ್ಮಿಸಿದ ಚಂಪಕ ಸರಸ್ಸು ರಸ್ತೆ ಇದನ್ನು ಸರಿಪಡಿಸಿ ಚಂಪಕ ಸರಸ್ಸುವಿಗೆ ವೀಕ್ಷಣೆಗೆ ಪ್ರವಾಸಿಗಳಿಗೆ ಅನುವು ಮಾಡಿ ಕೊಡಲು ವಿನಂತಿಸುತ್ತೇನೆ.
ವಂದನೆಗಳೊಂದಿಗೆ
ಕೆ.ಅರುಣ್ ಪ್ರಸಾದ್.
17-ಡಿಸೆಂಬರ್ -2022.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ