Skip to main content

Blog number 1136. ಶಿವಮೊಗ್ಗ ಮುನೀರ್ ನೆನಪಿನ ಸರಣಿ - 2, ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪರ ಮತ್ತು ಇಂದಿರಾ ಅವರ ಪ್ರೇಮ ವಿವಾಹ.

https://youtu.be/fqRHd-7LdU8
(Youtube ಕ್ಲಿಕ್ ಮಾಡಿ ನೋಡಲು ವಿನಂತಿ ವಿಡಿಯೋ ದೀರ್ಘವಾಗಿರುವುದರಿಂದ FB ಯಲ್ಲಿ ಪೋಸ್ಟ್ ಆಗುವುದಿಲ್ಲ)

#ಶಿವಮೊಗ್ಗ_ಮುನೀರ್_ನೆನಪಿನ_ಸರಣಿ_2.
(ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪರ ಪ್ರೇಮ ವಿವಾಹ ಪ್ರಸಂಗ)

ಶಿವಮೊಗ್ಗ ಮುನೀರ್ ಶಿವಮೊಗ್ಗದ ಡಿವಿಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕರು.

  ಇವರ ನೆನಪಿನ ಕಣಜದಲ್ಲಿ ಏನುಂಟು ಏನಿಲ್ಲ? ಕನ್ನಡದ ಎಲ್ಲಾ ಸಾಹಿತ್ಯ ದಿಗ್ಗಜರ ಸ್ವರ್ಶವಿದೆ, ಹೊರಾಟಗಳ ಹೊಳಪಿದೆ ಅದನ್ನೆಲ್ಲ ಕೆದಕಿದಾಗ ತಮ್ಮ ನೆನಪಿನ ಸುರಳಿಯನ್ನು ಬಿಚ್ಚಿ ಆ ಕ್ಷಣ ಆ ದಿನದ ಆ ಘಟನೆ ಸ್ವಲ್ಪವೂ ಮರೆಯದೆ ಹೇಳುವ ಅಗಾದ ನೆನಪಿನ ಶಕ್ತಿ ಇವರದ್ದು.
 ಖ್ಯಾತ ಸಾಹಿತಿ ಉದ್ಯಮಿ ಇಬ್ರಾಹಿಂ ಸಾಹೇಬರ ಸದಾ ನೆರಳು ಈ ಶಿವಮೊಗ್ಗದ ಮುನೀರ್ ಇವರಿಗೆ 72 ವರ್ಷ ನಿನ್ನೆ (ದಿನಾಂಕ 21-ಡಿಸೆಂಬರ್ -2022) ನನ್ನ ಅತಿಥಿ ಮದ್ಯಾಹ್ನ ನನ್ನ ಮನೆಯಲ್ಲಿ ಊಟ ಮಾಡುತ್ತಾ ಸಂಜೆ ತನಕ ಅವರ ಅಪೂರ್ವ ನೆನಪಿನ ಭಂಡಾರ ತೆರೆದಿದ್ದೆ.
  ಇದನ್ನು ಶಿವಮೊಗ್ಗ ಮುನೀರ್ ನೆನಪಿನ ಸರಣಿಯ ಕಂತುಗಳಾಗಿ ಪ್ರಕಟವಾಗಲಿದೆ, ರಾಜ್ಯದ ಸಾಹಿತ್ಯ ಆಸಕ್ತರು, ಸುಮಾಜವಾದಿ, ರೈತ ಮತ್ತು ದಲಿತ ಸಂಘಟನೆಗಳವರಿಗೆ ಇದು ಪ್ರಮುಖ ವಿಚಾರಗಳ ದಾಖಲೆ ಆಗಲಿದ

#ಸಮಾಜವಾದಿ_ಯುವ_ಜನ_ಸಭಾದ_ತೇಜಸ್ವಿ_ಲಂಕೇಶ್_ಕಡಿದಾಳುಶಾಮಣ್ಣ_ಪ್ರೋ_ನಂಜುಂಡಸ್ವಾಮಿ_ಚಂಪಾ_ಬಿ_ಕೃಷ್ಣಪ್ಪರಒಡನಾಡಿಗಳು.

ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಮತ್ತು ಇಂದಿರಾರ ಪ್ರೇಮ ವಿವಾಹಕ್ಕೆ ಸಹಿಕರಿಸಿದವರು.

ಬಿ.ಕೃಷ್ಣಪ್ಪರ ಅರ್ಧಾಂಗಿ ಇಂದಿರಾ ಖ್ಯಾತ ಸಾಹಿತಿ ಗೋಪಾಲಕೃಷ್ಣ ಅಡಿಗರ ಅಣ್ಣನ ಮೊಮ್ಮಗಳು

ಬಿ.ಕೃಷ್ಣಪ್ಪ ಸಾಗರದ ಲಾಲ್ ಬಹದ್ದೂರು ಕಾಲೇಜಿನಲ್ಲಿ ಪಾರ್ಟ್ ಟೈಂ ಉಪನ್ಯಾಸಕರಾಗಿದ್ದರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಕ ಬಿ.ಕೃಷ್ಣಪ್ಪ ಮತ್ತು ಇಂದಿರಾರ ಮದುವೆ ಮುಡಿಗೆರೆಯಲ್ಲಿ.

ವಿವಾಹಕ್ಕೆ ಸಾಕ್ಷಿ ಪ್ರೊ.ನಂಜುಂಡಸ್ವಾಮಿ, ಲಂಕೇಶ್, ತೇಜಸ್ವಿ, ಚಂಪಾ ಮತ್ತು ಸಮಾಜವಾದಿ ಯುವ ಜನ ಸಭಾ 

ಮುಡಿಗೆರೆಯ ತೇಜಸ್ವಿ ಅವರ ಮನೆಯೇ ನೂತನ ದಂಪತಿಗಳಿಗೆ ತವರು ಮನೆ ಆಗಿತ್ತು.
  ಈಗ ಶ್ರೀಮತಿ ಇಂದಿರಾ ಬಿ.ಕೃಷ್ಣಪ್ಪ ನಿವೃತ್ತರಾಗಿ ಬೆಂಗಳೂರಿನ ಗಾಂಧಿ ಭವನದ ಗೌರವ ಕಾರ್ಯದರ್ಶಿ ಆಗಿದ್ದಾರೆ.

Comments