Skip to main content

Blog number 1100. ಆನಂದಪುರಂ ಇತಿಹಾಸ ಸಂಖ್ಯೆ 88. ಸಾಗರದ ನಯನ ಹ್ಯಾಂಡಿಕ್ರಾಫ್ಟ್ ಷಣ್ಮುಖಪ್ಪ ಬದುಕಿದ್ದರೆ ವಿಶ್ವ ವಿಖ್ಯಾತ ಕಲಾವಿದರಾಗುವ೦ತ ಕಲಾನೈಪುಣ್ಯತೆ, ದೂರದೃಷ್ಟಿಯ ಕಲ್ಪನೆಗಳು ಅವರಲ್ಲಿದ್ದವು ಆನಂದಪುರಂನಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳ ಮತ್ತು ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ದೆಯಲ್ಲಿ ಇವರು ರಚಿಸಿದ ಪಾರಿತೋಷಕ ಮತ್ತು ನೆನಪಿನ ಕಾಣಿಕೆಗೆ ಬೆಲೆ ಕಟ್ಟಲು ಸಾಧ್ಯವಾಗದ ಕಲಾಕೃತಿಗಳಾಗಿ ಉಳಿದಿದೆ.

#ಆನಂದಪುರಂ_ಇತಿಹಾಸ_ಸಂಖ್ಯೆ_88

#ಸಾಗರದ_ಕಲಾವಿದ_ಷಣ್ಮುಖಪ್ಪ_ಬದುಕಿದ್ದರೆ_ವಿಶ್ವವಿಖ್ಯಾತರಾಗುತ್ತಿದ್ದರು.

#ಸಾಗರದ_ನಯನ_ಹ್ಯಾಂಡಿಕ್ರಾಫ್ಟ್_ಷಣ್ಮುಖಪ್ಪ

#ಶ್ರೀಗಂದದ_ಕೆತ್ತನೆಯಲ್ಲಿ_ಪ್ರಖ್ಯಾತರು.

#ಆನಂದಪುರಂನಲ್ಲಿ_ನಡೆದ_ಜಿಲ್ಲಾಮಟ್ಟದ_ಯುವಜನ_ಮೇಳ_ರಾಜ್ಯಮಟ್ಟದ_ಹಾಸ್ಯನಾಟಕ_ಸ್ಪರ್ದೆಗೆ

#ಇವರದ್ದೇ_ನೆನಪಿನಕಾಣಿಕೆ_ಪ್ರಶಸ್ತಿ_ಪತ್ರ.

#ಇವರು_ರಚಿಸಿದ_ಕಲಾಕೃತಿ_ರವಿಬೆಳೆಗೆರೆ_ಸ್ಪರ್ಣಾಪ್ರಭಾಕರ್_ಮುಂತಾದವರಿಂದ_ಶಹಬ್ಬಾಸ್_ಪಡೆದಿದ್ದರು.

#ಸಾಗರದ_ವಿಶ್ವಗಣಪತಿ_ಸಂಗ್ರಹಕಾರ_ಗೋವರ್ದನ_ಅಂಕೋಲೆಕರರ_ಶಿಷ್ಯ.

   ಒಬ್ಬ ಕಲಾವಿದನಿಗೆ ಕಲೆಯ ಕಲಾ ನೈಪುಣ್ಯದ ಜೊತೆ ವಿಶಾಲ ದೃಷ್ಟಿ ಇದ್ದರೆ ಕಲಾಕೃತಿಗಳೂ ಕೂಡ ವಿಶೇಷವೇ ಆಗುತ್ತದೆ ಅನ್ನುವುದಕ್ಕೆ ಸಾಗರದ ಷಣ್ಮುಖಪ್ಪ ಸಾಕ್ಷಿ.
  ಇವರು 1990 ರಿಂದ 1996 ರ ವರೆಗೆ ರಚಿಸಿದ ಕಲಾಕೃತಿಗಳು ತುಂಬಾ ವಿಶೇಷವಾಗಿದೆ ಮತ್ತು ಈಗಲೂ ಇಂತಹ ನೆನಪಿನ ಕಾಣಿಕೆಗಳು ವಿಬಿನ್ನವಾಗಿದೆ.
   ಇವರು ಸಾಗರದ ಪ್ರಸಿದ್ಧ ವಿಶ್ವ ಗಣಪತಿ ಪ್ರದರ್ಶನ ಖ್ಯಾತಿಯ ಕಲಾವಿದ ಗೋವರ್ಧನ ಅಂಕೋಲೆಕರ್ ಶಿಷ್ಯ ಈ ಷಣ್ಮುಖಪ್ಪ .
   ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನನಗೆ 30 ವಷ೯ದ ಪ್ರಾಯ ಉತ್ಸಾಹ ಜಾಸ್ತಿ ಆಗ ಜಿಲ್ಲಾ ಮಟ್ಟದ ಯುವಜನ ಮೇಳ ಆನಂದಪುರಂನಲ್ಲೇ ನಡೆಸಬೇಕೆಂಬ ಆನಂದಪುರಂನ ಕನ್ನಡ ಸಂಘದ ಅಧ್ಯಕ್ಷ ಹಾ.ಮೋ. ಬಾಷಾರ ಒತ್ತಾಯದಿಂದ ಆನಂದಪುರಂನಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಯಶಸ್ವಿಯಾಗಿ ನಡೆಯಿತು.
   ಜಿಲ್ಲಾ ಮಟ್ಟದ ಯುವಜನ ಮೇಳದ ಪ್ರಶಸ್ತಿ ಪತ್ರದಿಂದ ಹಿಡಿದು ಬಹುಮಾನದ ಫಲಕಗಳು, ನೆನಪಿನ ಕಾಣಿಕೆಗಳು ಹೀಗೆ ಒಂದಕ್ಕಿಂತ ಒಂದು ವಿಬಿನ್ನವಾದ ಆಕಷ೯ಕವಾದ ಕಲಾಕೃತಿ ಷಣ್ಮುಖಪ್ಪ ರಚಿಸಿದ್ದರು.
   ನಂತರ ನಡೆದ ರಾಜ್ಯ ಮಟ್ಟದ ಮೂರು ದಿನದ ಹಾಸ್ಯ ನಾಟಕ ಸ್ಪರ್ದೆ ಮತ್ತು ಕನ್ನಡ ಚಲನಚಿತ್ರದ ಪ್ರಖ್ಯಾತ ಹಾಸ್ಯ ನಟ ಭಾಲಕೃಷ್ಣ ರಂಗಮಂದಿರ ಉದ್ಘಾಟನೆ ಹಾಗೂ ಈ ಕಾರ್ಯಕ್ರಮಕ್ಕೆ ಎಲ್ಲಾ ಚಲನಚಿತ್ರರಂಗದ ಹಾಸ್ಯ ನಟರನ್ನು ಕರೆತಂದಿದ್ದೆವು ಆ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ದೆಯ ಪಾರಿತೋಷಕ, ಅತಿಥಿಗಳಿಗೆ ನೆನಪಿನ ಕಾಣಿಕೆ ಷಣ್ಮುಖಪ್ಪ ನವರದ್ದೆ.
  ಇವರು ನನಗೆ ನೆನಪಿನ ಕಾಣಿಕೆ ಆಗಿ ನೀಡಿರುವ ಶ್ರೀಗಂದದಲ್ಲಿ ಕೊರೆದ ಅಕ್ಷರಗಳ ಶುಭ- ಲಾಭ, ಗಣಪತಿ ವಿಗ್ರಹದ ಜೊತೆ ಸಂಸ್ಕೃತದಲ್ಲಿ ಗಣಪತಿ ಮಂತ್ರ ವಕ್ರತುಂಡಾ ಮಹಾ ಕಾಯ ಫಲಕ ನನ್ನ ಆಫೀಸಿನಲ್ಲಿದೆ.
  ಹಾಯ್ ಬೆಂಗಳೂರು ರವಿ ಬೆಳೆಗೆರೆ ಸೇರಿ ಅನೇಕ ರಾಜ್ಯದ ಗಣ್ಯರಿಗೆ ನಮ್ಮೂರ ಕನ್ನಡ ಸಂಘ ಸನ್ಮಾನಿಸಿ ನೀಡಿದ ಅಕ್ಷರಗಳನ್ನು ಮರದಲ್ಲಿ ಕೊರೆದು ಅಂಟಿಸಿದ ನೆನಪಿನ ಕಾಣಿಕೆಯ ಫಲಕಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಇಂತಹ ಒಂದು ಫಲಕ ನನಗೆ ಸದರಿ ಕನ್ನಡ ಸಂಘ ನೀಡಿದ್ದು ನನ್ನ ಮನೆಯ ಹಜಾರದಲ್ಲಿ ಹಾಗೇ ಇಟ್ಟಿದ್ದೇನೆ.
    ಇಂತಹ ಅದ್ಬುತ ಕಲಾವಿದ ಷಣ್ಮುಖಪ್ಪರ ಪತ್ನಿ ಮನೆ ಆನಂದಪುರಂ ಸಮೀಪದ ಮುಂಬಾಳು ಮಕ್ಕಳು ಚಿಕ್ಕವರಿದ್ದಾಗಲೇ ಹೃದಯಾಘಾತದಿಂದ 90 ರ ದಶಕದಲ್ಲಿ ಇಹಲೋಕ ತ್ಯಜಿಸಿದ್ದು ತುಂಬಾ ಬೇಸರ ಅನ್ನಿಸಿತ್ತು.
   ಇವರು ಬದುಕಿದ್ದರೆ ದೇಶದ ಪ್ರಖ್ಯಾತ ಕಲಾವಿದರಾಗುವಂತ ದೂರದೃಷ್ಟಿ ಷಣ್ಮುಖಪ್ಪರಿಗಿತ್ತು ಇವರ ಅಂತ್ಯ ಸಂಸ್ಕಾರದಲ್ಲಿ ನಾವೆಲ್ಲ ದುಃಖದಿಂದ ಭಾಗವಹಿಸಿದ್ದು ನೆನಪು.
  ಕನ್ನಡ ಸಂಘದ ಕ್ರಿಯಾಶೀಲ ಅಧ್ಯಕ್ಷ ಹಾ. ಮೊ. ಬಾಷಾ ನಾಗರ ಹಾವು ಹಿಡಿಯುವಾಗ ಹಾವಿನಿಂದ ಕಚ್ಚಿಸಿಕೊಂಡು ಅವರೂ ಇಲ್ಲ.
  ಸಾಗರದ ನಯನ ಹ್ಯಾಂಡಿಕ್ರಾಫ್ಟ್ ನ ಷಣ್ಮುಖಪ್ಪ ರಚಿಸಿದ ಮರದ ಅಕ್ಷರಗಳ ಸನ್ಮಾನ ಪತ್ರದ ಫಲಕ ಮತ್ತು ಗಣಪತಿ ಸ್ತ್ರೋತದ ನೆನಪಿನ ಕಾಣಿಕೆ ನಿತ್ಯ ಷಣ್ಮುಖಪ್ಪರ ನೆನಪು ತರುತ್ತದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ