Skip to main content

Blog number 1121. ಭಾಗ - 6. ಆನಂದಪುರಂ ಸಾಹಿತ್ಯ ಹಬ್ಬ, ನನ್ನ ಕಥಾ ಸಂಕಲನ ಭಟ್ಟರ ಬೊಂಡಾ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯoಜನ ಪುಸ್ತಕದ ಅವಲೋಕನ ಖ್ಯಾತ ಸಾಹಿತಿ, ಅಂಕಣಗಾರ , ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅವರಿಂದ.

#ಭಾಗ_6.

#ಆನಂದಪುರಂ_ಸಾಹಿತ್ಯ_ಹಬ್ಬ

#ನನ್ನ_ಕಥಾ_ಸಂಕಲನ_ಭಟ್ಟರ_ಬೊಂಡಾ_ಬಾಂಡ್ಲಿಯಲ್ಲಿ

#ಬಿಲಾಲಿ_ಬಿಲ್ಲಿ_ಅಭ್ಯಂಜನ_ಮತ್ತು_28_ಕಥೆಗಳ_ಅವಲೋಕನ

#ಖ್ಯಾತ_ಸಾಹಿತಿ_ಶಿಕ್ಷಣ_ತಜ್ಞ_ಅರವಿಂದ_ಚೊಕ್ಕಾಡಿಯವರಿಂದ.
  
  ಈ ಕಥಾ ಸಂಕಲನ ಮುದ್ರಣಕ್ಕೆ ಮುನ್ನ ಪೂರ್ತಿ ಓದಿ ಮುನ್ನುಡಿ ಬರೆದವರು ಅರವಿಂದ ಚೊಕ್ಕಾಡಿ ಅವರು ಅವರಿಂದಲೇ ಸಾಹಿತ್ಯ ಪರಿಷತ್ತು ಅವಲೋಕನ ಕಾಯ೯ಕ್ರಮ ಅಳವಡಿಸಿದ್ದರಿಂದ ನನ್ನ ಕಥಾ ಸಂಕಲನಕ್ಕೊಂದು ಗರಿ ಕೂಡ.
  ಈ ಕಥಾ ಸಂಕಲನಕ್ಕೆ ಶಿರ್ಷಿಕೆ ಯಾವುದೆಂದು ನಿಗದಿ ಮಾಡಿರಲಿಲ್ಲ, ಆಗ ಮುನ್ನುಡಿ ಬರೆದ ಅರವಿಂದ ಚೊಕ್ಕಾಡಿ ಅವರಿಗೆ ಬಿಲಾಲಿ ಬಿಲ್ಲಿ ಕಥೆ ಹೆಚ್ಚು ಇಷ್ಟವಾದದ್ದರಿಂದ ಈ ಕಥಾ ಸಂಕಲನಕ್ಕೆ ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ #ಬಿಲಾಲಿ_ಬಿಲ್ಲಿ_ಅಭ್ಯಂಜನ ಅಂತಲೇ ಶಿರ್ಷಿಕೆ ಇಟ್ಟಿದ್ದು.
  ಈ ಕಥೆಯ ಕಥಾನಾಯಕಿ ಬಿಲಾಲಿ ಬಿಲ್ಲಿ ನಮ್ಮ ಮನೆಯ ಬೆಕ್ಕು ಅದು ಈಗಿಲ್ಲ ಅದರ ಪೋಟೋ ಕಥಾ ಸಂಕಲನದ ಮುಖಪುಟದಲ್ಲಿದೆ.
  ತಾಕತ್‌ ಬೊಂಡಾ ....ಸಾಹಿತ್ಯದ ಆಳಕ್ಕೆ ಇಳಿಯದೆ ಅನುಭವದ ಆಳಕ್ಕಿಳಿದು ಈ ಕಥೆಗಳು ರಚನೆ ಆಗಿದೆ ಅಂತ ಅವರು ಗ್ರಹಿಸಿದ್ದು ಮತ್ತು ಈ ಕಥೆಯ ಪಾತ್ರದಾರಿಗಳೆಲ್ಲ ಇಲ್ಲಿಯೇ ಓಡಾಡುತ್ತಿದ್ದಾರೆ.... ಹೀಗೆ ಕಥಾ ಸಂಕಲದ ಅವಲೋಕನದ ವಿಡಿಯೋ ಇಲ್ಲಿದೆ.
   ಈ ಕಥಾ ಸಂಕಲನಕ್ಕೆ ಅರವಿಂದ ಚೊಕ್ಕಾಡಿ ಅವರು ಬರೆದ ಮುನ್ನುಡಿ ಕೂಡ ನಿಮ್ಮ ಓದಿಗಾಗಿ ಇಲ್ಲಿದೆ.

                     #ಮುನ್ನುಡಿ.

ರೂಪಾಯಿಗಳ ಬಿಲ್ ಮಾಡಿಕೊಳ್ಳುತ್ತಾನೆ. ಇವನು 52 ಸಾವಿರದ ಬಿಲ್ ಮಾಡಲು ಗಣೇಶನಿಗೆ 50 ರೂಪಾಯಿ ಕೊಟ್ಟು ತನ್ನ ಕಡೆಗೆ ಮಾಡಿಕೊಳ್ಳುತ್ತಾನೆ. ಈ ಗಣೇಶ ಇನ್ನೂ ಬುದ್ಧಿವಂತ. ಮನೆಯಲ್ಲಿ ನಾಯಿಗಳನ್ನು ಸಾಕದ ಗಣೇಶ ಬೀದಿ ನಾಯಿಗಳಿಗೆ ತಿಂಡಿ ಹಾಕುತ್ತಾನೆ. ಮೇಲ್ನೋಟಕ್ಕೆ ಇಲ್ಲಿ ಇದು ಪ್ರಾಣಿ ದಯೆಗಿಂತ‌ ಮಿಗಿಲಾಗಿ ಬೇರೇನಿದೆ ಎನಿಸುತ್ತದೆ. ಏನಾದರೂ ಇರಬಹುದಾದರೂ ಎಲ್ಲಿಯೂ ಕನೆಕ್ಟಿವಿಟಿ ಕಾಣುವುದಿಲ್ಲ. ಆದರೆ ಕನೆಕ್ಟಿವಿಟಿ ಇದೆ. ಜೋಳವನ್ನು ಬೆಳೆದ ರೈತರಿಗೆ ಹಂದಿ-ಮಂಗಗಳ ಕಾಟದಿಂದ ಬಚಾವಾಗಲು ಹೊಲದಲ್ಲಿ ಕಟ್ಟಲು ನಾಯಿಗಳು ಬೇಕು. ಅವರಿಗೆ ಬೇಕಾದ ನಾಯಿಗಳನ್ನು ಒದಗಿಸುವವನು ಗಣೇಶ. ಗಣೇಶ ನಾಯಿಗಳಿಗೆ ತಿಂಡಿ ಹಾಕುವುದರಿಂದ ನಾಯಿಗಳು ಗಣೇಶನೊಂದಿಗೆ ಬರುತ್ತವೆ. ಗಣೇಶನು ಆ ನಾಯಿಗಳನ್ನು ರೈತರಿಗೆ ಒದಗಿಸುತ್ತಾನೆ. ಆ ಕಡೆಯಿಂದಲೂ ಲಾಭ. ಈ ಕಡೆಯಿಂದಲೂ ಲಾಭ. ಭ್ರಷ್ಠಾಚಾರದ ಸರಣಿ ಯಾವ ರೀತಿ ಅರಿವೇ ಇಲ್ಲದ ಹಾಗೆ ಸುತ್ತಿಕೊಳ್ಳುತ್ತದೆ ಎಂಬುದನ್ನು ಕಥೆಯು ಹೇಳುತ್ತದೆ. ಪಂಚಾಯತ್ ಸಭೆಯಲ್ಲೂ ನಾಯಿ ಕೊಂದದ್ದರ ಬಿಲ್ ಜಾಸ್ತಿಯಾಯಿತು ಎಂದು ಆದಾಗ ಪ್ರಾಣಿ ದಯೆಯ ಇಶ್ಯೂ ಮುಂದೆ ಬಂದು ಇನ್ನು ಮುಂದೆ ನಾಯಿಗಳನ್ನು ಕೊಲ್ಲುವುದು ಸಲ್ಲ ಎಂಬ ನಿರ್ಣಯವಾಗುತ್ತದೆ. ಇದು ವೈಚಾರಿಕ ಭ್ರಷ್ಠಾಚಾರ. ' ಹೀಗೂ ಉಂಟೇ?' ಕಥೆಯ ಶೀನಿ, ರಾಮಿಗಳದ್ದೂ ಇದೇ ಬಗೆಯ ಕಥೆ. ಕೆಲಸಗಾರರಾಗಿ ಬಂದವರು ಹೊಡೆದಾಟ, ಬಡಿದಾಟ, ಕಳ್ಳಭಟ್ಟಿ ಸರಾಯಿಗಳಲ್ಲೆಲ್ಲ ತೊಡಗಿಕೊಂಡು ಬೆಳೆಯುತ್ತಾರೆ‌. ಸಿದ್ಧಪ್ಪ ಮೃತನಾದಾಗ ಶೀನಿ, ರಾಮಿಯರ ರೋದನೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿ ಅವರನ್ನು ಸಮಾಧಾನಪಡಿಸುತ್ತಾರೆ. ಕೊನೆಗೆ ನೋಡಿದರೆ ಶೀನಿ ರಾಮಿಯರು ಅಳುವುದು ಅವರಿಗೆ ಸಿದ್ಧಪ್ಪನಿಂದ ಬರಬೇಕಾದ ಕಳ್ಳಭಟ್ಟಿ ಸರಾಯಿಯ ಬಾಕಿಗಾಗಿ! ಕೊನೆಗೆ ಹೆಣ ಎತ್ತಲೂ ಬಿಡದೆ ಇದ್ದಾಗ ಅಬ್ಬು ಸಾಹೇಬ ಹಣದ ಬಾಕಿ ಕೊಟ್ಟು ಹೆಣ ಎತ್ತಿಸುತ್ತಾರೆ. 

' ಭಟ್ಟರ ಬೋಂಡಾದ ಬಾಂಡ್ಲಿಯಲ್ಲಿ ಬಿಲಾಲಿ ಬಿಲ್ಲಿ ಅಭ್ಯಂಜನ' ಬಹಳ ಗಮ್ಮತ್ತಿನ ಕಥೆ. ಎಲ್ಲಿಂದಲೋ ಬಂದು ಸೇರಿಕೊಳ್ಳುವ ನಿರೂಪಕನ ಬೆಕ್ಕು. ದೊಡ್ಡ ದೊಡ್ಡ ನಾಯಿಗಳೊಂದಿಗೇ ಅದರ ಜಗಳ. ಅದರ ಪಾಂಜದ ಏಟಿಗೆ ನಾಯಿಗಳು ತತ್ತರಿಸುತ್ತವೆ. ಇಂತಿಪ್ಪ ಬಿಲಾಲಿ ಬಿಲ್ಲಿ ಒಮ್ಮೆ ಭಟ್ಟರ ಬೋಂಡಾದ ಎಣ್ಣೆಗೆ ಬಿದ್ದು ಮೈಯೆಲ್ಲ ಎಣ್ಣೆ ಮಾಡಿಕೊಂಡು ಬರುತ್ತದೆ. ಬೆಕ್ಕು ಬಿದ್ದ ಎಣ್ಣೆಯಲ್ಲಿ ಬೋಂಡಾ ಮಾಡಬೇಡಿ ಎಂದು ಹೇಳಿ ಕಳಿಸುವ ವೇಳೆಗೆ ಭಟ್ಟರು ಬೋಂಡಾ ಮಾಡಿ ಮಾರಾಟ ಮಾಡಿ ಆಗಿರುತ್ತದೆ! ಅಲ್ಲಿ ಮಂಜುಳಮ್ಮ ಎಂದು ಇನ್ನೊಂದು ಪಾತ್ರ ಬರುತ್ತದೆ. ಭಟ್ಟರ ಹೆಂಡತಿ ಚಂದ್ರಲತಾ ಮತ್ತು ಮಂಜುಳಮ್ಮ ಅಪ್ಪಟ್ಟ ಗ್ರಾಮ ಭಾರತದ ಪ್ರತಿಭೆಗಳು. ನನ್ನ ಹಿತ್ತಲಿನ ಗುಲಾಬಿ ಹೂವು ನೀನೇ ಕದ್ದಿದ್ದೀಯ ಎಂದು ಚಂದ್ರಲತಾ ಮಂಜುಳಮ್ಮನ ಮೇಲೆ ಆರೋಪಿಸಿದ್ದಕ್ಕೆ ಪ್ರತಿಯಾಗಿ ಮಂಜುಳಮ್ಮ ಭಟ್ಟರ ಬೋಂಡಾವನ್ನು ತಿನ್ನಬೇಡಿ ಎಂದು ಊರೆಲ್ಲ ಹೇಳುತ್ತಾ ಬರುವುದು ಸಾಕ್ಷಾತ್ ಗ್ರಾಮ ಭಾರತದ ದರ್ಶನವೇ ಆಗಿದೆ. ಆದರೂ ಒಂದು ಪೆಗ್ ಹಾಕಿದವರೆಲ್ಲರೂ ಭಟ್ಟರ 'ತಾಕತ್ ಬೋಂಡ' ವೇ ಬೇಕು. ಬೋಂಡಾದ ಹೆಸರೇ ' ತಾಕತ್ ಬೋಂಡ'!

ಈ ಕೃತಿಯ ಪ್ರತಿಯೊಂದು ಕಥೆಗಳೂ ಇಂತಹ ಸ್ವಾದಿಷ್ಟ ಅಕ್ಷರ ಮಾಲೆಗಳಾಗಿವೆ. ಕಥೆಗಾರ ಅರುಣ್ ಪ್ರಸಾದ್ ಬಳಿ ಅತ್ಯಂತ ಶ್ರೀಮಂತವಾದ ಅನುಭವಗಳಿವೆ ಎನ್ನುವುದಕ್ಕೆ ಇಲ್ಲಿನ ಪ್ರತಿಯೊಂದು ಕಥೆಗಳೂ ಸಾಕ್ಷಿಯಾಗಿವೆ. ಊರಿನ ರಾಜಕೀಯಗಳೂ ಬೆಸದುಕೊಂಡು ಕಥೆಗಳಿಗೆ ಎಲ್ಲೆಲ್ಲೋ ಏನೇನೊ ಟ್ವಿಸ್ಟ್ ಕೊಡುತ್ತಾ ಊರಿನ ಸಮಗ್ರತೆಯನ್ನು ಒಳಗೊಳ್ಳುತ್ತಾ ದೇಸೀ ಕಥೆಗಳಾಗಿ ಹೊರಹೊಮ್ಮಿ ಮೋಹಕವಾಗಿ ಸೆರೆ ಹಿಡಿಯುತ್ತವೆ. 

ಅರುಣ್ ಪ್ರಸಾದ್ ನಮ್ಮ ನಡುವಿನ ಅತ್ಯುತ್ತಮ ಕಥೆಗಾರರು. ತಾಜಾ ತಾಜಾ ಕಥೆಗಳು ಸೂಕ್ಷ್ಮ ದರ್ಶಿತ್ವದ ಕಥೆಗಳೂ ಆಗಿವೆ. ಅರುಣ್ ಅವರ ಕಥೆಗಳ ಮೊದಲ ಓದುಗನಾಗಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ಅವರಿಗೆ ನಾನು ಋಣಿಯಾಗಿದ್ದೇನೆ. ಅರುಣ್ ಅವರಿಗೆ ಕಥನ ಕಲೆಗೆ ಪ್ರೀತಿಯ ಶುಭ ಸುಪ್ರಭಾತವನ್ನು ಕೋರುತ್ತೇನೆ.

ಅರವಿಂದ ಚೊಕ್ಕಾಡಿ
ಮೂಡುಬಿದಿರೆ

24 ನೆಯ ಜುಲೈ 2021

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ