Skip to main content

Blog number 1106. ಭಾಗ - 2 , ಜೋಗ್ ಕಾರ್ಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಪ್ರಚಾರಕ್ಕೆ ಬಂದಿದ್ದ ಕೇಂದ್ರ ಸಚಿವರಾದ ಶ್ರೀನಿವಾಸ್ ಪ್ರಸಾದರ ಪ್ರಶ್ನೆಗಳು ಮತ್ತು ನನ್ನ ಉತ್ತರ.

#ಭಾಗ_2

#ಜೋಗ್_ಕಾಗ೯ಲ್_ಪಟ್ಟಣ_ಪಂಚಾಯಿತಿ_ಚುನಾವಣೆ.

#ಪ್ರಚಾರದಲ್ಲಿ_ಭಾಗವಹಿಸಿದ_ಕೇಂದ್ರ_ಸರ್ಕಾರದ_ಮಂತ್ರಿ_ಶ್ರೀನಿವಾಸಪ್ರಸಾದ್.

#ಕಾರ್ಮಿಕ_ಮುಖಂಡ_ಜಾರ್ಜ್_ಸಹೋದರ_ಮೈಕಲ್_ಪರ್ನಾಂಡೀಸರು_ಪ್ರಚಾರಕ್ಕೆ_ಬಂದಿದ್ದರು.

#ಸಂಯುಕ್ತ_ಜನತಾದಳದ_ಪ್ರಚಾರದಲ್ಲಿ__ಜೆ_ಹೆಚ್_ಪಟೇಲರ_ಮಗ_ಮಹೀಮ_ಪಟೇಲರು.

#ಶ್ರೀನಿವಾಸ್_ಪ್ರಸಾದರ_ಆ_ಒಂದು_ಪ್ರಶ್ನೆಗೆ_ನನ್ನ_ಉತ್ತರದಿಂದ_ಪ್ರಶಂಸೆ

#ಶೂದ್ರ_ದಲಿತರಿಗೆ_ದೇವರ_ಆರಾದಿಸುವ_ಪೂಜಾ_ವಿಧಾನದ_ತರಬೇತಿ_ಮಠ_ಮಂದಿರ_ಇವತ್ತೂ_ನೀಡಲಾಗಲಿಲ್ಲ.

   ಜೋಗ್ ಪಾಲ್ಸ್ ನ ಎನಕೋಡ ಎರಮಯ್ಯ ಮನೆಯಲ್ಲಿ ಕೇಂದ್ರ ಸಚಿವರ ರಾತ್ರಿ ಊಟ ನಡೆಯದಂತೆ ತಡೆಯಲು ಪ್ರಯತ್ನಿಸಿದ ಅಧಿಕಾರಿಗಳ ಪ್ರಯತ್ನ ವಿಫಲವಾಗಿದ್ದು ನಮ್ಮ ಕಾಯ೯ಕರ್ತರಿಗೆ  ಚುನಾವಣೆಯ ಕಣದಲ್ಲಿ ಹುರುಪು ತಂದಿತು.
  ದಲಿತರಾಗಿದ್ದ ಎನಕೋಡರ ಪೋಷಕರು ಅಸ್ಪೃಶ್ಯತೆಯ ಅವಮಾನದಿಂದ ಮಾತೃಧರ್ಮ ತೊರೆದು ಕ್ರಿಸ್ತ ಧರ್ಮ ಸೇರಿದವರಾದ ಕುಟುಂಬದವರು ಇಂತಹ ಅನೇಕ ಕುಟುಂಬ ಜೋಗ್ ಕಾಗ೯ಲ್ ಪ್ರಾಜೆಕ್ಟ್ ಪ್ರದೇಶದಲ್ಲಿ ನೆಲೆಸಿದ್ದಾರೆ.
   ಶ್ರೀನಿವಾಸ ಪ್ರಸಾದರ ಬೆಳಗಿನ ಓದಿಗಾಗಿ ಎಲ್ಲಾ ಪತ್ರಿಕೆಗಳು ಬೇಕ೦ತ ಹೇಳಿದ್ದರಿಂದ ಎಲ್ಲಾ ಪತ್ರಿಕೆ ಒಟ್ಟು ಮಾಡಿ ಜೋಗ ಜಲಪಾತದ ಎದುರಿನ ಸರ್ಕಾರಿ ಪ್ರವಾಸಿ ಮಂದಿರಕ್ಕೆ ಹೋದರೆ ಮಂತ್ರಿಗಳು ಅವರ ಮದುಮೇಹದ ಕಾಯಿಲೆಯ ತೊಂದರೆಗಳಿಂದ 11 ಕ್ಕೆ ಎದ್ದಿದ್ದರು.
  ಅವತ್ತು ಅವರ ಕಾರ್ಯಕ್ರಮ ಕೆಲ ಅಭ್ಯರ್ಥಿ ಮತ್ತು ಕಾರ್ಯಕರ್ತರ ಮನೆ ಬೇಟಿ ಮಾಡಿ ಅವರು ಬೆಂಗಳೂರು ಪ್ರಯಾಣ ಮಾಡುವುದಾಗಿತ್ತು.
  ಜೋಗ್ ಪಾಲ್ಸ್ ಮತ್ತು ಕಾರ್ಗಲ್ ಹಿರೇ ಬಾಸ್ಕರ ಡ್ಯಾಂ ನಿಮಾ೯ಣ ಕಾಲದಿಂದ ಡ್ಯಾಂ ನಿರ್ಮಾಣದ ಕೆಲಸಗಾರರಿ೦ದ ಕಿಕ್ಕಿರಿದು ತುಂಬಿದ್ದ ಪ್ರಾಜೆಕ್ಟ್ ಕಾಲೋನಿಗಳು ನಂತರ ವಿದ್ಯುತ್ ಉತ್ಪಾದನೆ ಪ್ರಾರಂಭವಾಗಿ ಅಲ್ಲಿಗೆ ಸರ್ಕಾರಿ ನೌಕರರಾಗಿ ಬೇರೆ ಬೇರೆ ರಾಜ್ಯದಿಂದ ಉದ್ಯೋಗಿಗಳು ಬಂದರು ನಂತರ ಹೆಚ್ಚುವರಿ ವಿದ್ಯುತ್ ಉತ್ಪಾದನೆಗಾಗಿ ಲಿಂಗನಮಕ್ಕಿಯಲ್ಲಿ ಎರಡನೇ ಡ್ಯಾಂ ನಿರ್ಮಾಣದಿಂದ ಇವರುಗಳ ಸಂಖ್ಯೆ ದುಪ್ಪಟ್ಟಾಯಿತು.
   ಇವರಿಗಾಗಿ ಲಿಂಗನಮಕ್ಕಿ, ಜೋಗ್ ಫಾಲ್ಸ್ ನಲ್ಲಿ ಆಸ್ಪತ್ರೆಗಳು, ಕ್ವಾರ್ಟರ್ಸ್ ಗಳು, ಶಾಲೆಗಳು, ದೇವಸ್ಥಾನ, ಮಸೀದಿ ಚರ್ಚ್ ಗಳು ನಿರ್ಮಾಣವಾಯಿತು.
  ರಂಗ ಮಂದಿರಗಳು, ಆಟದ ಮೈದಾನ, ಕ್ಲಬ್ ಗಳು, ಸರ್ಕಾರಿ ಪ್ರವಾಸಿ ಮಂದಿರಗಳೂ ಪ್ರಾರಂಭವಾಯಿತು, ಜನರ ಅನುಕಾಲಕ್ಕಾಗಿ ಬಜಾರ್ ಲೈನ್, ಬ್ಯಾಂಕ್, ಸೆಲೂನ್, ಹಿಟ್ಟಿನ ಗಿರಣಿಗಳಿಂದ ಈ ಪ್ರಾಜೆಕ್ಟ್ ಪ್ರದೇಶ ಮಿನಿ ಭಾರತವೇ ಆಯಿತು ಈಗ ಆಗಿನ ಜನಸಂಖ್ಯೆ ಇಲ್ಲವಾದರೂ ಈ ಪ್ರದೇಶ ಸಾಗರ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳ ಮಾತ್ರವಲ್ಲದೆ ಜಾತ್ಯಾತೀತ ದರ್ಮ ಸಹಿಷ್ಣುತೆಯ ಜೊತೆಯಲ್ಲಿ ದೇಶದ ಎಲ್ಲಾ ಭಾಷೆಗಳ, ಎಲ್ಲಾ ದರ್ಮದ, ಎಲ್ಲಾ ಜಾತಿಯ ಮತ್ತು ಎಲ್ಲಾ ರಾಜ್ಯದ ಜನ ಇಲ್ಲಿ ಸಾಮರಸ್ಯದಿಂದ ಬದುಕು ಮಾಡುತ್ತಿದ್ದಾರೆ.
  ಒ0ದು ವಿಶೇಷವೆಂದರೆ ಕ್ರಿಶ್ಚಿಯನ್ ಪಂಗಡಗಳಾದ ಕ್ಯಾಥೋಲಿಕ್, ಪಾಟೆಸ್ಟಂಟ್, ಸಿರಿಯಾ, ಜೀಸ್ಯೂಟ್ಸ್ ಅಲ್ಲದೆ ಇನ್ನೂ ಹತ್ತಾರು ಕ್ರಿಶ್ಚಿಯನ್ ಪಂಗಡಗಳು ಪ್ರತ್ಯೇಕ ಚರ್ಚ್ ಗಳನ್ನು ಮಾಡಿಕೊಂಡು ಅವರು ನಂಬಿದ ದೇವರು ಆರಾದಿಸುತ್ತಾರೆ.
   ಕೇಂದ್ರದ ಮಂತ್ರಿಗಳ ಜೊತೆ ಇಂತಹ ಒಂದು ಕ್ರಿಶ್ಚಿಯನ್ ಪಂಗಡದ ಮನೆಗೆ ಚಹಾ ಸೇವಿಸುವ ಕಾರ್ಯಕ್ರಮವಾಗಿ ಹೋಗಿದ್ದೆವು ಆಗ ಶ್ರೀನಿವಾಸ ಪ್ರಸಾದರು ಒಂದು ಪ್ರಶ್ನೆ ಕೇಳಿದರು ಅದೇನೆಂದರೆ "ಇವರೆಲ್ಲ ತಮ್ಮ ಮಾತೃ ದರ್ಮದಲ್ಲಿದ್ದಾಗ ಇಷ್ಟು ಶಿಸ್ತಿನಲ್ಲಿ ಇರುವುದಿಲ್ಲ ಆದರೆ ಮತಾಂತರ ಆದ ನಂತರ ಇಷ್ಟೆಲ್ಲ ಬದಲಾಗುವುದು ಹೇಗೆ?" ಅಂತ ಕಾರಣ ಮನೆಯ ಪರಿಸರ, ಅತಿಥಿ ಸತ್ಕಾರ, ಅತಿಥಿಗಳು ಕುಳಿತುಕೊಳ್ಳಲು ಪೀಠೊಪಕರಣ, ಚಹಾ ನೀಡಲು ಕಪ್ಪು ಸಾಸರ್, ನೀರಿನ ಗ್ಲಾಸ್, ಅದನ್ನೆಲ್ಲ ಇಡಲು ಟೀಪಾಯಿ, ಗಡಿಯಾರ, ಸ್ಟಚ್ಚವಾದ ಬಟ್ಟೆ ತೊಡುವುದು, ಮುಖ ಕ್ಷೌರ ಇತ್ಯಾದಿ....ನೋಡಿ ಮಂತ್ರಿಗಳು ಈ ಪ್ರಶ್ನೆ ಮಾಡಿದ್ದರು.
    ಅಲ್ಲಿದ್ದ ಮುಖಂಡರುಗಳು ಯಾರು ಈ ಪ್ರಶ್ನೆಗೆ ಉತ್ತರಿಸದಿಂದ ನಾನು ಉತ್ತರಿಸಿದೆ.. "ಹಿಂದೂ ಧರ್ಮದಲ್ಲಿ ದೇವಾಲಯಗಳು ಮತ್ತು ಮಠಗಳು ಶೂದ್ರ ದಲಿತರಿಗೆ ಕನಿಷ್ಟ ಪೂಜಾ ವಿಧಾನ, ಅತಿಥಿ ಸತ್ಕಾರ, ಶಿಸ್ತಿನ ವೇಷ ಭೂಷಣ, ಜೀವನಕ್ರಮಗಳನ್ನು ಬೋದಿಸುವ ಪದ್ದತಿ ಇಲ್ಲ ಅವರವರೇ ಕಲಿತು ಬದುಕಬೇಕು ಆದರೆ ಚರ್ಚ್ ಗಳಲ್ಲಿ ಪ್ರತಿವಾರ ಇದನ್ನೆಲ್ಲ ಗಮನಿಸುವ, ಅದನ್ನು ಸರಿಪಡಿಸಿ ಕಲಿಸುವ ಬೋದಿಸುವ ಪಾದ್ರಿಗಳ ವ್ಯವಸ್ಥೆ ಇರುವುದು ಮತ್ತು ಪಾದ್ರಿಗಳು ತಿಂಗಳಿಗೊಮ್ಮೆ ಭಕ್ತರ ಮನೆಗೆ ಪ್ರಾರ್ಥನೆಯ ಕಾರಣದಿಂದ ಬೇಟಿ ಮಾಡಿ ಆಚರಣೆಯ ಲೋಪದೋಶಗಳ ಪರೀಕ್ಷೆಯೂ ಮಾಡುವುದರಿಂದ ಮತಾಂತರವಾದ ಕುಟುಂಬಗಳಲ್ಲಿ ಇಂತಹ ಪರಿಣಾಮಕಾರಿ ಬದಲಾವಣೆ ಕಾಣುತ್ತೇವೆ ಇದರಿಂದ ಮಾತೃಧರ್ಮದಲ್ಲಿ ಅಸ್ಪೃಶ್ಯತೆಯ ಅವಮಾನದಿಂದ ನೊಂದು ಬಂದವರು ಈ ಹೊಸ ಧರ್ಮದಲ್ಲಿ ಸುಖಿಗಳೆಂದು ಜೀವಿಸುತ್ತಾರೆ" ಅಂತ ಅಂದಾಗ ಶ್ರೀನಿವಾಸ್ ಪ್ರಸಾದರು ನನ್ನ ಕೈ ಕುಲುಕಿ ಸರಿಯಾಗಿ ಅನಾಲೈಸ್ ಮಾಡಿದ್ದೀರಿ ಎಂದು ಪ್ರಶಂಸಿದರು.
  ವಾಪಾಸು ಬರುವಾಗ ಇದನ್ನು ಮಾತೃ ಧರ್ಮದಲ್ಲೇ ಸರಿಪಡಿಸುವುವ ವಿದಾನ ಏನು? ಅಂತ ಪುನಃ ಪ್ರಶ್ನಿಸಿದರು ಅದಕೆ ನನ್ನ ಉತ್ತರ ಹಿಂದೂ ದಮ೯ದ ಮಠ ಮಂದಿರಗಳು ಅಲ್ಲಿನ ಪ್ರಮುಖರು ಹಿಂದೂ ದರ್ಮದಲ್ಲಿರುವ ಶೂದ್ರ ದಲಿತರಿಗೆ ಹಿಂದೂ ದಮ೯ದ ಪ್ರಾಥಮಿಕ ಪೂಜಾ ವಿಧಾನ, ಪ್ರಾರ್ಥನೆಗಳನ್ನು ಕಲಿಸಲು ಪ್ರಾರಂಬಿಸಬೇಕು, ಹಿಂದೂ ದರ್ಮದ ಪವಿತ್ರ ಗ್ರಂಥಗಳನ್ನು ಅವರರವರ ಭಾಷೆಯಲ್ಲಿ ಅವರ ಓದಿಗೆ ಅವಕಾಶ, ಮಂತ್ರಗಳನ್ನು ಸ್ಥಳಿಯ ಭಾಷೆಯಲ್ಲಿ ಪಠಿಸಬೇಕು, ಅವರ ನಿತ್ಯ ಜೀವನ ಕ್ರಮ, ವೇಷಭೂಷಣ, ವಾಸಿಸುವ ಪರಿಸರದಲ್ಲಿನ ಬದಲಾವಣೆ, ಅತಿಥಿ ಸತ್ಕಾರದ ಕ್ರಮ ಸುದಾರಣೆಯ ತರಬೇತಿ, ಅವರಿಗೆ ಹಿಂದೂ ದರ್ಮದ ಪೂಜಾ ಮಂದಿರಗಳಲ್ಲಿ ಸಾಮೂಹಿಕ ಬೋಜನಗಳ ಮೂಲಕ ಅವರಲ್ಲಿನ ಕೀಳರಿಮೆ ತೆಗೆಯುವ ಕೆಲಸ ಮಾಡಬೇಕೆಂದೆ.....ಶ್ರೀನಿವಾಸ ಪ್ರಸಾದರು ನನ್ನ ಭುಜ ತಡವಿ ಅವರ ಸಮ್ಮತಿ ವ್ಯಕ್ತಪಡಿಸಿದರು.
  ಈ ಘಟನೆ ನಡೆದು 22 ವರ್ಷವಾಯಿತು ಆದರೆ ಇಂತಹ ವ್ಯವಸ್ಥೆಯನ್ನು ಬದಲಿಸುವ ಯಾವುದೆ ದರ್ಮ ಸುದಾರಣೆಗಳ ಪ್ರಯೋಗ ಹಿಂದೂ ದರ್ಮದಲ್ಲಿ ಆಗಲಿಲ್ಲ.
  ಈಗ ಶ್ರೀನಿವಾಸ ಪ್ರಸಾದರು ಭಾರತೀಯ ಜನತಾ ಪಕ್ಷದಿಂದ ಸಂಸದರಾಗಿದ್ದಾರೆ.
ನಾಳೆ : ಮುಂದಿನ ಭಾಗ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ