Skip to main content

Blog number 1153. ನಮ್ಮ ಊರ ಗ್ರಾಮ ಪಂಚಾಯತ್ ಅಧ್ಯಕ್ಷರು ಜೆ. ಶಿವಾನಂದ ನನ್ನ ಆಫೀಸಿನಲ್ಲಿ,ಇವರ ಕುಟುಂಬ ಶರಾವತಿ ಮುಳುಗಡೆ ಸಂತ್ರಸ್ಥರದ್ದು, ಇವರ ತಂದೆ ಜಟ್ಟಪ್ಪ ಇವರಿಗೆ ಬಗರ್ ಹುಕುಂ ಜಮೀನು ಮಂಜೂರಾಗಿದ್ದು 1993ರಲ್ಲಿ.

#ಇವತ್ತು_ನಮ್ಮ_ಊರಾ_ನೂತನ_ಗ್ರಾಮಪಂಚಾಯತ್_ಅದ್ಯಕ್ಷರು_ಬಂದಿದ್ದರು.

#ಗೇರುಬೀಸಿನ_ಶಿವಾನಂದ_ನೂತನ_ಅಧ್ಯಕ್ಷರು.

#ಸಾಗರ_ತಾಲ್ಲೂಕಿನ_ಯಡೇಹಳ್ಳಿ_ಗ್ರಾಮಪಂಚಾಯತ್ 

#ಅನೇಕ_ವಿಚಾರಗಳಲ್ಲಿ_ಮುಂದಿರುವ_ಯಡೇಹಳ್ಳಿ_ಗ್ರಾಮಪಂಚಾಯತ್ 

  ಕೆಳದಿ ಅರಸರು ಕಿರಾತಕರಿಂದ ಯಡೇಹಳ್ಳಿ ಕೋಟೆ ವಶಪಡಿಸಿಕೊಂಡರೆಂಬ ಇತಿಹಾಸ ಇದೆ ನಂತರ ರಾಜ ವೆಂಕಟಪ್ಪ ನಾಯಕ ಮತ್ತು ರಂಗೋಲಿ ಪ್ರವೀಣೆ ಬೆಸ್ತರ ಕುಲದ ಚಂಪಕಾಳ ದುರಂತ ಪ್ರೇಮದ ಸ್ಮಾರಕ ಚಂಪಕ ಸರಸ್ಸು ನಿರ್ಮಾಣ ತಾಜ್ ಮಹಲ್ ಗಿಂತ ಮೊದಲೇ ನಿಮಾ೯ಣ ಮಾಡಿ ಆನಂದಪುರಂ ಎಂದು ನಾಮಕರಣವಾಯಿತು.
 ಆಗಿನಿಂದಲೂ ಈ ಪ್ರದೇಶ ಮಾತ್ರ ಯಡೇಹಳ್ಳಿ ಆಗಿಯೇ ಉಳಿಯಿತು, ಯಡೇಹಳ್ಳಿ ಮತ್ತು ಆನಂದಪುರಂ ಎಂದು ವಿಭಜಿಸುವ ಪುರಾತನ ತಾವರೆಕೆರೆ (ಈಗಿನ ಗೌರಿಕೆರೆ) ಇದೆ ಇದರ ವಿಶೇಷ ಅಂದರೆ ಕೆರೆ ತುಂಬಿ ಕೋಡಿ ಬಿದ್ದು ಶರಾವತಿ ನದಿ ಸೇರಿ ಜೋಗದ ಜಲಪಾತ ಸೇರಿ ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರಿದರೆ ಈ ಕೆರೆಯ ತೂಬಿನ ನೀರು ಅಂಬ್ಲಿಗೊಳ ಜಲಾಶಯ ಸೇರಿ ನಂತರ ವರದಾ ನದಿ ಮೂಲಕ ತುಂಗಭದ್ರ ಡ್ಯಾಂ ಸೇರಿ ಆಂದ್ರ ಪ್ರದೇಶದಲ್ಲಿ ಹರಿದು ಕೃಷ್ಣಾ ನದಿ ಮೂಲಕ ಬಂಗಾಳ ಕೊಲ್ಲಿಯ ಸೇರುವ  ಸಮತೋಲದ ತಾವರೆಕೆರೆ ನೀರು ಎರೆಡು ಸಮುದ್ರ ಸೇರುವ ಆಪರೂಪದ ವಿಶೇಷತೆ ಹೊಂದಿದೆ.
  ಯಡೇಹಳ್ಳಿಯ ವೃತ್ತದಲ್ಲಿ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರದ ಹೆದ್ದಾರಿ ಸೇರುತ್ತದೆ.
  ಇಲ್ಲಿ ಮೂರು ಅಕ್ಕಿ ಗಿರಣಿ, ಪೆಟ್ರೋಲ್ ಪಂಪ್, ಮೂರು ಬೈಕ್ ಶೋ ರೂಂ, ಎರೆಡು ಚರ್ಚ್, ಒಂದು ಮಸೀದಿ, ಮೂರು ದೇವಸ್ಥಾನ, ಮೂರು ಬ್ಯಾಂಕ್, ಒಂದು ಖಾಸಾಗಿ ಪದವಿ ಕಾಲೇಜ್, ಪ್ರೌಡ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಇಲ್ಲಿದೆ.
  777 ಎಕರೆ ಪ್ರದೇಶದಲ್ಲಿ ದೇಶದಲ್ಲೇ ಪ್ರಥಮವಾದ ಅರಣ್ಯದ ಮಧ್ಯೆ ಇರುವ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಇದೆ ಗ್ರಾಮದ ಇರುವಕ್ಕಿಯಲ್ಲಿದೆ.
   ರಾಜ್ಯದಲ್ಲೇ ಪ್ರಥಮ ಬಗರ್ ಹುಕುಂ ಹಕ್ಕು ಪತ್ರ ವಿತರಣೆ ಮಾಡಿದ ಗ್ರಾಮ ಇದು.
  ಯಡೇಹಳ್ಳಿಯ ಎರೆಡು ಶತಮಾನದ ಹಿಂದಿನ ಬ್ರಿಟೀಷ್ ಬಂಗ್ಲೆ ಈಗ ಪ್ರವಾಸಿ ಮಂದಿರವಾಗಿದೆ, ಇದು ಆನಂದಪುರಂ ತಾಲ್ಲೂಕ್ ಆಗಿದ್ದಾಗ (1835 ರಿಂದ 1885 ರ ವರೆಗೆ ) ತಾಲ್ಲೂಕ್ ಕಛೇರಿ ಆಗಿತ್ತು, ಸಾಗರ ತಾಲೂಕಿನ ಪ್ರಥಮ ನ್ಯಾಯಾಲಯ ಇಲ್ಲೇ ಇತ್ತು, ಶರಾವತಿ ಸಂತ್ರಸ್ಥರ ಪರಿಹಾರದ ನ್ಯಾಯಾಲಯ ಕೂಡ ಇದಾಗಿತ್ತು, ಬಂಗಾರಪ್ಪನವರು ಯುವ ವಕೀಲರಾಗಿ ಶರಾವತಿ ಸಂತ್ರಸ್ಥರ ಪರ ಇಲ್ಲಿ ವಕಾಲತ್ತು ವಹಿಸಿ ಭಾಗವಹಿಸಿದ್ದರು.
  ಪ್ರಸಿದ್ಧ ಆರ್ಕಾಲಾಜಿಸ್ಟ್ ಬೆಂಜಮನ್ ರೈಸ್, ಪ್ರಖ್ಯಾತ ನರಭಕ್ಷಕ ಹುಲಿ ಶಿಕಾರಿಗಾರ ಕೆನತ್ ಆಂಡರ್ಸನ್ ಈ ಬ್ರಿಟಿಶ್ ಬಂಗಲೆಯಲ್ಲಿ ತಂಗಿದ್ದ ದಾಖಲೆ ಇದೆ.
  ಈ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಗೇರ್ ಬೀಸ್ ಶಿವಾನಂದ ಶ್ರಮ ಜೀವಿ, ತನ್ನ ಸ್ವಂತ ಶ್ರಮದಿಂದ ಇವತ್ತು 12 ಕ್ವಿಂಟಾಲ್ ಕೆಂಪಡಿಕೆ ಪಡೆಯುವ ಅಡಿಕೆ ಬೆಳೆಗಾರ ಆಗಿದ್ದಾರೆ.
  ಇವರ ಕುಟುಂಬ ಶರಾವತಿ ಮುಳುಗಡೆ ಸಂತ್ರಸ್ಥರದ್ದು ಇವರ ತಂದೆ ಜಟ್ಟಪ್ಪ ಮಡೆನೂರು ಡ್ಯಾಂ ನಲ್ಲಿ ಇದ್ದಿದ್ದೆಲ್ಲ ಕಳೆದುಕೊಂಡು ಗೇರು ಬೀಸಿನ ಹೊಳೆ ದಂಡೆಗೆ ಜೀವನ ಆರಸಿ ಬಂದವರು ಆಗ ಈ ಊರಿಗೆ ರಸ್ತೆ ಇಲ್ಲ, ಶಾಲೆ ಇಲ್ಲ ಕರೆಂಟ್ ಇಲ್ಲವಾಗಿತ್ತು, ಜಟ್ಟಪ್ಪ ಈ ಭಾಗದಲ್ಲಿ ದೇವರ ಗಾಡಿಗರಾಗಿ ಜನರ ಗೌರವಗಳಿಸಿದ್ದರು.
  ನಮ್ಮ ತಂದೆ ಆನಂದಪುರಂ ವಿಲೇಜ್ ಪಂಚಾಯತ್ ಸದಸ್ಯರಾದಾಗ ತಿರುಮಲಾಚಾರ್ ಚೇರ್ ಮನ್ ,ವೈಸ್ ಚೇರ್ ಮನ್ ಟಿಪ್ ಟಾಪ್ ಇಬ್ರಾಹಿ೦ ಸಾಹೇಬರು (ಈಗ ಸಾಗರದ ಟಿಪ್ ಟಾಪ್ ಸಂಸ್ಥೆ ಮಾಲಿಕರು )ಆಗ ಶಾಸಕರು ಎಲ್ ಟಿ ತಿಮ್ಮಪ್ಪ ಹೆಗ್ಗಡೆ ಇವರೆಲ್ಲರ ಸಹಕಾರದಿಂದ ಗೇರ್ ಬೀಸಿಗೆ ಸೇತುವೆ ಶಾಲೆ ಬಂದಿತ್ತು.
  ನಾನು ಜಿಲ್ಲಾ ಪಂಚಾಯತ್ ಸದಸ್ಯನಾದಾಗ ಕರೆಂಟು, ರಸ್ತೆ, ಮತ್ತು ಬಗರ್ ಹುಕುಂ ಹಕ್ಕು ಪತ್ರ, ಬಾವಿಗಳು, ಪಿಕ್ ಅಪ್ ಎಲ್ಲಾ ಮಾಡಲು ಸಾಧ್ಯವಾಯಿತು ಅವಾಗ ಕಾಗೋಡು ತಿಮ್ಮಪ್ಪ ಈ ಕ್ಷೇತ್ರದ ಶಾಸಕರಾಗಿದ್ದರು.
  ಈ ಪಂಚಾಯತ್ ಕೇಂದ್ರ ಸ್ಥಳದಲ್ಲಿ ನನ್ನ ಮನೆ ಇದೆ, ನನ್ನ ಎಲ್ಲಾ ರಾಜಕೀಯ ಹೋರಾಟದಲ್ಲಿ ನನ್ನ ಜೊತೆ ಇದ್ದ ಯುವಕರೆ ಈಗ ಇಲ್ಲಿನ ಗ್ರಾಮ ಪಂಚಾಯತ್ ಆಡಳಿತ ಮತ್ತು ವಿರೋದ ಪಕ್ಷದಲ್ಲಿದ್ದಾರೆ ಆದ್ದರಿಂದ ಗೆದ್ದವರು ಮತ್ತು ಸೋತವರೂ ನನ್ನ ಆಪ್ತ ಶಿಷ್ಯರೆ.
  ಈಗಿನ ಅಧ್ಯಕ್ಷ ಶಿವಾನಂದ್, ಹಿಂದಿನ ಅವಧಿ ಅಧ್ಯಕ್ಷ ಇರುವಕ್ಕಿ ಗಣಪತಿ, ಅವಕಾಶ ವಂಚಿತ ನಾರಿ ಲೋಕಪ್ಪ , ಗೇರ್ ಬೀಸ್ ನಟರಾಜ, ವಕೀಲರಾದ ಘಂಟಿನ ಕೊಪ್ಪದ ಶಿವಕುಮಾರ್ ನನ್ನ ಜೊತೆ ಪಂಜಾಬ್ ಪ್ರವಾಸ ಮಾಡಿದ ಕಿರಿಯ ಮಿತ್ರ.
   ಯಾವತ್ತೂ ಬರುವ ಶಿವಾನಂದ್ ಇವತ್ತು ನಮ್ಮ ಊರಿನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಂದಿದ್ದರಿಂದ ನಮ್ಮ ಸಂಸ್ಥೆ ಪರವಾಗಿ ಗೌರವ ನೀಡುವ ಸಂದರ್ಭದಲ್ಲಿ ವಿಶ್ವವ್ಯಾಪಿ ಗಣೇಶ ಪ್ರಸಿದ್ಧಿಯ ಗೋವರ್ದನ ಅಂಕೋಲೆಕರ್ ಅವರಿಂದ ಸನ್ಮಾನಿಸಿದೆವು, ನನ್ನ ಸಹೋದರ ನಾಗರಾಜ್, ಇನ್ನೊಬ್ಬ ಗೆಳೆಯ ಗೇರ್ ಬೀಸ್ ನಾಗರಾಜ್ ಜೊತೆಗೆ ಇದ್ದರು.
  ಮುಂದಿನ ದಿನದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ದಿಗೆ ತಮ್ಮದೇ ಆದ ರೀತಿಯಲ್ಲಿ ಕೆಲ ಯೋಜನೆ ಜಾರಿ ಮಾಡುವ ಯೋಚನೆಗಳಿರುವ ಶಿವಾನಂದ್ ಗೆ ಶುಭ ಹಾರೈಸಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...