Skip to main content

ಪ್ರಕಾಶ್ ಟ್ರಾವೆಲ್ಸ್ ಮಲೆನಾಡಿನಲ್ಲಿ ನೂರಾರು ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾವಿರಾರು ಜನರ ಊಟದ ತಟ್ಟೆಗೆ ಆದಾರವಾಗಿದ್ದ ಸಂಸ್ಥೆ, ಈ ಸಂಸ್ಥೆ ಈ ಮಟ್ಟಕ್ಕೆ ಕಟ್ಟಿದ್ದ ಕನಸುಗಾರ ಪ್ರಕಾಶ್ ದುಡುಕಿನಿಂದ ದುರಂತಕ್ಕೆ ಹೋಗದಿರಲಿ.

#ಕೊರಾನಾ_ವೈರಸ್ನಿ೦ದ_ಸತ್ತವರು_ಲಕ್ಷಾಂತರ_ಜನ

#ಕೊರಾನಾ_ಸೃಷ್ಟಿಸಿದ_ಆರ್ಥಿಕ_ಸಂಕಷ್ಟದಿಂದ_ಆಗುತ್ತಿರುವ_ಆತ್ಮಹತ್ಯೆಗಳು_ಲೆಕ್ಕವಿಲ್ಲದಷ್ಟು .

#ಇಪ್ಪತ್ತೆರೆಡು_ವರ್ಷದಲ್ಲಿ_ಸಾಗರ_ಕೇಂದ್ರವಾಗಿ_ಸಾರಿಗೆ_ಕ್ಷೇತ್ರದಲ್ಲಿ_ಎತ್ತರೆತ್ತರಕ್ಕೆ_ಏರಿದ್ದ_ಪ್ರಕಾಶ್_ಟ್ರಾವೆಲ್ಸ್

#ನೂರಾರು_ಜನರಿಗೆ_ಉದ್ಯೋಗ_ನೀಡಿದ_ಉದ್ಯಮಿ

#ಶುಕ್ರವಾರದಿಂದ_ನಾಪತ್ತೆ!?

  2001 ರಿಂದ ಸಾಗರ ಮೂಲ ಕೇಂದ್ರವಾಗಿ ಪ್ರಾರಂಭವಾದ ಪ್ರಕಾಶ್ ಟ್ರಾವೆಲ್ಸ್ ಸಾರ್ವಜನಿಕ ಸಂಪರ್ಕ ಉದ್ಯಮದಲ್ಲಿ ಅಚ್ಚರಿಗೆ ಕಾರಣ ಆಗಿತ್ತು.
  ಪ್ರಾರಂಭದಲ್ಲಿ ಪ್ರಕಾಶ್ ಮತ್ತು ಗಂಗರಾಜು ಸಹೋದರರು ಹಾಸನದಿಂದ ಉದ್ಯೋಗ ಹುಡುಕಿ ಬಂದ ಉತ್ಸಾಹಿ ಯುವಕ ಸಹೋದರರ ಜೊತೆ ಅವರ ಸೋದರ ಸಂಬಂದಿ ಅವರ ವಯೋಮಾನದವರೇ ಆದ ಅಣ್ಣಪ್ಪ ಕೂಡ ಸಾಥಿ ಅಗುತ್ತಾರೆ.
 ಸಾಗರ -ಸೊರಬ-ಚಿಕ್ಕೆರೂರು ಮಾರ್ಗದ ಗುರುರೇಣುಕಾ ಬಸ್ ನಿಂದ ಪ್ರಾರಂಭ ಆದ ಇವರ ಜೀವನ ಪ್ರಯಾಣ 2020 - ಮಾರ್ಚ್ -24ರ ಸಂಜೆ ಪ್ರದಾನ ಮಂತ್ರಿಗಳು ದೇಶದಾದ್ಯಂತ ಪ್ರಾರಂಬಿಸಿದ ಲಾಕ್ ಡೌನ್ ವರೆಗೆ ವಿಜೃಂಬಿಸಿತು ಅರ್ದ ಶತಕದಷ್ಟು ಬಸ್ ಗಳು ಅದರಲ್ಲಿ ನೂರಾರು ಸಿಬ್ಬಂದಿ, ಪ್ರತಿ ಊರಲ್ಲಿ ಏಜೆಂಟರರು, ಪ್ರತಿನಿತ್ಯ ಸಾವಿರಾರು ಲೀಟರ್ ಡಿಸೇಲ್ ಖರೀದಿ ಇದರ ಮಧ್ಯೆ ಸಿದ್ದಾಪುರ - ಬೆಂಗಳೂರು, ಸೊರಬ-ಬೆಂಗಳೂರು, ಸಾಗರ - ಬೆಂಗಳೂರು ಹೈಟಿಕ್ ಸ್ಲೀಪರ್ ಬಸ್ ಗಳು, ಮದುವೆ - ಪ್ರವಾಸಕ್ಕಾಗಿ ಪ್ರತ್ಯೇಕ ಬಸ್ ಗಳು ಈ ರೀತಿ #ಪ್ರಕಾಶ್_ಟ್ರಾವೆಲ್ಸ್ ಪ್ರಭುದ್ದ ಮಾನಕ್ಕೆ ಬಂದಿತ್ತು.
 ಮೂವರು ಯುವಕರ ಶ್ರಮ ಮಲೆನಾಡಿನ ಪ್ರದೇಶದಲ್ಲಿ ನೂರಾರು ವಾಹನ ಚಾಲಕರ, ನಿರ್ವಾಕರ, ಕ್ಲೀನರ್ ಗಳ, ಏಜೆಂಟರ, ಮೆಕ್ಯಾನಿಕರ್, ಟೈರ್, ಬಿಡಿ ಭಾಗ ಮಾರಾಟಗಾರರ  ಮತ್ತು ಇಂದನ ಪೂರೈಕೆದಾರರಿಗೆ ಉದ್ಯೋಗ ವ್ಯವಹಾರಗಳನ್ನು ಸೃಷ್ಟಿಸಿತ್ತು.
  ಕೊರಾನಾದ ಕರಿನೆರಳು ನಿಂತ ಕೊಟ್ಯಾಂತರ ಬೆಲೆಯ ಬಸ್ ಗಳನ್ನು ತುಕ್ಕು ಹಿಡಿಸಿತು ನಂತರ ಗುಜರಿಗೆ ಮಾರುವ೦ತ ಪರಿಸ್ಥಿತಿ ತಂದಿತು, ಮೊನ್ನೆ ಈ ರೀತಿ ನಿಂತ ಆರು ಬಸ್ ಗುಜರಿಗೆ ಮಾರಿ ಒಂದು ಬಸ್ಸಿನ ಸಾಲ ತೀರಿಸಿದರಂತೆ!!.
  ವ್ಯವಹಾರ ಉತ್ತುಂಗದಲ್ಲಿದ್ದಾಗ ಇವರನ್ನು ಹಾಡಿ ಹೊಗಳಿ ಕೊಟ್ಯಾಂತರ ಲಾಭ ಮಾಡಿಕೊಂಡವರು ಇವರ ಕೆಲ ಸಾವಿರ - ಲಕ್ಷ ಬಾಕಿಗೆ ಇವರನ್ನು ಪೀಡಿಸಿದ್ದಾರೆ, ಜೀವ ಹಿಂಡಿದ್ದಾರೆ ಇದರಿಂದ ನೊಂದ , ತನ್ನ ಕನಸು ನನಸು ಮಾಡಿದ್ದ ಹಾಸನದ ಈ ಯುವಕನ ಸಾಹಸದ ಉದ್ದಿಮೆ ತನ್ನ 50 ದಾಟಿದ ವಯೋಮಾನದಲ್ಲಿ ಮಾನಸಿಕವಾಗಿ ತಡೆದುಕೊಳ್ಳುವ ಶಕ್ತಿ ನೀಡಲಿಲ್ಲವಾ?
  ಎಸ್.ಎಂ.ಕೃಷ್ಣರ ಅಳಿಯ ಸಿದ್ದಾರ್ಥ ಮಂಗಳೂರಿನ ನೇತ್ರಾವತಿ ನದಿ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಂತೆ ಪ್ರಕಾಶ್ ದುಡುಕಿದರಾ? ಗೊತ್ತಿಲ್ಲ ಶುಕ್ರವಾರ ರಾತ್ರಿಯಿಂದ ಅವರ ಕಾರು ಹೊಸನಗರ ತಾಲ್ಲೂಕಿನ ಶರಾವತಿ ನದಿಯ ಪಟಗುಪ್ಪೆಯ ಸೇತುವೆ ಮದ್ಯದಲ್ಲಿ ನಿಂತಿದೆ ಅದರಲ್ಲಿ ಅವರ ಸೆಲ್ ಫೋನ್, ಚಪ್ಪಲಿ ಮತ್ತು ಕಾರ್ ಕೀ ಇದೆ.
 ಕೆಟ್ಟ ಸುದ್ದಿ ಬರದಿರಲಿ, ಉದ್ದಿಮೆದಾರರು ನೂರಾರು ಕುಟುಂಬಕ್ಕೆ ಅನ್ನ ನೀಡಿರುತ್ತಾರೆ ಅವರ ಉದ್ಯಮದಿಂದ ಲಕ್ಷಾಂತರ - ಕೊಟ್ಯಾಂತರ ಲಾಭ ಪಡೆದವರು ಕೆಲವು ಸಾವಿರ ಬಾಕಿಗಾಗಿ ಉದ್ದಿಮೆದಾರರ ಜೀವ ಹಿಂಡುವ ಕೆಲಸದಿಂದ ಇಂತಹ ಘಟನೆಗಳಿಗೆ ಕಾರಣವಾಗುತ್ತಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...