Skip to main content

ಆನಂದಪುರಂ ಇತಿಹಾಸ ಭಾಗ-70, ಆನಂದಪುರಂ ಮಸೀದಿಗೆ ಕೆಳದಿ ಅರಸರು ಭೂದಾನ ನೀಡಿದ ತಾಮ್ರ ಶಾಸನ.

#ಆನ೦ದಪುರಂ_ಇತಿಹಾಸ_70.

#ಆನಂದಪುರಂ_ಖಾದರ್_ಬುಡನ್_ಸಾಬರಲ್ಲಿರುವ_ತಾಮ್ರಪತ್ರ

#ಈ_ತಾಮ್ರ_ಪತ್ರದಲ್ಲಿ_ಏನಿದೆ?

#ಈಗ_ಈ_ತಾಮ್ರ_ಪತ್ರ_ಎಲ್ಲಿದೆ?

#ಈ_ತಾಮ್ರ_ಪತ್ರ_ಆನಂದಪುರಂ_ಮಸೀದಿಗೆ_ಕೆಳದಿ_ರಾಜಾಶ್ರಯ_ಇರುವ_ದಾಖಲೆ.

#ರಾಜಾ_ವೆಂಕಟಪ್ಪನಾಯಕರ_ಮೊಮ್ಮೊಗ_ರಾಜ_ವೀರಭದ್ರನಾಯಕರು_ನೀಡಿದ_ಭೂದಾನ

#ಆನಂದಪುರಂ_ಮಸೀದಿಗೆ_ಭೂದಾನ_ನೀಡಿದ_ತಾಮ್ರಪತ್ರ

2) ಎಪಿಗ್ರಾಪಿಯ ಕ್ರ.ಸಂ 108.
ಕಾಲ ಮಾನ ಕ್ರಿ.ಶ. 1631 AD
ಆನಂದಪುರಂ ಖಾದರ್ ಬುಡನ್ ಸಾಬರಲ್ಲಿರುವ ತಾಮ್ರಪತ್ರದ ವಿವರ.

  ಕೆಳದಿ ರಾಜ ವೆಂಕಟಪ್ಪ ನಾಯಕರ ಪುತ್ರ ಭದ್ರಪ್ಪ ನಾಯಕ, ಭದ್ರಪ್ಪ ನಾಯಕರ ಪುತ್ರ ವೀರಭದ್ರ ನಾಯಕರು ಕ್ರಿ.ಶ. 1631 ರಲ್ಲಿ ಆನಂದಪುರಂನ ಮಸೀದಿಗೆ ದಾನವಾಗಿ 12 ವರಹ ಜಮೀನು ದಾನವಾಗಿ ನೀಡಿದ ಭೂದಾನ ಪತ್ರ ಈ ತಾಮ್ರ ಶಾಸನ.
  ವಿಶೇಷ ಅಂದರೆ ಈ ಶಾಸನದಲ್ಲಿ ಈ ಮಸೀದಿ ಕೆಳದಿ ಅರಸರಿಂದ ನಿಮಿ೯ಸಲ್ಪಟ್ಟದ್ದಾಗಿಯೂ ನಮೂದಿಸಿದ್ದಾರೆ ಮತ್ತು ಮಸೀದಿಯ ದಾರ್ಮಿಕ ಆಚರಣೆಗಾಗಿ ಆನಂದಪುರದ ಸೀಮೆಯ ಮಲವ ಗೊಪ್ಪದಲ್ಲಿ 12 ವರಹಾ ಭೂಮಿ ದಾನ ಕೊಟ್ಟಿದ್ದಾರೆ ಇದರಿಂದ ಕೆಳದಿ ಅರಸರು ಅನ್ಯ ದಮ೯ದವರಿಗೂ ಆಶ್ರಯ ನೀಡಿದವರು ಮತ್ತು ಆನಂದಪುರಂ ಮಸೀದಿಗೆ ಕೆಳದಿ ರಾಜಾಶ್ರಯ ಇತ್ತು ಎಂಬುದು ಇದರಿಂದ ತಿಳಿದು ಬರುತ್ತದೆ.
  ಈ ತಾಮ್ರ ಶಾಸನ 1902ರಲ್ಲಿ ಕರ್ನಾಟಕ ಎಪಿಗ್ರಾಫಿಯಾ ದಲ್ಲಿ ದಾಖಲಾಗಿದೆ, ಆಗ ಈ ತಾಮ್ರ ಶಾಸನ ಆನಂದಪುರಂ ನ ಖಾದರ್ ಬುಡನ್ ಸಾಬರಲ್ಲಿತ್ತು ಈಗ ಬಾದರ್ ಬುಡನ್ ಸಾಹೇಬರ ಕುಟುಂಬದವರು ಯಾರೂ ಇಲ್ಲ.
   ಈ ತಾಮ್ರಪತ್ರ 1968 ರಿಂದ 1988 ರ ವರೆಗೆ ಮಸೀದಿ ಅಧ್ಯಕ್ಷರಾಗಿದ್ದ ಅಬ್ದುಲ್ ಯಹ್ಯಾ ಸಾಹೇಬರ ಸುಪರ್ದಿಯಲ್ಲಿತ್ತು ಅವರ ಕಾಲದಲ್ಲಿ ಸರ್ಕಾರದ ವಕ್ಬ್ ಬೋರ್ಡ್ ಗೆ ಹಸ್ತಾಂತರಿಸಲಾಯಿತು ಈಗ ಅದೆಲ್ಲಿದೆ ಗೊತ್ತಿಲ್ಲ ಅಂತ 1988 ರಿಂದ 1995 ರವರೆಗೆ ಈ ಮಸೀದಿ ಅಧ್ಯಕ್ಷರಾಗಿದ್ದ ಅಬ್ದುಲ್ ವಾಜೀದ್ ಸಾಹೇಬರು ತಿಳಿಸಿದ್ದಾರೆ.
  ಈ ತಾಮ್ರಪತ್ರದಲ್ಲಿನ ಬರವಣಿಗೆ ಈ ಕೆಳಕಂಡಂತೆ ಇದೆ.
 
"ಸ್ವಸ್ತಿ ಶ್ರೀ ಜಯಾಬ್ಯುದಯ - ಶಾಲಿವಾಹನ - ಶೆಕ - ವರುಷ - 1554 ನೇಯ ಪ್ರಜೋತಪಟ್ಟಿ - ಸಂವತ್ಸರದ ಕಾರ್ತಿಕ -ಬಹುಳ - ಶ್ರೀಮದ್ - ಎಡವ-ಮುರಾರಿ ಕೋಟೆ - ಕೋಲಾಹಲ ವಿಶುದ್ದ - ವೈದಿಕದ್ವೈತ -ಸಿದ್ದಾಂತ - ಪ್ರತಿಷ್ಟಾಪಕ - ಶಿವ - ಗುರು - ಭಕ್ತಿ-ಪರಾಯಣದ ಕೆಳದಿ- ವೆಂಕಟಪ್ಪನಾಯಕರ ಪುತ್ರರಾದ ಭದ್ರಪ್ಪ ನಾಯಕರ ಪುತ್ರರಾದ ವೀರಭದ್ರ ನಾಯಕರು ಆನಂದಪುರದ ಸೀಮೆ ಮಲವಗೊಪ್ಪದ ತಾವರೆಕೆರೆ ಹೊಂದಿ ಕಟ್ಟಿಸಿದ ಮಸೀದಿಯ ಧರ್ಮಕ್ಕೆ ಕೊಟ್ಟ ತಾಮ್ರ ಶಾಸನದ ಕ್ರಮವೆಂತ ಅಂದರೆ ಆನಂದಪುರದ ಸೀಮೆ ಯಡಹಳ್ಳಿ ಗ್ರಾಮದಲ್ಲಿ .... ಉಭಯ೦ಗೆ 12 ವರಹದ - ಭೂಮಿಯನ್ನು - ಕೊಟ್ಟೆವ್ - ಆಗಿ - ಆ - ಭೂಮಿಗೆ - ಸಲ್ಲುವ - ಸರ್ವ - ಸ್ವಾಮ್ಯವನ್ನು - ಪ್ರಕು-ಮರ್ಯಾದೆಯಲ್ಲಿ ಆಗ ಮಾಡಿಕೊಂಡು ಮಸೀದಿ - ದರ್ಮಕ್ಕೆ - ಕಲಾಮ್ - ಪ್ರತಿಯಲು - ನಡೆಸಿ - ಬಹದಕೆ ಕೊಟ್ಟ ಧರ್ಮ ಸಾದನ " ಎಂದಿದೆ.
  ಆದರೆ ವಿಪರ್ಯಾಸವೆಂದರೆ ಸದರಿ ಮಸೀದಿ ಸದರಿ ಜಮೀನು ತನ್ನ ಸುಪರ್ದಿಯಲ್ಲಿ ಉಳಿಸಿಕೊಂಡಿಲ್ಲ.
2). ಎಪಿಗ್ರಾಪಿಯಾ ಕ್ರ ಸಂ .108. ಕಾಲ ಮಾನ ಕ್ರಿ.ಶ. 1631AD.
 ಆನಂದಪುರಂ ಖಾದರ್ ಬುಡನ್ ಸಾಬರಲ್ಲಿರುವ ತಾಮ್ರಪತ್ರ

(ಮುಂದಿನ ಭಾಗದಲ್ಲಿ ಆಚಾಪುರ ತೀರ್ಥದ ದೇವಾಲಯದ ಒಳಗಿರುವ ಶಿಲಾ ಶಾಸನದ ಮಾಹಿತಿ)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ