Skip to main content

ಸಭೆ ಮತ್ತು ಸನ್ಮಾನಗಳು ಹೇಗಿರಬೇಕೆಂಬ ಚರ್ಚೆ


#ಖ್ಯಾತ_ಚಿಂತಕರಾದ_ಅರವಿಂದ_ಚೊಕ್ಕಾಡಿಯವರು_ಒಳ್ಳೆಯ_ಚರ್ಚೆ_ಪ್ರಾರಂಬಿಸಿದ್ದಾರೆ.

#ಪ್ರಶಸ್ತಿ_ಹೆಸರಲ್ಲಿ_ನೀಡುವ_ಪ್ಲೇವುಡ್_ಹಲಗೆ_ಬೇಕಾ?

#ಉಪಯೋಗಕ್ಕೆ_ಬಾರದ_ಛದ್ಮವೇಷದಾರಿ_ಶಾಲು_ಹಾರ_ಕಿರೀಟ_ಪೇಟಾ_ಖಡ್ಗಾ

#ಹಣದ_ರೂಪದಲ್ಲೆ_ನೀಡಬಾರದೇಕೆ?

  ನಿಜಕ್ಕೂ ಇದು ಆರೋಗ್ಯಕರ ಚರ್ಚೆ ಈ ಬಗ್ಗೆ ವಿಚಾರವಂತರು ಯೋಚಿಸಬೇಕು.
   ಪ್ರಖ್ಯಾತ ಉಚಿತ ನೇತ್ರ ಚಿಕಿತ್ಸಕರಾಗಿದ್ದ ಡಾಕ್ಟರ್ ಮೋದಿ ಕಾರ್ಯಕ್ರಮಕ್ಕೆ ಮೊದಲೇ ಕೆಲ ಕಂಡೀಷನ್ ಹಾಕುತ್ತಿದ್ದರು ಅವರು ಮತ್ತು ಅವರ ಸಿಬ್ಬಂದಿಗಳಿಗೆ ಊಟ- ವಾಸ್ತವದ ಬಗ್ಗೆ ಮೊದಲೇ ಖಚಿತ ಪಡಿಸಿಕೊಳ್ಳುತ್ತಿದ್ದರು ಮತ್ತು ಉಚಿತ ನೇತ್ರ ಚಿಕಿತ್ಸೆಯ ಪ್ರಾಯೋಜಕರ ಅಸಲಿಯತ್ತು ವಿಚಾರಿಸಿಕೊಂಡೇ ನಂತರ ಕಾರ್ಯಕ್ರಮ ಒಪ್ಪಿಕೊಳ್ಳುತ್ತಿದ್ದರು.
    ಪ್ರಖ್ಯಾತ ಹೋರಾಟಗಾರ ಜಾರ್ಜ್ ಪರ್ನಾಂಡಿಸ್ ರು ಹಾರ ತುರಾಯಿ ಪ್ರಶಸ್ತಿಗಳಿಂದ ಕೊನೆಯ ತನಕ ದೂರ ಇದ್ದರು, ಆದರೆ ಪ್ರೀತಿಯಿಂದ ನೀಡಿದ ಶಾಲು ಸ್ವೀಕರಿಸುತ್ತಿದ್ದರು ಆದರೆ ಶಾಲುಗಳನ್ನು ವಿಶೇಷ ಕಾಳಜಿಯಿಂದ ಸಂಗ್ರಹಿಸಿ ನೂರರ ಬಂಡಲ್ ಮಾಡಿ ಅವರ ಆಯ್ಕೆಯ ವೃದ್ಧಾಶ್ರಮ ಅಥವ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದರು.
  ಮೊನ್ನೆ ನನ್ನ ಕಥಾ ಸಂಕಲನ ಬಿಡುಗಡೆಗೆ ನಾನು ಯಾವುದೇ ಹಾರ ಶಾಲು ತರಲಿಲ್ಲ, ಅತಿಥಿಗಳು ಎಲ್ಲರೂ ಕುಳಿತೇ ಬಾಷಣ ಮಾಡಿದರು, ಪುಸ್ತಕದ ಜೊತೆ ಬಂಗಾಲಿ ಚಂ-ಚಂ ಸಿಹಿ ಪೊಟ್ಟಣ ನೀಡಿದೆ, ಕೆಲವೇ ಆಹ್ವಾನಿತರು ಮತ್ತು ಸ್ಥಳಿಯ ಪತ್ರಕರ್ತರು ಒಂದಾಗಿ ಹಲಸಿನ ಎಲೆ ಕಡಬು ಚಹಾ ಕಾಫಿ ಸೇವಿಸಿ ಕಾರ್ಯಕ್ರಮ ಬರ್ಖಾಸ್ತು ಮಾಡಿದೆ.
  ಗೆಳೆಯರು ಪೇಸ್ ಬುಕ್ ಲೈವ್ ಮಾಡಿದರು, ಶೇರ್ ಮಾಡಿದರು, ಪತ್ರಿಕೆಗಳಲ್ಲಿ ಸುದ್ದಿ ಮಾಡಿದರು.

 #ಕಾರ್ಯಕ್ರಮ_ಪ್ರಾಯೋಜಕರು_ಅತಿಥಿಗಳು_ಯೋಚಿಸಲಿ
    
         ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಸಂಕ್ಷಿಪ್ತ ಸ್ವರೂಪಕ್ಕೆ ತರಬೇಕು, ವೇದಿಕೆ ಇತ್ಯಾದಿಗೆ ಆಗುವ ಅನಾವಶ್ಯಕ ವೆಚ್ಚ ತಡೆಯಬೇಕು, ಪ್ರತ್ಯಕ್ಷ ಪ್ರೇಕ್ಷಕರ ಹಾಜರಾತಿ ಆಯ್ಕೆಯ ಮಾನದಂಡದಂತೆ 20ಕ್ಕೂ ಕಡಿಮೆ ಇರಲಿ, ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಬರುವವರಿಗೆ ಅವರ ಪ್ರಯಾಣ ವೆಚ್ಚ ಭರಿಸಿಯೂ ಉಳಿಯುವಷ್ಟು ಸಂಭಾವನೆ ಹಣದ ರೂಪದಲ್ಲೇ ಕೊಡಬೇಕು.
 ನೆನಪಿನ ಕಾಣಿಕೆ, ಶಾಲು, ಹಾರ, ಮೈಸೂರು ಪೇಟ ಮತ್ತು ಯಾವುದೋ ಸಿಕ್ಕಿದ ಪುಸ್ತಕ ನಿಷೇದಿಸಬೇಕು.
  ಅತಿಥಿ ಆಗಿ ಬಂದವರಿಗೆ ಅವರು ಬಂದ ಸಂದರ್ಭಕ್ಕೆ ಅನುಗುಣ ಆಗಿ ಊಟ-ಉಪಹಾರ ವ್ಯವಸ್ಥೆ ಕಡ್ಡಾಯ ಆಗಿರಲಿ, ದೂರದಿಂದ ಬಂದವರಿಗೆ ವಸತಿ ವ್ಯವಸ್ಥೆ ಕೂಡ.
  ಎಂತೆಂತಹ ಖ್ಯಾತರನ್ನು ಪ್ರಶಸ್ತಿ ಕೊಡುವುದಾಗಿ ಘೋಷಿಸಿ (ಅವರೂ ಕೀರ್ತಿ ಶನಿಯ ಶಾಪಗ್ರಸ್ತರು) ಆ ಕಾರ್ಯಕ್ರಮಕ್ಕೆ ರೋಲ್ ಕಾಲ್ ಹಣ ಸಂಗ್ರಹಿಸಿ, ಇಂತಹ ತಗಡು ಪ್ರಶಸ್ತಿ - ಪ್ಲಾಸ್ಟಿಕ್ ನ ಬೆಳ್ಳಿ ಕೊಟಿಂಗ್ ಖಡ್ಗಾ - ಮೈಸೂರು ಪೇಟಾದ ತದ್ರೂಪಿ ಗಿಲೀಟು ಪೇಟ -ಜರಿ ಶಾಲಿನ ನಕಲಿ ಶಾಲು - ಪ್ಲಾಸ್ಟಿಕ್ ಮಣಿಹಾರ ಹಾಕಿ ಮದ್ಯರಾತ್ರಿಯಲ್ಲಿ ಅತಿಥಿ ಮಹೋದಯರನ್ನು ರಸ್ತೆ ಮೇಲೆ ಅನಾಥರನ್ನು ಮಾಡುವ ಈ ಕಾಲದಲ್ಲಿ ಭಾಗವಹಿಸುವ ಅತಿಥಿ ಮಹೋದಯರೂ ಕಾರ್ಯಕ್ರಮದ ಆಯೋಜಕರ ಅಸಲಿಯತ್ತು ಅರಿತಿರಬೇಕು.
  ಈಗಷ್ಟೆ ಒಂದು ಪೋಸ್ಟ್ ನೋಡಿದೆ ಪ್ರತಿಷ್ಟಿತ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರದ್ದು ನಿನ್ನೆ ಅವರಿಗೆ 212 ನೇ ಸನ್ಮಾನ ಆಯಿತಂತೆ!?.
  ಕೆಲವರ೦ತು ಪ್ರಶಸ್ತಿ ಸನ್ಮಾನಕ್ಕಿಂತ ಮುಂದಕ್ಕೆ ಓಡುತ್ತಿರುತ್ತಾರೆ ಇಂತವರಿಗೆ ಸನ್ಮಾನ ಪ್ರಶಸ್ತಿ ಕೊಡಲು ರೋಲ್ ಕಾಲ್ ಸಂಘಟನೆಗಳೂ ಅಷ್ಟೆ ಇದೆ.
  ಸರಿಯಾಗಿ ಸಾಮಾಜಿಕ ತಾಣ ಬಳಕೆ ಮಾಡಿಕೊಂಡರೆ ಸರಿಯಾದ ವಿಚಾರ ಸರಿಯಾದ ಜನರಿಗೆ ತಲುಪುತ್ತದೆ.
  #ಪ್ರಶಸ್ತಿ_ಸನ್ಮಾನಗಳು_ಅಪಹಾಸ್ಯ_ಆಗದಿರಲಿ

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ