Skip to main content

ಸಭೆ ಮತ್ತು ಸನ್ಮಾನಗಳು ಹೇಗಿರಬೇಕೆಂಬ ಚರ್ಚೆ


#ಖ್ಯಾತ_ಚಿಂತಕರಾದ_ಅರವಿಂದ_ಚೊಕ್ಕಾಡಿಯವರು_ಒಳ್ಳೆಯ_ಚರ್ಚೆ_ಪ್ರಾರಂಬಿಸಿದ್ದಾರೆ.

#ಪ್ರಶಸ್ತಿ_ಹೆಸರಲ್ಲಿ_ನೀಡುವ_ಪ್ಲೇವುಡ್_ಹಲಗೆ_ಬೇಕಾ?

#ಉಪಯೋಗಕ್ಕೆ_ಬಾರದ_ಛದ್ಮವೇಷದಾರಿ_ಶಾಲು_ಹಾರ_ಕಿರೀಟ_ಪೇಟಾ_ಖಡ್ಗಾ

#ಹಣದ_ರೂಪದಲ್ಲೆ_ನೀಡಬಾರದೇಕೆ?

  ನಿಜಕ್ಕೂ ಇದು ಆರೋಗ್ಯಕರ ಚರ್ಚೆ ಈ ಬಗ್ಗೆ ವಿಚಾರವಂತರು ಯೋಚಿಸಬೇಕು.
   ಪ್ರಖ್ಯಾತ ಉಚಿತ ನೇತ್ರ ಚಿಕಿತ್ಸಕರಾಗಿದ್ದ ಡಾಕ್ಟರ್ ಮೋದಿ ಕಾರ್ಯಕ್ರಮಕ್ಕೆ ಮೊದಲೇ ಕೆಲ ಕಂಡೀಷನ್ ಹಾಕುತ್ತಿದ್ದರು ಅವರು ಮತ್ತು ಅವರ ಸಿಬ್ಬಂದಿಗಳಿಗೆ ಊಟ- ವಾಸ್ತವದ ಬಗ್ಗೆ ಮೊದಲೇ ಖಚಿತ ಪಡಿಸಿಕೊಳ್ಳುತ್ತಿದ್ದರು ಮತ್ತು ಉಚಿತ ನೇತ್ರ ಚಿಕಿತ್ಸೆಯ ಪ್ರಾಯೋಜಕರ ಅಸಲಿಯತ್ತು ವಿಚಾರಿಸಿಕೊಂಡೇ ನಂತರ ಕಾರ್ಯಕ್ರಮ ಒಪ್ಪಿಕೊಳ್ಳುತ್ತಿದ್ದರು.
    ಪ್ರಖ್ಯಾತ ಹೋರಾಟಗಾರ ಜಾರ್ಜ್ ಪರ್ನಾಂಡಿಸ್ ರು ಹಾರ ತುರಾಯಿ ಪ್ರಶಸ್ತಿಗಳಿಂದ ಕೊನೆಯ ತನಕ ದೂರ ಇದ್ದರು, ಆದರೆ ಪ್ರೀತಿಯಿಂದ ನೀಡಿದ ಶಾಲು ಸ್ವೀಕರಿಸುತ್ತಿದ್ದರು ಆದರೆ ಶಾಲುಗಳನ್ನು ವಿಶೇಷ ಕಾಳಜಿಯಿಂದ ಸಂಗ್ರಹಿಸಿ ನೂರರ ಬಂಡಲ್ ಮಾಡಿ ಅವರ ಆಯ್ಕೆಯ ವೃದ್ಧಾಶ್ರಮ ಅಥವ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದರು.
  ಮೊನ್ನೆ ನನ್ನ ಕಥಾ ಸಂಕಲನ ಬಿಡುಗಡೆಗೆ ನಾನು ಯಾವುದೇ ಹಾರ ಶಾಲು ತರಲಿಲ್ಲ, ಅತಿಥಿಗಳು ಎಲ್ಲರೂ ಕುಳಿತೇ ಬಾಷಣ ಮಾಡಿದರು, ಪುಸ್ತಕದ ಜೊತೆ ಬಂಗಾಲಿ ಚಂ-ಚಂ ಸಿಹಿ ಪೊಟ್ಟಣ ನೀಡಿದೆ, ಕೆಲವೇ ಆಹ್ವಾನಿತರು ಮತ್ತು ಸ್ಥಳಿಯ ಪತ್ರಕರ್ತರು ಒಂದಾಗಿ ಹಲಸಿನ ಎಲೆ ಕಡಬು ಚಹಾ ಕಾಫಿ ಸೇವಿಸಿ ಕಾರ್ಯಕ್ರಮ ಬರ್ಖಾಸ್ತು ಮಾಡಿದೆ.
  ಗೆಳೆಯರು ಪೇಸ್ ಬುಕ್ ಲೈವ್ ಮಾಡಿದರು, ಶೇರ್ ಮಾಡಿದರು, ಪತ್ರಿಕೆಗಳಲ್ಲಿ ಸುದ್ದಿ ಮಾಡಿದರು.

 #ಕಾರ್ಯಕ್ರಮ_ಪ್ರಾಯೋಜಕರು_ಅತಿಥಿಗಳು_ಯೋಚಿಸಲಿ
    
         ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಸಂಕ್ಷಿಪ್ತ ಸ್ವರೂಪಕ್ಕೆ ತರಬೇಕು, ವೇದಿಕೆ ಇತ್ಯಾದಿಗೆ ಆಗುವ ಅನಾವಶ್ಯಕ ವೆಚ್ಚ ತಡೆಯಬೇಕು, ಪ್ರತ್ಯಕ್ಷ ಪ್ರೇಕ್ಷಕರ ಹಾಜರಾತಿ ಆಯ್ಕೆಯ ಮಾನದಂಡದಂತೆ 20ಕ್ಕೂ ಕಡಿಮೆ ಇರಲಿ, ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿಗಳಾಗಿ ಬರುವವರಿಗೆ ಅವರ ಪ್ರಯಾಣ ವೆಚ್ಚ ಭರಿಸಿಯೂ ಉಳಿಯುವಷ್ಟು ಸಂಭಾವನೆ ಹಣದ ರೂಪದಲ್ಲೇ ಕೊಡಬೇಕು.
 ನೆನಪಿನ ಕಾಣಿಕೆ, ಶಾಲು, ಹಾರ, ಮೈಸೂರು ಪೇಟ ಮತ್ತು ಯಾವುದೋ ಸಿಕ್ಕಿದ ಪುಸ್ತಕ ನಿಷೇದಿಸಬೇಕು.
  ಅತಿಥಿ ಆಗಿ ಬಂದವರಿಗೆ ಅವರು ಬಂದ ಸಂದರ್ಭಕ್ಕೆ ಅನುಗುಣ ಆಗಿ ಊಟ-ಉಪಹಾರ ವ್ಯವಸ್ಥೆ ಕಡ್ಡಾಯ ಆಗಿರಲಿ, ದೂರದಿಂದ ಬಂದವರಿಗೆ ವಸತಿ ವ್ಯವಸ್ಥೆ ಕೂಡ.
  ಎಂತೆಂತಹ ಖ್ಯಾತರನ್ನು ಪ್ರಶಸ್ತಿ ಕೊಡುವುದಾಗಿ ಘೋಷಿಸಿ (ಅವರೂ ಕೀರ್ತಿ ಶನಿಯ ಶಾಪಗ್ರಸ್ತರು) ಆ ಕಾರ್ಯಕ್ರಮಕ್ಕೆ ರೋಲ್ ಕಾಲ್ ಹಣ ಸಂಗ್ರಹಿಸಿ, ಇಂತಹ ತಗಡು ಪ್ರಶಸ್ತಿ - ಪ್ಲಾಸ್ಟಿಕ್ ನ ಬೆಳ್ಳಿ ಕೊಟಿಂಗ್ ಖಡ್ಗಾ - ಮೈಸೂರು ಪೇಟಾದ ತದ್ರೂಪಿ ಗಿಲೀಟು ಪೇಟ -ಜರಿ ಶಾಲಿನ ನಕಲಿ ಶಾಲು - ಪ್ಲಾಸ್ಟಿಕ್ ಮಣಿಹಾರ ಹಾಕಿ ಮದ್ಯರಾತ್ರಿಯಲ್ಲಿ ಅತಿಥಿ ಮಹೋದಯರನ್ನು ರಸ್ತೆ ಮೇಲೆ ಅನಾಥರನ್ನು ಮಾಡುವ ಈ ಕಾಲದಲ್ಲಿ ಭಾಗವಹಿಸುವ ಅತಿಥಿ ಮಹೋದಯರೂ ಕಾರ್ಯಕ್ರಮದ ಆಯೋಜಕರ ಅಸಲಿಯತ್ತು ಅರಿತಿರಬೇಕು.
  ಈಗಷ್ಟೆ ಒಂದು ಪೋಸ್ಟ್ ನೋಡಿದೆ ಪ್ರತಿಷ್ಟಿತ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರದ್ದು ನಿನ್ನೆ ಅವರಿಗೆ 212 ನೇ ಸನ್ಮಾನ ಆಯಿತಂತೆ!?.
  ಕೆಲವರ೦ತು ಪ್ರಶಸ್ತಿ ಸನ್ಮಾನಕ್ಕಿಂತ ಮುಂದಕ್ಕೆ ಓಡುತ್ತಿರುತ್ತಾರೆ ಇಂತವರಿಗೆ ಸನ್ಮಾನ ಪ್ರಶಸ್ತಿ ಕೊಡಲು ರೋಲ್ ಕಾಲ್ ಸಂಘಟನೆಗಳೂ ಅಷ್ಟೆ ಇದೆ.
  ಸರಿಯಾಗಿ ಸಾಮಾಜಿಕ ತಾಣ ಬಳಕೆ ಮಾಡಿಕೊಂಡರೆ ಸರಿಯಾದ ವಿಚಾರ ಸರಿಯಾದ ಜನರಿಗೆ ತಲುಪುತ್ತದೆ.
  #ಪ್ರಶಸ್ತಿ_ಸನ್ಮಾನಗಳು_ಅಪಹಾಸ್ಯ_ಆಗದಿರಲಿ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...