Skip to main content

ಆನಂದಪುರಂ ಇತಿಹಾಸ 68, ಆನಂದಪುರಂ ಸುತ್ತಮುತ್ತಲಿನ ದಾಖಲಾಗಿರುವ 32 ಶಿಲಾ ಶಾಸನ ಮತ್ತು 2 ತಾಮ್ರ ಶಾಸನಗಳು.

#ಆನಂದಪುರಂ_ಇತಿಹಾಸ_68.

#ಆನಂದಪುರಂ_ಸುತ್ತಮುತ್ತಲಿನಲ್ಲಿರುವ_ಶಿಲಾಶಾಸನ_ತಾಮ್ರಪತ್ರ

#ಸ್ಥಳಿಯ_ಇತಿಹಾಸಕ್ತರು_ಶಾಲಾ_ವಿದ್ಯಾರ್ಥಿಗಳು_ಗ್ರಾಮಪಂಚಾಯಿತಿಗಳು_ಸಂರಕ್ಷಿಸ_ಬಹುದಾದದ್ದು.

#ದಾಖಲಾಗದ_ಅನೇಕ_ಶಾಸನಗಳನ್ನು_ಗುರುತಿಸ_ಬೇಕಾಗಿದೆ.

#ಆನಂದಪುರಂ_ಇತಿಹಾಸ_ಹತ್ತನೇ_ಶತಮಾನದಿಂದ_ಶಿಲಾಶಾಸನಗಳಲ್ಲಿ_ದಾಖಲಾಗಿದೆ.

#ಬೆಂಜಮಿನ್_ಲೆವಿಸ್_ರೈಸ್_1902ರಲ್ಲಿ_ಪ್ರಕಟಿಸಿದ_ಎಪಿಗ್ರಾಪಿಯ_ಕರ್ನಾಟಕದಲ್ಲಿ_ಪ್ರಕಟವಾಗಿರುವ_ಶಾಸನಗಳು

#36ಶಿಲಾ_ಶಾಸನಗಳು_ಮತ್ತು_2_ತಾಮ್ರಪತ್ರಗಳು_ಯಾವವು?

#ಇವುಗಳ_ಸಂರಕ್ಷಣೆ_ಮತ್ತು_ಸಂಶೋದನೆ_ಆಗಬೇಕು.

#ಇದರಲ್ಲಿ_ದಾಖಲಾಗದ_ಇನ್ನೂ_ಅನೇಕ_ಶಾಸನಗಳು_ಇದೆ.

 ಶಿಲಾ ಶಾಸನಗಳು ಮತ್ತು ತಾಮ್ರಪತ್ರಗಳು ಅಂದರೆ ಅದು ಲಿಖಿತ ರಾಜಾಜ್ಞೆ, ದಾನ ದತ್ತಿ ನೀಡಿದಾಗ ಇಂತಹ ರಾಜಾಜ್ಞೆ ಶಿಲೆಯಲ್ಲಿ ಕೆತ್ತಿ ಸಾವ೯ಜನಿಕರ ಮಾಹಿತಿಗಾಗಿ ಮುಖ್ಯ ಸ್ಥಳದಲ್ಲಿ ಭೂಮಿಯಲ್ಲಿ ನೆಡುತ್ತಿದ್ದರು.
    ಖಾಸಾಗಿಯಾಗಿ ನೀಡುತ್ತಿದ್ದ ದಾನವನ್ನು ತಾಮ್ರ ಪತ್ರದಲ್ಲಿ ಬರೆಸಿ ಕೊಡುವ ಪದ್ದತಿ ರಾಜರುಗಳದ್ದು.
 ವೀರ ಕಲ್ಲುಗಳು ಸತಿ ಸಹಗಮನದ ಕಲ್ಲುಗಳೂ ಕೂಡ ಇದೇ ರೀತಿ ನೆಡಲಾಗಿದೆ.
    ಸಾವಿರಾರು ವರ್ಷದ ಇತಿಹಾಸದ ಕಥೆ ಹೇಳುವ ಈ ಕಲ್ಲುಗಳು ಮಾಹಿತಿಯ ಕೊರತೆಯಿಂದಲೋ ಅಥವ ನಮ್ಮ ಉದಾಸೀನದಿಂದಲೋ ಕಣ್ಮರೆ ಆಗುತ್ತಿದೆ ಹಾಳಾಗುತ್ತಿದೆ.   
#ಆನಂದಪುರಂ_ಸುತ್ತ_ಮುತ್ತಲಿನ_ಶಿಲಾಶಾಸನಗಳು
 1894-1905 ರಲ್ಲಿ ಮೈಸೂರು ಅರ್ಕಾಲಾಚಿಕಲ್ ಡಿಪಾರ್ಟ್ಮೆಂಟ್ ನಿರ್ದೇಶಕರಾಗಿದ್ದಾಗ ಪ್ರಕಟ ಮಾಡಿದ 12 ಸಂಪುಟಗಳ ಎಪಿಗ್ರಾಪಿಯ ಕರ್ನಾಟಕದಲ್ಲಿ ಆನಂದಪುರಂ ಸುತ್ತಲಿನ 36 ಶಿಲಾ ಶಾಸನಗಳು ಮತ್ತು 2 ತಾಮ್ರ ಶಾಸನಗಳು ದಾಖಲಾಗಿದೆ.

  ಅವುಗಳು ಈ ರೀತಿ ಕ್ರಮವಾಗಿದೆ
1) ಎಪಿಗ್ರಾಪಿಯ ಕ್ರ.ಸಂ. 107,ಕಾಲಮಾನ ಕ್ರಿ.ಶ.1507AD ಆನಂದಪುರಂನ ರಂಗನಾಥ ದೇವಸ್ಥಾನದ ಪ್ರಕಾರದಲ್ಲಿರುವ ಗರುಡ ಗಂಬದ ಕೆಳಗಿನ ಶಿಲಾಶಾಸನ.

2). ಎಪಿಗ್ರಾಪಿಯಾ ಕ್ರ ಸಂ .108. ಕಾಲ ಮಾನ ಕ್ರಿ.ಶ. 1631AD.
 ಆನಂದಪುರಂ ಖಾದರ್ ಬುಡನ್ ಸಾಬರಲ್ಲಿರುವ ತಾಮ್ರಪತ್ರ

3). ಎಪಿಗ್ರಾಪಿಯ ಕ್ರ.ಸ. 109.
ಕಾಲ ಮಾನ ಕ್ರಿ.ಶ. 1079AD.
ಆಚಾಪುರ ತೀರ್ಥದಲ್ಲಿರುವ ಶಿಲಾ ಶಾಸನ.

4) . ಎಪಿಗ್ರಾಪಿಯ ಕ್ರ.ಸ. 109.
ಕಾಲ ಮಾನ ಕ್ರಿ.ಶ. 1042AD.
 ಆಚಾಪುರ ರಾ.ಹೆ. 206 ರಲ್ಲಿರುವ 8 ಅಡಿ ಎತ್ತರ ಮತ್ತು ನಾಲ್ಕು ಅಡಿ ಅಗಲದ ಬೃಹತ್ ಶಿಲಾ ಶಾಸನ.

5) . ಎಪಿಗ್ರಾಫಿಯ ಕ್ರ.ಸಂ. 110
ಕಾಲ ಮಾನ ಕ್ರಿ.ಶ.1292AD.
ಚೆನ್ನಶೆಟ್ಟಿಕೊಪ್ಪದ ಕೆರೆ ಬಳಿ ಇರುವ ವೀರಕಲ್ಲು.

6) . ಎಪಿಗ್ರಾಪಿಯ ಕ್ರ.ಸಂ.111
ಕಾಲ ಮಾನ- ಕ್ರಿ.ಶ.1712AD.
  ಹೊಸೂರು ಗ್ರಾಮದ ಹಳೆಪೈಕದವರ ಮನೆ ಹಿಂದಿನ ಶಿಲಾಶಾಸನ.

7) . ಎಪಿಗ್ರಾಫಿಯ ಕ್ರ.ಸಂ. 112
ಕಾಲಮಾನ ಕ್ರಿ.ಶ.1165AD.
 ಹೊಸೂರು ಮಜರೆ ಬಸವ ನೆಲ್ಲೂರು ಈಶ್ವರ ದೇವಾಲಯದ ಎದುರು ನೆಟ್ಟಿರುವ 1ನೇ ವೀರ ಕಲ್ಲು.

8). ಎಫಿಗ್ರಾಪಿಯ ಕ್ರ.ಸಂ. 113.
ಕಾಲಮಾನ ಕ್ರಿ.ಶ.1165AD.
ಇದೇ ಸ್ಥಳದಲ್ಲಿ 2ನೇ ವೀರಕಲ್ಲು.

9). ಎಪಿಗ್ರಾಫಿಯ ಕ್ರ.ಸಂ. 114
ಕಾಲಮಾನ ಕ್ರಿ.ಶ.1166AD.
 ಇದೇ ಸ್ಥಳದಲ್ಲಿ 3 ನೇ ವೀರ ಕಲ್ಲು.

10). ಎಪಿಗ್ರಾಫಿಯ ಕ್ರ.ಸ. 115,
ಕಾಲ ಮಾನ ಕ್ರಿ.ಶ.
ಆನಂದಪುರಂ ಹೋಬಳಿ ಚಿಪ್ಪಳಿ ಈಶ್ವರ ದೇವಸ್ಥಾನದ ಮುಂದಿನ ವೀರ ಕಲ್ಲು.

11). ಎಪಿಗ್ರಾಪಿಯ ಕ್ರ.ಸಂ. 116
ಕಾಲಮಾನ ಕ್ರಿ.ಶ.1170AD.
 ಆನಂದಪುರಂ ಹೋಬಳಿ ತಂಗಳವಾಡಿ ಗ್ರಾಮದ ಬಾಗಿ ದೇವರ ಗುಡ್ಡದ ಬುಡದಲ್ಲಿ ಬಿದಿರ ಕಾಡಿನೊಳಗೆ ಪಾಳು ಬಿದ್ದ ಈಶ್ವರ ದೇವಾಲಯದ ಮಗ್ಗುಲಲ್ಲಿ ಬಿದ್ದಿರುವ ವೀರ ಕಲ್ಲು.

12) . ಎಪಿಗ್ರಾಪಿಯ ಕ್ರ.ಸಂ. 120.
ಕಾಲಮಾನ ಕ್ರಿ.ಶ.1063AD.
ಇದೇ ಗ್ರಾಮದ ಮಾಸ್ತಿಕಲ್ಲಿನಲ್ಲಿರುವ 1ನೇ ವೀರ ಕಲ್ಲು.

13). ಎಪಿಗ್ರಾಫಿಯ ಕ್ರ.ಸಂ. 121.
ಕಾಲಮಾನ ಕ್ರಿ.ಶ.1250AD.
ಇದೇ ಸ್ಥಳದಲ್ಲಿರುವ 2ನೇ ವೀರ ಕಲ್ಲು.

14). ಎಫಿಗ್ರಾಫಿಯಾ ಕ್ರ.ಸಂ. 122 .
 ಕಾಲ ಮಾನ ಕ್ರಿ.ಶ.
ಇದೇ ಸ್ಥಳದಲ್ಲಿರುವ 3ನೇ ವೀರ ಕಲ್ಲು.

15). ಎಪಿಗ್ರಾಫಿಯ ಕ್ರ.ಸಂ. 123.
ಕಾಲ ಮಾನ ಕ್ರಿ.ಶ.1606AD.
ಇದೇ ಹೋಬಳಿಯ ಯಡೇಹಳ್ಳಿ ಗ್ರಾಮದ ಮಲ್ಲೇಕೊಪ್ಪದ ಪುಟ್ಟಪ್ಪನಲ್ಲಿರುವ ತಾಮ್ರದ ಶಾಸನ (ಹಾಲಿ ಶಾಂತಬೈಲು ಪಂಚಾಕ್ಷರಯ್ಯರ ಹತ್ತಿರ ಇದೆ).

16). ಎಪಿಗ್ರಾಪಿಯ ಕ್ರ.ಸಂ. 124.
ಕಾಲಮಾನ ಕ್ರಿ.ಶ.1215AD.
ಇದೇ ಹೋಬಳಿಯ ನಾಡ ಮಂಚಾಲೆ ಗ್ರಾಮದ ಸರ್ವೆ ನಂಬರ್ 39 ನೇ ಕಾನಿನಲ್ಲಿರುವ 1ನೇ ವೀರ ಕಲ್ಲು.

17). ಎಪಿಗ್ರಾಫಿಯ ಕ್ರ ಸಂ .125.
ಕಾಲಮಾನ ಕ್ರಿ.ಶ.1216AD.
ಇದೇ ಗ್ರಾಮದಲ್ಲಿರುವ 2 ನೇ ವೀರ ಕಲ್ಲು.

18). ಎಪಿಗ್ರಾಫಿಯ ಕ್ರ.ಸಂ. 126 .
ಕಾಲ ಮಾನ ಕ್ರಿ.ಶ.1226AD.
ಇದೇ ಗ್ರಾಮದಲ್ಲಿರುವ 3ನೇ ವೀರ ಕಲ್ಲು.

19). ಎಪಿಗ್ರಾಫಿಯ ಕ್ರ.ಸಂ. 127 .
ಕಾಲ ಮಾನ ಕ್ರಿ.ಶ.1245AD.
ಇದೇ ಗ್ರಾಮದಲ್ಲಿರುವ 4 ನೇ ವೀರ ಕಲ್ಲು.

20). ಎಪಿಗ್ರಾಫಿಯ ಕ್ರ.ಸಂ. 132 .
ಕಾಲ ಮಾನ ಕ್ರಿ.ಶ.1180AD.
ಇದೇ ಹೋಬಳಿ ಹೊಸಗುಂದದ ಈಶ್ವರ ದೇವಸ್ಥಾನದ ಬಳಿ ನೆಟ್ಟ 1 ನೇ ವೀರ ಕಲ್ಲು.

21). ಎಪಿಗ್ರಾಫಿಯಾ ಕ್ರ.ಸಂ. 133
ಕಾಲಮಾನ ಕ್ರಿ.ಶ.1218AD.
ಇದೇ ಸ್ಥಳದಲ್ಲಿರುವ 2ನೇ ಮತ್ತು 3 ನೇ ವೀರ ಕಲ್ಲು.

22) ಎಪಿಗ್ರಾಫಿಯ ಕ್ರ ಸಂ .135.
ಕಾಲಮಾನ ಕ್ರಿ.ಶ.1300AD.
ಇದೇ ಹೋಬಳಿಯ ಹೊಸಗುಂದ ಕಂಚಿ ಕಾಳಮ್ಮನ ಬನದಲ್ಲಿರುವ ಶಿಲಾ ಶಾಸನ.

23). ಎಫಿಗ್ರಾಪಿಯ ಕ್ರ.ಸಂ. 136.
ಕಾಲ ಮಾನ ಕ್ರಿ.ಶ.1220AD.
ಇದೇ ಗ್ರಾಮದ ಕಾನಿನಲ್ಲಿ ನಟ್ಟಿರುವ 1ನೇ ವೀರ ಕಲ್ಲು.

24). ಎಪಿಗ್ರಾಫಿಯ ಕ್ರ ಸಂ .137.
ಕಾಲ ಮಾನ ಕ್ರಿ.ಶ.1290AD.
ಇದೇ ಸ್ಥಳದಲ್ಲಿರುವ 2ನೇ ವೀರ ಕಲ್ಲು.

25). ಎಫಿಗ್ರಾಪಿಯ ಕ್ರ.ಸಂ 138.
ಕಾಲ ಮಾನ ಕ್ರಿ.ಶ.1269AD.
 ಇದೇ ಸ್ಥಳದಲ್ಲಿರುವ ವೀರ ಕಲ್ಲು.

26). ಎಪಿಗ್ರಾಫಿಯ ಕ್ರ.ಸಂ. 139
ಕಾಲ ಮಾನ ಕ್ರಿ.ಶ.1264AD.
ಇದೇ ಸ್ಥಳದ 3 ನೇ ವೀರ ಕಲ್ಲು.

27). ಎಪಿಗ್ರಾಪಿಯ ಕ್ರ.ಸಂ. 140.
ಕಾಲ ಮಾನ ಕ್ರಿ.ಶ. 1265AD.
ಇದೇ ಸ್ಥಳದ 4ನೇ ವೀರ ಕಲ್ಲು.

28). ಎಪಿಗ್ರಾಪಿಯ ಕ್ರ.ಸಂ. 141.
ಕಾಲ ಮಾನ ಕ್ರಿ.ಶ.1229AD.
ಇದೇ ಸ್ಥಳದ 5 ನೇ ವೀರ ಕಲ್ಲು.

29). ಎಫಿಗ್ರಾಫಿಯ ಕ್ರ.ಸಂ. 142 .
ಕಾಲಮಾನ ಕ್ರಿ.ಶ.
 ಇದೇ ಕಾನಿನಲ್ಲಿ ಮತ್ತೊಂದು ಸ್ಥಳದಲ್ಲಿ ನೆಟ್ಟ ವೀರ ಕಲ್ಲು.

30). ಎಪಿಗ್ರಾಫಿಯ ಕ್ರ.ಸಂ. 143.
ಕಾಲಮಾನ ಕ್ರಿ.ಶ.
ಇದೇ ಸ್ಥಳದಲ್ಲಿ 2ನೇ ವೀರ ಕಲ್ಲು (ಮೇಲ್ಬಾಗ ಒಡೆದು ಹೋಗಿದೆ).

31). ಎಪಿಗ್ರಾಪಿಯ ಕ್ರ .ಸಂ . 150.
ಕಾಲ ಮಾನ ಕ್ರಿ.ಶ.1255AD.
ಇದೇ ಸ್ಥಳದ 3 ನೇ ವೀರ ಕಲ್ಲು.

32). ಎಪಿಗ್ರಾಫಿಯ ಕ್ರ.ಸಂ.
ಕಾಲಮಾನ ಕ್ರಿ.ಶ.
ಇದೇ ಸ್ಥಳದಲ್ಲಿ 4 ರಿಂದ 10 ವೀರ ಕಲ್ಲಿದೆ.

33). ಎಫಿಗ್ರಾಫಿಯ ಕ್ರ.ಸಂ. 151 .
ಕಾಲ ಮಾನ ಕ್ರಿ.ಶ.
ಆನಂದಪುರಂ ಹೋಬಳಿ ಮಳಲಿ ಗ್ರಾಮದ ವಿನಾಯಕ ದೇವಸ್ಥಾನದ ಮುಂಭಾಗದ ಶಿಲಾಶಾಸನ.

#ಇವಿಷ್ಟು_ಹಾಲಿ_1902ರಲ್ಲಿ_ಮೈಸೂರು_ಆಕಾ೯ಲಾಜಿಕಲ್_ಡಿಪಾರ್ಟ್ಮೆಂಟ್_ಪ್ರಕಟಿಸಿದ_ಎಪಿಗ್ರಾಫಿಯಾ_ಕರ್ನಾಟಕದ (12 ಸಂಪುಟಗಳ) ಲ್ಲಿ ದಾಖಲಾದ ಶಾಸನಗಳು.
 ಸ್ಥಳಿಯ ಗ್ರಾಮಸ್ಥರು, ಗ್ರಾಮ ಪಂಚಾಯತ್ ಗಳು ಮತ್ತು ಸಂಘ ಸಂಸ್ಥೆಗಳು ಈ ಶಿಲಾಶಾಸನಗಳನ್ನು ಸಂರಕ್ಷಿಸಬೇಕು ಮತ್ತು ಸ್ಥಳಿಯ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳಿಗೆ ಈ ಶಿಲಾಶಾಸನಗಳ ಮಾಹಿತಿ ನೀಡಿ ಸಂಶೋಧನೆಗೆ ಪ್ರೋತ್ಸಾಹಿಸಬೇಕು.
 (ಮುಂದಿನ ಭಾಗದಲ್ಲಿ ಈ ಶಿಲಾಶಾಸನ ಮತ್ತು ತಾಮ್ರ ಶಾಸನದಲ್ಲಿ ಏನಿದೆ?)

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...