Skip to main content

ನಮ್ಮ ಜಿಲ್ಲೆಯ ಹೆಮ್ಮೆಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಸೋತಾಗ, ಗೆದ್ದಾಗ ಮತ್ತು ಮಂತ್ರಿ ಆದಾಗಲೂ ಬದಲಾಗದ ಜನಾನುರಾಗಿ ನಡತೆ.

#ಆರಗ_ಜ್ಞಾನೇಂದ್ರ_ಗೃಹಸಚಿವರಾದ_ಮೇಲೆ_ಬದಲಾದರ?

#ಕೋಟಾದ_ಕೊರಗರ_ಮೇಲಿನ_ಪೋಲಿಸ್_ದೌಜ೯ನ್ಯ

#ಅನಾಥ_ಆಶ್ರಮ_ನಡೆಸುವ_ಸ್ನೇಕ್_ಪ್ರಭಾಕರ್_ಅನುಭವ_ಏನು?

   ನಮ್ಮ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರರಿಗೆ ಬೊಮ್ಮಾಯಿ ಸರ್ಕಾರದಲ್ಲಿ ಗೃಹ ಸಚಿವರ ಸ್ಥಾನಮಾನ ದೊರಕಿದೆ, ಇದು ಶಕ್ತಿಶಾಲಿ ಖಾತೆ ಮತ್ತು ತಂತಿ ಮೇಲಿನ ನಡೆ ಕೂಡ.
  ಪ್ರಾರಂಭದಲ್ಲಿ ಮೈಸೂರಿನ ಅತ್ಯಾಚಾರದ ಘಟನೆಗೆ ಗೃಹ ಸಚಿವರ ಹೇಳಿಕೆಯನ್ನು ದೊಡ್ಡ ರೀತಿಯಲ್ಲಿ ಮಾದ್ಯಮಗಳಲ್ಲಿ ವಿರೋದ ವ್ಯಕ್ತ ಆಯಿತು.
  ಇವರು ಶಾಸಕರಾಗಿದ್ದಾಗ ಹುಬ್ಬಳ್ಳಿ ಜೈಲಿನಿಂದ ರಿಲೀಸ್ ಆರ್ಡರ್ ಒಯ್ದು ತೀರ್ಥಹಳ್ಳಿಯ ಚಳವಳಿಗಾರರನ್ನು ಬಿಡಿಸಿಕೊಂಡು ಬರಲು ಹೋದಾಗ ಜೈಲರ್ ಲಂಚ ಶಾಸಕರಿಂದ ಕಕ್ಕಿಸಿದ ಉದಾಹರಣೆ ಗೃಹ ಸಚಿವರಾದಾಗ ನೆನಪು ಮಾಡಿಕೊಂಡಾಗ ಮಾದ್ಯಮದಲ್ಲಿ ಗೇಲಿ ಮಾಡಿದರು.
   ಈ ಎರೆಡು ಘಟನೆ ಆರಗ ಜ್ಞಾನೇಂದ್ರ ಗೃಹ ಸಚಿವರಾದ ಮೇಲೆ ಬದಲಾದರೇನೋ? ಎಂಬ ಅನುಮಾನ ಮತ್ತು ಗೃಹ ಸಚಿವರ ಸ್ಥಾನ ನಿಭಾಯಿಸಲು ಅಸಾಧ್ಯ ಎಂಬಂತ ಮಾತುಗಳು ಅವರದೇ ಪಕ್ಷದವರ ಹೇಳಿಕೆಗಳಲ್ಲಿ ವ್ಯಕ್ತವಾಗಿತ್ತು.
  ಅತ್ಯಂತ ಬಡತನದಿಂದ ಈ ಮಟ್ಟಕ್ಕೆ ಏರಿದ್ದರೂ ಉದ್ದೇಶ ಪೂರ್ವಕವಾಗಿ ಇವರದೇ ಸರ್ಕಾರ ಬಂದರೂ ಪ್ರತಿ ಬಾರಿ ಏನಾದರು ನೆಪ ಮುಂದೊಡ್ಡಿ ಇವರನ್ನು ಮಂತ್ರಿ ಸ್ಥಾನದಿಂದ ವಂಚಿಸುತ್ತಿದ್ದದ್ದು ಇವರ ಮೇಲೆ ಹೆಚ್ಚು ಅನುಕಂಪಕ್ಕೆ ಕಾರಣ ಆಗಿತ್ತು.
  ಈ ಬಾರಿ ಇವರ ನಿರೀಕ್ಷೆ ಮೀರಿ ಪ್ರತಿಷ್ಟಿತ ಗೃಹ ಮಂತ್ರಿ ಸ್ಥಾನ ಸಿಕ್ಕಿದ್ದು ಶಿವಮೊಗ್ಗ ಜಿಲ್ಲೆಯೇ ಅಭಿಮಾನ ಪಡುವಂತಾಯಿತು ಆದರೆ ಜ್ಞಾನೇಂದ್ರ ಬದಲಾದರಾ? ಎಂಬ ಅನುಮಾನ ಜಿಲ್ಲೆಯಲ್ಲಿ ವ್ಯಕ್ತವಾಗಿದ್ದು ಸತ್ಯ.
  ಇದರ ಮಧ್ಯ ಉಡುಪಿ ಜಿಲ್ಲೆಯ ಕೊರಗ ಸಮಾಜದ ಕುಟುಂಬದಲ್ಲಿ ಮದುವೆಗಾಗಿ ನಡೆದ ಮದರಂಗಿ ಕಾರ್ಯಕ್ರಮಲ್ಲಿ ಶಬ್ದ ಮಾಲಿನ್ಯದ ನೆಪದಲ್ಲಿ ಪೋಲಿಸರು ನಡೆಸಿದ ದೌರ್ಜನ್ಯ, ನಂತರ ಅದನ್ನು ಸಮರ್ಥಿಸಿಕೊಂಡ ಇಲಾಖೆಯ ಮೇಲಧಿಕಾರಿಗಳ ಬಹಿರಂಗ ಹೇಳಿಕೆ ಮತ್ತು ದೌರ್ಜನ್ಯಕ್ಕೆ ಒಳಗಾದವರ ಮೇಲೆ ಪೋಲಿಸ್ ಕೇಸ್ ದಾಖಲು ಆಗಿದ್ದು ಇಡೀ ರಾಜ್ಯ ಗೃಹ ಸಚಿವರ ಕಡೆ ನೋಡುವಂತೆ ಮಾಡಿತ್ತು.
   ನಮ್ಮ ಜಿಲ್ಲೆಯ ಹೊಸನಗರ ಸಮೀಪದ ಜೇನಿ ಎಂಬಲ್ಲಿ ಪದ್ಮಶ್ರೀ ಅನಾಥಾಶ್ರಮ ನಡೆಸುವ ಸ್ನೇಕ್ ಪ್ರಭಾಕರ್ ಹತ್ತು ವರ್ಷದ ಹಿಂದೆ ಮಿಡಿ ನಾಗರ ಕಡಿತದಿಂದ ಸಾವು ಬದುಕಿನ ಮಧ್ಯ ಇದ್ದಾಗ ಆರಗ ಜ್ಞಾನೇಂದ್ರ ಮಾಜಿ ಶಾಸಕರಾಗಿದ್ದರೂ ಮಾಡಿದ ಸಹಾಯ ದೊಡ್ಡದು, ಆಶ್ರಮ ನಿರ್ಮಾಣಕ್ಕೂ ಅವರು ಮತ್ತು ಸೀತಾರಾಂ ಭಟ್ಟರು ಸೇರಿ ಸುಮಾರು ಎರೆಡು ಲಕ್ಷ ಹಣ ಸಂಗ್ರಹಿಸಿ ನೀಡಿದ್ದರಿಂದ ಈ ಬಾರಿಯ ಶಾಸಕ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಕಾಂಗ್ರೇಸ್ ಬೆಂಬಲಿಗರಾದರೂ ಸ್ನೇಕ್ ಪ್ರಭಾಕರ್ ಮತ್ತು ಅವರ ತಂಡ ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಜ್ಞಾನೇಂದ್ರರ ಪರವಹಿಸಿದ್ದರು ಇದರಿಂದ ಅನೇಕ ಕಾಂಗ್ರೇಸ್ ಮುಖಂಡರು ಮುನಿಸಾದರು ಪ್ರಭಾಕರ್ ತನ್ನ ಜೀವ ಉಳಿಸಲು ಸಹಾಯ ಮಾಡಿದ ಋಣ ಇದೆ ಎಂದು ನೇರವಾಗಿ ಪ್ರಚಾರಕ್ಕೆ ಇಳಿದಿದ್ದರು.
  ಮೊನ್ನೆ ಬೆಂಗಳೂರಲ್ಲಿ ಗೃಹ ಸಚಿವರ ಬೇಟಿಗೆ ತುಂಬಾ ಅನುಮಾನ ಪಟ್ಟು ಹೋಗುವ ಸಂದರ್ಭದಲ್ಲಿ ನನಗೆ ಪೋನ್ ಮಾಡಿದ್ದರು. ಅಧಿಕಾರ ಅನೇಕರನ್ನು ಬದಲಿಸಿದ ಅನುಭವ ಆಗಿದೆ ಮರಾಯರೆ ಇವತ್ತು ಆರಗ ಜ್ಞಾನೇಂದ್ರರ ಬೇಟಿ ಹೇಗಾಗುತ್ತೊ ಅಂದಿದ್ದರು.
  ನಂತರ ಅವರ ಅನುಭವ ಕೇಳಿ
" ಇವರು ಹೋದಾಗ ಅಲ್ಲಿ ಇನ್ನೂರಕ್ಕೂ ಹೆಚ್ಚು ಬೇಟಿಗಾಗಿ ಬಂದವರಿದ್ದರಂತೆ, ಅಲ್ಲಿ ಇವರ ಹೆಸರು ಬರೆಸಿ ಕಾಯುತ್ತಿದ್ದ ರ೦ತೆ ಆಗ ಒಳಗಿನಿಂದ ಬಂದ ಪೋಲಿಸ್ ಅಧಿಕಾರಿ ಇಲ್ಲಿ ಆಶ್ರಮದ ಪ್ರಬಾಕರ್ ಯಾರು? ಅಂದಾಗ ಇವರು ಎದ್ದು ನಿಂತರಂತೆ, ಸಾಹೇಬರು ಕರೆಯುತ್ತಾರೆ ಅಂದಾಗ ಇವರಿಗೆ ಆಶ್ಚರ್ಯ, ಒಳಗೆ ಹೋದಾಗ ಇವರನ್ನು ಆಪ್ತರಾಗಿ ಕಂಡ ಗೃಹ ಸಚಿವರು ಡಿಸೆಂಬರ್ 31 ರ ರಾತ್ರಿ ಬೋಜನಕ್ಕೂ ಉಳಿಸಿ ಕೊಂಡಿದ್ದಾರೆ, ಮೀನು ಮಾಂಸದ ಭೂರಿ ಬೋಜನ ಏರ್ಪಡಿಸಿದ್ದಾರೆ ಆದರೆ ಸ್ನೇಕ್ ಪ್ರಭಾಕರ್ ಪರಿಶಿಷ್ಟ ಜಾತಿಯವರಾದರೂ ಅವರು ಸಸ್ಯಹಾರಿ ಅಂತ ತಿಳಿದು ನಿರಾಶರಾಗಿ ಅನ್ನ ತಿಳಿಸಾರಿನಲ್ಲಿ ಇವರನ್ನು ಸಂತೃಪ್ತಿ ಮಾಡಿದ ಬಗ್ಗೆ ಸ್ವತಃ ಬೇಸರ ಪಟ್ಟುಕೊಂಡರಂತೆ, ಸದ್ಯದಲ್ಲೇ ಇವರ ಆಶ್ರಮಕ್ಕೂ ಸ್ವತಃ ಬಂದು ಹೋಗುವುದಾಗಿ ತಿಳಿಸಿದರು ಅಂತ ಅವತ್ತಿನ ಗೃಹ ಸಚಿವರ ಜೊತೆಯ ಬೋಜನ ಕೂಟದ ಪೋಟೋ ವಾಟ್ಸಪ್ ಮಾಡಿದ್ದಾರೆ.
  ನಾನು ಪೋನಾಯಿಸಿದಾಗ ನನ್ನಂತ ಅತ್ಯಂತ ಸಣ್ಣ ಮನುಷ್ಯ ಹಾವು ಹಿಡಿದು ಅನಾಥಶ್ರಮ ನಡೆಸುವವನಾದ ನನಗೆ ಗೃಹ ಸಚಿವರ ಈ ಅತಿಥ್ಯ ಮರೆಯಲುಂಟಾ? ಆರಗ ಜ್ಞಾನೇಂದ್ರ ಒಂದು ಕೂದಲ ಎಳೆ ಅಷ್ಟು ಬದಲಾಗಿಲ್ಲ ಅಂದರೆ ಮುಂದೆ ಮುಖ್ಯಮಂತ್ರಿ ಆದರೂ ಅವರು ಬದಲಾಗುವುದಿಲ್ಲ ಅಂತ ಹೆಮ್ಮೆಯಿಂದ ಹೇಳುತ್ತಿದ್ದರು.
  ಉಡುಪಿ ಜಿಲ್ಲೆಯ ಕೋಟಾ ಊರಿನಲ್ಲಿ ಪೋಲಿಸರಿಂದ ದೌರ್ಜನ್ಯಕ್ಕೆ ಒಳಪಟ್ಟ ನೊಂದ ಕೊರಗರ ಮನೆಗೆ ಬೇಟಿ ನೀಡಿ ಇಲಾಖೆಯಿಂದ ಪರಿಹಾರ ನೀಡಿ ಅವರಿಗೆ ಸಾಂತ್ವನ ನೀಡಿ, ಪೋಲಿಸ್ ಇಲಾಖೆ ದುರುದ್ದೇಶದಿಂದ ಹಾಕಿದ ಕೇಸು ತೆಗೆಯುವುದಾಗಿ ಬಹಿರಂಗ ಹೇಳಿಕೆ ನೋಡಿದ ಮೇಲೆ ನನಗೂ ಅನ್ನಿಸಿದ್ದು ಆರಗ ಜ್ಞಾನೇಂದ್ರ ಅವರು ತಳಮರೆತಿಲ್ಲ ಅವರಿಗೆ ಅಧಿಕಾರ ಅಹಂಕಾರ ತರಲಿಲ್ಲ ಅಂತ.
  ಗೃಹ ಸಚಿವರಾಗಿದ್ದ ಬೊಮ್ಮಾಯಿ ಮುಖ್ಯಮಂತ್ರಿ ಆದಂತೆ ಈಗಿನ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಮುಂದಿನ ಮುಖ್ಯಮಂತ್ರಿ ಆಗಲಿ ಅಂತ ಹಾರೈಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ