Skip to main content

ಐವತ್ತು ವರ್ಷದ ಹಿಂದೆ ತೀರ್ಥಹಳ್ಳಿಯ ಎಳ್ಳಮಾಸ್ಯೆಯಂದು ರಥೋತ್ಸವದಲ್ಲಿ ನಾನು ಕಳೆದು ಹೋಗಿದ್ದ ನೆನಪು ಪ್ರತಿ ಎಳ್ಳಮಾಸ್ಯೆಯ ಸಂದಭ೯ದಲ್ಲಿ ನೆನಪಾಗುತ್ತದೆ.

#ಪುರಾಣ_ಪ್ರಸಿದ್ಧ_ತೀರ್ಥಹಳ್ಳಿ_ಎಳ್ಳುಅಮಾಸ್ಯೆ.

#ಐವತ್ತು_ವರ್ಷದ_ಹಿಂದೆ_ಈ_ಜಾತ್ರೆಯಲ್ಲಿ_ನಾನು_ಕಳೆದು_ಹೋಗಿದ್ದೆ.

#ಅವತ್ತಿನ_ಆತಂಕ_ಭಯ_ಜೀವಮಾನದಲ್ಲಿ_ಮರೆಯುವಂತಿಲ್ಲ.

   ನಮ್ಮ ತಂದೆಯ ತಾಯಿಯ (ಅಜ್ಜಿಯ) ಅಕ್ಕನ ಮಗಳ ಮನೆ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿತ್ತು ಅವರ ಪತಿ ಆಗಿನ ಕಾಲದಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಮಾರಿಗುಡಿಯ ಪಾತ್ರಿಗಳಾಗಿದ್ದ ರಾಮಣ್ಣ ಪಾತ್ರಿಗಳು ಅವರ ಮೂಲ ಕಾಪು.
     ಕಾಪುವಿನ ಪ್ರಸಿದ್ಧ ಮಾರಿಗುಡಿ ಕಡೆಯಿಂದ ಇಲ್ಲಿಗೆ ಕರೆಸಿಕೊಂಡವರು.
  ಪ್ರತಿ ವರ್ಷ ತೀರ್ಥಹಳ್ಳಿಯ ಎಳ್ಳಾಮಸ್ಯೆಗೆ ಅತ್ತೆ ಮಾವರ ಮನೆಗೆ ನಮ್ಮ ಮನೆಯಿಂದ ಯಾರಾದರೂ ಹೋಗಿ ರಾಮಕುಂಡದಲ್ಲಿ ಸ್ನಾನ ಮಾಡಿ, ರಥೋತ್ಸವ ಜಾತ್ರೆಯಲ್ಲಿ ಭಾಗವಹಿಸುವ ಕ್ರಮ ಇತ್ತು.
  1970 ರಲ್ಲಿ ನಾನಿನ್ನೂ ಒಂದನೆ ತರಗತಿಗೆ ಸೇರಿರಲಿಲ್ಲ ನನ್ನ ತಾಯಿ, ತೀರ್ಥಹಳ್ಳಿ ಎಳ್ಳು ಅಮಾವಸ್ಯೆಯ ಪವಿತ್ರ ದಿನದಂದು ರಾಮ ತೀರ್ಥದ ಪವಿತ್ರ ರಾಮ ಕೊಂಡದಲ್ಲಿ ಪರುಶುರಾಮ ತನ್ನ ಮಾತೃ ಹತ್ಯೆಯ ರಕ್ತವಂಟಿದ ಕೊಡಲಿ ತೊಳೆದು ಪರಿಹಾರ ಪಡೆದ ಪುರಾಣ ಕಥೆಯ ರಾಮ ಕೊಂಡದಲ್ಲಿ ನನ್ನನ್ನು ಸ್ನಾನ ಮಾಡಿಸಬೇಕೆಂಬ ಭಕ್ತಿಯ ಬಯಕೆಯಿಂದ ನನ್ನನ್ನು ಕರೆದೊಯ್ದಿದ್ದರು.
  ನಸುಕಿನಲ್ಲೇ ಅರೆ ನಿದ್ದೆಯಲ್ಲೇ ರಾಮಕುಂಡಕ್ಕೆ ಕರೆದುಕೊಂಡು ಹೋಗಿದ್ದರು,ಅಲ್ಲಿ ಖಾಕಿ ಸಮವಸ್ತ್ರದ ದೊಗಳೆ ಖಾಕಿ ಚೆಡ್ಡಿಯ ಇಬ್ಬರು ಪೋಲಿಸರ ನೋಡಿ ನಿದ್ದೆ ಓಡಿ ಹೋಗಿತ್ತು. ಅವರು ರಾಮಕುಂಡದಲ್ಲಿ ಸ್ನಾನಕ್ಕೆ ಬಂದವರ ಎರೆಡೂ ಕೈ ಹಿಡಿದು ಮುಳುಗಿಸಿ ಎತ್ತಿ ಬಿಡುತ್ತಿದ್ದರು ಇದು ಆ ಕಾಲದ ಜನರ ರಕ್ಷಣೆಗಾಗಿ ಸ್ಥಳಿಯ ಸಕಾ೯ರದ ವ್ಯವಸ್ಥೆ ಆಗಿರಬೇಕು.
   ತೀರ್ಥಹಳ್ಳಿಯ ಅತ್ತೆ ಮಾವನ ಮನೆಯಲ್ಲಿ ಅವರ ಮೊಮ್ಮಕ್ಕಳು ಅಂದಾಜು 20 ಕ್ಕೂ ಹೆಚ್ಚು ಮಕ್ಕಳು ಆ ದಿನ ರಾತ್ರಿ ಹೇಳುತ್ತಿದ್ದ ವಿಷಯ ರಸವತ್ತಾಗಿತ್ತು, ರಥಬೀದಿಯಲ್ಲಿ ಮರುದಿನ ನಡೆಯುವ ರಥೋತ್ಸವ ನೋಡಲು ಹೋಗೋಣ ಅಲ್ಲಿ ರಥಕ್ಕೆ ಬಾಳೆ ಹಣ್ಣು, ಕಿತ್ತಳೆ ಹಣ್ಣು ಎಸೆಯುತ್ತಾರೆ ಅದೆಲ್ಲ ಎಷ್ಟು ತಿಂದರು ಖಾಲಿ ಆಗುವುದಿಲ್ಲ ಎಂಬೆಲ್ಲ ಮಾತು ಕೇಳಿ ನನಗೂ ಹೋಗಬೇಕೆನ್ನಿಸಿತ್ತು ಆದರೆ ನನ್ನಮ್ಮ ಬೇಡ ಅಂದಿದ್ದರು.
  ಮರುದಿನ ಮಕ್ಕಳೆಲ್ಲ ನನ್ನಮ್ಮನಿಗೆ ನನ್ನನ್ನು ಜೋಪಾನವಾಗಿ ಕರೆದೊಯ್ದು ತರುವ ಭರವಸೆಯಿಂದ ನನ್ನ ಕೈ ಜೋಪಾನವಾಗಿ ಹಿಡಿದುಕೊಂಡು  ರಥಬೀದಿಗೆ ಕರೆದುಕೊಂಡು ಹೋದರು.
  ರಥ ಬರುವ ತನಕ ಎಲ್ಲರೂ ಗುಂಪಲ್ಲಿದ್ದೆವು,ನಂತರ ಅಲ್ಲಿನ ನೂಕುನುಗ್ಗಲಿನಿಂದ ಮತ್ತು ಕರೆದೊಯ್ದ ಸಂಬಂದಿ ಮಕ್ಕಳು ರಥಕ್ಕೆ ಎಸೆಯುತ್ತಿದ್ದ ಹಣ್ಣು ಆಯಲು ದಿಕ್ಕಪಾಲಾದ್ದರಿಂದ ನನ್ನ ಕೈ ಬಿಟ್ಟು ಬಿಟ್ಟರು! ನನಗೆ ಏನೂ ತೋಚಲಿಲ್ಲ ಅಲ್ಲೇ ನಿಂತಿದ್ದೆ ನಂತರ ರಥ ಹೋದ ಮೇಲೂ ನನ್ನ ಕರೆದುಕೊಂಡು ಹೋದವರು ಸಿಗಲೇ ಇಲ್ಲ.
  ಮದ್ಯಾಹ್ನದ ತನಕ ನಾನು ಅತಂತ್ರ ಆಗಿದ್ದೆ, ಅತ್ತೂ ಅತ್ತೂ ಕಣ್ಣಿನ ನೀರು ಬತ್ತಿತ್ತು, ಗಂಟಲು ಒಣಗಿತ್ತು, ಪದೇ ಪದೇ ನನ್ನ ತಾಯಿ ನೆನಪುಗಳಿಂದ ನನಗೆ ದಿಗಿಲಾಗಿತ್ತು.
  ಕೆಲವರು ದಾರಿ ತಪ್ಪಿದೆ ಮಗು ಅಂತ ತಿಳಿದು ಮನೆಗೆ ಸೇರಿಸಲು ಪ್ರಯತ್ನಿಸಿದರೂ 5 ವಷ೯ದ ನನಗೆ ವಿಳಾಸವಾದರೂ ಎಲ್ಲಿ ಗೊತ್ತು?.
  ಅದು ಹೇಗೋ ಸೊಪ್ಪುಗುಡ್ಡೆ ಅಂತ ದೊಡ್ಡವರು ಮಾತಾಡುತ್ತಾ ಇದ್ದಿದ್ದು ನೆನಪಿಗೆ ಬಂತು, ಸಹಾಯ ಮಾಡಲು ಬಂದವರು ಮತ್ತೊಮ್ಮೆ ಕೇಳಿದಾಗ ಸೊಪ್ಪುಗುಡ್ಡೆ ಅಂದೆ ನನ್ನ ಮಾವನವರ ಹೆಸರು ರಾಮಣ್ಣ ಪಾತ್ರಿಗಳು ಅಂತ ನೆನಪಾಗಿ ಅದನ್ನೂ ಹೇಳಿದೆ,ಅಲ್ಲಿದ್ದವರೆಲ್ಲ ನಿರಾಳರಾದರು ಅವರಿಗೆಲ್ಲ ಸೊಪ್ಪು ಗುಡ್ಡೆ ರಾಮಣ್ಣ ಪಾತ್ರಿಗಳು ಪರಿಚಿತರು ಯಾರೋ ಒಬ್ಬರನ್ನು ಜೊತೆ ಮಾಡಿ ಕಳಿಸಿದರು ಅವರು ನನ್ನ ಕೈ ಹಿಡಿದು ಮನೆ ಮುಟ್ಟಿಸಿದರು.
  ಕರೆದೊಯ್ದವರೆಲ್ಲ ನಾನು ಜಾತ್ರೆಯಲ್ಲಿ ಕಳೆದು ಹೋದ ಬಗ್ಗೆ ಆತಂಕವಾಗಿತ್ತು, ಅವರೆಲ್ಲ ಹುಡುಕಿ ಹುಡುಕಿ ಹತಾಷರಾಗಿ ಆಗಷ್ಟೇ ಮನೆ ತಲುಪಿದ್ದರು. ನನ್ನ ತಾಯಿಗೆ ವಿಷಯ ಇನ್ನೂ ತಿಳಿದಿರಲಿಲ್ಲ ಅಷ್ಟರಲ್ಲಿ ನಾನು ಮನೆ ತಲುಪಿ ಎಲ್ಲಾ ಸುಖಾಂತ್ಯ ಆಯಿತು.
  ನಂತರ ತೀರ್ಥಹಳ್ಳಿ ಚಿರಪರಿಚಿತ ಆಯಿತು, ರಾಮ ಮಂಟಪದ ಪಕ್ಕದ ನೈಸರ್ಗಿಕ ಈಜು ಕೊಳದಲ್ಲಿ ಹರಿಯುವ ನೀರಿಗೆ ವಿರುದ್ದವಾಗಿ ಈಜಿ ಈಜಿ ಸುಸ್ತಾಗುವ ಆಟ ನಿರಂತರ ಆಯಿತು.
  ಪ್ರತಿ ವರ್ಷ ಎಳ್ಳಾಮವಾಸ್ಯೆಯಂದು ಈ ಬಾಲ್ಯದ ಘಟನೆ ಸುಮಾರು ಅರ್ದ ಶತಮಾನವಾದರೂ ನೆನಪಾಗುತ್ತಿರುತ್ತದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ