Skip to main content

ಬೌದ್ದರಿಗೆ ಪವಿತ್ರ ಆದರೆ ಭಾರತೀಯ ವಾಸ್ತು ಶಾಸ್ತ್ರ ವಿರೋದಿಸುವ ಪಾಪಸ್ ಕಳ್ಳಿಯ ಜಾತಿಯ ಡ್ರಾಗನ್ ಪ್ರೂಟ್ ಗೆ ಸಕಾ೯ರದ ಸಹಾಯ ಧನದ ಪ್ರೋತ್ಸಾಹ ಇದೆ.

#ಪಾಪಸು_ಕಳ್ಳಿ_ಎಂಬ_ಕ್ಯಾಕ್ಟಸ್

#ಅತಿಕಡಿಮೆ_ನೀರು_ದೀರ್ಘಬಾಳಿಕೆ.

#ವಾಸ್ತು_ಶಾಸ್ತ್ರ_ಪೆಂಗ್_ಶು_ಬೆಂಬಲವಿಲ್ಲ

#ಬೌದ್ಧರಿಗೆ_ಪವಿತ್ರ_ಸಸ್ಯ

#ಡ್ರಾಗನ್_ಪ್ರೂಟ್_ಬೆಳೆಗೆ_ಸರ್ಕಾರದ_ಸಹಾಯಧನ.

   2008ರಲ್ಲಿ ನನ್ನ ತಂದೆ ಮತ್ತು ತಾಯಿ ಹೆಸರಲ್ಲಿ ಶ್ರೀ ಕೃಷ್ಣ - ಸರಸ ಕನ್ವೆನ್ಷನ್ ಹಾಲ್ ಎಂಬ ನನ್ನ ಕನಸಿನ ಕಲ್ಯಾಣ ಮಂಟಪ ಕಟ್ಟಿಸಿದಾಗ ಅದರ ಅವರಣದಲ್ಲಿ ಹೂತೋಟ ಮಾಡಲಿಕ್ಕಾಗಿ #ಹಕ್ರೆ_ಗಿರೀಶ್ (ಈಗ ಎಡಜಿಗಳೆ ಮನೆ ಗ್ರಾಮ ಪ೦ಚಾಯತನ ಉಪಾಧ್ಯಕ್ಷರು ) ಸಿರ್ಸಿಯ ವಿನಾಯಕ ಭಟ್ಟರನ್ನು ಪರಿಚಯಿಸಿದ್ದರು (ಈಗ ಅವರು ಯಡೂರಪ್ಪರ ಪೆಸಿಟ್ ಕಾಲೇಜಿನ ಅವರಣದ ಗಾರ್ಡ್ ನ್ ಮಾಡಿದ್ದಾರೆ) ಅವರು ಕೆಲ ಆಲಂಕಾರಿಕಾ ಕ್ಯಾಕ್ಟಸ್ ಹಾಕಿದ್ದರು.
  ಈಗ 14 ವರ್ಷದಲ್ಲಿ ಅದು ವಿವಿಧ ಆಕಾರದಲ್ಲಿ ನಮ್ಮಲ್ಲಿ ಇದೆ ಅದರಿಂದ ನೂರಾರು ಮರಿ ಆಸಕ್ತರಿಗೆ ರವಾನೆಯೂ ಆಗಿದೆ.
 ಅಲಂಕಾರಿಕ ಪಪಾಸುಕಳ್ಳಿ ಹತ್ತು ವರ್ಷ ಬಾಳಿಕೆ ಬರುತ್ತದೆ ಅದೇ ವೈಲ್ಡ್ ಜಾತಿಯದ್ದು ನೂರು ವರ್ಷ ಬದುಕತ್ತದೆ ಎನ್ನುತ್ತಾರೆ.
  ಇದರ ಮೂಲ ಅಮೆರಿಕಾ ಇದು ಭಾರತಕ್ಕೆ ಪೋಚು೯ಗೀಸರಿಂದ ಬಂತು ಈಗ ಭಾರತದಲ್ಲಿ ಕಳೆ ಗಿಡವಾಗಿ ಹರಡಿದೆ.
  ಭಾರತೀಯರ ವಾಸ್ತು ಶಾಸ್ತ್ರ ಮತ್ತು ಹಿಂದೂ ಧರ್ಮದಲ್ಲಿ ಇದು ಅನಿಷ್ಟ ಎಂಬ ನಂಬಿಕೆ ದಟ್ಟವಾಗಿದೆ ಇದಕ್ಕೆ ಕಾರಣ ಇದು ಇತ್ತೀಚೆಗೆ ಬೇರೆ ಖಂಡಾಂತರವಾಗಿ ಬಂದ ಅಪರಿಚಿತ ಮುಳ್ಳು ಸಸ್ಯವಾಗಿರಬಹುದು ಆದರೆ ಬೌದ್ದ ದಮಿ೯ಯರು ಇದನ್ನು ಪೂಜ್ಯ ಸಸ್ಯವಾಗಿ ಪರಿಗಣಿಸುತ್ತಾರೆ.
  ಇದರಲ್ಲಿನ ಮುಳ್ಳು ತೆಗೆದು ಪಶು ಆಹಾರವಾಗಿ, ತರಕಾರಿಯಾಗಿ, ಔಷದಿ ಆಗಿ ಕೂಡ ಬಳಸುತ್ತಾರೆ.
 ಭಾರತ ಸರ್ಕಾರ ಇದೆ ಜಾತಿಯ ಡ್ರಾಗನ್ ಪ್ರೂಟ್ ಗೆ (ಕ್ಯಾನ್ಸರ್ ಪ್ರತಿಬಂದಕ) ತುಂಬಾ ಬೇಡಿಕೆ ಇರುವುದರಿಂದ ಇದನ್ನು ಬೆಳೆಸಲು ಸಹಾಯ ಧನ ಕೂಡ ನೀಡುತ್ತಿದೆ.
  ನಾನು ಇದನ್ನು ಪಾಟಿನಲ್ಲಿ ಕೂಡ ಬೆಳಿಸಿದ್ದೆ, ನಮ್ಮ ರೆಸ್ಟೋರೆಂಟ್ ನ ಪಬ್ಲಿಕ್ ಟಾಯಿಲೆಟ್ ಪಕ್ಕದಲ್ಲಿ ವಿದ್ಯುತ್ ಮೈನ್ ಸ್ವಿಚ್ ಇತ್ತು ಅದನ್ನು ಸಾರ್ವಜನಿಕರ ಸಂಪರ್ಕದಿಂದ ದೂರ ಮಾಡಲು ಮುಳ್ಳಿನ ಕ್ಯಾಕ್ಟಸ್ ನ ಎರೆಡು ಪಾಟ್ 2012 ರಿಂದ ಇಟ್ಟಿದ್ದೆ.
  2014ರಲ್ಲಿ ಸ್ವಚ್ಚ ಮಾಡುವಾಗ ಕೆಲಸಗಾರರ ಅಜಾಗೃತೆಯಿಂದ ಒಂದು ಪಾಟ್ ಒಡೆದು ಹೋಗಿತ್ತು, ಪಾಟ್ ಒಡೆದದ್ದರಿಂದ ಗಿಡ ಬದುಕಲಾರದೇನೋ ಅಂತ ಮಾಡಿದ್ದೆ ಆದರೆ ಎಂಟು ವರ್ಷದಿಂದ ಪಾಟು ಇಲ್ಲದೆ ಈ ಅಲಂಕಾರಿಕ ಪಾಪಸು ಕಳ್ಳಿ ಜೀವಂತವಾಗಿದೆ ಮತ್ತು ಮರಿ ಹಾಕಿದೆ.
  ಹಾಗಾಗಿ ಇನ್ನೊಂದು ಗಿಡದ ಪಾಟನ್ನು ತೆಗೆದು ಎರೆಡೂ ಒಂದೇ ರೀತಿ ಕಾಣುವಂತೆ ಮಾಡಿದ್ದೇನೆ.
  ಎರೆಡು ವಾರಕ್ಕೆ ಅರ್ಧ ಲೋಟ ನೀರು ಸಾಕು, 8 ವಷ೯ದಿಂದ ಮಣ್ಣು ಬದಲಿಸಿಲ್ಲ, ಗೊಬ್ಬರ ಕೊಟ್ಟೇ ಇಲ್ಲ!

  ಇದನ್ನು ಮನೆ ಒಳಗೂ ಇಡ ಬಹುದು ಗಾಳಿ ಶುದ್ಧಿಕರಿಸುತ್ತದೆ ಎಂಬ ವೈಜ್ಞಾನಿಕ ಸಂಶೋದನೆ ಇರುವುದರಿಂದ ವಿದೇಶಗಳಲ್ಲಿ ಹೆಚ್ಚು ಬಳಸುತ್ತಾರೆ.
  ಬೆಂಗಳೂರಿನ ಲಾಲ್ ಬಾಗ್ ನಲ್ಲಿ ತೋಟಗಾರಿಕಾ ಇಲಾಖೆ ಮತ್ತು ಲಾಲ್ ಬಾಗ್ ಸುತ್ತಲಿರುವ ಖಾಸಾಗಿ ನರ್ಸರಿಗಳಲ್ಲಿ ತರಹೇವಾರಿ ಕಾಕ್ಟಸ್ ಮಾರಾಟಕ್ಕೆ ಇದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...