Skip to main content

ಕೇರಳಿಗರ ಪೆವರಿಟ್ ಪುಟ್ಟೂ ಮತ್ತು ಕಡಲೇ ಪಲ್ಯ ಬಾಯಲ್ಲಿ ನೀರು ತರಿಸುವ ಉಪಹಾರ, ತಯಾರಿಸುವುದು ಸರಳ ಮತ್ತು ಸುಲಭ.

#ಕೇರಳರಾಜ್ಯದ_ಪುಟ್ಟೂ_ಏನಿದರ_ಗುಟ್ಟು.

#ಹದಿನೈದನೆ_ಶತಮಾನದಲ್ಲಿ_ಉಲ್ಲೇಖ

#ಪೋರ್ಚುಗೀಸರಿಂದ_ಕೇರಳಕ್ಕೆ_ಬಂತೆ?

#ಅಸ್ಸಾಂನಲ್ಲಿ_ಇಂತದ್ದೆ_ಸಂಗಪಿತ_ಇದೆ.

#ಒಂದು_ಕಾಲದಲ್ಲಿ_ದೇಸಿ_ಪುಟ್ಟು_ತಯಾರಿಸುವ_ಬೊಂಬು_ಸಾದನವಿತ್ತು.

  ಕೇರಳದವರ ಪೆವರಿಟ್ ಉಪಹಾರ ಪುಟ್ಟೂ ಬೇರೆ ಭಾಗದವರಿಗೂ ಬಲು ಇಷ್ಟ ಆದರೆ ಇದು ತಯಾರಿಸಲು ಕಷ್ಟ ಎಂಬ ನಂಬಿಕೆಯಿಂದ ಪ್ರಯತ್ನವೇ ಮಾಡುವುದಿಲ್ಲ.
  ಕೇರಳ ಹೋದಾಗೆಲ್ಲ ಪುಟ್ಟು ಹಸಿಕಡಲೆ ಪಲ್ಯ ಮತ್ತು ಬೇಯಿಸಿದ ನೇಂದ್ರ ಬಾಳೆ ತಿನ್ನದೇ ಬರಲಾಗುವುದಿಲ್ಲ.
  ಹಾಗಾಗಿ ಮನೇನಲ್ಲಿ ಪುಟ್ಟೂ ತಯಾರಿಸುವ ಪಾತ್ರೆ ಒಂದು ಕೆಲ ವರ್ಷದ ಹಿಂದೆ ತಂದಿದ್ದೆ, ಎರೆಡು ವರ್ಷದ ಹಿಂದೆ ನಮ್ಮಣ್ಣ ತಂದು ಕೊಟ್ಟಿದ್ದ ಈ ಪುಟ್ಟೂ ಪಾತ್ರೆ ಮರೆತು ಹೋಗಿತ್ತು ಬಳಸಿರಲಿಲ್ಲ.
  ಇವತ್ತು ಹೊಸ ಪಾತ್ರೆಯಲ್ಲಿ ಪುಟ್ಟೂ ತಯಾರಿಸಿ ಕಡಲೆ ಪಲ್ಯದೊಡನೆ ಉಪಹಾರವೂ ಆಯಿತು.
  ಪುಟ್ಟು ಮಾಡುವುದು ತುಂಬಾ ಸರಳ,4 ಗಂಟೆ ಅಕ್ಕಿ ನೆನಸಿಡುವುದು ನಂತರ ನೀರು ತೆಗೆದು ಮಿಕ್ಸಿಯಲ್ಲಿ ರವೆಯಂತೆ ಪುಡಿ ಮಾಡಿ ಅದನ್ನು ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಬೇಕು, ನಂತರ ತಣ್ಣಗಾದಾಗ ರುಚಿಗೆ ಬೇಕಾಗುವಷ್ಟು ಉಪ್ಪು ನೀರಲ್ಲಿ ಕರಗಿಸಿ ಕೈಯಿಂದ ಕಲಸಿ, ತೆಂಗಿನ ತುರಿ ಸೇರಿಸಿ, ಸ್ವಲ್ಪ ಸ್ವಲ್ಪ ಬಿಸಿ ನೀರು ಬೆರಸಿ ಹದವರಿತು ಪುಟ್ಟು ಹಿಟ್ಟು ಕಲಸಿಕೊಳ್ಳಬೇಕು (ಹೆಚ್ಚು ಹಸಿ ಆಗಬಾರದು ಮತ್ತು ಹೆಚ್ಚು ಒಣ ಪುಡಿಯೂ ಆಗದಂತೆ) ಪುಟ್ಟು ಮಾಡುವ ಪಾತ್ರೆಗೆ ನೀರು ಹಾಕಿ ಬಿಸಿಗೆ ಇಟ್ಟು, ಪುಟ್ಟು ಕೊಳವೆಗೆ ಸ್ವಲ್ಪ ಕಾಯಿತುರಿ ನಂತರ ಈ ಹಿಟ್ಟು ನಂತರ ಕಾಯಿ ತುರಿ ನಂತರ ಹಿಟ್ಟು ಹಾಕಿ ಮೇಲ್ಬಾಗದಲ್ಲಿ ಕಾಯಿ ತುರಿ ಒಂದೆರೆಡು ಚಮಚ ಸಕ್ಕರೆ ಹಾಕಿ ಪುಟ್ಟು ಕೊಳವೆ ಪುಟ್ಟು ನೀರಿನ ಪಾತ್ರೆಗೆ ಜೋಡಿಸಿ, ಪುಟ್ಟು ಕೊಳವೆಗೆ ಮುಚ್ಚುಳ ಹಾಕಿ, 10 ನಿಮಿಷದಲ್ಲಿ ಕೊಳವೆಯಿಂದ ಹಬೆ ಬಂದಾಗ ಬೆಂದಿರುತ್ತದೆ ಆಗ ಪುಟ್ಟು ಕೊಳವೆ ತೆಗೆದು ಹಿಂಬಾಗದಿಂದ ಪುಟ್ಟು ತೆಗೆಯಲು ಕಡ್ಡಿಯಿಂದ ದೂಡಿದರೆ ಪುಟ್ಟು ನಮ್ಮ ಉಪಹಾರದ ತಟ್ಟೆಗೆ ಬರುತ್ತದೆ.
  ಬಾಳೆ ಹಣ್ಣು ಸಕ್ಕರೆ, ಕಡಲೆ ಪಲ್ಯ, ಮೀನು ಮಾಂಸದ ಜೊತೆಗೂ ಪುಟ್ಟೂ ತಿನ್ನಬಹುದು.
  ಪುಟ್ಟು ಬಗ್ಗೆ 15 ನೇ ಶತಮಾನದಲ್ಲಿ ತಮಿಳು ಕವಿ ಅರುಣಗಿರಿನಾಥನ್ ತಮ್ಮ "ತಿರುಪು ಗಾಜು" ಎಂಬ ಪುಸ್ತಕದಲ್ಲಿ ಉಲ್ಲೇಖ ಮಾಡಿರುವುದೆ ಒ0ದು ದಾಖಲೆ ಅದಕ್ಕೂ ಹಿಂದೆ ಪುಟ್ಟೂ ಬಗ್ಗೆ ದಾಖಲೆ ಇಲ್ಲ.
     ಈಗ ಪುಟ್ಟು ಕೇರಳ, ತಮಿಳುನಾಡು ಮತ್ತು ನಮ್ಮ ರಾಜ್ಯದ ದ.ಕ.ಜಿಲ್ಲೆಗಳಲ್ಲಿ ಬಳಕೆ ಇದೆ.
   ಶ್ರೀಲಂಕಾ, ಮಲೇಷಿಯಾ, ಸಿಂಗಾಪುರ್, ಇಂಡೋನೇಷಿಯ ಮತ್ತು ಪಿಲಿಪೈನ್ಸ್ ನಲ್ಲೂ ಪುಟ್ಟೂ ಪ್ರಖ್ಯಾತಿ ಪಡೆದ ಉಪಹಾರ ಆಗಿದೆ.
  ಅಸ್ಸಾಂನಲ್ಲಿ ಸುಂಗ - ಪಿತಾ ಎಂಬ ತಿಂಡಿ ಪುಟ್ಟೂ ರೀತಿಯೇ ಇದೆ.
  ಪೋರ್ಚುಗೀಸರ ಸ್ಟೀಮ್ ರೈಸ್ ಕೇಕ್ ಕೂಡ ಪುಟ್ಟೂ ರೀತಿಯದ್ದೇ ಇದ್ದು ಪೋಚು೯ಗೀಸರಿಂದಲೇ ಪುಟ್ಟೂ ಬಂತು ಎಂಬ ವಾದವೂ ಇದೆ.
   ಈಗೆಲ್ಲ ನವ ನವೀನ ಪುಟ್ಟೂ ಮೇಕರ್ ಮಾರುಕಟ್ಟೆಯಲ್ಲಿದೆ, ಸ್ಟೀಲ್‌ ಮತ್ತು ಅಲ್ಯೂಮಿನಿಯಮ್‌ ನದ್ದು.ಹಿಂದಿನ ಕಾಲದಲ್ಲಿ ಮಣ್ಣಿನ ಮಡಕೆ ಬಿದಿರು ಬೊಂಬು ಉಪಯೋಗಿಸುತ್ತಿದ್ದರು ನಂತರ ಕಂಚಿನ ಪಾತ್ರೆ ಬಳಕೆ ಆಯಿತು.
  ಅಂತೂ ಇಂತು ಇವತ್ತು ಕೇರಳದ ಪುಟ್ಟೂ ನನ್ನ ಉಪಹಾರ ಆಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...